ಕಾಪು: ಕೆ.ಐ.ಡಿ.ಬಿ ವತಿಯಿಂದ 1200 ಎಕರೆ ಜಮೀನನ್ನು ಭೂಸ್ವಾಧೀನಗೊಳಿಸಿ ಸುಜ್ಲಾನ್ ಪಡೆದುಕೊಂಡಿದ್ದು ಸದ್ಯ ಈ ಜಾಗವನ್ನು ಖಾಸಾಗಿ ಕಂಪೆನಿಗಳಿಗೆ – ವ್ಯಕ್ತಿಗಳಿಗೆ ಮಾರಾಟ ಮಾಡಿರುವುದಲ್ಲದೆ ಅದರಜತೆ ವಿವಿಧ ಜನಪರ ಬೇಡಿಕೆಗೆ ಆಗ್ರಹಿಸಿ ಸುಜ್ಲಾನ್ ಕಂಪೆನಿಯ ಮುಂಭಾಗದಲ್ಲಿ ಜನಾಮದೋಲನ ಸಬೆ ನಡೆಸುವುದಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಕಾಪುವಿನಲ್ಲಿ ನಡೆದ ಪತ್ರೀಕಾಗೊಷ್ಠಿಯಲ್ಲಿ ತಿಳಿಸಿದರು.
ಕೆ.ಐ.ಡಿ.ಬಿ ಜಾಗವನ್ನು ಪಡೆದುಕೊಂಡಿರುವ ಕಂಪೆನಿಗೆ ನಷ್ಟವಾದರೇಆಜಾಗವನ್ನು ಮರಳಿ ಸರ್ಕಾರಕ್ಕೆ ನೀಡಬೇಕೆ ಹೊರತು ಅದನ್ನು ರೀಯಲ್ ಎಸ್ಟೇಟ್ ಉದ್ಯಮವನ್ನಾಗಿ ಮಾಡಬಾರದು ಅದರಬದಲಿಗೆ ಕ್ಷೇತ್ರದಲ್ಲಿ 15 ಸಾವಿರಕ್ಕೂ ಅಧಿಕ ಮಂದಿ ವಸತಿ ವಂಚಿತರಿಗೆ ಮನೆ ನಿವೇಶನ ನೀಡಬೇಕೆಂದು ಅವರು ಆಗ್ರಹ ನಡೆಸಿದರು.
ವಿವಿಧ ಕಂಪೆನಿಗಳಿಗೆ ಮಾರಾಟವಾದ ಜಾಗದಲ್ಲಿ ಹತ್ತಾರು ಇಂಡಸ್ಟ್ರೀಗಳು ಆರಂಭವಾಗಿದೆ ಅದರಲ್ಲಿ ಸ್ಥಳಿಯರಿಗೆ ಉದ್ಯೋಗವನ್ನು ನೀಡದೆ ವಂಚಿಸಿದ್ದು ಅತ್ಯಂತ ಬೇಸರದ ಸಂಗತಿಯಾಗಿದೆ ಮಾತ್ರವಲ್ಲದೆ ನಂದಿಕೂರು ಪ್ರಸಿದ್ಧಿ ಪಡೆದ ದೇವರ ಕಾಡು ಉಳಿಸಿ ಸೂಕ್ತ ರಕ್ಷಣೆ ನೀಡುವ ಬದಲು ಅಲ್ಲಿನ ನೂರು ಎಕರೆಜಾಗವನ್ನು ಸುಜ್ಲಾನ್ ಕಂಪೆನಿ ಖಾಸಾಗಿಯವರಿಗೆ ಮಾರಾಟ ಮಾಡಿರುವುದು ಧಾರ್ಮಿಕ ಭಾವನೆಗೆ ದಕ್ಕೆ ಬಂದಿದೆ ಎಂದರು.
ಪಡುಬಿದ್ರಿ ಕಾರ್ಕಳ ಪಿ.ಡಬ್ಲ್ಯೂ.ಡಿ ಮುಖ್ಯ ರಸ್ತೆಯಲ್ಲಿ ಪ್ರಸ್ತಾವನೆಯಲ್ಲಿರುವ ಟೋಲ್ ಸಂಗ್ರಹದ ಯೋಜನೆ ಕೈಬಿಡಬೇಕು ಮತ್ತು ಹೆಜಮಾಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಎಲ್ಲಾ ವಾಹನಗಳಿಗೆ ಹೆಜಮಾಡಿ ಟೋಲ್ನಲ್ಲಿ ವಿನಾಯಿತಿ ನೀಡಬೇಕೆಂದು ತಿಳಿಸಿದರು.
ಫಲಿಮಾಡು ಅಣೆಕಟ್ಟಿನ ನೀರನ್ನು ಸುಜ್ಲಾನ್ ಕಂಪೆನಿಗಳಿಗೆ ಕೊಳವೆ ಮೂಲಕ ನೀರು ಸರಬರಾಜು ಮಾಡುವುದನ್ನು ನಿಲ್ಲಿಸುವಂತೆಹಾಗೂ ಜಲಜೀವನ್ ಮಿಷನ್ ಯೋಜನೆಯ ಮುಖಾಂತರ ನಡೆದ ಕಾಮಗಾರಿಯ ಅವ್ಯವಹಾರದ ಬಗ್ಗೆ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವದೆಂದು ಸೊರಕೆ ತಿಳಿಸಿದ್ದಾರೆ.
ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…
ಪುತ್ತೂರು: ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…
ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…
ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…
ಸ್ವಕ್ಷೇತ್ರದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಮೀರ್ ಅಹ್ಮದ್ ಭಾಗಿ ನಾನು ಹಿಂದೂಸ್ತಾನಿ, ನಾನು ಕನ್ನಡಿಗ, ದೇಶದ ಅಭಿಮಾನವನ್ನ ಬಿಜೆಪಿಯವರಿಂದ…
ಗುಟ್ಕಾ, ಪಾನ್ ಮಸಾಲ ನಿಷೇಧ ಆದೇಶ ನಾವು ವಾಪಸ್ ಪಡೆದಿಲ್ಲ: ಯು.ಟಿ.ಖಾದರ್ ಸ್ಪಷ್ಟನೆ ಅಡಿಕೆ ಬೆಲೆ ಕುಸಿಯಲ್ಲ, ಬೆಳೆಗಾರರಿಗೆ ಸಮಸ್ಯೆ…