Featured

ಗಣೇಶೋತ್ಸವಕ್ಕೆ ಹೇರಿರುವ ನಿರ್ಬಂಧ ಆದೇಶ ಹಿಂಪಡೆಯಲು ಆಗ್ರಹ,ತಪ್ಪಿದಲ್ಲಿ ಕಾಪು ತಾಲೂಕು ಹಿಂದು ಜಾಗರಣ ವೇದಿಕೆ ವತಿಯಿಂದ ಉಗ್ರ ಪ್ರತಿಭಟನೆಯ ಎಚ್ಚರಿಕೆ !!

“ಗಣೇಶೋತ್ಸವಕ್ಕೆ ನಿರ್ಬಂಧ ಹಾಗೂ ನಿಷೇಧ, ಹಿಂದುಗಳ ಧಾರ್ಮಿಕ ಹಕ್ಕಿನ ಮೇಲೆ ದಬ್ಬಾಳಿಕೆ, ಇವುಗಳನ್ನು ಹಿಂದು ಸಮಾಜ ಸಹಿಸುವುದಿಲ್ಲ. ಆದೇಶವನ್ನು ಹಿಂಪಡೆಯಲು ಹಿಂದು ಜಾಗರಣ ವೇದಿಕೆ ಆಗ್ರಹ.”

ಕಾಪು : ರಾಜ್ಯ ಸರ್ಕಾರ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಷರತ್ತು ಹಾಗೂ ನಿಬಂಧನೆಗಳನ್ನು ಹೇರಿ ನಿರ್ಬಂಧಿಸುವ ಹಾಗೂ ನಿಷೇಧಿಸುವ ಯತ್ನಕ್ಕೆ ಮುಂದಾಗಿರುವ ಕ್ರಮವನ್ನು ಕರ್ನಾಟಕ ಹಿ೦ದು ಜಾಗರಣ ವೇದಿಕೆಯು ಬಲವಾಗಿ ಖಂಡಿಸುತ್ತದೆ. ಎಡಿಜಿಪಿ ಆದೇಶವನ್ನು ಹಿಂಪಡೆಯಬೇಕು.

ನೂರಾರು ವರ್ಷಗಳಿ೦ದ ಗಣೇಶೋತ್ಸವವು ಸಾರ್ವಜನಿಕ ರೂಪವನ್ನು ಪಡೆದು ನಿರಾತಂಕವಾಗಿ ನಡೆದುಕೊಂಡು ಬರುತ್ತಿದೆ.ಈ ಧಾರ್ಮಿಕ ಉತ್ಸವವನ್ನು ರಾಷ್ಟೀಯ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿದೆ. ಇದರ ಮೂಲ ಉದ್ದೇಶವನ್ನು ಅರ್ಥ ಮಾಡಿಕೊಳ್ಳುವ ಯೊಗ್ಯತೆ ಇಲ್ಲದ ಕೆಲವು ಹಿಂದು ವಿರೋಧಿ ಅಧಿಕಾರಶಾಹಿಗಳು, ಈ ಹಬ್ಬವನ್ನು ಹತ್ತಿಕ್ಕಲು ಇಲ್ಲಸಲ್ಲದಅಡಚಣೆಗಳನ್ನು ಹೇರುತ್ತಿದ್ದು ರಾಜ್ಯದ ಎಡಿಜಿಪಿಯವರು ಈ ರಾಷ್ಟ್ರೀಯ ಹಿಂದು ಹಬ್ಬದ ವೈಭವವನ್ನು ಹಾಳುಮಾಡಲು ಹೊರಟಿರುವುದು ಖಂಡನೀಯ. ಮೆರವಣಿಗೆಗೆ ನಿಷೇಧ. ನಿರ್ದಿಷ್ಠವಾಗಿ ಮಸೀದಿಯನ್ನು ಹೆಸರಿಸಿ ವಿಧಿಸಿರುವ ನಿರ್ಬಂಧಕಾನೂನು ಬಾಹಿರ ಹಾಗೂ ದುರುದ್ಧೇಶದಿ೦ದ ಕೂಡಿರುವುದಾಗಿದೆ. ಈ ಎಲ್ಲಾ ನಿರ್ಬಧಗಳನ್ನು ತಕ್ಷಣ ಹಿಂಪಡೆದುಸಾರ್ವಜನಿಕ ಶ್ರೀಗಣೇಶೋತ್ಸವದ ಮೆರವಣಿಗೆಗೆ ಮುಕ್ತ ಅವಕಾಶವನ್ನು ಕಲ್ಪಿಸಿಕೊಡಬೇಕೆಂದು ವೇದಿಕೆಯು ಆಗಹಿಸುತ್ತದೆ.

“ಹಿಂದು ಬಾಹುಳ್ಯ ಪ್ರದೇಶ ಹಾಗೂ ಮಂದಿರಗಳ ಎದುರಿನಲ್ಲಿ ಅಲ್ಪಸಂಖ್ಯಾತರಿಗೆ ನಿರ್ಬಂಧ ಸಾಧ್ಯವೇ?”

ಸಾವಿರಾರು ವರ್ಷಗಳಿಂದ ಭಾರತದಲ್ಲಿ ಹಿಂದು ಧಾರ್ಮಿಕ ಹಬ್ಬಗಳ ಮೆರವಣಿಗೆಗಳು, ಉತ್ಸವಗಳು ಮಸೀದಿಗಳಎದುರಿನಲ್ಲಿ ಚಿಕ್ಕಪುಟ್ಟ ಗಲ್ಲಿಗಳಲ್ಲಿ, ಸೂಕ್ಷಾ ತಿಸೂಕ್ಷ್ಮ ಪ್ರದೇಶಗಳೆಂದು ಹೆಸರಿಸುವಲ್ಲಿ ನಿರಾತಂಕವಾಗಿ ನಡೆದುಕೊಂಡುಬರುತ್ತಿದೆ. ಗಲಭೆ ಗಲಾಟೆಗಳು ನಡೆಯಬೇಕು ಎನ್ನುವುದಾದರೆ ಇಂತಹ ಪ್ರದೇಶಗಳಲ್ಲಿಯೇ ನಡೆಯಬೇಕು ಎಂದೇನಿಲ್ಲ.ಕಿಡಿಗೇಡಿಗಳು ಎಲ್ಲಿ ಬೇಕಾದರೂ ಗಲಭೆಗಳನ್ನು ಎಬ್ಬಿಸಬಹುದು. ಇದನ್ನು ಅರ್ಥ ಮಾಡಿಕೊಳ್ಳದೆ ಮಸೀದಿ. ಮುಸ್ಲಿಂಬಾಹುಳ್ಯ ಪ್ರದೇಶಗಳು ಎ೦ದು ಹೆಸರಿಸಿ ಒಂದು ಕೋಮಿನ ವಿರುದ್ದ ಮತ್ತೊಂದು ಕೋಮುನ್ನು ಎತ್ತಿಕಟ್ಟುವ ಕೃತ್ಯಅಧಿಕಾರಿಗಳಿಂದ ನಡೆಯಬಾರದು. ಇಂತಹ ನಿರ್ಬಂಧಗಳು ನಾಳೆ ಮುಸ್ಲಿಂ ಮತ್ತು ಕ್ರೈಸ್ತರ ಧಾರ್ಮಿಕ ಉತ್ಸವ ಹಾಗೂಮೆರವಣಿಗೆಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುವುದಕ್ಕೆ ಕಾರಣವಾದೀತು ಎ೦ದು *ವೇದಿಕೆ’ಯು ‘ಎಚ್ಚರಿಕೆಯನ್ನುನೀಡುತ್ತದೆ. ಮಾನ್ಯ ಮುಖ್ಯಮಂತ್ರಿಗಳು ಇಂತಹ ಹುಚ್ಚು ತುಘ್ಲಕ್‌ ಆದೇಶಗಳು ಕರ್ನಾಟಕದಲ್ಲಿ ಜಾರಿಯಾಗದ೦ತೆ ಆ ಮೂಲಕ ಹಿಂದು ಸಮಾಜದ ವಿರೋಧವನ್ನು ಕಟ್ಟಿಕೊಳ್ಳದಂತೆ ಎಚ್ಚರವಹಿಸಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಚರಣೆಗೆವಿಧಿಸುತ್ತಿರುವ ನಿಬಂಧನೆಗಳು, ಷರತ್ತುಗಳನ್ನು. ಹಿಂಪಡೆದು ಹಿಂದುಗಳ ಮೂಲಭೂತ ಹಕ್ಕುಗಳನ್ನು ರಕ್ಷಿಸಬೇಕೆಂದು“ವೇದಿಕೆಯು ಆಗಹಿಸುತ್ತದೆ.

ಸರ್ಕಾರದ ಈ ಅನಾವಶ್ಯಕ ಹಿ೦ದು ವಿರೋಧಿ ಆದೇಶವನ್ನು ಮುಂದುವರಿಸಿದಲ್ಲಿ ಹಿಂದು ಜಾಗರಣ ವೇದಿಕೆ ಕಾಪು ತಾಲೂಕುವತಿಯಿಂದ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಕಾಪು ತಾಲೂಕು ಅಧ್ಯಕ್ಷರಾದ ರಾಜೇಶ್‌ ಉಚ್ಚಿಲ, ಕಾಪು ತಾಲೂಕು ಕಾರ್ಯದರ್ಶಿ ಯುವರಾಜ್‌ ಕುಲಾಲ್‌,   ಪಡುಬಿದ್ರಿ ವಲಯ ಅಧ್ಯಕ್ಷರಾದ  ಪ್ರತೀಕ್‌ ಕೋಟ್ಯಾನ್‌, ಹಾಗೂ ಪಡುಬಿದ್ರಿ ವಲಯ ಉಪಾಧ್ಯಕ್ಷರಾದ  ಸುಹಾಸ್‌ ಶೆಟ್ಟಿ ನಟವರ್ಯ ತಿಳಿಸಿದರು.

 

 

Vishwa News 24

Recent Posts

ರೀಲ್ಸ್ ಮಾಡಲು ಹೋಗಿ ಸಮುದ್ರಪಾಲಾದ  ಐಟಿ ಉದ್ಯೋಗಿ – vishwanews24

ರೀಲ್ಸ್ ಮಾಡಲು ಹೋಗಿ ಸಮುದ್ರಪಾಲಾದ  ಐಟಿ ಉದ್ಯೋಗಿ ಕಾರವಾರ: ರೀಲ್ಸ್ ಮಾಡಲು ಹೋಗಿ ಐಟಿ ಉದ್ಯೋಗಿಯೊಬ್ಬ  ಸಮುದ್ರಪಾಲಾದ ಘಟನೆ ಉತ್ತರ…

19 hours ago

ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ – vishwanews24

ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ ಚೆನ್ನೈ :ತಮಿಳುನಾಡು ಮುಖ್ಯಮಂತ್ರಿ, ನಟ ದಳಪತಿ…

19 hours ago

ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ – vishwanews24

ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ ಮಲ್ಪೆ :ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ…

20 hours ago

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ – vishwanews24

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ ಬೆಂಗಳೂರು: ಗೃಹಲಕ್ಷ್ಮಿ, ಗೃಹಜ್ಯೋತಿ ಯೊಜನೆಗಳಲ್ಲಿ ನಕಲಿ…

20 hours ago

ಕಾಸರಗೋಡು: ಬೇಕಲ ಕಡಲತೀರದಲ್ಲಿ ಸಮುದ್ರಪಾಲಾದ ಕೊಟ್ಟಾಯಂನ ಇಬ್ಬರು ವಿದ್ಯಾರ್ಥಿಗಳು; ಮತ್ತಿಬ್ಬರ ರಕ್ಷಣೆ – vishwanews24

ಕಾಸರಗೋಡು: ಬೇಕಲ ಕಡಲತೀರದಲ್ಲಿ ಸಮುದ್ರಪಾಲಾದ ಕೊಟ್ಟಾಯಂನ ಇಬ್ಬರು ವಿದ್ಯಾರ್ಥಿಗಳು; ಮತ್ತಿಬ್ಬರ ರಕ್ಷಣೆ ಕಾಸರಗೋಡು: ಬೇಕಲ ಕೋಟೆಯ ಸಮೀಪವಿರುವ ಪಳ್ಳಿಕೆರೆ ಕಡಲತೀರದಲ್ಲಿ…

20 hours ago

ಹಿಂದಿ ಕಿರುತೆರೆ ಜನಪ್ರಿಯ ನಟಿ ಸಂಚಿತಾ ಉಗಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ – vishwanews24

ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮುಂಬೈ: ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ…

20 hours ago