ಮಂಗಳೂರು : ಶಾಲಾ ಪಠ್ಯ ಪುಸ್ತಕದಲ್ಲಿ ಕ್ರಿಶ್ಚಿಯನ್ ಮತ್ತು ಇಸ್ಲಾಂ ಪಠ್ಯ ಸೇರಿಸಿಕೊಳ್ಳುವ ಔಚಿತ್ಯವೇನಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.
ಪುರಭವನದಲ್ಲಿ ವಿಹಿಂಪ ಮತ್ತು ಬಜರಂಗ ದಳ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ಪುಸ್ತಕ, ವಿದ್ಯಾರ್ಥಿವೇತನ ಮತ್ತು ಗಾಲಿಕುರ್ಚಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಳಿನ್, “ಭಾರತ ಶ್ರೀಮಂತ ಪರಂಪರೆಯ ದೇಶ. ಇಲ್ಲಿನ ಮಕ್ಕಳು ರಾಮಾಯಣ ಮತ್ತು ಮಹಾಭಾರತದಂತಹ ಮಹಾಗ್ರಂಥಗಳಲ್ಲಿರುವ ನೈತಿಕತೆ ಅಳವಡಿಸಿಕೊಂಡವರು. ಆದರೆ ಈಗ ಈ ಗ್ರಂಥಗಳಿಗೂ ಕೋಮುಬಣ್ಣ ಹಚ್ಚಲಾಗಿದೆ. ಬಜರಂಗ ದಳ ಮತ್ತು ಇತರ ಹಿಂದೂ ಸಂಘಟನೆಗಳನ್ನು ಟೀಕಿಸುವ ಮುಂಚೆ ಈ ಸಂಘಟನೆಗಳ ಸದಸ್ಯರ ಬಲಿದಾನ ನೆನಪಿಸಿಕೊಳ್ಳಬೇಕು” ಎಂದರು.
“ಕ್ರಿಶ್ಚಿಯನ್ ಮತ್ತು ಇಸ್ಲಾಂ ವಿಷಯ ಶಾಲಾ ಪಠ್ಯಗಳಲ್ಲಿ ಸೇರ್ಪಡೆಗೊಂಡಿರುವಾಗಲೂ ಇಲ್ಲಿ ಯಾವುದೇ ಪ್ರತಿಭಟನೆ ನಡೆಯುವುದಿಲ್ಲ. ಅನುದಾನರಹಿತ ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸಿದರೆ ಶಿಕ್ಷಣ ಇಲಾಖೆ ತಡ ಮಾಡದೆ ಅಂತಹ ಶಾಲೆಗಳಿಗೆ ನೊಟೀಸು ಜಾರಿ ಮಾಡುತ್ತದೆ. ಇತರ ಸಮುದಾಯದ ಪಠ್ಯ ಸೇರಿಸುವುದಿದ್ದರೆ ಈಗ ಯಾವುದು ಕೋಮುವಾದ ಎಂದು ಇಲಾಖೆಯೇ ಹೇಳಬೇಕು” ಎಂದು ವಿಹಿಂಪ ಪ್ರಾಂತೀಯ ಅಧ್ಯಕ್ಷ ಎಂ ಬಿ ಪುರಾಣಿಕ್ ಹೇಳಿದರು.
ಮಕ್ಕಳು ಎಲ್ಲ ಧರ್ಮಗಳ ಮೂಲತತ್ವ ತಿಳಿದುಕೊಳ್ಳಬೇಕು. ಆದರೆ, ಮಕ್ಕಳು ಚರ್ಚುಗಳಿಗೆ ಅಥವಾ ಮಸೀದಿಗಳಿಗೆ ಹೋಗಬೇಕೆನ್ನುವ ನಿರ್ದೇಶನ ಮಾತ್ರ ಅಸಂಗತ ಎಂದವರು ಹೇಳಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…
ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…
ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…
ಅಕ್ರಮ ಎಸ್ಐಆರ್ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್ ಸಂಚು : ಶೋಭಾ ಕರಂದ್ಲಾಜೆ ಗಂಭೀರ…
ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…
ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…