ಕಾಪು: ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರ್ಕಾರದ ಆದೇಶದಂತೆ ಸೋಮವಾರ ಫ್ರಂಟ್ ಲೈನ್ ವರ್ಕರ್ ಹಾಗೂ ವಿದೇಶ ಪ್ರವಾಸ ಮಾಡುವವರಿಗೆ ಮಾತ್ರ ವ್ಯಾಕ್ಸಿನೇಷನ್ ಬಗ್ಗೆ ತಿಳಿಯಪಡಿಸಿತ್ತು ಆದರೇ ವ್ಯಾಕ್ಸಿನೇಷನ್ ಇದೆ ಎಂಬ ಸುಳ್ಳು ವಾಟ್ಸಪ್ ಮೆಸೇಜ್ ಹರಿದಾಡಿದ ಪರಿಣಾಮದಿಂದ ಆಸ್ಪತ್ರೆಗೆ ಬೆಳಗ್ಗೆಯ ಜನ ಧಾವಿಸಿದ್ದರು ಇದರ ನಡುವೆ ಪುರಸಭೆಯ ಮಾಜಿ ಸದಸ್ಯರು ಕೆಲವರು ಆಸ್ಪತ್ರೆಯ ಒಳಗಡೆ ತೆರಳಿ ನರ್ಸ್ ಹಾಗೂ ಸಿಬ್ಬಂದಿಗಳ ಜತೆ ಪುರಸಭೆ ಸದಸ್ಯರ ಆಪ್ತರಿಗೆ ವ್ಯಾಕ್ಸಿನೇಷನ್ ಮಾಡುವ ಬಗ್ಗೆ ಒತ್ತಡ ಮಾಡಿದ ಪರಿಣಾಮ ಅದಕ್ಕೆ ಒಪ್ಪದ ವೈದ್ಯಾಧಿಕಾರಿ ಸುಬ್ರಯಾ ಕಾಮತ್ ವಿರುದ್ಧ ಮಾಜಿ ಸದಸ್ಯರು ಕಿಡಿಕಾರಿದ ಘಟನೆ ನಡೆಯಿತು ಇವರೊಂದಿಗೆ ಸೇರಿದ ಜನಸ್ತೋಮ ಕೂಡ ಧ್ವನಿಗೂಡಿಸಿತು.
ಈ ಬಗ್ಗೆ ಪುರಸಭೆ ಮಾಜಿ ಅಧ್ಯಕ್ಷ ಅನಿಲ್ ಕುಮಾರ್ ಮಾತಾನಾಡಿ” ವ್ಯಾಕ್ಸಿನೇಷನ್ ಇದೆ ಎಂಬ ಸುಳ್ಳು ಸುದ್ದಿ ಹರಿದಾಡಿದ ಪರಿಣಾಮ ಈ ರೀತಿಯ ಗೊಂದಲ ಉಂಟಾಗಿದೆ ಮುಂದಿನ ದಿನ ಈ ರೀತಿಯಾಗದಂತೆ ಕಾರ್ಯಪ್ರವೃತರಾಗಲಿದೆ ಎಂದರು”.
“ನಾವು ಸರ್ಕಾರದ ಆದೇಶದ ಪ್ರಕಾರ ಕಾರ್ಯನಿರ್ವಹಿಸುವುದು ವಿನಹ ಜನಪ್ರತಿನಿಧಿಗಳು ನಮಗೆ ಯಾವುದೇ ಒತ್ತಡ ಹಾಕಿದರೂ ನೀಡಲು ಸಾಧ್ಯವಾಗುವುದಿಲ್ಲ ಏಕೆಂದರೆ ವ್ಯಾಕ್ಸಿನ್ ಇಂಡೆಟ್ ಪ್ರಕಾರ ಬರುತ್ತೆ ಬಂದಿರುವುದನ್ನು ಸರ್ಕಾರದ ಆದೇಶದಂತೆ ನೀಡಲಾಗುತ್ತದೆ”
ಡಾ.ಸುಬ್ರಾಯ ಕಾಮತ್
ವೈಧ್ಯಧಿಕಾರಿ-ಕಾಪು ಪಿ.ಎಚ್.ಸಿ
ಸ್ಥಳಕ್ಕಾಗಮಿಸಿದ ಕಾಪು ಪೋಲಿಸರು ಪರಿಸ್ಥಿತಿಯನ್ನು ಸುಧಾರಿಸಿ ಬಂದಿರುವ ಜನರಿಗೆ ಸಮಸ್ಯೆಯ ಬಗ್ಗೆ ತಿಳುವಳಿಕೆ ಮೂಡಿಸಿ ಗೊಂದಲ ಬಗೆಹರಿಸಿದರು.
ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…
ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು :…
ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…
ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…
ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್ಪೋರ್ಟ್…
ದೆಹಲಿ-ಪುಣೆ ಸ್ಪೈಸ್ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್ಜೆಟ್ (Spice Jet) ವಿಮಾನದಲ್ಲಿ…