Featured

ಕೆಲವೊಂದು ಶಿವ ದೇವಾಲಯದಲ್ಲಿ  ಅರ್ಧಪ್ರದಕ್ಷಿಣೆ ಯಾಕೆ ಹಾಕುತ್ತಾರೆ ಗೊತ್ತಾ?? Vishwanews24

ಕೆಲವೊಂದು ಶಿವ ದೇವಾಲಯದಲ್ಲಿ  ಅರ್ಧಪ್ರದಕ್ಷಿಣೆ ಯಾಕೆ ಹಾಕುತ್ತಾರೆ ಗೊತ್ತಾ?? Vishwanews24

ನಮ್ಮಲ್ಲಿ ಹಲವಾರು ಈಶ್ವರ ದೇವಾಲಯಗಳಿವೆ ಅವುಗಳಲ್ಲಿ ಕೆಲವೊಂದು ಶಿವದೇವಸ್ಥಾನಗಳಿಗೆ ಭೇಟಿ ನೀಡಿದಾಗ ಅರ್ಧ ಪ್ರದಕ್ಷಿಣೆಯನ್ನು ಹಾಕಿದರೆ, ಕೆಲವೊಂದು ಶಿವ ದೇವಾಲಯಗಳಲ್ಲಿ ಪೂರ್ಣಸುತ್ತಿನ ಪ್ರದಕ್ಷಿಣೆಯನ್ನು ಮಾಡುತ್ತೇವೆ. ಇದರ ಹಿಂದಿರುವ ಹಿನ್ನಲೆ ಏನು? ಯಾಕೆ ಈ ಅರ್ಧಪ್ರದಕ್ಷಿಣೆ ಕೆಲವೊಂದು ದೇವಾಲಯಗಳಲ್ಲಿ ಮಾತ್ರ ಎನ್ನುವ ನಿಮ್ಮ ಸಂದೇಹಕ್ಕೆ ಉತ್ತರ ಈ ಲೇಖನದಲ್ಲಿದೆ.

ನಾವು ವೃತ್ತವನ್ನು ಎಳೆಯುವಾಗ ಒಂದು ಕೇಂದ್ರಬಿಂದುವನ್ನು ಹಾಕುತ್ತೇವೆ. ಅಂತೆಯೇ ಕೇಂದ್ರದಲ್ಲಿ ದೇವರ ಅನುಪಸ್ಥಿತಿಯಿದ್ದರೆ ನಾವು ಕೂಡಾ ಅಸ್ತಿತ್ವದಲ್ಲಿ ಇಲ್ಲದಂತೆ. ಹಾಗಾಗಿ ದೇವರನ್ನು ಗೌರವಿಸಲು, ಅಂಗೀಕರಿಸಲು ಹಾಗೂ ಕೃತಜ್ಞತೆಯನ್ನು ತೋರಿಸಲು ಪ್ರದಕ್ಷಿಣೆಯನ್ನು ಹಾಕಬೇಕು.

ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆ

ಕೆಲವು ಶಿವಾಲಯಗಳಲ್ಲಿ ಗರ್ಭಗುಡಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕುತ್ತೇವೆ. ಕೆಲವು ದೇವಾಲಯಗಳಲ್ಲಿ ಪ್ರದಕ್ಷಿಣಾಕಾರವಾಗಿ ಗೋಮುಖಿಯವರೆಗೆ ಬಂದು ಅಲ್ಲಿಂದ ಮತ್ತೆ ಗೋಮುಖಿಯ ಇನ್ನೊಂದು ಭಾಗದಿಂದ ಗರ್ಭಗುಡಿಗೆ ನಮ್ಮ ಎಡಭಾಗವು ಬರುವಂತೆ ಪ್ರದಕ್ಷಿಣೆಯನ್ನು ಹಾಕಬೇಕು. ಗೋಮುಖಿ ಎಂದರೆ ದೇವರಿಗೆ ಮಾಡುವ ಅಭಿಷೇಕದ ನೀರು ಬೀಳುವ ಸ್ಥಳ. ಇದನ್ನು ದಾಟಬಾರದು. ಎಲ್ಲಾ ಶಿವದೇವಾಲಯಗಳಲ್ಲಿ ಈ ನಿಯಮವಿರುವುದಿಲ್ಲ. ಉದ್ಭವಲಿಂಗವಿರುವ ಶಿವ ದೇವಾಲಯದಲ್ಲಿ ಪೂರ್ಣಪ್ರದಕ್ಷಿಣೆ ಹಾಕಬೇಕು. ಪ್ರತಿಷ್ಠಾಪಿತ ಲಿಂಗವಿರುವ ದೇವಾಲಯದಲ್ಲಿ ಅರ್ಧಪ್ರದಕ್ಷಿಣೆ ಹಾಕಬೇಕು ಎಂಬ ಸಂಪ್ರದಾಯವಿದೆ.

ಯಾಕೆ ಅರ್ಧಪ್ರದಕ್ಷಿಣೆ?

ಉದ್ಭವ ಲಿಂಗವಿರುವ ಶಿವ ದೇವಾಲಯಗಳಲ್ಲಿ ಶಿವಲಿಂಗದ ಧನಾತ್ಮಕ ಪ್ರಭಾವವನ್ನು ತಡೆದುಕೊಳ್ಳುವ ಶಕ್ತಿ ನಮಗಿಲ್ಲವಾದ್ದ ಕಾರಣದಿಂದ ಪೂರ್ಣ ಸುತ್ತು ಪ್ರದಕ್ಷಿಣೆ ಹಾಕಬೇಕು. ಶಾಸ್ತ್ರ ಹಾಗೂ ಶಿವಪುರಾಣದ ಪ್ರಕಾರ ಶಿವಲಿಂಗದ ಸುತ್ತಲೂ ಅರ್ಧವಿಕ್ರಮವನ್ನು ಮಾಡಬೇಕು. ಇದು ಶಿವನ ಆದಿ ಮತ್ತು ಅನಂತವನ್ನು ಸಮರ್ಥಿಸುವ ಕ್ರಿಯೆ. ಆದಿ ಎಂದರೆ ಮೊದಲು, ಅನಂತ ಎಂದರೆ ಶಾಶ್ವತವಾದುದು. ಆದ್ದರಿಂದ ಶಿವಲಿಂಗದಿಂದ ಹರಿಯುವ ದೈವಿಕ ಮತ್ತು ಅಂತ್ಯವಿಲ್ಲದ ಶಕ್ತಿಯು ಗೋಮುಖಿ ಅಂದರೆ ಅಭಿಷೇಕ ತೀರ್ಥ, ಹಾಲು ಹರಿದು ಹೋಗುವ ಮಾರ್ಗದಲ್ಲಿ ಹಾದುಹೋಗುತ್ತದೆ. ಇದು ಶಿವಲಿಂಗದ ಪವಿತ್ರ ಭಾಗವಾಗಿದ್ದು ಇದನ್ನು ಎಂದಿಗೂ ದಾಟಬಾರದೆಂದು ಹೇಳಲಾಗುತ್ತದೆ.

ದಂತಕಥೆಯ ಪ್ರಕಾರ ಶಿವಭಕ್ತನಾಗಿದ್ದ ಗಂಧರ್ವ ಎಂಬ ರಾಜನು ಶಿವದೇವಾಲಯದಲ್ಲಿ ಪ್ರದಕ್ಷಿಣೆ ಹಾಕಲು ಆರಂಭಿಸಿದನು. ಗೊತ್ತಾಗದೇ ಗೋಮುಖಿಯನ್ನು ದಾಟಿಬಿಟ್ಟನು. ಇದರಿಂದ ರಾಜನು ಶಿವನ ಕೋಪಕ್ಕೆ ಗುರಿಯಾಗಿ ತನ್ನ ಅಧಿಕಾರ, ಶಕ್ತಿ ಮತ್ತು ಬುದ್ಧಿವಂತಿಕೆಯನ್ನು ಕಳೆದುಕೊಳ್ಳಬೇಕಾಗಿ ಬಂತು. ಆದ್ದರಿಂದ ಪ್ರಾಚೀನ ಗ್ರಂಥಗಳಲ್ಲಿ ಶಿವಲಿಂಗಕ್ಕೆ ಮಾಡುವ ಅರ್ಧಪ್ರದಕ್ಷಿಣೆಯ ಬಗ್ಗೆ ಉಲ್ಲೇಖಿಸಲಾಗಿದೆ.

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ

ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು

ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681

Vishwa News 24

Recent Posts

ಕಾಸರಗೋಡು: ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ ತೆರಳಿದ್ದ 8ನೇ ತರಗತಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು – vishwanews24

ಕಾಸರಗೋಡು: ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ ತೆರಳಿದ್ದ 8ನೇ ತರಗತಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು ಕಾಸರಗೋಡು: ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ…

4 minutes ago

ರಾಜ್ಯಾದ್ಯಂತ 1 ವರ್ಷ ಗುಟ್ಕಾ, ಪಾನ್ ಮಸಾಲಾ ಮಾರಾಟ ನಿಷೇಧ – vishwanews24

ರಾಜ್ಯಾದ್ಯಂತ 1 ವರ್ಷ ಗುಟ್ಕಾ, ಪಾನ್ ಮಸಾಲಾ ಮಾರಾಟ ನಿಷೇಧ ಬೆಂಗಳೂರು: ಕರ್ನಾಟಕ ಸರ್ಕಾರವು  ತಂಬಾಕು ಮತ್ತು ನಿಕೋಟಿನ್ ಹೊಂದಿರುವ…

20 minutes ago

ಉಡುಪಿ : ಶ್ರೀ ಕೃಷ್ಣ ಮಠಕ್ಕೆ ಅಣ್ಣಾಮಲೈ  ಭೇಟಿ  – vishwanews24

ಉಡುಪಿ : ಶ್ರೀ ಕೃಷ್ಣ ಮಠಕ್ಕೆ ಭೇಟಿ  ನೀಡಿ ದೇವರ ದರ್ಶನ ಪಡೆದ ಅಣ್ಣಾಮಲೈ  ಉಡುಪಿ: ಮಾಜಿ ಐಪಿಎಸ್ ಅಧಿಕಾರಿ…

35 minutes ago

ನಾಳಿನ ‘ಕರ್ನಾಟಕ ಬಂದ್’ಗೆ ನಮ್ಮ ಬೆಂಬಲವಿಲ್ಲ: ಕರವೇ ಪ್ರವೀಣ್ ಶೆಟ್ಟಿ ಸ್ಪಷ್ಟನೆ – vishwanews24

‘ಕರ್ನಾಟಕ ಬಂದ್’ಗೆ ನಮ್ಮ ಬೆಂಬಲವಿಲ್ಲ: ಕರವೇ ಪ್ರವೀಣ್ ಶೆಟ್ಟಿ ಸ್ಪಷ್ಟನೆ ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ…

2 hours ago

ನಟ ಪ್ರಕಾಶ್ ರಾಜ್ ಮತದಾರರ ಪಟ್ಟಿ ಹೆಸರು ಕೈಬಿಟ್ಟ ಆರೋಪ ಸುಳ್ಳು: ಬಿಬಿಎಂಪಿ ಸ್ಪಷ್ಟನೆ – vishwanews24

ವೋಟರ್ ಲಿಸ್ಟ್​ನಿಂದ ತಮ್ಮ ಹೆಸರು ಕೈಬಿಡಲಾಗಿದೆ : ನಟ ಪ್ರಕಾಶ್​ ರಾಜ್ ಆರೋಪಕ್ಕೆ ಚುನಾವಣಾಧಿಕಾರಿ ಸ್ಪಷ್ಟನೆ ಬೆಂಗಳೂರು: ಮತದಾರರ ಪಟ್ಟಿಯಿಂದ…

3 hours ago

ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ. ಕೆ. ಶಿವಕುಮಾರ್ – vishwanews24

ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಅವರ ಸಚಿವ ಸಂಪುಟಕ್ಕೆ…

3 hours ago