ಕಾಪು: ಕೆ.ಐ.ಡಿ.ಬಿ ವತಿಯಿಂದ 1200 ಎಕರೆ ಜಮೀನನ್ನು ಭೂಸ್ವಾಧೀನಗೊಳಿಸಿ ಸುಜ್ಲಾನ್ ಪಡೆದುಕೊಂಡಿದ್ದು ಸದ್ಯ ಈ ಜಾಗವನ್ನು ಖಾಸಾಗಿ ಕಂಪೆನಿಗಳಿಗೆ – ವ್ಯಕ್ತಿಗಳಿಗೆ ಮಾರಾಟ ಮಾಡಿರುವುದಲ್ಲದೆ ಅದರಜತೆ ವಿವಿಧ ಜನಪರ ಬೇಡಿಕೆಗೆ ಆಗ್ರಹಿಸಿ ಸುಜ್ಲಾನ್ ಕಂಪೆನಿಯ ಮುಂಭಾಗದಲ್ಲಿ ಜನಾಮದೋಲನ ಸಬೆ ನಡೆಸುವುದಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಕಾಪುವಿನಲ್ಲಿ ನಡೆದ ಪತ್ರೀಕಾಗೊಷ್ಠಿಯಲ್ಲಿ ತಿಳಿಸಿದರು.
ಕೆ.ಐ.ಡಿ.ಬಿ ಜಾಗವನ್ನು ಪಡೆದುಕೊಂಡಿರುವ ಕಂಪೆನಿಗೆ ನಷ್ಟವಾದರೇಆಜಾಗವನ್ನು ಮರಳಿ ಸರ್ಕಾರಕ್ಕೆ ನೀಡಬೇಕೆ ಹೊರತು ಅದನ್ನು ರೀಯಲ್ ಎಸ್ಟೇಟ್ ಉದ್ಯಮವನ್ನಾಗಿ ಮಾಡಬಾರದು ಅದರಬದಲಿಗೆ ಕ್ಷೇತ್ರದಲ್ಲಿ 15 ಸಾವಿರಕ್ಕೂ ಅಧಿಕ ಮಂದಿ ವಸತಿ ವಂಚಿತರಿಗೆ ಮನೆ ನಿವೇಶನ ನೀಡಬೇಕೆಂದು ಅವರು ಆಗ್ರಹ ನಡೆಸಿದರು.
ವಿವಿಧ ಕಂಪೆನಿಗಳಿಗೆ ಮಾರಾಟವಾದ ಜಾಗದಲ್ಲಿ ಹತ್ತಾರು ಇಂಡಸ್ಟ್ರೀಗಳು ಆರಂಭವಾಗಿದೆ ಅದರಲ್ಲಿ ಸ್ಥಳಿಯರಿಗೆ ಉದ್ಯೋಗವನ್ನು ನೀಡದೆ ವಂಚಿಸಿದ್ದು ಅತ್ಯಂತ ಬೇಸರದ ಸಂಗತಿಯಾಗಿದೆ ಮಾತ್ರವಲ್ಲದೆ ನಂದಿಕೂರು ಪ್ರಸಿದ್ಧಿ ಪಡೆದ ದೇವರ ಕಾಡು ಉಳಿಸಿ ಸೂಕ್ತ ರಕ್ಷಣೆ ನೀಡುವ ಬದಲು ಅಲ್ಲಿನ ನೂರು ಎಕರೆಜಾಗವನ್ನು ಸುಜ್ಲಾನ್ ಕಂಪೆನಿ ಖಾಸಾಗಿಯವರಿಗೆ ಮಾರಾಟ ಮಾಡಿರುವುದು ಧಾರ್ಮಿಕ ಭಾವನೆಗೆ ದಕ್ಕೆ ಬಂದಿದೆ ಎಂದರು.
ಪಡುಬಿದ್ರಿ ಕಾರ್ಕಳ ಪಿ.ಡಬ್ಲ್ಯೂ.ಡಿ ಮುಖ್ಯ ರಸ್ತೆಯಲ್ಲಿ ಪ್ರಸ್ತಾವನೆಯಲ್ಲಿರುವ ಟೋಲ್ ಸಂಗ್ರಹದ ಯೋಜನೆ ಕೈಬಿಡಬೇಕು ಮತ್ತು ಹೆಜಮಾಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಎಲ್ಲಾ ವಾಹನಗಳಿಗೆ ಹೆಜಮಾಡಿ ಟೋಲ್ನಲ್ಲಿ ವಿನಾಯಿತಿ ನೀಡಬೇಕೆಂದು ತಿಳಿಸಿದರು.
ಫಲಿಮಾಡು ಅಣೆಕಟ್ಟಿನ ನೀರನ್ನು ಸುಜ್ಲಾನ್ ಕಂಪೆನಿಗಳಿಗೆ ಕೊಳವೆ ಮೂಲಕ ನೀರು ಸರಬರಾಜು ಮಾಡುವುದನ್ನು ನಿಲ್ಲಿಸುವಂತೆಹಾಗೂ ಜಲಜೀವನ್ ಮಿಷನ್ ಯೋಜನೆಯ ಮುಖಾಂತರ ನಡೆದ ಕಾಮಗಾರಿಯ ಅವ್ಯವಹಾರದ ಬಗ್ಗೆ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವದೆಂದು ಸೊರಕೆ ತಿಳಿಸಿದ್ದಾರೆ.
ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ ಉಡುಪಿ: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು…
ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು ವಿಟ್ಲ: ಮರ ಹಾಗೂ…
ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಕಾರು…
ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ ಜಿ…
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ‘ನುವಾ’ ವಜ್ರಾಭರಣ ಅನಾವರಣ ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ…
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…