Featured

ಜಿಲ್ಲೆಯಲ್ಲಿ ಕೋವಿಡ್ ಲಸಿಕಾ ಪ್ರಗತಿ ಹೆಚ್ಚಿಸಲು ಮನೆ ಮನೆಗೆ ಲಸಿಕಾ ಮಿತ್ರ 2.0 -Vishwanews24

ಜಿಲ್ಲೆಯಲ್ಲಿ ಕೋವಿಡ್ ಲಸಿಕಾ ಪ್ರಗತಿ ಹೆಚ್ಚಿಸಲು ಮನೆ ಮನೆಗೆ ಲಸಿಕಾ ಮಿತ್ರ 2.0 -Vishwanews24

ಜಿಲ್ಲೆಯಲ್ಲಿ ಕೋವಿಡ್-19 ಸಂಭಾವ್ಯ 4 ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಲಸಿಕಾಕರಣ ಪ್ರಗತಿಯ ವೇಗವನ್ನು ಹೆಚ್ಚಿಸಬೇಕಾಗಿದ್ದು, ಇದಕ್ಕಾಗಿ ಮನೆ ಮನೆಗೆ ಲಸಿಕಾ ಮಿತ್ರ 2.0 ಲಸಿಕಾಕರಣವನ್ನು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜೂನ್ ಮತು ಜುಲೈ ತಿಂಗಳಲ್ಲಿ ಕೋವಿಡ್ ಲಸಿಕಾಕರಣ ವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು, ಆಶಾ ಕಾರ್ಯಕರ್ತೆಯರು ಮನೆ ಭೇಟಿ ನಡೆಸಿ , 12-14 ವಯಸ್ಸಿನ ಮಕ್ಕಳು, 15-17 ವಯಸ್ಸಿನ ಮಕ್ಕಳು, 18 ವರ್ಷ ಮೇಲ್ಪಟ್ಟ ನಾಗರಿಕರು ಪ್ರಥಮ ಹಾಗೂ ದ್ವಿತೀಯ ಡೋಸ್ ಪಡೆಯಲು ಬಾಕಿ ಇರುವವರು, 60 ವರ್ಷ ಮೇಲ್ಪಟ್ಟವರು, ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಲ್ಲಿ ಮುನ್ನೆಚ್ಚರಿಕಾ ಡೋಸ್ ಪಡೆಯಲು ಬಾಕಿ ಇರುವವರನ್ನು ಗುರುತಿಸಿ, ಅವರ ಮನವೊಲಿಸಿ, ಶಾಲೆ ಅಥವಾ ಆಸ್ಪತ್ರೆಯ ಸೆಷನ್‌ನಲ್ಲಿ ಕೋವಿಡ್ ಲಸಿಕೆ ಪಡೆಯಲು ಜಾಗೃತಿ ಮೂಡಿಸಿ ಮನವೊಲಿಸಲಿದ್ದಾರೆ.

ಮುಂಚೂಣಿ ಕಾರ್ಯಕರ್ತರ ಮೂಲಕ , ಮೊದಲನೇ ಡೋಸ್ ಪಡೆಯದ ಹಾಗೂ ಎರಡನೇ ಡೋಸ್ ಪಡೆಯಲು ಬಾಕಿ ಇರುವ 12 ವರ್ಷ ಮೇಲ್ಪಟ್ಟ ಎಲ್ಲಾ ಅರ್ಹ ಫಲಾನುಭವಿಗಳ ಮನೆಗೆ ಭೇಟಿ ನೀಡಿ, ಪ್ರತಿಯೊಬ್ಬ ಫಲಾನುಭವಿಯನ್ನು ಸಂದರ್ಶಿಸಿ, ಕೇಂದ್ರ ಸರ್ಕಾರದಿಂದ ನೀಡಲಾಗುವ ಮಾರ್ಗಸೂಚಿಯನ್ವಯ ಕೋವಿಡ್ -19 ಲಸಿಕೆ ಪಡೆಯಬೇಕಾದವರ ಪಟ್ಟಿ ಸಿದ್ದಪಡಿಸಿ, ಅವರಲ್ಲಿ ಲಸಿಕೆ ಪಡೆಯಬೇಕಾದ ಅವಶ್ಯಕತೆಯ ಕುರಿತು ಜಾಗೃತಿ ಮೂಡಿಸಿ, ಅವರನ್ನು ಸಜ್ಜುಗೊಳಿಸಿ, ಸೂಕ್ತ ಸ್ಥಳದಲ್ಲಿ ಲಸಿಕಾಕರಣವನ್ನು ಏರ್ಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಕೋವಿಡ್ ನಿಂದ ಸಂಪೂರ್ಣ ರಕ್ಷಣೆ ಪಡೆಯಲು ಎರಡೂ ಡೋಸ್ ಲಸಿಕೆ ಪಡೆಯುವುದು ಅತ್ಯವಶ್ಯಕ ಎಂಬ ಮಾಹಿತಿಯನ್ನು ಮನದಟ್ಟು ಮಾಡಿಸಿ, ಅವರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಮತ್ತು ಕೋವಿಡ್ ಸೋಂಕಿನ ಹೆಚ್ಚಿನ ಅಪಾಯದಲ್ಲಿರುವ 60 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್‌ನ ಅವಶ್ಯಕತೆ ಕುರಿತು ಜಾಗೃತಿ ಮೂಡಿಸಲಾಗುವುದು.

ಹೆಚ್ಚು ಜನಸಂದಣಿ ಇರುವ ಪ್ರದೇಶಗಳಾದ ಬಸ್, ರೈಲು, ಮೆಟ್ರೋ, ವಿಮಾನ ಹಾಗೂ ಹಡಗು ನಿಲ್ದಾಣಗಳಲ್ಲಿ ಮತ್ತು ಜನ ಸೇರುವ ಪ್ರದೇಶಗಳಾದ ಮಾರುಕಟ್ಟೆ, ಸಂತೆಗಳಲ್ಲಿ ಲಸಿಕಾಕರಣದ ಕುರಿತುಜಾಗೃತಿ ಮೂಡಿಸಿ ಲಸಿಕಾಕರಣ ಕೇಂದ್ರಗಳನ್ನು ತಾತ್ಕಾಲಿಕವಾಗಿ ಸ್ಥಾಪಿಸಿ ಲಸಿಕೆ ನೀಡಲು ಹಾಗೂ ಲಸಿಕೆ ಪಡೆಯಲು ತಪ್ಪಿಹೋದ ಮತ್ತು ಬಿಟ್ಟು ಹೋದ ಹಾಗೂ ಶಾಲೆಯಿಂದ ಹೊರಗುಳಿದ 12 ರಿಂದ 17 ವರ್ಷದ ಮಕ್ಕಳನ್ನು ಗುರುತಿಸಿ, ಸೂಕ್ತ ಸ್ಥಳದಲ್ಲಿ ಲಸಿಕಾಕರಣ ನಡೆಸಲು ಯೋಜನೆ ರೂಪಿಸಲಾಗಿದೆ.

ಆಸ್ಪತ್ರೆಗೆ ಬರಲು, ನಡೆಯಲು ಸಾಧ್ಯವಾಗದ ಹಾಗೂ ಹಾಸಿಗೆ ಹಿಡಿದಿರುವ 60 ವರ್ಷ ಮೇಲ್ಪಟ್ಟವರಿಗೆ ಮೊಬೈಲ್ ಲಸಿಕಾ ಶಿಬಿರವನ್ನು ವ್ಯವಸ್ಥೆ ಮಾಡಿ, ಲಸಿಕೆ ನೀಡಲು ನಿರ್ಧರಿಸಲಾಗಿದೆ.

ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ವೈದ್ಯಾಧಿಕಾರಿಗಳೊಂದಿಗೆ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮ ಕಾರ್ಯಪಡೆಯ ಸದಸ್ಯರ ಸಮಿತಿ ಸಭೆ ನಡೆಸಿ, ಪ್ರಥಮ ಹಾಗೂ ದ್ವಿತೀಯ ಡೋಸ್ ಲಸಿಕೆ ಪಡೆಯಲು ಬಾಕಿ ಇರುವ ಮಕ್ಕಳು ಮತ್ತು ಮುನ್ನೆಚ್ಚರಿಕಾ ಡೋಸ್ ಪಡೆಯಲು ಬಾಕಿ ಇರುವ ಫಲಾನುಭವಿಗಳನ್ನು ಗುರುತಿಸಿ ಲಸಿಕೆ ನೀಡಲು ಹಾಗೂ ಅಗತ್ಯವಿದ್ದಲ್ಲಿ ಸಂಬAದಪಟ್ಟ ಪಂಚಾಯತ್‌ನಲ್ಲಿಯೇ ಬುಧವಾರ ಮೇಳದ ದಿನ ಲಸಿಕಾ ಶಿಬಿರವನ್ನು ಆಯೋಜಿಸಬೇಕು. ಒಂದು ವೇಳೆ ಲಸಿಕೆ ಪಡೆಯಲು ನಿರಾಕರಿಸಿದ್ದಲ್ಲಿ ಪಂಚಾಯತ್ ಕಾರ್ಯಪಡೆ ಸದಸ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಸಮುದಾಯದ ಮುಖಂಡರುಗಳು ಮನವೊಲಿಸಿ, ಲಸಿಕೆ ಪಡೆಯುವಂತೆ ಪ್ರೇರೇಪಿಸಬೇಕು. ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಮತ್ತು ಸದಸ್ಯರು ಈ ಕುರಿತು ಕ್ರಮ ವಹಿಸಲಿದ್ದಾರೆ.

ಬುಧವಾರ ಲಸಿಕಾ ಮೇಳದ ಕುರಿತು ಗ್ರಾಮಗಳ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ಸಹಕಾರ ಪಡೆದು, ಲಸಿಕಾ ಶಿಬಿರದ ಕುರಿತು ಮೈಕ್ ಮೂಲಕ ಪ್ರಚಾರ ನಡೆಸಿ ಲಸಿಕೆ ನೀಡಲಾಗುವುದು.

ಜಿಲ್ಲೆಯಲ್ಲಿ ಇದುವರೆಗೆ 18 ವರ್ಷ ಮೇಲ್ಪಟ್ಟವರಿಗೆ ನೀಡುವ ಮೊದಲ ಡೋಸ್ ಲಸಿಕೆಯನ್ನು 10,04,495 ಮಂದಿಗೆ ನೀಡಿ 100.55% ಹಾಗೂ ಎರಡನೇ ಡೋಸ್ ನ್ನು 9.98,354 ಮಂದಿಗೆ ನೀಡಿ 99.94% ಸಾಧನೆ ಮಾಡಲಾಗಿದೆ. 15-18 ರ ವಯೋಮಾನದಲ್ಲಿ 49, 186 ಮಂದಿಗೆ ಪ್ರಥಮ ಡೋಸ್ ನೀಡಿ 91.84% ಹಾಗೂ 47,906 ಮಂದಿಗೆ ಎರಡನೇ ಡೋಸ್ ನೀಡಿ 89.45% ಸಾಧನೆ ಆಗಿದೆ. 12-14 ರ ವಯೋಮಾನದಲ್ಲಿ 33,583 ಮಂದಿಗೆ ಪ್ರಥಮ ಡೋಸ್ ನೀಡಿ 108.56% ಹಾಗೂ 27,113 ಮಂದಿಗೆ ಎರಡನೇ ಡೋಸ್ ನೀಡಿ 87.65% ಸಾಧನೆ ಆಗಿದೆ. 15,750 ಆರೋಗ್ಯ ಕಾರ್ಯಕರ್ತರು, 4316 ಮುಂಚೂಣಿ ಕಾರ್ಯಕರ್ತರು 63044 ಮಂದಿ ಹಿರಿಯ ನಾಗರಿಕರಿಗೆ ಮುನ್ನೆಚ್ಚರಿಕಾ ಡೋಸ್ ಕೋವಿಡ್ 19 ಲಸಿಕೆ ನೀಡಲಾಗಿದೆ.

ಜಿಲ್ಲೆಯಲ್ಲಿ ಕೋವಿಡ್ ಸಂಭಾವ್ಯ 4 ನೇ ಅಲೆಯನ್ನು ಎದುರಿಸುವ ಕುರಿತಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ. ಕೋವಿಡ್ 19 ನ್ನು ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯುವುದು ಅತ್ಯಂತ ಅಗತ್ಯವಿದ್ದು, ಜಿಲ್ಲೆಯಲ್ಲಿ ಲಸಿಕೆ ನೀಡುವಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲು “ಮನೆ ಮನೆಗೆ ಲಸಿಕಾ ಮಿತ್ರ 2.0” ಕಾರ್ಯಕ್ರಮ ಮತ್ತು ಬುಧವಾರದಂದು ನಡೆಯುವ “ಕೋವಿಡ್ ಲಸಿಕಾ ಮೇಳ” ವನ್ನು ಪರಿಣಾಮಕಾರಿಯಾಗಿ ಜರುಗಿಸಿ, ಕೋವಿಡ್-19 ವ್ಯಾಕ್ಸಿನೇಷನ್‌ನಲ್ಲಿ ನೂರರಷ್ಟು ಪ್ರಗತಿ ಸಾಧಿಸುವಂತೆ ಸಂಬAದಪಟ್ಟ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

Vishwa News 24

Recent Posts

ಮಣ್ಣು ತೆರವು ಕಾರ್ಯ ಪೂರ್ಣ : ಮಂಗಳೂರು-ಬೆಂಗಳೂರು ರೈಲು ಸಂಚಾರ ಪುನರಾರಂಭ – vishwanews24

ಮಣ್ಣು ತೆರವು ಕಾರ್ಯ ಪೂರ್ಣ : ಮಂಗಳೂರು-ಬೆಂಗಳೂರು ರೈಲು ಸಂಚಾರ ಪುನರಾರಂಭ ಮಂಗಳೂರು: ಎಡಕುಮೇರಿ ಮತ್ತು ಸಿರಿಬಾಗಿಲು ನಡುವಿನ ಭೂಕುಸಿತದಿಂದ ಹಾನಿಗೊಳಗಾದ…

4 minutes ago

ಉಡುಪಿ : ಆಗಸ್ಟ್ 6 ರಂದು ನೇರ ಸಂದರ್ಶನ – vishwanews24

ಉಡುಪಿ : ಆಗಸ್ಟ್ 6 ರಂದು ನೇರ ಸಂದರ್ಶನ ಉಡುಪಿ : ನಗರದ ಮಣಿಪಾಲ ರಜತಾದ್ರಿ ರಸ್ತೆಯ ವಿದ್ಯಾರತ್ನ ನಗರದ…

8 minutes ago

ಉಡುಪಿ: ನಿರಂತರ ಮಳೆ ; ಜಿಲ್ಲೆಯ ಪ್ರಾಥಮಿಕ- ಪ್ರೌಢ ಶಾಲೆಗಳಿಗೆ ಆ.04 (ನಾಳೆ) ರಂದು ರಜೆ ಘೋಷಣೆ -vishwanews24

ಉಡುಪಿ: ನಿರಂತರ ಮಳೆ ; ಜಿಲ್ಲೆಯ ಪ್ರಾಥಮಿಕ- ಪ್ರೌಢ ಶಾಲೆಗಳಿಗೆ ಆ.04 (ನಾಳೆ) ರಂದು ರಜೆ ಘೋಷಣೆ ಉಡುಪಿ ಜಿಲ್ಲೆಯಾದ್ಯಂತ…

13 hours ago

ಉಳ್ಳಾಲ :ಲೈನ್ ಆಫ್ ಮಾಡದೆ ಟ್ರಾನ್ಸ್ ಫಾರ್ಮರ್ ಏರಿದ ಲೈನ್ ಮೆನ್; ವಿದ್ಯುತ್‌ ಪ್ರವಹಿಸಿ ಸಾವು – vishwanews24

ಉಳ್ಳಾಲ :ಲೈನ್ ಆಫ್ ಮಾಡದೆ ಟ್ರಾನ್ಸ್ ಫಾರ್ಮರ್ ಏರಿದ ಲೈನ್ ಮೆನ್; ವಿದ್ಯುತ್‌ ಪ್ರವಹಿಸಿ ಸಾವು ಉಳ್ಳಾಲ : ಜಿಒಎಸ್…

19 hours ago

ಸಚಿವ ಸಂಪುಟ ವಿಸ್ತರಣೆ: ಎಸ್.ಮಲ್ಲಿಕಾರ್ಜುನ್ ಸೇರ್ಪಡೆ ; ಮಂಕಾಳ ವೈದ್ಯ ಹೆಸರು ಕೈಬಿಟ್ಟ ಎಐಸಿಸಿ – vishwanews24

ಸಚಿವ ಸಂಪುಟ ವಿಸ್ತರಣೆ: ಎಸ್.ಮಲ್ಲಿಕಾರ್ಜುನ್ ಸೇರ್ಪಡೆ ; ಮಂಕಾಳ ವೈದ್ಯ ಹೆಸರು ಕೈಬಿಟ್ಟ ಎಐಸಿಸಿ ಬೆಂಗಳೂರು: ಕರ್ನಾಟಕ ಸಚಿವ ಸಂಪುಟ…

19 hours ago

ರೈಲ್ವೆ ಪ್ರಯಾಣಿಕರ ಗಮನಕ್ಕೆ : ಮಂಗಳೂರು-ಬೆಂಗಳೂರು ಹಲವು ರೈಲುಗಳ ಸಂಚಾರ ಬಂದ್ -vishwanews24

ಮಂಗಳೂರು-ಬೆಂಗಳೂರು ರೈಲು ಪ್ರಯಾಣಿಕರೇ ಗಮನಿಸಿ: ಹಲವು ರೈಲುಗಳ ಸಂಚಾರ ಬಂದ್ ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಎಡಕುಮೇರಿ ಮತ್ತು ಶಿರಿಬಾಗಿಲು…

21 hours ago