ರಾಷ್ಟ್ರದಲ್ಲಿ ಮತ್ತೊಂದು ಅಮೂಲಾಗ್ರ ಬದಲಾವಣೆಗೆ ವೇದಿಕೆ ಸಿದ್ಧವಾಗಿದೆ. ಮೋದಿ ಸರ್ಕಾರದ ಮತ್ತೊಂದು ಮಹತ್ವದ ನಿರ್ಧಾರ ಭಾರತದ ಬಡವರ ಪಾಲಿಗೆ ನಿಜಕ್ಕೂ ಅಚ್ಛೇ ದಿನಗಳನ್ನು ತರಲಿದೆ. ಭಾರತೀಯರನ್ನು ಆರೋಗ್ಯವಂತರನ್ನಾಗಿಡುವ ಉದ್ದೇಶದಿಂದ, ಮಿತಿಮೀರುತ್ತಿದ್ದ ಔಷಧ ಬೆಲೆಗಳಿಗೆ ಕಡಿವಾಣ ಹಾಕಲು ಮೋದಿ ಸರಕಾರ ಜನರಿಕ್ ಜನೌಷಧಿ ಕೇಂದ್ರಗಳನ್ನು ದೇಶದಾದ್ಯಂತ ತೆರೆದಿತ್ತು.
ಈ ಜನರಿಕ್ ಜನೌಷಧಿ ಕೇಂದ್ರಗಳು ಔಷಧಿಗಳಿಗೆ ಹಣ ಹೊಂದಿಸುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದ ಬಡವರಿಗೆ ಅನುಕೂಲವಾಗಿದೆ. ಬ್ರಾಂಡೆಡ್ ಹಾಗೂ ಹಾಗೂ ಜೆನೆರಿಕ್ ಔಷಧಿಗಳ ಗುಣಮಟ್ಟ ಒಂದೇ ಆಗಿದ್ದು ಈ ಜೆನೆರಿಕ್ ಔಷಧಿಗಳು ಉತ್ಪಾದನೆಯಾಗಿ ನೇರವಾಗಿ ಮಳಿಗೆಗಳಿಗೆ ಬರುವುದರಿಂದ ಜನರಿಗೆ ಬ್ರಾಂಡೆಡ್ ಔಷಧಿಗಳಿಗಿಂತ ಸುಮಾರು 30 ರಿಂದ 70 ಶೇಕಡಾ ದಷ್ಟು ಕಡಿಮೆ ದರದಲ್ಲಿ ಲಭ್ಯವಾಗುತ್ತಿದೆ. ಈ ಕೇಂದ್ರದಲ್ಲಿ ಡಯಾಲಿಸಿಸ್ ರೋಗಿಗೆ ನೀಡಲಾಗುವ ಇಂಜೆಕ್ಷನ್ ನ ಬೆಲೆ ಕೇವಲ 650, ಇದೇ ಇಂಜೆಕ್ಷನ್ ನ ಬೆಲೆ ಮೆಡಿಕಲ್ ಗಳಲ್ಲಿ 1800 ರೂಪಾಯಿಗಳಾಗಿದ್ದು, ಎಚ್.ಐ.ವಿ. ಔಷಧ ಕಿಟ್ ಗೆ ಇತರೆಡೆ 4000 ರೂಪಾಯಿ ಮೌಲ್ಯವಾದರೆ ಜನರಿಕ್ ಮಳಿಗೆಗಳಲ್ಲಿ ಇದು 650 ರೂಪಾಯಿಗೆ ಲಭ್ಯವಿದೆ.
ದೇಶದಾದ್ಯಂತ 4000 ಕ್ಕೂ ಹೆಚ್ಚು ಜನೌಷಾದಿ ಮಳಿಗೆಗಳಿದ್ದರೂ ಸಹ ಜನರಿಗೆ ಸರಿಯಾಗಿ ತಲುಪುತ್ತಿರಲಿಲ್ಲ. ಈಗ ಇದಕ್ಕೆಲ್ಲಾ ಅಂತ್ಯ ಆಡಲು ಮೋದಿ ಸರಕಾರ ಕ್ರಾಂತಿಕಾರಿ ನಿರ್ಧಾರವನ್ನು ಕೈಗೊಂಡಿದೆ. ಇನ್ನು ಜನರಿಕ್ ಔಷಧಿಗಳನ್ನು ದೇಶದ ಎಲ್ಲಾ ಮೆಡಿಕಲ್ ಶಾಪ್ ಗಳಲ್ಲಿ ಮಾರಾಟ ಮಾಡುವಂತೆ ಸೂಚಿಸಲಾಗಿದ್ದು, ಜನರಿಕ್ ಔಷಧಿಗಳನ್ನು ತಮ್ಮ ಮೆಡಿಕಲ್ ಶಾಪ್ ನಲ್ಲಿ ಎಲ್ಲರಿಗೂ ಕಾಣುವಂತೆ ಇಡಬೇಕು ಎಂದು ಕೇಂದ್ರ ಔಷಧ ನಿಯಂತ್ರಣಾಲಯ ಮಹತ್ವದ ಫರ್ಮಾನು ಹೊರಡಿಸಿದೆ.
ಜೂನ್ ಹನ್ನೆರಡು ರಂದು ಕೇಂದ್ರ ಔಷಧ ನಿಯಂತ್ರಣ ಇಲಾಖೆ ಹೊರಡಿಸಿರುವ ಈ ಆದೇಶದಲ್ಲಿ ಲೈಸೆನ್ಸ್ ಪಡೆದು ಸೇವೆ ನೀಡುತ್ತಿರುವ ಎಲ್ಲಾ ಔಷಧಿ ಅಂಗಡಿಗಳಲ್ಲಿ ಜನರಿಕ್ ಔಷಧ ಮಾರಾಟ ಮಾಡುವಂತೆ ಸೂಚಿಸಲಾಗಿದೆ. ಒಂದು ವೇಳೆ ಮೆಡಿಕಲ್ ಗಳಲ್ಲಿ ಜನರಿಕ್ ಔಷಧ ಸಂಗ್ರಹಣೆ ಮತ್ತು ಮಾರಾಟದ ಆದೇಶ ಪಾಲನೆ ಉಲ್ಲಂಘಿಸಿದಲ್ಲಿ ಅಂತಹ ಔಷಧ ಅಂಗಡಿಗಳ ಲೈಸೆನ್ಸ್ ಗಳನ್ನು ರದ್ದುಪಡಿಸಲು ಕಟ್ಟುನಿಟ್ಟಿನ ಸೂಚನೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಉಡುಪಿ: ಮಹಾವೀರ ಜಯಂತಿ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ ಮಾ.31ರ ಮಂಗಳವಾರ ಬದಲಾಗಿ ಮಾ. 30ರ ಸೋಮವಾರ ರಜೆ ಘೋಷಣೆ ಉಡುಪಿ:…
ಮಾ.30ಕ್ಕೆ ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ ಬೆಂಗಳೂರು: ಮಾ.30ಕ್ಕೆ ನಡೆಯಬೇಕಿದ್ದ ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ…
1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ನಿಯಮದಲ್ಲಿಈ ವರ್ಷವೂ 60 ದಿನಗಳ ವಿನಾಯಿತಿ : ಮಧು ಬಂಗಾರಪ್ಪ ಬೆಂಗಳೂರು:…
ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಆಹ್ವಾನ ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ…
ಬಂಟ್ವಾಳ: ಯುವತಿ ನಾಪತ್ತೆ; ಪ್ರಕರಣ ದಾಖಲು ಬಂಟ್ವಾಳ: ಕೆಲಸಕ್ಕೆಂದು ಹೊರಟ ಯುವತಿ ಮನೆಗೆ ಮರಳದೇ ನಾಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕಿನ…
ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜಯ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉಡುಪಿ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಎರಡೂ…