Featured

ಕ್ಷೇತ್ರದಾತ್ಯಂತ ಮೊಳಗಿತು “ಕಾಪುವಿಗೆ ಈ ಬಾರಿ ಸೊರಕೆ” ಅಭಿಯಾನ:ಇದು ಸೊರಕೆಯ ಕಡೇ ಚುನಾವಣೆ- ಗೆಲುವಿಗೆ ಮತದಾರ ಹಾಕುವನೆ ಮಣೆ..??

ಕ್ಷೇತ್ರದಾತ್ಯಂತ ಮೊಳಗಿತು “ಕಾಪುವಿಗೆ ಈ ಬಾರಿ ಸೊರಕೆ” ಅಭಿಯಾನ:ಇದು ಸೊರಕೆಯ ಕಡೇ ಚುನಾವಣೆ- ಗೆಲುವಿಗೆ ಮತದಾರ ಹಾಕುವನೆ ಮಣೆ..??

ಪೊಲಿಟಿಕಲ್ ವರದಿ: ವಿಶ್ವನ್ಯೂಸ್24

ಕಾಪು ಮೂರು ಭಾಗದಲ್ಲಿ ಹಂಚಿಹೋಗಿರುವ ವಿಧಾನಸಭಾ ಕ್ಷೇತ್ರ ಕರಾವಳಿ-ಮಧ್ಯಭಾಗ-ಪೂರ್ವ ಮೂರು ಕಡೆಯಲ್ಲೂ ಕೂಡ ಎರಡು ಪಕ್ಷಗಳು ತನ್ನದೆ ಆದ ಛಾಪು ಹಾಗೂ ಕ್ಯಾಪಸಿಟಿ ಹೊಂದಿರುವ ಕಾರ್ಯಕರ್ತರ ಪಡೆಯಿರುವ ಕ್ಷೇತ್ರ ಸುಲಭದಲ್ಲಿ ಜಯ ಸಿಗುವುದೆಂದು ನಂಬಿ ಕೂತವರಿಗೆ ಕೈಗೆ ಸಿಕ್ಕಿದ್ದು ಚೆಂಬು ಮಾತ್ರ ಎಂಬುದು ಸ್ಪಷ್ಟ.
ಇನ್ನು ಭಾಸ್ಕರ್ ಶೆಟ್ಟಿ, ವಸಂತ ಸಾಲಿಯಾನ್ ಬಿಟ್ಟರೆ ಉಳಿದರ‍್ಯಾರಿಗೂ ಸುಲಭವಾದ ಜಯವಾದ ಹಿನ್ನಲೆ ಕಾಪುವಿನಲ್ಲಿ ತೀರ ಕಡಿಮೆ ಹಾಗಾಗಿ ಕಾಪು ಈಸ್ ಎ ವೆರಿ ಡೇಂಜರಸ್.

ಸರಿ ಮುಂದಿನ ಸರದಿ ಈ ಸಲದ ಚುನಾವಣೆ ಕೂಡ ಎರಡು ಪಕ್ಷಗಳಿಗೆ ಸುಲಭವಿಲ್ಲ ಆದರೇ ಕಳೆದ ಐದು ವರ್ಷದಿಂದ ಬಿಜೆಪಿ ಶಾಸಕರ ದುರ್ನಡತೆಯಿಂದಾಗಿ ಮಾತ್ರ ಕರ್ಯಕರ್ತರು ಸೇರಿದಂತೆ ಬಿಜೆಪಿ ಪಾರ್ಟಿಯೊಳಗಿನ ಪದಾಧಿಕಾರಿಗಳು ಕೂಡ ಅಸಮಧಾನ ಬಹಿರಂಗವಾಗಿಯೇ ಹೊರಹಾಕಿರುವ ಪರಿಣಾಮವಾಗಿ ಸಿಟ್ಟಿಂಗ್ ಶಾಸಕ ಗೆಲ್ಲುವುದು ಕಷ್ಟ ಎಂಬುದು ಸರ್ವೆ ವರದಿಯ ಮಾಹಿತಿ.

ಇನ್ನು ವಿನಯ ಕುಮಾರ್ ಸೊರಕೆ ಕಾಪುವಿನ ಅಭಿವೃದ್ದಿಯಲ್ಲಿ ಹೊಸ ಸ್ಪರ್ಶ ನೀಡಿದ ಶಾಸಕ ಪುರಸಭೆ,ತಾಲೂಕು,ರಸ್ತೆ,ಕುಡಿಯುವ ನೀರು,ದಾರಿ ದೀಪ,ವಸತಿ ಯೋಜನೆ ಇವೆಲ್ಲವೂ ಕೂಡ ಸೊರಕೆಯ ಕೊಡುಗೆ ಈ ಬಾರಿ ಕೂಡ ಕಾಪು ಕಾಂಗ್ರೇಸ್‌ಗೆ ವಿನಯ್ ಕುಮಾರ್ ಸೊರಕೆ ಅಭ್ಯರ್ಥಿ ಕಳೆದ ಚುನಾವಣೆಯಲ್ಲಿ ಹಿಂದುತ್ವದ ಅಲೆಯಲ್ಲಿ ಕೊಚ್ಚಿ ಹೋಗಿದ್ದರೂ ಈ ಸಲ ಜನ ಮತ್ತೆ ಸೊರಕೆ ಕಾಪುವಿಗೆ ಅಗತ್ಯ ಮತ್ತು ಅನಿವಾರ್ಯವೆಂಬ ಮಾತು ಜೋರಾಗಿಯೆ ಕೇಳಿ ಬರುತ್ತಿದೆ. ಕಾರಣವಿಷ್ಟೆ ವ್ಯಕ್ತಿ ಮತ್ತು ವ್ಯಕ್ತಿತ್ವ ಸೋತ ಮರುದಿನವೇ ಕ್ಷೇತ್ರ ಬಿಡದೆ ಜನ ಸೇವೆ ನಿರಂತರ ಮಾಡಿಕೊಂಡು ಬಂದಿರುವ ಕಾರಣಕ್ಕಾಗಿ ಕಾಪುವಿನ ಜನತೆ ಸೊರಕೆಯನ್ನು ಇಷ್ಟಪಡುವಂತಾಗಿದೆ.

ಸದ್ಯ ಸೊರಕೆ ಇದು ನನ್ನ ಕಡೇ ಚುನಾವಣೆ ಎಂದು ಘೋಷಿಸಿಯಾಗಿದೆ ಅದರಲ್ಲೂ ವಿಶೇಷವಾಗಿ ನನ್ನನ್ನು ಸೋಲಿಸಿ ನನ್ನನ್ನು ರಾಜಕೀಯ ನಿವೃತ್ತಿ ಮಾಡಬೇಡಿ ಎಂದು ಕಾಪುವಿನ ಜನತೆಯಲ್ಲಿ ಅಂಗಲಾಚಿ ನೀಡಿರುವ ಹೇಳಿಕೆ ವೆರಿ ಎಮೋಷನಲ್.

ಸೊರಕೆಯನ್ನು ಸೋಲಿಸಲು ಈಗಾಗಲೆ ಕಾಪು ಬಿಜೆಪಿ ರಾಜನೀಲ್ಲದ ಆದೇಶದಂತೆ ಹೋರಾಟ ನಡೆಸುತ್ತಿದೆ ಆದರೇ ಇದ್ಯಾವುದಕ್ಕೂ ಕ್ಯಾರೇ ಅನ್ನದ ಸೊರಕೆ ತನ್ನ ಪಾಡಿಗೆ ಕ್ಷೇತ್ರದಾದ್ಯಂತ ಟೊಂಕ ಕಟ್ಟಿ ಗೆಲುವಿಗಾಗಿ ಹರಸಾಹಸ ಪಡುತ್ತಿದ್ದಾರೆ. ಅದರ ಜತೆಯಲ್ಲಿಇನ್ನೊಂದು ಕಡೆ ಕಾರ್ಯಕರ್ತರು ಮಾತ್ರವಲ್ಲದೆ ಜನ ಸಾಮಾನ್ಯರು ಕೂಡ ಕಾಪುವಿಗೆ ಇ ಬಾರಿ ಸೊರಕೆ ಎಂಬ ಅಭಿಯಾನ ಜಪ ಆರಂಭವಾಗಿದೆ.

ಕಾಪುವಿಲ್ಲಿ ಜಾತಿ ಧರ್ಮದ ರಾಜಕೀಯ ಮಾಡದ ವ್ಯಕ್ತಿತ್ವ ಇದ್ದರೆ ಅದು ವಿನಯ್ ಕುಮಾರ್ ಸೊರಕೆಯದ್ದು ಎಂದು ಜನಸಾಮಾನ್ಯರು ಹೇಳುವ ಮಾತು ಸೋಲಿಗೆ ಬೇರೆ ಕಾರಣವಿರಬಹುದೇ ಹೊರತು ಸೊರಕೆಯ ವ್ಯಕ್ತಿತ್ವ ಖಂಡಿತವಲ್ಲ ಎಂಬುದು ಸ್ಪಷ್ಟವಾದ ವಿಚಾರ ಆದರೆ ಕಾಪುವಿನ ಮತದಾರರು ಮೂರ್ಖರಲ್ಲ ನಂಬಿ ಬಂದವರನ್ನು ಕೈ ಬಿಟ್ಟ ವ್ಯಕ್ತಿತ್ವ ಖಂಡಿತವಿಲ್ಲ ಹಾಗಾಗಿ ಸೊರಕೆಯ ಗೆಲುವಿನ ಹಿಂದೆ ಈ ಸಲ ಕಾಪುವಿನ ಜನತೆ ನಿಲ್ಲುವರೆಂಬ ನಂಬಿಕೆ ದೃಡವಾಗಿಯೇ ಇದೆ. ಅದರ ಜತೆಗೆ ಕೊಟ್ಟ ಮಾತನ್ನು ಉಳಿಸಿಕೊಡುವಷ್ಟು ನಂಬಿಕೆಗೆ ಅರ್ಹವಾದ ವ್ಯಕ್ತಿ ಎಂದರೆ ಸೊರಕೆಯೆಂಬುದು ಜನಸಾಮಾನ್ಯರು ಆಡುತ್ತಿರುವ ಮಾತು.

ಅನುದಾನಕ್ಕೆ ದಾಖಲೆ ಇದೆ ಸುಳ್ಳಿಗೆ ದಾಖಲೆ ಎಲ್ಲಿಂದ ತರಲಿ..!!
ಕಾಪುವಿನಲ್ಲಿ ಶಾಸಕನಾಗಿ ಆರಿಸಿಬಂದ ಮರುದಿನವೇ ವಿನಯ್ ಕುಮಾರ್ ಸೊರಕೆಗೆ ಕಾಪುವಿನ ಹೊಸ ಸ್ಪರ್ಶ ನೀಡಲು ಮುಂದಾದರು ಆ ಪರಿಣಾಮವಾಗಿ ಹತ್ತಾರು ಯೋಜನೆಗಳು ಕ್ಷೇತ್ರದಲ್ಲಿಯೇ ಡಂಪ್ಪಿAಗ್ ಯಾರ್ಡ್ನಂತೆ ಡಂಪ್ಪಾಗಿ ಕೆಲಸ ಕಾರ್ಯಗಳು ಹರಿಯುವ ನೀರಿನಂತೆ ಹರಿದೋಯ್ತು ಆದರೇ ಅದ್ಯಾವುದೂ ಕೂಡ ಹಿಂದುತ್ವದ ಮುಂದೆ ಕೌಂಟಿಗ್ ಬಾರದೆ ಮತವಾಗಿ ಕನ್ವರ್ಟ್ ಆಗಲೇ ಇಲ್ಲ ಆದರೇ ಇಂದಿನ ಶಾಸಕ ಲಾಲಾಜಿ ನಡೆಸಿರುವ ಎಲ್ಲಾ ಕಾಮಾಗಾರಿಗೂ ಶಿಲನ್ಯಾಸ ನಡೆಸಿದ್ದು ಸೊರಕೆ ಹಾಗಂತ ಬಿಜೆಪಿಯ ಸುಳ್ಳಿಗೆ ದಾಖಲೆಯಿಲ್ಲ ಅನುದಾನ ತಂದಿರುವುದಕ್ಕೆ ದಾಖಲೆ ಇದೆ ಎಂದು ಬಹಿರಂಗವಾಗಿಯೇ ಪತ್ರಿಕಾಗೋಷ್ಟಿಯಲ್ಲಿ ಅವರು ತಿಳಿಸಿದ್ದರು.
(ಮುಂದುವರಿಯುತ್ತದೆ)

 

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

2 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

3 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

3 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

3 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

3 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

4 days ago