ಕಾಪು: ಕ್ಯಾಪ್ಟನ್ ಇಲೆಕ್ಟ್ರಿಕಲ್ ಕಂಪನಿಯ ವತಿಯಿಂದ ಇಲೆಕ್ಟ್ರಿಷಿಯನ್ ಮತ್ತು ಗುತ್ತಿಗೆದಾರರ ಸ್ನೇಹಕೂಟ ಸಭೆ ಕಾಪುವಿನ ಖಾಸಾಗಿ ಹೋಟೆಲ್ ನಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮ ಉದ್ದೇಶಿಸಿ ರೀಜಿನಲ್ ಸೇಲ್ಸ್ ಮ್ಯಾನೆಜರ್ ರಾಜೇಂದ್ರ ಮಾತನಾಡಿ ” ಹತ್ತು ಹಲವಾರು ಇಲೆಕ್ಟ್ರಿಕಲ್ ಕಂಪನಿಯ ನಡುವೆ ಕ್ಯಾಪ್ಟನ್ ಇಲೆಕ್ಟ್ರಿಕಲ್ ಕಂಪೆನಿಯ ಸ್ವಿಚ್ ಬೋರ್ಡ್, ಕೇಬಲ್ ವಯರ್ಗಳ ಗುಣಮಟ್ಟ ವೈವಿಧ್ಯತೆಯ ವಿಚಾರದಲ್ಲಿ ಕರ್ನಾಟಕದ ಕ್ಯಾಪ್ಟನ್ ಕಂಪನಿ ಮುಂಚೂಣಿಯ ಹಂತವನ್ನು ಏರುತ್ತಿದೆ ಅದಕ್ಕೆ ಮೂಲ ಕಾರಣ ಗುತ್ತಿಗೆದಾರರು ಮತ್ತು ಇಲೆಕ್ಟ್ರಿಷಿಯನ್ ಹಾಗಾಗಿ ಅಭಿನಂದನೆ ಮತ್ತು ಈ ಪ್ರಾಡಕ್ಟ್ ಮೂಲ ಕರ್ನಾಟಕ ಎಂಬುದು ಮತ್ತೊಂದು ಹೆಮ್ಮೆಯ ವಿಚಾರ ಎಂದರು.
ಮುಸ್ತಾಕ್ ಇಲೆಕ್ಟ್ರಿಕಲ್ ಮಾಲಿಕ ಮತ್ತು ಕಾರ್ಯಕ್ರಮದ ಆಯೋಜಕ ಮುಸ್ತಾಕ್ ಸಾಹೇಬ್ ಮಾತನಾಡಿ ” 1978 ರಿಂದ ಇಲೆಕ್ಟ್ರಿಕಲ್ ಅಂಗಡಿ ಮಾಲಕನಾಗಿ ನೂರಾರು ಕಂಪನಿಯ ಇಲೆಕ್ಟ್ರಾನಿಕ್ ಪ್ರಾಡಕ್ಟ್ ಮಾರಾಟ ಮಾಡಿದ ಅನುಭವ ಇದೆ,ಆದರೇ ಕ್ಯಾಪ್ಟನ್ ಕಂಪನಿಯ ಗುಣಮಟ್ಟ ಹಾಗೂ ಸೇವೆ ಅತ್ಯುತ್ತಮವಾಗಿದೆ ಮಾತ್ರವಲ್ಲದೆ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಪ್ರಾಡಕ್ಟ್ ಹೊರಬರುತ್ತಿದೆ ಅದು ಗ್ರಾಹಕರಿಗೆ ಇಷ್ಟವಾಗುತ್ತೆ.ಅಷ್ಟೇ ಅಲ್ಲದೆ ಗುತ್ತಿಗೆದಾರರು ಮತ್ತು ಇಲೆಕ್ಟ್ರಿಷಿಯನ್ ಕೂಡ ಗ್ರಾಹಕರಿಗೆ ಮೋಸ ಮಾಡಬಾರದು ಉತ್ತಮ ಗುಣಮಟ್ಟದ ಪ್ರಾಡಕ್ಟ್ ಗ್ರಾಹಕರ ಮನೆ ಮುಟ್ಟಲಿ ಬೆಳಗಲಿ ಎಂದರು.
ವೇದಿಕೆಯಲ್ಲಿ ಗುತ್ತಿಗೆದಾರ ನಾಗರಾಜ್ ಭಟ್ವ್ ಪಾಂಗಾಳ, ಕಾಪು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ರವಿ, ಕಾಪುವಿನ ಸಿವಿಲ್ ಇಂಜಿನಿಯರ್ ಮಹಮ್ಮದ್ ಸುಲೇಮಾನ್ , ಅವಿಭಜಿತ ಜಿಲ್ಲೆಯ ಕ್ಯಾಪ್ಟನ್ ಸ್ವಿಚ್ ಸೂಪರ್ ಸ್ಟಾಕಿಷ್ಟ್ ಅಭಿಶೇಕ್ ಉಪಸ್ಥಿತರಿದ್ದರು.
ಅಭಿ ಹಾವಂಜೆ ಸ್ವಾಗತಿಸಿ ಧನ್ಯವಾದ ಅರ್ಪಿಸಿದರು.
ಆಗಸ್ಟ್ 1ರಿಂದ ಬೆಂಗಳೂರು–ಮುಂಬೈ ನಡುವಿನ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಆರಂಭ ಬೆಂಗಳೂರು: ಭಾರಿ ನಿರೀಕ್ಷೆ ಹೊಂದಿದ್ದ ಮತ್ತು…
ಉಡುಪಿ: ಕಾಂಗ್ರೆಸ್ ಸರಕಾರವು ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸುವ ಮೂಲಕ ಬಡಜನರಿಗೆ ಆರ್ಥಿಕ ಶಕ್ತಿ ತುಂಬಿಸುವ ಕೆಲಸ ಮಾಡಿದೆ :…
ಪಡುಬಿದ್ರಿ : ಬೈಕ್ ಕಳವು ಪ್ರಕರಣ - ಓರ್ವನ ಬಂಧನ ಪಡುಬಿದ್ರಿ,: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳವು…
ಉಡುಪಿ: ಹಠಾತ್ತನೆ ರಸ್ತೆಗೆ ಉರುಳಿ ಬಿದ್ದ ಬೃಹತ್ ಮರ; ಅರಣ್ಯ ಅಧಿಕಾರಿ ಕೂದಲೆಳೆ ಅಂತರದಲ್ಲಿ ಪಾರು ಉಡುಪಿ: ಜಿಲ್ಲೆಯ ಹಾವಂಜೆ…
ಶಹಬಾಝ್ ಪಠಾಣ್ ಹತ್ಯೆ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ ಬೆಳಗಾವಿ : ನಗರದ ಶಿವಬಸವ ನಗರದಲ್ಲಿ ಐದು ವರ್ಷಗಳ ಹಿಂದೆ ನಡೆದ…
ಉಡುಪಿ ಬೆಂಕಿ ಅವಘಡ ಸ್ಥಳಕ್ಕೆ ಅಗ್ನಿಶಾಮಕ ದಳ ತಲುಪಲು ವಿಳಂಬ : ತನಿಖೆಗೆ ವಿವೇಕ್ ಜಿ. ಸುವರ್ಣ ಆಗ್ರಹ ಉಡುಪಿ:…