ಉಡುಪಿ(18ಜೂ/2020): ಭಾರತ ಚೀನಾ ಗಡಿಯ ಗಾಲ್ವಾನ್ ಪ್ರದೇಶದಲ್ಲಿ ಚೀನಾ ಸೈನಿಕರ ದಾಳಿಗೆ ತುತ್ತಾಗಿ ವೀರ ಮರಣವಪ್ಪಿದ ಭಾರತೀಯ ಸೇನೆಯ ಇಪ್ಪತ್ತು ಸೈನಿಕರ ಗೌರವಾರ್ಥವಾಗಿ ಗುರೂಜಿ ಸಾಯಿಈಶ್ವರ್ ಇಂದು ಉಡುಪಿಯ ಹುತಾತ್ಮ ಸೈನಿಕರ ಯುದ್ಧ ಸ್ಮಾರಕಕ್ಕೆ ಬೇಟಿ ನೀಡಿ ಗೌರವ
ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗುರೂಜಿ ಸಾಯಿ ಈಶ್ವರ್ “ಗಡಿಯಲ್ಲಿ ವೀರ ಮರಣವನ್ನಪ್ಪಿದ ನಮ್ಮ ಸೈನಿಕರ ಸಾವು ವ್ಯರ್ಥವಾಗ ಬಾರದು.ನಮ್ಮಿಂದ ಯುದ್ದದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಆದರೆ ಇನ್ನು ಮುಂದೆ ಚೀನಾ ವಸ್ತುಗಳನ್ನು ಖರೀದಿಸುವುದನ್ನು ನಿಲ್ಲಿಸುವ, ಚೀನಾ ದೇಶಕ್ಕೆ ಆರ್ಥಿಕ ಹಿನ್ನಡೆ ತಂದು ಪರೋಕ್ಷವಾಗಿ ಆರ್ಥಿಕ ಯುದ್ಧ ಮಾಡಲು ಸಿದ್ದರಾಗಿ” ಎಂದು ಯುವ ಜನತೆಗೆ ಕರೆ ನೀಡಿದರು.
ಶಂಕರಪುರದ ದ್ವಾರಕಾಮಾಹಿ ಶ್ರೀ ಸಾಯಿ ಬಾಬಾ ಮಂದಿರದಲ್ಲಿ ಪ್ರತಿವರ್ಷ ಉಡುಪಿಯ ಹಾಲಿ ಹಾಗು ಮಾಜಿ ಸೈನಿಕರನ್ನು ಗುರುತಿಸಿ ಸೈನಿಕ ದಂಪತಿಗಳನ್ನು ಮಂದಿರಕ್ಕೆ ಕರೆಸಿ ಧುನಿ ಯಾಗ ಮಾಡುತ್ತಿದ್ದು ಈ ವರ್ಷ ಕರೋನಾ ಲಾಕ್ ಡೌನ್ ಕಾರಣ ಧುನಿ ಯಾಗ ಆಯೋಜನೆ ಮಾಡಿರುವುದಿಲ್ಲ.
ಉಡುಪಿ ಹಿಂದೂ ಸಂಘಟಕ ರಾಧಾಕೃಷ್ಣ ಮೆಂಡನ್ ಮಾತನಾಡಿ “ನಮ್ಮ ಸೈನಿಕರನ್ನು ಮೋಸದಿಂದ ಕೊಲ್ಲಲಾಯಿತು, ಆದರೆ ಪ್ರತ್ಯುತ್ತರವಾಗಿ ನಮ್ಮ ತಕ್ಕ ಉತ್ತರ ನೀಡಿದ್ದಾರೆ.ಮೃತ ಯೋಧರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ” ಎಂದು ನುಡಿದರು.
ಈ ಸಂದರ್ಭದಲ್ಲಿ ಪರ್ಕಳದ ಲಯನ್ಸ್ ಕ್ಲಬಿನ ಅಧ್ಯಕ್ಷರಾದ ಜಯರಾಮ್ ಜಿ, ಮ್ಯಾಕ್ಸ್ ಸೌಂಡ್ಸ್ ಇದರ ಮಾಲಕರಾದ ಗಣೇಶ್ ಪಾಲನ್, ದ್ವಾರಕಾಮಾಹಿ ಶ್ರೀ ಸಾಯಿ ಬಾಬಾ ಮಂದಿರದ ಮೇಲ್ವಿಚಾರಕ ಸತೀಶ್ ದೇವಾಡಿಗ,ಅಮಿತ್ ಬಜಪೆ ಉಪಸ್ಥಿತರಿದ್ದರು.
ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…
ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು :…
ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…
ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…
ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್ಪೋರ್ಟ್…
ದೆಹಲಿ-ಪುಣೆ ಸ್ಪೈಸ್ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್ಜೆಟ್ (Spice Jet) ವಿಮಾನದಲ್ಲಿ…