ಉಡುಪಿ

ಚುನಾವಣಾ ನೀತಿ ಸಂಹಿತೆ ಜಾರಿಯಾದ ಕೂಡ್ಲೇ ಚುನಾವಣಾಧಿಕಾರಿಗಳೇ ಸರ್ವಾಧಿಕಾರಿ…????

ಉಡುಪಿ: ಚುನಾವಣಾ ನೀತಿ ಸಂಹಿತೆ ಜಾರಿಯಾದ ಕೂಡ್ಲೇ ಚುನಾವಣಾಧಿಕಾರಿಗಳೇ ಸರ್ವಾಧಿಕಾರಿಯಾಗಿದ್ದಾರೆ ಎಂಬ ಭಾವನೆ ಇದೀಗ ಉಡುಪಿ ನಿವಾಸಿಗಳಲ್ಲಿ ಮೂಡಿದೆ.ಇದಕ್ಕೆ ಕಾರಣ ಉಡುಪಿಯ ಸ್ಥಳೀಯ ಬಿಜೆಪಿ ನಾಯಕ ರಾಘವೇಂದ್ರ ಕಿಣಿಯವರ ಮನೆಗೆ ಚುನಾವಣಾಧಿಕಾರಿಗಳು ದೊಡ್ಡ ಮಟ್ಟದಲ್ಲಿ ದಾಳಿ ನಡೆಸಿ ಭಯದ ವಾತಾವರಣ ಮೂಡಿಸಿರುವುದು.  ಹೌದು ರಾಘವೇಂದ್ರ ಕಿಣಿ ಸ್ಥಳೀಯ ಬಿಜೆಪಿ ನಾಯಕರಾಗಿ ಹಲವು ಸಾಮಾಜಿಕ ಕಾರ್ಯ ನಡೆಸಿಕೊಂಡು ಬಂದಿದ್ದಾರೆ. ಹೀಗಾಗಿ ತನ್ನ ಮಗ ರಿತ್ವಿಕ್ ಕಿಣಿ ಜೊತೆಗೆ ಇತರ 21 ವಿವಿಧ ಜಾತಿಯ ಮಕ್ಕಳಿಗೆ ಸಾಮೂಹಿಕ ಉಪನಯನ ಮಾಡಲು ಹೊರಟಿದ್ದರು. ಇದಕ್ಕೆ 21ಮಕ್ಕಳ ತಾಯಂದಿರಿಗೆ,ತನ್ನ ಮನೆಯ ಮಹಿಳೆಯರಿಗೆ ಸೀರೆ ವಿತರಿಸಲು ಬೆಂಗಳೂರಿನಿಂದ ಬಸ್ಸಿನಲ್ಲಿ ಒಟ್ಟು 50ಸೀರೆಗಳನ್ನು ತರಿಸಿದ್ದರು. ಈ ಮಾಹಿತಿ ಪಡೆದ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ.
ಜಿಲ್ಲಾಧಿಕಾರಿಗಳು ಖಾಸಗಿ ಮನೆಯ ಕಾರ್ಯಕ್ರಮಗಳಿಗೆ ಅನುಮತಿ ಇದ್ದರೆ ತೊಂದರೆ ಕೊಡಬಾರದು ಎಂದು ಆದೇಶ ನೀಡಿದ್ದರು ಆದರೆ  ಉಡುಪಿಯ ಚುನಾವಣಾಧಿಕಾರಿಗಳು ದೂರಿನ ಹಿನ್ನಲೆಯಲ್ಲಿ ಸಂಜೆ ರಾಘವೇಂದ್ರ ಕಿಣಿಯವರ ಮನೆಗೆ ಹಾಗೂ ಕನ್ಸಲ್ಟೆನ್ಸಿ ಕಚೇರಿಗೆ ದಾಳಿ ನಡೆಸಿದ್ದಾರೆ. ಇಲ್ಲಿ ಕಚೇರಿಗೆ ನಾಲ್ಕು ಅಧಿಕಾರಿಗಳು ತಪಾಸಣೆ ನಡೆಸಿದರೆ,  ಮನೆಯಲ್ಲಿ ಸುಮಾರು 40ಮಂದಿ ದಾಳಿ ನಡೆಸಿದ್ದಾರೆ. ಸುಮಾರು 18ಮಂದಿ ಪೊಲೀಸರು ಮನೆಯನ್ನು ಸುತ್ತುವರೆದು ಕಾಂಪೌಂಡ್ ಕೂಡ ಹತ್ತಿ ಮನೆಮಂದಿಯನ್ನು ಗುರಿಯಾಗಿಡಿಸಿ ಮನೆಯನ್ನು ಸರ್ಚ್ ವಾರೆಂಟ್ ಮೂಲಕ ತಪಾಸಣೆ ನಡೆಸಿ ಮನೆಯೊಳಗೆ ವೀಡಿಯೋ ಚಿತ್ರೀಕರಣ ನಡೆಸಿದ್ದಾರೆ.
ಈ ದಾಳಿ ನಡೆದಿರುವುದು ಸಾವಿರಾರು ಸೀರೆ, ಕೋಟ್ಯಾಂತರ ಹಣ ವಿದೆ ಅನ್ನೋ ರೀತಿಯಿತ್ತು ಆದರೆ ದಾಳಿ ವೇಳೆ ಸಿಕ್ಕಿರುವುದು ಕೇವಲ 38 ನೀಲಿ ಬಣ್ಣದ ಸೀರೆ, ಲಡ್ಡು ಪ್ಯಾಕೆಟ್, ಪಂಚೆ, ಬ್ರಹ್ಮೋಪದೇಶ ಮಕ್ಕಳಿಗೆ ನೀಡುವ ವಸ್ತ್ರ ಮಾತ್ರ.   ರಾಘವೇಂದ್ರ ಕಿಣಿಯವರು 6ತಿಂಗಳ ಹಿಂದೆ ಪತ್ರಿಕೆಯಲ್ಲಿ ಜಾಹುರಾತು, ಅನುಮತಿ ಪತ್ರ, ಪೊಲೀಸ್ ಅನುಮತಿ, ಹೀಗೆ ಎಲ್ಲಾ ಕಾನೂನು ರೀತಿಯ ಅನುಮತಿ ಪತ್ರ, ರಿಸಿಪ್ಟ್ ತೋರಿಸಿಯೂ   ಸಾಮೂಹಿಕ ಬ್ರಹ್ಮೋಪದೇಶ ಎಂದರೂ ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ. ಇಲ್ಲಿ ಮುಖ್ಯಾಧಿಕಾರಿಗಳು ಹಿಂದಿ ಭಾಷಿಗರಾದ ಕಾರಣ ಕನ್ನಡದಲ್ಲಿ ಬರೆದ ಆಮಂತ್ರಣ ಓದಲು ಬಾರದೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.  ಅಲ್ಲದೆ ಪೂವಿತ ಎಂಬ ಮುಖ್ಯಾಧಿಕಾರಿ ಇಲ್ಲಿನ ಧಾರ್ಮಿಕ ಆಚರಣೆ ಅರಿವಿಲ್ಲದೆ ಉತ್ತರಿಸಲಾಗದ ಪ್ರಶ್ನೆಗಳೊಂದಿಗೆ ಸಾಮೂಹಿಕ ಉಪನಯನದಲ್ಲಿ ಬರೋ ಮಕ್ಕಳಿಗೂ ತಮಗೂ ಸಂಬಂಧವೇನು ಎಂಬ ಅಸಂಬಂಧ ಪ್ರಶ್ನೆ ಕೇಳುವ ಮೂಲಕ ಹಿಂಸೆ ನೀಡಿದ್ದಾರೆ ಎಂದು ರಾಘವೇಂದ್ರ ಕಿಣಿಯವರು ಅಸಮಧಾನ ಹೊರಹಾಕಿದ್ದಾರೆ.
ಚುನಾವಣಾಧಿಕಾರಿಗಳ ನಡೆ ಉಡುಪಿಯ ಜನರಲ್ಲಿ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.

Vishwa News 24

Recent Posts

ಭೀಕರ ರಸ್ತೆ ಅಪಘಾತ : ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್-3ರ ಸ್ಪರ್ಧಿ ಬಾವತೀಶ್ ಸಾವು – vishwanews24

ಭೀಕರ ರಸ್ತೆ ಅಪಘಾತ : ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್-3ರ ಸ್ಪರ್ಧಿ ಬಾವತೀಶ್ ಸಾವು ಯಲ್ಲಾಪುರ : ಉತ್ತರ ಕನ್ನಡ…

3 hours ago

ಕುಂದಾಪುರ: ರಸ್ತೆ ಅಪಘಾತ ; ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಗಾಣಿಗ ಸಾವು – vishwanews24

ಕುಂದಾಪುರ: ರಸ್ತೆ ಅಪಘಾತ ; ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಗಾಣಿಗ ಸಾವು ಕುಂದಾಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ…

3 hours ago

ಅಕ್ಷಯ್‌ ಕಲ್ಲೇಗ ಕೊಲೆ ಪ್ರಕರಣ : 3 ಮತ್ತು 4ನೇ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು – vishwanews24

ಪುತ್ತೂರು: ಅಕ್ಷಯ್‌ ಕಲ್ಲೇಗ ಕೊಲೆ ಪ್ರಕರಣ: 3ನೇ ಮತ್ತು 4ನೇ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಪುತ್ತೂರು: ಕಲ್ಲೇಗ ಟೈಗರ್ಸ್…

3 hours ago

ಎಲ್​ಪಿಜಿ ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ : ಕೇಂದ್ರ ಸ್ಪಷ್ಟನೆ – vishwanews24

ಎಲ್​ಪಿಜಿ ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ : ಕೇಂದ್ರ ಸ್ಪಷ್ಟನೆ ನವದೆಹಲಿ: ಎಲ್​ಪಿಜಿ(LPG) ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ…

3 hours ago

ಸುಳ್ಯ : ಕಂಬಕ್ಕೆ ಬೈಕ್ ಡಿಕ್ಕಿ; ಮೆಸ್ಕಾಂ ಸಿಬ್ಬಂದಿ ಮೃತ್ಯು – vishwanews24

ಸುಳ್ಯ : ಕಂಬಕ್ಕೆ ಬೈಕ್ ಡಿಕ್ಕಿ; ಮೆಸ್ಕಾಂ ಸಿಬ್ಬಂದಿ ಮೃತ್ಯು ಸುಳ್ಯ,: ತಾಲೂಕಿನ ನಿಂತಿಕಲ್ಲು ಬಳಿ ವಿದ್ಯುತ್ ಕಂಬಕ್ಕೆ ಬೈಕ್…

3 hours ago

13 ವರ್ಷದ ಕೋಮಾ ಜೀವನ ಅಂತ್ಯ : ದಯಾಮರಣಕ್ಕೆ ಅನುಮತಿ ಪಡೆದಿದ್ದ ಹರೀಶ್ ರಾಣಾ ನಿಧನ – vishwanews24

13 ವರ್ಷದ ಕೋಮಾ ಜೀವನ ಅಂತ್ಯ : ದಯಾಮರಣಕ್ಕೆ ಅನುಮತಿ ಪಡೆದಿದ್ದ ಹರೀಶ್ ರಾಣಾ ನಿಧನ ಹೊಸದಿಲ್ಲಿ: 13 ವರ್ಷಗಳಿಂದ…

5 hours ago