Featured

ಗಣೇಶೋತ್ಸವಕ್ಕೆ ಹೇರಿರುವ ನಿರ್ಬಂಧ ಆದೇಶ ಹಿಂಪಡೆಯಲು ಆಗ್ರಹ,ತಪ್ಪಿದಲ್ಲಿ ಕಾಪು ತಾಲೂಕು ಹಿಂದು ಜಾಗರಣ ವೇದಿಕೆ ವತಿಯಿಂದ ಉಗ್ರ ಪ್ರತಿಭಟನೆಯ ಎಚ್ಚರಿಕೆ !!

“ಗಣೇಶೋತ್ಸವಕ್ಕೆ ನಿರ್ಬಂಧ ಹಾಗೂ ನಿಷೇಧ, ಹಿಂದುಗಳ ಧಾರ್ಮಿಕ ಹಕ್ಕಿನ ಮೇಲೆ ದಬ್ಬಾಳಿಕೆ, ಇವುಗಳನ್ನು ಹಿಂದು ಸಮಾಜ ಸಹಿಸುವುದಿಲ್ಲ. ಆದೇಶವನ್ನು ಹಿಂಪಡೆಯಲು ಹಿಂದು ಜಾಗರಣ ವೇದಿಕೆ ಆಗ್ರಹ.”

ಕಾಪು : ರಾಜ್ಯ ಸರ್ಕಾರ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಷರತ್ತು ಹಾಗೂ ನಿಬಂಧನೆಗಳನ್ನು ಹೇರಿ ನಿರ್ಬಂಧಿಸುವ ಹಾಗೂ ನಿಷೇಧಿಸುವ ಯತ್ನಕ್ಕೆ ಮುಂದಾಗಿರುವ ಕ್ರಮವನ್ನು ಕರ್ನಾಟಕ ಹಿ೦ದು ಜಾಗರಣ ವೇದಿಕೆಯು ಬಲವಾಗಿ ಖಂಡಿಸುತ್ತದೆ. ಎಡಿಜಿಪಿ ಆದೇಶವನ್ನು ಹಿಂಪಡೆಯಬೇಕು.

ನೂರಾರು ವರ್ಷಗಳಿ೦ದ ಗಣೇಶೋತ್ಸವವು ಸಾರ್ವಜನಿಕ ರೂಪವನ್ನು ಪಡೆದು ನಿರಾತಂಕವಾಗಿ ನಡೆದುಕೊಂಡು ಬರುತ್ತಿದೆ.ಈ ಧಾರ್ಮಿಕ ಉತ್ಸವವನ್ನು ರಾಷ್ಟೀಯ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿದೆ. ಇದರ ಮೂಲ ಉದ್ದೇಶವನ್ನು ಅರ್ಥ ಮಾಡಿಕೊಳ್ಳುವ ಯೊಗ್ಯತೆ ಇಲ್ಲದ ಕೆಲವು ಹಿಂದು ವಿರೋಧಿ ಅಧಿಕಾರಶಾಹಿಗಳು, ಈ ಹಬ್ಬವನ್ನು ಹತ್ತಿಕ್ಕಲು ಇಲ್ಲಸಲ್ಲದಅಡಚಣೆಗಳನ್ನು ಹೇರುತ್ತಿದ್ದು ರಾಜ್ಯದ ಎಡಿಜಿಪಿಯವರು ಈ ರಾಷ್ಟ್ರೀಯ ಹಿಂದು ಹಬ್ಬದ ವೈಭವವನ್ನು ಹಾಳುಮಾಡಲು ಹೊರಟಿರುವುದು ಖಂಡನೀಯ. ಮೆರವಣಿಗೆಗೆ ನಿಷೇಧ. ನಿರ್ದಿಷ್ಠವಾಗಿ ಮಸೀದಿಯನ್ನು ಹೆಸರಿಸಿ ವಿಧಿಸಿರುವ ನಿರ್ಬಂಧಕಾನೂನು ಬಾಹಿರ ಹಾಗೂ ದುರುದ್ಧೇಶದಿ೦ದ ಕೂಡಿರುವುದಾಗಿದೆ. ಈ ಎಲ್ಲಾ ನಿರ್ಬಧಗಳನ್ನು ತಕ್ಷಣ ಹಿಂಪಡೆದುಸಾರ್ವಜನಿಕ ಶ್ರೀಗಣೇಶೋತ್ಸವದ ಮೆರವಣಿಗೆಗೆ ಮುಕ್ತ ಅವಕಾಶವನ್ನು ಕಲ್ಪಿಸಿಕೊಡಬೇಕೆಂದು ವೇದಿಕೆಯು ಆಗಹಿಸುತ್ತದೆ.

“ಹಿಂದು ಬಾಹುಳ್ಯ ಪ್ರದೇಶ ಹಾಗೂ ಮಂದಿರಗಳ ಎದುರಿನಲ್ಲಿ ಅಲ್ಪಸಂಖ್ಯಾತರಿಗೆ ನಿರ್ಬಂಧ ಸಾಧ್ಯವೇ?”

ಸಾವಿರಾರು ವರ್ಷಗಳಿಂದ ಭಾರತದಲ್ಲಿ ಹಿಂದು ಧಾರ್ಮಿಕ ಹಬ್ಬಗಳ ಮೆರವಣಿಗೆಗಳು, ಉತ್ಸವಗಳು ಮಸೀದಿಗಳಎದುರಿನಲ್ಲಿ ಚಿಕ್ಕಪುಟ್ಟ ಗಲ್ಲಿಗಳಲ್ಲಿ, ಸೂಕ್ಷಾ ತಿಸೂಕ್ಷ್ಮ ಪ್ರದೇಶಗಳೆಂದು ಹೆಸರಿಸುವಲ್ಲಿ ನಿರಾತಂಕವಾಗಿ ನಡೆದುಕೊಂಡುಬರುತ್ತಿದೆ. ಗಲಭೆ ಗಲಾಟೆಗಳು ನಡೆಯಬೇಕು ಎನ್ನುವುದಾದರೆ ಇಂತಹ ಪ್ರದೇಶಗಳಲ್ಲಿಯೇ ನಡೆಯಬೇಕು ಎಂದೇನಿಲ್ಲ.ಕಿಡಿಗೇಡಿಗಳು ಎಲ್ಲಿ ಬೇಕಾದರೂ ಗಲಭೆಗಳನ್ನು ಎಬ್ಬಿಸಬಹುದು. ಇದನ್ನು ಅರ್ಥ ಮಾಡಿಕೊಳ್ಳದೆ ಮಸೀದಿ. ಮುಸ್ಲಿಂಬಾಹುಳ್ಯ ಪ್ರದೇಶಗಳು ಎ೦ದು ಹೆಸರಿಸಿ ಒಂದು ಕೋಮಿನ ವಿರುದ್ದ ಮತ್ತೊಂದು ಕೋಮುನ್ನು ಎತ್ತಿಕಟ್ಟುವ ಕೃತ್ಯಅಧಿಕಾರಿಗಳಿಂದ ನಡೆಯಬಾರದು. ಇಂತಹ ನಿರ್ಬಂಧಗಳು ನಾಳೆ ಮುಸ್ಲಿಂ ಮತ್ತು ಕ್ರೈಸ್ತರ ಧಾರ್ಮಿಕ ಉತ್ಸವ ಹಾಗೂಮೆರವಣಿಗೆಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುವುದಕ್ಕೆ ಕಾರಣವಾದೀತು ಎ೦ದು *ವೇದಿಕೆ’ಯು ‘ಎಚ್ಚರಿಕೆಯನ್ನುನೀಡುತ್ತದೆ. ಮಾನ್ಯ ಮುಖ್ಯಮಂತ್ರಿಗಳು ಇಂತಹ ಹುಚ್ಚು ತುಘ್ಲಕ್‌ ಆದೇಶಗಳು ಕರ್ನಾಟಕದಲ್ಲಿ ಜಾರಿಯಾಗದ೦ತೆ ಆ ಮೂಲಕ ಹಿಂದು ಸಮಾಜದ ವಿರೋಧವನ್ನು ಕಟ್ಟಿಕೊಳ್ಳದಂತೆ ಎಚ್ಚರವಹಿಸಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಚರಣೆಗೆವಿಧಿಸುತ್ತಿರುವ ನಿಬಂಧನೆಗಳು, ಷರತ್ತುಗಳನ್ನು. ಹಿಂಪಡೆದು ಹಿಂದುಗಳ ಮೂಲಭೂತ ಹಕ್ಕುಗಳನ್ನು ರಕ್ಷಿಸಬೇಕೆಂದು“ವೇದಿಕೆಯು ಆಗಹಿಸುತ್ತದೆ.

ಸರ್ಕಾರದ ಈ ಅನಾವಶ್ಯಕ ಹಿ೦ದು ವಿರೋಧಿ ಆದೇಶವನ್ನು ಮುಂದುವರಿಸಿದಲ್ಲಿ ಹಿಂದು ಜಾಗರಣ ವೇದಿಕೆ ಕಾಪು ತಾಲೂಕುವತಿಯಿಂದ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಕಾಪು ತಾಲೂಕು ಅಧ್ಯಕ್ಷರಾದ ರಾಜೇಶ್‌ ಉಚ್ಚಿಲ, ಕಾಪು ತಾಲೂಕು ಕಾರ್ಯದರ್ಶಿ ಯುವರಾಜ್‌ ಕುಲಾಲ್‌,   ಪಡುಬಿದ್ರಿ ವಲಯ ಅಧ್ಯಕ್ಷರಾದ  ಪ್ರತೀಕ್‌ ಕೋಟ್ಯಾನ್‌, ಹಾಗೂ ಪಡುಬಿದ್ರಿ ವಲಯ ಉಪಾಧ್ಯಕ್ಷರಾದ  ಸುಹಾಸ್‌ ಶೆಟ್ಟಿ ನಟವರ್ಯ ತಿಳಿಸಿದರು.

 

 

Vishwa News 24

Recent Posts

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ – vishwanews24

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…

6 hours ago

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ – vishwanews24

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು  :…

7 hours ago

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ  – vishwanews24

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…

7 hours ago

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ – vishwanews24

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…

7 hours ago

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ – vishwanews24

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್‌ಪೋರ್ಟ್…

8 hours ago

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು – vishwanews24

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್‌ಜೆಟ್ (Spice Jet) ವಿಮಾನದಲ್ಲಿ…

8 hours ago