Featured

ಜನರಿಕ್ ಔಷಧಿಗಳು ಇನ್ನು ಎಲ್ಲೆಡೆ ಲಭ್ಯ ; ಕೇಂದ್ರದ ಮಹತ್ವದ ನಿರ್ಧಾರ..

ರಾಷ್ಟ್ರದಲ್ಲಿ ಮತ್ತೊಂದು ಅಮೂಲಾಗ್ರ ಬದಲಾವಣೆಗೆ ವೇದಿಕೆ ಸಿದ್ಧವಾಗಿದೆ. ಮೋದಿ ಸರ್ಕಾರದ ಮತ್ತೊಂದು ಮಹತ್ವದ ನಿರ್ಧಾರ ಭಾರತದ ಬಡವರ ಪಾಲಿಗೆ ನಿಜಕ್ಕೂ ಅಚ್ಛೇ ದಿನಗಳನ್ನು ತರಲಿದೆ. ಭಾರತೀಯರನ್ನು ಆರೋಗ್ಯವಂತರನ್ನಾಗಿಡುವ ಉದ್ದೇಶದಿಂದ, ಮಿತಿಮೀರುತ್ತಿದ್ದ ಔಷಧ ಬೆಲೆಗಳಿಗೆ ಕಡಿವಾಣ ಹಾಕಲು ಮೋದಿ ಸರಕಾರ ಜನರಿಕ್ ಜನೌಷಧಿ ಕೇಂದ್ರಗಳನ್ನು ದೇಶದಾದ್ಯಂತ ತೆರೆದಿತ್ತು.

ಈ ಜನರಿಕ್ ಜನೌಷಧಿ ಕೇಂದ್ರಗಳು ಔಷಧಿಗಳಿಗೆ ಹಣ ಹೊಂದಿಸುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದ ಬಡವರಿಗೆ ಅನುಕೂಲವಾಗಿದೆ. ಬ್ರಾಂಡೆಡ್ ಹಾಗೂ ಹಾಗೂ ಜೆನೆರಿಕ್ ಔಷಧಿಗಳ ಗುಣಮಟ್ಟ ಒಂದೇ ಆಗಿದ್ದು ಈ ಜೆನೆರಿಕ್ ಔಷಧಿಗಳು ಉತ್ಪಾದನೆಯಾಗಿ ನೇರವಾಗಿ ಮಳಿಗೆಗಳಿಗೆ ಬರುವುದರಿಂದ ಜನರಿಗೆ ಬ್ರಾಂಡೆಡ್ ಔಷಧಿಗಳಿಗಿಂತ ಸುಮಾರು 30 ರಿಂದ 70 ಶೇಕಡಾ ದಷ್ಟು ಕಡಿಮೆ ದರದಲ್ಲಿ ಲಭ್ಯವಾಗುತ್ತಿದೆ. ಈ ಕೇಂದ್ರದಲ್ಲಿ ಡಯಾಲಿಸಿಸ್ ರೋಗಿಗೆ ನೀಡಲಾಗುವ ಇಂಜೆಕ್ಷನ್ ನ ಬೆಲೆ ಕೇವಲ 650, ಇದೇ ಇಂಜೆಕ್ಷನ್ ನ ಬೆಲೆ ಮೆಡಿಕಲ್ ಗಳಲ್ಲಿ 1800 ರೂಪಾಯಿಗಳಾಗಿದ್ದು, ಎಚ್.ಐ.ವಿ. ಔಷಧ ಕಿಟ್ ಗೆ ಇತರೆಡೆ 4000 ರೂಪಾಯಿ ಮೌಲ್ಯವಾದರೆ ಜನರಿಕ್ ಮಳಿಗೆಗಳಲ್ಲಿ ಇದು 650 ರೂಪಾಯಿಗೆ ಲಭ್ಯವಿದೆ.

ದೇಶದಾದ್ಯಂತ 4000 ಕ್ಕೂ ಹೆಚ್ಚು ಜನೌಷಾದಿ ಮಳಿಗೆಗಳಿದ್ದರೂ ಸಹ ಜನರಿಗೆ ಸರಿಯಾಗಿ ತಲುಪುತ್ತಿರಲಿಲ್ಲ. ಈಗ ಇದಕ್ಕೆಲ್ಲಾ ಅಂತ್ಯ ಆಡಲು ಮೋದಿ ಸರಕಾರ ಕ್ರಾಂತಿಕಾರಿ ನಿರ್ಧಾರವನ್ನು ಕೈಗೊಂಡಿದೆ. ಇನ್ನು ಜನರಿಕ್ ಔಷಧಿಗಳನ್ನು ದೇಶದ ಎಲ್ಲಾ ಮೆಡಿಕಲ್ ಶಾಪ್ ಗಳಲ್ಲಿ ಮಾರಾಟ ಮಾಡುವಂತೆ ಸೂಚಿಸಲಾಗಿದ್ದು, ಜನರಿಕ್ ಔಷಧಿಗಳನ್ನು ತಮ್ಮ ಮೆಡಿಕಲ್ ಶಾಪ್ ನಲ್ಲಿ ಎಲ್ಲರಿಗೂ ಕಾಣುವಂತೆ ಇಡಬೇಕು ಎಂದು ಕೇಂದ್ರ ಔಷಧ ನಿಯಂತ್ರಣಾಲಯ ಮಹತ್ವದ ಫರ್ಮಾನು ಹೊರಡಿಸಿದೆ.ಪ್ರತಿಯೊಬ್ಬ ಭಾರತೀಯನಿಗೆ ಸಹ ಜನರಿಕ್ ಔಷಧಗಳು ಲಭ್ಯವಾಗಬೇಕು ಎನ್ನುವ ಉದ್ದೇಶದಿಂದ ಜನರಿಕ್ ಔಷಧಗಳನ್ನು ಎಲ್ಲ ಮೆಡಿಕಲ್ ಸ್ಟೋರ್ ಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ .

ಜೂನ್ ಹನ್ನೆರಡು ರಂದು ಕೇಂದ್ರ ಔಷಧ ನಿಯಂತ್ರಣ ಇಲಾಖೆ ಹೊರಡಿಸಿರುವ ಈ ಆದೇಶದಲ್ಲಿ ಲೈಸೆನ್ಸ್ ಪಡೆದು ಸೇವೆ ನೀಡುತ್ತಿರುವ ಎಲ್ಲಾ ಔಷಧಿ ಅಂಗಡಿಗಳಲ್ಲಿ ಜನರಿಕ್ ಔಷಧ ಮಾರಾಟ ಮಾಡುವಂತೆ ಸೂಚಿಸಲಾಗಿದೆ. ಒಂದು ವೇಳೆ ಮೆಡಿಕಲ್ ಗಳಲ್ಲಿ ಜನರಿಕ್ ಔಷಧ ಸಂಗ್ರಹಣೆ ಮತ್ತು ಮಾರಾಟದ ಆದೇಶ ಪಾಲನೆ ಉಲ್ಲಂಘಿಸಿದಲ್ಲಿ ಅಂತಹ ಔಷಧ ಅಂಗಡಿಗಳ ಲೈಸೆನ್ಸ್ ಗಳನ್ನು ರದ್ದುಪಡಿಸಲು ಕಟ್ಟುನಿಟ್ಟಿನ ಸೂಚನೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

Vishwa News 24

Recent Posts

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ -vishwanews24

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…

15 hours ago

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ -vishwanews24

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…

15 hours ago

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ -vishwanews24

ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…

3 days ago

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ  ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…

4 days ago

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ – vishwanews24

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…

4 days ago

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ – vishwanews24

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…

4 days ago