Featured

ಕೆಲವೊಂದು ಶಿವ ದೇವಾಲಯದಲ್ಲಿ  ಅರ್ಧಪ್ರದಕ್ಷಿಣೆ ಯಾಕೆ ಹಾಕುತ್ತಾರೆ ಗೊತ್ತಾ?? Vishwanews24

ಕೆಲವೊಂದು ಶಿವ ದೇವಾಲಯದಲ್ಲಿ  ಅರ್ಧಪ್ರದಕ್ಷಿಣೆ ಯಾಕೆ ಹಾಕುತ್ತಾರೆ ಗೊತ್ತಾ?? Vishwanews24

ನಮ್ಮಲ್ಲಿ ಹಲವಾರು ಈಶ್ವರ ದೇವಾಲಯಗಳಿವೆ ಅವುಗಳಲ್ಲಿ ಕೆಲವೊಂದು ಶಿವದೇವಸ್ಥಾನಗಳಿಗೆ ಭೇಟಿ ನೀಡಿದಾಗ ಅರ್ಧ ಪ್ರದಕ್ಷಿಣೆಯನ್ನು ಹಾಕಿದರೆ, ಕೆಲವೊಂದು ಶಿವ ದೇವಾಲಯಗಳಲ್ಲಿ ಪೂರ್ಣಸುತ್ತಿನ ಪ್ರದಕ್ಷಿಣೆಯನ್ನು ಮಾಡುತ್ತೇವೆ. ಇದರ ಹಿಂದಿರುವ ಹಿನ್ನಲೆ ಏನು? ಯಾಕೆ ಈ ಅರ್ಧಪ್ರದಕ್ಷಿಣೆ ಕೆಲವೊಂದು ದೇವಾಲಯಗಳಲ್ಲಿ ಮಾತ್ರ ಎನ್ನುವ ನಿಮ್ಮ ಸಂದೇಹಕ್ಕೆ ಉತ್ತರ ಈ ಲೇಖನದಲ್ಲಿದೆ.

ನಾವು ವೃತ್ತವನ್ನು ಎಳೆಯುವಾಗ ಒಂದು ಕೇಂದ್ರಬಿಂದುವನ್ನು ಹಾಕುತ್ತೇವೆ. ಅಂತೆಯೇ ಕೇಂದ್ರದಲ್ಲಿ ದೇವರ ಅನುಪಸ್ಥಿತಿಯಿದ್ದರೆ ನಾವು ಕೂಡಾ ಅಸ್ತಿತ್ವದಲ್ಲಿ ಇಲ್ಲದಂತೆ. ಹಾಗಾಗಿ ದೇವರನ್ನು ಗೌರವಿಸಲು, ಅಂಗೀಕರಿಸಲು ಹಾಗೂ ಕೃತಜ್ಞತೆಯನ್ನು ತೋರಿಸಲು ಪ್ರದಕ್ಷಿಣೆಯನ್ನು ಹಾಕಬೇಕು.

ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆ

ಕೆಲವು ಶಿವಾಲಯಗಳಲ್ಲಿ ಗರ್ಭಗುಡಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕುತ್ತೇವೆ. ಕೆಲವು ದೇವಾಲಯಗಳಲ್ಲಿ ಪ್ರದಕ್ಷಿಣಾಕಾರವಾಗಿ ಗೋಮುಖಿಯವರೆಗೆ ಬಂದು ಅಲ್ಲಿಂದ ಮತ್ತೆ ಗೋಮುಖಿಯ ಇನ್ನೊಂದು ಭಾಗದಿಂದ ಗರ್ಭಗುಡಿಗೆ ನಮ್ಮ ಎಡಭಾಗವು ಬರುವಂತೆ ಪ್ರದಕ್ಷಿಣೆಯನ್ನು ಹಾಕಬೇಕು. ಗೋಮುಖಿ ಎಂದರೆ ದೇವರಿಗೆ ಮಾಡುವ ಅಭಿಷೇಕದ ನೀರು ಬೀಳುವ ಸ್ಥಳ. ಇದನ್ನು ದಾಟಬಾರದು. ಎಲ್ಲಾ ಶಿವದೇವಾಲಯಗಳಲ್ಲಿ ಈ ನಿಯಮವಿರುವುದಿಲ್ಲ. ಉದ್ಭವಲಿಂಗವಿರುವ ಶಿವ ದೇವಾಲಯದಲ್ಲಿ ಪೂರ್ಣಪ್ರದಕ್ಷಿಣೆ ಹಾಕಬೇಕು. ಪ್ರತಿಷ್ಠಾಪಿತ ಲಿಂಗವಿರುವ ದೇವಾಲಯದಲ್ಲಿ ಅರ್ಧಪ್ರದಕ್ಷಿಣೆ ಹಾಕಬೇಕು ಎಂಬ ಸಂಪ್ರದಾಯವಿದೆ.

ಯಾಕೆ ಅರ್ಧಪ್ರದಕ್ಷಿಣೆ?

ಉದ್ಭವ ಲಿಂಗವಿರುವ ಶಿವ ದೇವಾಲಯಗಳಲ್ಲಿ ಶಿವಲಿಂಗದ ಧನಾತ್ಮಕ ಪ್ರಭಾವವನ್ನು ತಡೆದುಕೊಳ್ಳುವ ಶಕ್ತಿ ನಮಗಿಲ್ಲವಾದ್ದ ಕಾರಣದಿಂದ ಪೂರ್ಣ ಸುತ್ತು ಪ್ರದಕ್ಷಿಣೆ ಹಾಕಬೇಕು. ಶಾಸ್ತ್ರ ಹಾಗೂ ಶಿವಪುರಾಣದ ಪ್ರಕಾರ ಶಿವಲಿಂಗದ ಸುತ್ತಲೂ ಅರ್ಧವಿಕ್ರಮವನ್ನು ಮಾಡಬೇಕು. ಇದು ಶಿವನ ಆದಿ ಮತ್ತು ಅನಂತವನ್ನು ಸಮರ್ಥಿಸುವ ಕ್ರಿಯೆ. ಆದಿ ಎಂದರೆ ಮೊದಲು, ಅನಂತ ಎಂದರೆ ಶಾಶ್ವತವಾದುದು. ಆದ್ದರಿಂದ ಶಿವಲಿಂಗದಿಂದ ಹರಿಯುವ ದೈವಿಕ ಮತ್ತು ಅಂತ್ಯವಿಲ್ಲದ ಶಕ್ತಿಯು ಗೋಮುಖಿ ಅಂದರೆ ಅಭಿಷೇಕ ತೀರ್ಥ, ಹಾಲು ಹರಿದು ಹೋಗುವ ಮಾರ್ಗದಲ್ಲಿ ಹಾದುಹೋಗುತ್ತದೆ. ಇದು ಶಿವಲಿಂಗದ ಪವಿತ್ರ ಭಾಗವಾಗಿದ್ದು ಇದನ್ನು ಎಂದಿಗೂ ದಾಟಬಾರದೆಂದು ಹೇಳಲಾಗುತ್ತದೆ.

ದಂತಕಥೆಯ ಪ್ರಕಾರ ಶಿವಭಕ್ತನಾಗಿದ್ದ ಗಂಧರ್ವ ಎಂಬ ರಾಜನು ಶಿವದೇವಾಲಯದಲ್ಲಿ ಪ್ರದಕ್ಷಿಣೆ ಹಾಕಲು ಆರಂಭಿಸಿದನು. ಗೊತ್ತಾಗದೇ ಗೋಮುಖಿಯನ್ನು ದಾಟಿಬಿಟ್ಟನು. ಇದರಿಂದ ರಾಜನು ಶಿವನ ಕೋಪಕ್ಕೆ ಗುರಿಯಾಗಿ ತನ್ನ ಅಧಿಕಾರ, ಶಕ್ತಿ ಮತ್ತು ಬುದ್ಧಿವಂತಿಕೆಯನ್ನು ಕಳೆದುಕೊಳ್ಳಬೇಕಾಗಿ ಬಂತು. ಆದ್ದರಿಂದ ಪ್ರಾಚೀನ ಗ್ರಂಥಗಳಲ್ಲಿ ಶಿವಲಿಂಗಕ್ಕೆ ಮಾಡುವ ಅರ್ಧಪ್ರದಕ್ಷಿಣೆಯ ಬಗ್ಗೆ ಉಲ್ಲೇಖಿಸಲಾಗಿದೆ.

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ

ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು

ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

2 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

2 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

2 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

2 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

2 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

2 days ago