Featured

ಕೋವಿಡ್ ಸಂಕಷ್ಟ : ಭಾರತಕ್ಕೆ ಸಹಾಯಕ್ಕೆ ಧಾವಿಸಿದ ಅಮೆರಿಕ, ಇಂಗ್ಲೆಂಡ್ -Vishwanews24

ಕೋವಿಡ್ ಸಂಕಷ್ಟ : ಭಾರತಕ್ಕೆ ಸಹಾಯಕ್ಕೆ ಧಾವಿಸಿದ ಅಮೆರಿಕ, ಇಂಗ್ಲೆಂಡ್ -Vishwanews24

ನವ ದೆಹಲಿ : ಕೋವಿಡ್ ಸೋಂಕಿನ ರೂಪಾಂತರಿ ಅಲೆಯ ಪರಿಣಾಮದಿಂದಾಗಿ ಸಂಕಷ್ಟದಲ್ಲಿರುವ ಭಾರತಕ್ಕೆ ಸಹಾಯ ಹಸ್ತ ಚಾಚಲು ಹಲವು ದೇಶಗಳು ಮುಂದೆ ಬಂದಿವೆ.

ವಿಶ್ವದ ದೊಡ್ಡಣ್ಣ ಅಮೆರಿಕ ಈಗಾಗಲೇ 5ಟನ್​ ಗಳಷ್ಟು ಆಕ್ಸಿಜನ್ ಸಾಂದ್ರಕ ಮತ್ತಿತರ ವೈದ್ಯಕೀಯ ಉಪಕರಣಗಳನ್ನು ದೆಹಲಿಗೆ ಕಳಿಸಿಕೊಟ್ಟಿದೆ.

ಇಂದು(ಮಂಗಳವಾರ, ಏ. 27) ಇಂಗ್ಲೆಂಡ್ ನಿಂದ ಮೊದಲ ಹಂತವಾಗಿ ಆಮ್ಲಜನಕ ಸಾಂದ್ರಕಗಳು ಮತ್ತು ವೆಂಟಿಲೇಟರ್​ ಗಳು ಭಾರತವನ್ನು ತಲುಪಿವೆ ಎಂದು ವರದಿಗಳು ತಿಳಿಸಿವೆ.

ಇನ್ನು, ಅಮೆರಿಕದಿಂದ ಇಂದು ಇನ್ನೊಂದು ಏರ್ ​ಇಂಡಿಯಾ ವಿಮಾನ ಭಾರತಕ್ಕೆ ಆಮ್ಲಜನಕ ಸಾಂದ್ರಕವನ್ನು ಬರಲಿದ್ದು, ಇಂಗ್ಲೆಂಡ್​ನಿಂದ ಮತ್ತೊಂದು ಹಂತದ ಆಕ್ಸಿಜನ್ ಮತ್ತು ವೆಂಟಿಲೇಟರ್ ​​ಗಳು ಭಾರತಕ್ಕೆ ಈ ವಾರಾಂತ್ಯದಲ್ಲಿ ಬರಲಿದೆ ಎಂಬ ಮಾಹಿತಿಯನ್ನು ಸುದ್ದಿ ಮೂಲಗಳು ತಿಳಿಸಿವೆ.

ಎರಡನೇ ಹಂತದಲ್ಲಿ 495 ಆಮ್ಲಜನಕ ಸಾಂದ್ರಕಗಳು, 120 ನಾನ್​ ಇನ್​ ವೇಸಿವ್ ವೆಂಟಿಲೇಟರ್​ ಗಳು ಮತ್ತು 20 ಮ್ಯಾನ್ಯುಯಲ್​ ವೆಂಟಿಲೇಟರ್​ಗಳು ಇಂಗ್ಲೆಂಡ್ ನಿಂದ ಭಾರತವನ್ನು ತಲುಪಲಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಮಂಗಳೂರು : ಪಂಪ್ ವೆಲ್ ಗೋಡೆ ಮೇಲೆ ಆಕ್ಷೇಪಾರ್ಹ ಸಂದೇಶ ಪ್ರಕರಣ : ಇಬ್ಬರು ಬಾಲಕರ ಬಂಧನ -Vishwanews24

ಈ ಬಗ್ಗೆ ಪ್ರತಿಕ್ರಿಯಿಸಿದ ಇಂಗ್ಲೆಂಡ್ ನ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್, ಭಾರತ ನಮ್ಮ ಪ್ರಮುಖ ಪಾಲುದಾರ ದೇಶಗಳಲ್ಲಿ ಒಂದು. ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಎಸ್​.ಜೈಶಂಕರ್​ ಅವರೊಂದಿಗೆ ಮಾತನಾಡಿ ಪರಿಸ್ಥಿತಿಯ ಬಗ್ಗೆ ಅರಿತುಕೊಂಡಿದ್ದೇವೆ. ಭಾರತಕ್ಕೆ ಸಹಾಯ ಮಾಡಲಿದ್ದೇವೆ ಎಂದು ಅವರು ಹೇಳಿದ್ದಾರೆ.

Good to see the first of our medical supplies have now arrived in India and will be deployed where they are needed most.

No one is safe until we are all safe. International collaboration is key to fighting this global threat. pic.twitter.com/IDfP492YyU

– Dominic Raab (@DominicRaab) April 26, 2021

ಇನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೂಡ ಟ್ವೀಟ್ ಮಾಡಿದ್ದು, ನಮ್ಮ ದೇಶದಲ್ಲಿ ಕೊರೊನಾ ಸಂಕಷ್ಟ ಮಿತಿಮೀರಿದ್ದಾಗ ಭಾರತ ಸಹಾಯ ಹಸ್ತ ಚಾಚಿತ್ತು. ನಾವೀಗ ಭಾರತದ ನೆರವಿಗೆ ಧಾವಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಲಾಕ್‌ಡೌನ್ ಇದ್ದರೂ ಲಸಿಕೆ ಲಭ್ಯ: ಕೆ.ಸುಧಾಕರ್ -Vishwanews24

Vishwa News 24

Recent Posts

ಭಜರಂಗದಳ ಮುಖಂಡ ಪುನೀತ್ ಅತ್ತಾವರಗೆ 3 ತಿಂಗಳು ಉಡುಪಿ ಜಿಲ್ಲೆ ಪ್ರವೇಶ ನಿರ್ಬಂಧ : ಜಿಲ್ಲಾಧಿಕಾರಿ ಆದೇಶ – vishwanews24

ಭಜರಂಗದಳ ಮುಖಂಡ ಪುನೀತ್ ಅತ್ತಾವರಗೆ 3 ತಿಂಗಳು ಉಡುಪಿ ಜಿಲ್ಲೆ ಪ್ರವೇಶ ನಿರ್ಬಂಧ : ಜಿಲ್ಲಾಧಿಕಾರಿ ಆದೇಶ ಉಡುಪಿ: ಕಾನೂನು…

9 minutes ago

USನಲ್ಲಿ ಹೆತ್ತತಾಯಿ-ತಮ್ಮನನ್ನೇ ಕೊಂದ ಭಾರತೀಯ ಮೂಲದ ಬಾಲಕ ; ಹತ್ಯೆಗೆ Chat GPT ಸೇರಿದಂತೆ AI ಬಳಕೆ ಆರೋಪ – vishwanews24

USನಲ್ಲಿ ಹೆತ್ತತಾಯಿ-ತಮ್ಮನನ್ನೇ ಕೊಂದ ಭಾರತೀಯ ಮೂಲದ ಬಾಲಕ .. ಹತ್ಯೆಗೆ Chat GPT ಸೇರಿದಂತೆ AI ಬಳಕೆ ಆರೋಪ ವಾಷಿಂಗ್ಟನ್:…

17 minutes ago

ಮಂಗಳೂರು : ಸ್ಕೂಟರ್ ಗೆ ಕಾರು ಡಿಕ್ಕಿ ; ಸವಾರ ಮೃತ್ಯು – vishwanews24

ಮಂಗಳೂರು : ಸ್ಕೂಟರ್ ಗೆ ಕಾರು ಡಿಕ್ಕಿ ; ಸವಾರ ಮೃತ್ಯು ಮಂಗಳೂರು: ಸ್ಕೂಟರ್ ಗೆ ಕಾರು ಡಿಕ್ಕಿ ಹೊಡೆದ…

30 minutes ago

ಹೋಟೆಲ್ ಬಳಿಕ ಇದೀಗ ಹಾಸ್ಟೆಲ್‌ಗಳಲ್ಲಿ ಆಹಾರ ತಪಾಸಣೆಗೆ  ಖಾದರ್ ಸೂಚನೆ – vishwanews24

ಹೋಟೆಲ್ ಬಳಿಕ ಇದೀಗ ಹಾಸ್ಟೆಲ್‌ಗಳಲ್ಲಿ ಆಹಾರ ತಪಾಸಣೆಗೆ  ಖಾದರ್ ಸೂಚನೆ ಬೆಂಗಳೂರು: ಹೋಟೆಲ್ ರೇಡ್ ಬಳಿಕ ಇದೀಗ ಹಾಸ್ಟೆಲ್‌ಗಳಲ್ಲಿ ಆಹಾರ…

43 minutes ago

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ – vishwanews24

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…

18 hours ago

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ – vishwanews24

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು  :…

18 hours ago