Featured

ಗೋಹತ್ಯೆ ನಿಷೇಧ ರೈತರನ್ನು ಬಲಿಪಶು ಮಾಡುವ ಆರ್‌‌ಎಸ್‌‌ಎಸ್‌‌ನ ಹುನ್ನಾರ, ‌ಗೋ ಹತ್ಯೆ ತಡೆಯುವುದಾದರೆ ಗೋ ಮಾಂಸ ರಫ್ತಿಗೂ ನಿಷೇಧ ಹೇರಬೇಕಲ್ಲವೆ? : ದಿನೇಶ್‌ ಗುಂಡೂರಾವ್ -Vishwanews24

ಗೋಹತ್ಯೆ ನಿಷೇಧ ರೈತರನ್ನು ಬಲಿಪಶು ಮಾಡುವ ಆರ್‌‌ಎಸ್‌‌ಎಸ್‌‌ನ ಹುನ್ನಾರ, ‌ಗೋ ಹತ್ಯೆ ತಡೆಯುವುದಾದರೆ ಗೋ ಮಾಂಸ ರಫ್ತಿಗೂ ನಿಷೇಧ ಹೇರಬೇಕಲ್ಲವೆ? : ದಿನೇಶ್‌ ಗುಂಡೂರಾವ್ -Vishwanews24

ಬೆಂಗಳೂರು, : “ಗೋಹತ್ಯೆ ನಿಷೇಧ ರೈತರನ್ನು ಬಲಿಪಶು ಮಾಡುವ ಆರ್‌‌ಎಸ್‌‌ಎಸ್‌‌ನ ಹುನ್ನಾರ. ಯಾಂತ್ರೀಕೃತ ಕೃಷಿ ಅನಿವಾರ್ಯವಾಗಿರುವ ಕಾಲದಲ್ಲಿ ಪಶು ಸಂಗೋಪನೆ ರೈತರ ಪಾಲಿನ ಹೊರೆ” ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, “ಗೋಹತ್ಯೆ ನಿಷೇಧ ರೈತರನ್ನು ಬಲಿಪಶು ಮಾಡುವ ಆರ್‌‌ಎಸ್‌‌ಎಸ್‌‌ನ ಹುನ್ನಾರ. ಯಾಂತ್ರೀಕೃತ ಕೃಷಿ ಅನಿವಾರ್ಯವಾಗಿರುವ ಕಾಲದಲ್ಲಿ ಪಶು ಸಂಗೋಪನೆ ರೈತರ ಪಾಲಿನ ಹೊರೆ. ಇಂದು ದೇಶದಲ್ಲಿ ನಾಟಿ ದನಗಳನ್ನು ಸಾಕುವ ರೈತರೆಷ್ಟಿದ್ದಾರೆ?. ಹೊಸ ಕಾಯ್ದೆ ಪ್ರಕಾರ ಹಾಲಿಗಾಗಿ, ಉಳುಮೆಗಾಗಿ ಗೋಸಾಗಾಣಿಕೆ ಮಾಡಬೇಕೆಂದರೂ ಅನುಮತಿ ಬೇಕು. ಹೀಗಿರುವಾಗ ರೈತ ಗೋವು ಸಾಕುವುದ್ದೇಗೆ?” ಎಂದು ಪ್ರಶ್ನಿಸಿದ್ದಾರೆ.

“ಗೋ ಹತ್ಯೆ ನಿಷೇಧ ಕಾನೂನಿನಿಂದ ಬಿಡಾಡಿ ದನಗಳ ಸಂಖ್ಯೆ ಜಾಸ್ತಿಯಾಗಲಿವೆ. ಉ.ಪ್ರ.ದಲ್ಲಿ ರೈತರು ಹಸು ಸಾಕುವುದನ್ನು ನಿಲ್ಲಿಸಿದರಿಂದ 6 ವರ್ಷದಲ್ಲಿ 10 ಲಕ್ಷ ಗೋವುಗಳ ಸಂಖ್ಯೆ ಕಡಿಮೆಯಾಗಿದೆ. ವಿಪರ್ಯಾಸವೆಂದರೆ ಇದೇ ಅವಧಿಯಲ್ಲಿ 25ಸಾವಿರ ಕೋಟಿ ಗೋ ಮಾಂಸ ರಫ್ತಾಗಿದೆ. ಗೋ ಹತ್ಯೆ ತಡೆಯುವುದಾದರೆ ಗೋ ಮಾಂಸ ರಫ್ತಿಗೂ ನಿಷೇಧ ಹೇರಬೇಕಲ್ಲವೆ?” ಎಂದು ಕೇಳಿದ್ದಾರೆ.

“ಬಿಜೆಪಿ ಸರ್ಕಾರ ರೈತರಿಗೆ ಮಾರಕ ಕಾಯ್ದೆಗಳ ಮೂಲಕ ಹಂತ ಹಂತವಾಗಿ ವಿಶಪ್ರಾಸನ ಮಾಡುತ್ತಿದೆ. ಗೋಹತ್ಯೆ ನಿಷೇಧ ಕಾನೂನು ಕೂಡ ರೈತರ ಕತ್ತು ಹಿಸುಕುವುದು ಖಚಿತ. ನಾಟಿ ದನಗಳಂತೆ ಮುರ್ರಾ, ಜೆರ್ಸಿ ಹಾಗೂ ಮಿಶ್ರತಳಿಯ ದನಗಳಿಗೆ ರೋಗ ನಿರೋಧಕ ಶಕ್ತಿಯಿಲ್ಲ. 13 ವರ್ಷದೊಳಗಿನ ರೋಗಗ್ರಸ್ತ ದನಗಳನ್ನು ಬಿಜೆಪಿ ನಾಯಕರ ಮನೆ ಮುಂದೆ ಕಟ್ಟಿ ಹಾಕಿ ಬರಬೇಕೆ?” ಎಂದು ಪ್ರಶ್ನಿಸಿದ್ದಾರೆ.

Vishwa News 24

Recent Posts

ಬ್ರಹ್ಮಾವರ: ಖಾಸಗಿ ಬಸ್ ಬೆಂಕಿಗಾಹುತಿ ; ಅದೃಷ್ಟವಶಾತ್ ಪ್ರಯಾಣಿಕರು ಪಾರು -vishwanews24

ಬ್ರಹ್ಮಾವರ: ಖಾಸಗಿ ಬಸ್ ಬೆಂಕಿಗಾಹುತಿ ; ಅದೃಷ್ಟವಶಾತ್ ಏಳು ಪ್ರಯಾಣಿಕರು ಪಾರು ಉಡುಪಿ: ಉಡುಪಿಯಿಂದ ಸಾಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು…

9 hours ago

ಸುರತ್ಕಲ್ : ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಆರೋಪ: ವ್ಯಕ್ತಿಯ ಬಂಧನ -vishwanews24

ಸುರತ್ಕಲ್ : ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಆರೋಪ: ವ್ಯಕ್ತಿಯ ಬಂಧನ 1.206 ಕೆ.ಜಿ. ಗಾಂಜಾ, KTM ಮೋಟಾರ್ ಸೈಕಲ್…

9 hours ago

ಸಕಲೇಶಪುರ–ಸುಬ್ರಹ್ಮಣ್ಯ  ಮಾರ್ಗದಲ್ಲಿ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಪರಿಶೀಲನೆ -vishwanews24

ಸಕಲೇಶಪುರ–ಸುಬ್ರಹ್ಮಣ್ಯ  ಮಾರ್ಗದಲ್ಲಿ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಪರಿಶೀಲನೆ ಕಡಬ : ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ರೈಲು ಮಾರ್ಗದಲ್ಲಿ ನಡೆದ…

9 hours ago

ಉಡುಪಿ : ಆ. 20 ರಂದು ನೇರ ಸಂದರ್ಶನ -vishwanews24

ಉಡುಪಿ : ಆ. 20 ರಂದು ನೇರ ಸಂದರ್ಶನ ಉಡುಪಿ : ನಗರದ ಅಂಬಲಪಾಡಿ ಕರಾವಳಿ ಬೈಪಾಸ್ ಬಳಿಯ ರೀಗಲ್…

1 day ago

ಉಡುಪಿ: ಗೃಹ ಜ್ಯೋತಿ ಫಲಾನುಭವಿಗಳು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ: ರಮೇಶ್ ಕಾಂಚನ್ -vishwanews24

ಉಡುಪಿ: ಗೃಹ ಜ್ಯೋತಿ ಫಲಾನುಭವಿಗಳು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ: ರಮೇಶ್ ಕಾಂಚನ್ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಗಳ ಮರುಪರಿಶೀಲನೆಗೆ…

1 day ago

ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಆ.22ರಂದು ಉಡುಪಿಯಲ್ಲಿ ಸಭೆ -vishwanews24

ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಆ.22ರಂದು ಉಡುಪಿಯಲ್ಲಿ ಸಭೆ ಉಡುಪಿ: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ…

1 day ago