ಕಾಪು: ಕೊರೋನಾ ಎಂಬ ಮಹಾಮಾರಿ ರೋಗದಿಂದ ಭಾರತ ಲಾಕ್ಡೌನ್ ಆಗಿದ್ದು ರಾಜ್ಯ ಮಾತ್ರವಲ್ಲದೆ ಮಂಬಯಿಯ ಜನ ಜೀವನವೂ ಅಸ್ತವ್ಯಸ್ತವಾಗಿದೆ.ವಿಶೇಷವಾಗಿ ತುಳುನಾಡಿನ ಅನೇಕ ಮಂದಿ ಉದ್ಯೋಗಕ್ಕಾಗಿ ಮುಂಬಯಿ ಹಾದಿಹಿಡಿದ ಕುಟುಂಬಗಳು ಕೊರೋನಾ ಲಾಕ್ಡೌನ್ ಸಮಸ್ಯೆಯಿಂದ ತವರಿಗೆ ಮರಳಲು ಹರಸಾಹಸ ಪಡುತ್ತಿರುವುದನ್ನ ಮನಗಂಡ ಪಡುಬಿದ್ರಿ ಬಂಟರ ಸಂಘದ ಅದ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ,ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ ಐಕಳ ಬಾವ ಡಾ ದೇವಿಪ್ರಸಾದ್ ಶೆಟ್ಟಿ ಮುಂಬಯಿಯಲ್ಲಿರುವ ತುಳುನಾಡಿ£ ಜನತೆಯ ಸ್ಪಂದಿಸುವ ದೃಷ್ಟಿಯಿಂದ ಯಾವುದೇ ಸಮಸ್ಯೆಯಾದರೂ ಕೂಡ ನೇರವಾಗಿ ಸಂಪರ್ಕಿಸಲು ತಿಳಿಸಿರುತ್ತಾರೆ.
ಮುಂಬಯಿAದ ವಾಪಸ್ಸಾಗುವ ಸಮಯದಲ್ಲಿ ಅಥಾವ ವಾಸಿಸುತ್ತಿರುವ ಭಾಗದಲ್ಲಿ ಪಡಿತರ ಅಥಾವ ಆರೋಗ್ಯದ ವಿಚಾರದಲ್ಲಿ ಯಾವುದಾದರೂ ಸಮಸ್ಯೆ ಬಂದರೂ ಕೂಡ ಸಂಪರ್ಕಿಸಬಹುದಾಗಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರೀಯೆ ನೀಡಿದ ಅವರು” ಮುಂಬಯಿಯಲ್ಲಿ ವಾಸಿಸುತ್ತಿರುವವ ತುಳುನಾಡಿನ ಜನತೆಯ ಕಷ್ಟಕ್ಕೆ ನಾವುಗಳು ಸ್ಪಂದಿಸುವುದು ಧರ್ಮ ಮತ್ತು ಕರ್ತವ್ಯ, ತುಳುನಾಡಿನ ಅಭಿವೃದ್ದಿಯಲ್ಲಿ ಮಹತ್ತರವಾದ ಕೊಡುಗೆ ನೀಡಿದ ಹೃದಯ ಶ್ರೀಮಂತಿಕೆಯ ಬಂಧುಗಳ ಸಂಕಷ್ಟಕ್ಕೆ ಈಗಾಗಲೇ ನಿರಂತರವಾಗಿ ನಮ್ಮ ಊರಿನ ಬಂಧುಗಳನ್ನ ವಾಪಸ್ಸು ಕರೆಸಿಕೊಳ್ಳಲು ಕರ್ನಾಟಕ ರಾಜ್ಯ ಸರಕಾರದೊಂದಿಗೆ
ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೂ ಅದರ ಜತೆಗೆ ಮಹರಾಷ್ಟçದ ಸಂಸದರ ಜತೆ ಕೂಡ ಈ ಬಗ್ಗೆ ಚರ್ಚಿಸಿದ್ದೇವೆ ಯಾವುದೇ ರೀತಿಯ ಭಯ ಪಡುವ ಅಗತ್ಯವಿಲ್ಲ ನಿಮ್ಮ ಆರೋಗ್ಯ ರಕ್ಷಣೆಗೆ ನಾವು ಸಿದ್ಧರಿದ್ದೆವೆ ಆದಷ್ಟು ಶೀಘ್ರವಾಗಿ ಊರಿಗೆ ವಾಪಸ್ಸು ಕರೆಸಿಕೊಳ್ಳುವ ಜವಬ್ಧಾರಿ ನಮಗಿದೆ ಯಾವುದೇ ಸಂದರ್ಭದಲ್ಲಿ ಸಮಸ್ಯೆಯಾದರೂ ಕೂಡ ನೇರವಾಗಿ ನನ್ನ ವೈಯಕ್ತಿಕ ಸಂಖ್ಯೆಯನ್ನು 9448026893 ಸಂಪರ್ಕಿಸಬಹುದು ಎಂದರು”
ಶಿರ್ವ: ಪಾಪನಾಶಿನಿ ಹೊಳೆಯಲ್ಲಿ ಹಸುವಿನ ಅವಶೇಷ ಪತ್ತೆ; ಪ್ರಕರಣ ದಾಖಲು ಶಿರ್ವ: ಕಾಪು ತಾಲೂಕಿನ ಶಿರ್ವ ಗ್ರಾಮದ ಕಲ್ಲೊಟ್ಟು ಸೇತುವೆ…
ಬೈಂದೂರು: ಶಿರೂರು ನದಿಯಲ್ಲಿ ಈಜಲು ತೆರಳಿದ್ದ ಹಾವೇರಿ ಮೂಲದ ವಿದ್ಯಾರ್ಥಿ ನೀರುಪಾಲು ಬೈಂದೂರು : ಕುಟುಂಬದವರೊಂದಿಗೆ ಪ್ರವಾಸಕ್ಕೆ ಬಂದಿದ್ದ ಹಾವೇರಿ…
ಉಡುಪಿ: ಡಿಕೆಶಿ ಸಂಪುಟದಲ್ಲಿ ಜಾರ್ಜ್ ಗೆ ಉಪ ಮುಖ್ಯಮಂತ್ರಿ, ಐವನ್ ಗೆ ಸಚಿವ ಸ್ಥಾನ ನೀಡಲು ಕಥೊಲಿಕ್ ಸಭಾ ಆಗ್ರಹ…
ಮಲೇಷ್ಯಾದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಕೆ ನಿಷೇಧ.. ನಿಯಮ ಉಲ್ಲಂಘಸಿದ್ರೆ 23.95 ಕೋಟಿ ರೂ. ದಂಡ ಕೌಲಾಲಂಪುರ್: 16…
ಸುವೇಂಧು ಸಂಪುಟ ವಿಸ್ತರಣೆ: ಬಂಗಾಳದ ನೂತನ ಸಚಿವರಾಗಿ 35 ಶಾಸಕರಿಂದ ಪ್ರಮಾಣ ಸ್ವೀಕಾರ ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು…
ಬೆಂಗಳೂರು – ಮಂಗಳೂರು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ರದ್ದು ಮಂಗಳೂರು : ಜೂನ್ 3ರಂದು ನಿಗದಿಯಾಗಿದ್ದ ಬಹು…