ಉಡುಪಿ: ಕೋಟಾ ಕೊರಗ ಜನಾಂಗದ ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸರು ದಾಳಿ ನಡೆಸಿ ವರನಿಗೆ ಸಮೇತವಾಗಿ ಹಲವಾರು ಮಂದಿಗೆ ಹಲ್ಲೆ ನಡೆಸಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿತ್ತು.
ಘಟನೆಯ ನಂತರ ನೂರಾರು ಬೆಳವಣಿಗೆಗಳು ವಿವಿಧ ಅಧಿಕಾರಿಗಳು- ಸಚಿವರು- ಶಾಸಕರು ಭೇಟಿ ನೀಡಿ ಸಾಂತ್ವನ ಮಾಡುವ ಪ್ರಯತ್ನ ನಡೆಯಿತು.
ಈಗ ಆಮ್ ಆದ್ಮಿ ಪಾರ್ಟಿಯ ಸರದಿ ” ಕೋಟಾ ಪ್ರಕರಣವನ್ನು AAP ತೀವ್ರವಾಗಿ ಖಂಡಿಸಿದರು.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ AAP ಮುಖ್ಯಸ್ಥ ಎಚ್.ಡಿ ಬಸವರಾಜ ಮಾತನಾಡಿ ” ಜನಪ್ರತಿನಿಧಿಗಳು ಜನರಿಗೆ ಸಹಕಾರಿಗಳಾಗಿರಬೇಕು ಹೊರತು ಇಂತಹ ಘಟನೆಗಳು ನಡೆದಾಗ ಅದರ ವಿರುದ್ಧ ನಿಂತು ಧೈರ್ಯ ತುಂಬುವ ಕೆಲಸಮಾಡಬೇಕಿದೆ ಅದನ್ನು ಬಿಟ್ಟು ಬರೀ ಭೇಟಿ ನೀಡಿ ಫೋಟೋ ಫೋಸ್ ಕೊಟ್ಟು ಬರುವುದಲ್ಲ ಈ ಬಗ್ಗೆ ತುರ್ತಾಗಿ ತನಿಖೆ ಆಗ್ಬೇಕು ಮತ್ತು ಹಲ್ಲೆಯಲ್ಲಿ ಭಾಗವಹಿಸಿದ ಎಲ್ಲಾ ಪೊಲೀಸರನ್ನು ಸಸ್ಪೆಂಡ್ ಮಾಡಬೇಕು ಎಂದರು.
ಬಿಜೆಪಿ ಕಾಂಗ್ರೆಸ್ ಬರೀ ದಲಿತರ ಜತೆ ನಿಲ್ಲುವ ನಾಟಕ ಮಾಡುತ್ತಿದೆ ಹೊರತು ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ.ಈ ದೌರ್ಜನ್ಯದಲ್ಲಿ ಭಾಗಿಯಾದ ಪೊಲೀಸರ ಮೇಲೆ ಕಠಿಣಕ್ರಮ ಜರುಗಿಸಬೇಕು ಮತ್ತು ಆ ಜನಾಂಗದವರನ್ನು ರಕ್ಷಿಸಲು ಪಣತೊಡಬೇಕು ಆಗುವುದಿಲ್ಲ ಎಂದಾದರೆ ಸಚಿವರು ಶಾಸಕರು ರಾಜಿನಾಮೆ ನೀಡಲಿ ” ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಯಕಿಶನ್ ಪೂಜಾರಿ, ರಮೇಶ್ ಕೋಟ್ಯಾನ್, ವಿಜಯಾನಂದ ಪಾಂಗಾಳ,ಸುರೇಶ್ ಭಂಡಾರಿ ಉಪಸ್ಥಿತರಿದ್ದರು.
ವಿಟ್ಲ: ಕಾರು ಮತ್ತು ದ್ವಿಚಕ್ರ ವಾಹನ ಭೀಕರ ಅಪಘಾತ; ಸವಾರ ಮೃತ್ಯು ವಿಟ್ಲ: ಮಿತ್ತೂರು ಸಮೀಪದ ಪರ್ಲೋಟು ಎಂಬಲ್ಲಿ ಸಂಭವಿಸಿದ…
ಉಡುಪಿ: ಸೆ. 4ರಂದು ಶ್ರೀಕೃಷ್ಣ ಜನ್ಮಾಷ್ಟಮಿ ; ಸೆ.5ರಂದು ವಿಟ್ಲಪಿಂಡಿ ಉತ್ಸವ ಉಡುಪಿ: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಶಿರೂರು ಮಠದ…
ರೇಣುಕಾಸ್ವಾಮಿ ಕೊಲೆ ಪ್ರಕರಣ : ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್ ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ…
ಜವಾಬ್ದಾರಿಗಳನ್ನು ಹೊಸ ಪೀಳಿಗೆಗೆ ಹಸ್ತಾಂತರಿಸುವ ಸಮಯ ಬಂದಿದೆ : ನಿತಿನ್ ಗಡ್ಕರಿ ಮುಂಬೈ: ಈ ಹಿಂದೆ ಮಾಡುತ್ತಿದ್ದಷ್ಟು ಕೆಲಸವನ್ನು ಇನ್ನು…
ಹಬ್ಬಗಳ ಹಿನ್ನೆಲೆ : ದಕ್ಷಿಣ ಕನ್ನಡ ಪೊಲೀಸರ ಕಟ್ಟುನಿಟ್ಟಿನ ಮಾರ್ಗಸೂಚಿ ಬಿಡುಗಡೆ ರಾತ್ರಿ 11:30 ಗಂಟೆಯ ನಂತರ ಮೆರವಣಿಗೆ ,…
ಸೆ. 1 ರಿಂದ 10 ರವರೆಗೆ ಬೃಹತ್ ಪಾದಯಾತ್ರೆ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆಂಗಳೂರು : ರಾಜ್ಯ ಸರ್ಕಾರದ…