ಮಂಗಳೂರು: ದೇವದಾಸ್ ಕಾಪಿಕಾಡ್ ನಿರ್ದೇಶಿಸಿರುವ ಅರ್ಜುನ್ ಕಾಪಿಕಾಡ್ ಅಭಿನಯದ ತುಳು ಸಿನೆಮಾ ‘ಜಬರ್ ದಸ್ತ್ ಶಂಕರ’ ಜಬರ್ ದಸ್ತ್ಆಗಿ ತೆರೆಯ ಮೇಲೆ ಬರಲು ಸಜ್ಜಾಗಿ ನಿಂತಿದೆ.
ನಿಶ್ಮಿತಾ ಹಾಗೂ ನೀತು ನಾಯಕಿಯರಾಗಿ ಅಭಿನಯಿಸಿರುವ ಈ ಸಿನೆಮಾ ನ.8ರ ಶುಕ್ರವಾರ ತೆರೆಗೆ ಬರಲಿದೆ.
ಜಲನಿಧಿ ಪ್ರೋಡಕ್ಷನ್ ಹಾಗೂ ಬೊಳ್ಳಿ ಮೂವೀಸ್ ಅರ್ಪಿಸುವ ಈ ಸಿನೆಮಾವನ್ನು ಅನಿಲ್ ಕುಮಾರ್ ಹಾಗೂ ಲೋಕೇಶ್ ಕೋಟ್ಯಾನ್ ನಿರ್ಮಿಸಿದ್ದಾರೆ.
ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರೇ ಕಥೆ, ಸಂಭಾಷಣೆ, ಸಾಹಿತ್ಯ ಬರೆದಿದ್ದು, ಮಾಸ್ ಮಾಸ ಸ್ಟಂಟ್ ಮಾಸ್ಟರ್ ಆಗಿದ್ದು, ಸಿದ್ದು ಛಾಯಾಗ್ರಹಣ ನಿರ್ವಹಿಸಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡಿದ್ದಾರೆ.
ಸತೀಶ್ ಬಂದಳೆ, ಸಾಯ್ ಕೃಷ್ಣ ಕುಡ್ಲ, ದೇವದಾಸ್ ಕಾಪಿಕಾಡ್ ಮುಂತಾದ ಹಿರಿಯ ಕಲಾವಿದರು ಅಭಿನಯಿಸಿದ್ದಾರೆ.
ಇದೊಂದು ಥ್ರಿಲ್ಲರ್ ಅಥವ ರೋಮ್ಯಾಂಟಿಕ್ ಅಥವ ತುಳು ಕೊಮೆಡಿ ಚಿತ್ರವೇ ಎಂಬ ಚರ್ಚ್ ಶುರುವಾಗಿದೆ. ತುಳು ಸಿನಿಮಾ ಅಂದ್ರೆ ಹಾಸ್ಯ ಇರಲೇ ಬೇಕು. ಮಾಮೂಲಿ ಹಾಸ್ಯವಲ್ಲ. ರಸಭರಿತ ಹಾಸ್ಯ ಹೊನಲು ಇದ್ದೇ ಇರುತ್ತದೆ.
ಆದರೆ, ಯಾವ ಹೂರಣದ ಚಿತ್ರ ಎಂಬ ಬಗ್ಗೆ ಸಿನಿಮಾದ ಯಾವೊಬ್ಬರು ಕೂಡ ಮಾಹಿತಿ ಬಿಟ್ಟು ಕೊಡುತ್ತಿಲ್ಲ. ಸದ್ಯದಲ್ಲೇ ಟೀಸರ್ ಬಿಡುಗಡೆ ಮಾಡುತ್ತಿದ್ದೇವೆ ಎಂದಿದ್ದಾರೆ. ಕಡು ಹಳದಿ ಅಂಗಿ ಧರಿಸಿ ಫೈಟ್ ಪೋಸ್ ನೀಡಿರುವುದನ್ನು ಗಮನಿಸಿದರೆ ಅರ್ಜುನ್ ಕಾಫಿಕಾಡ್ ಯ್ಯಂಗ್ರಿ ಯಂಗ್ ಮ್ಯಾನ್ ಪೆಟ್ಟಿಸ್ಟ್ ಪಾತ್ರದಂತೆ ಕಾಣಿಸುತ್ತಿದೆ. ಬೇರೆ ಚಿತ್ರಗಳಿಗಿಂತ ಸ್ವಲ್ಪ ಹೆಚ್ಚೇ ಹೊಡೆದಾಟ ದೃಶ್ಯಗಳು ಇವೆ ಎಂದೂ ಹೇಳಲಾಗುತ್ತಿದೆ. ತುಳು ಚಿತ್ರರಂಗದಲ್ಲಿ ಬದಲಾವಣೆ ಗಾಳಿ ಆಗಲೇ ಬೀಸುತ್ತಿದ್ದು, ಜಬರ ದಸ್ತ್ ಶಂಕರ ಚಿತ್ರ ಕುತೂಹಲ ಹುಟ್ಟಿಸಿದೆ.
ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…
ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…
ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…
ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್ನ ಅಧ್ಯಕ್ಷ,…
ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಯುವಕ ಶವವಾಗಿ ಪತ್ತೆ ಬೆಂಗಳೂರು: ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಯುವಕ ನೇಣುಬಿಗಿದ…
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…