Featured

ಜೀವನದಲ್ಲಿ ಬರೀ ಕಷ್ಟಗಳನ್ನೇ ಎದುರಿಸುತ್ತಿದ್ದೀರಾ ?? ಹಾಗಾದರೆ ಈ ಹನುಮಾನ್ ಚಾಲೀಸಾ ಜಪಿಸಿ.. Vishwanews24

ಭಾರತದಲ್ಲಿ ಜ್ಯೋತಿಷ್ಯ, ಪೂಜೆ, ಧರ್ಮ ಶಾಸ್ತ್ರಕ್ಕೆ ಬಹಳಷ್ಟು ಮಹತ್ವವಿದ್ದು, ಅದರಂತೆ ಜೀವನದಲ್ಲಿ ಬರುವ ಪ್ರತಿಯೊಂದು ಕಷ್ಟ-ನಷ್ಟಗಳನ್ನು ಕೆಲವು ಮಂತ್ರದ ಮೂಲಕ ಪರಿಹರಿಸಿಕೊಳ್ಳಬಹುದು. ಅದರಲ್ಲಿ ಬ್ರಹ್ಮಚಾರಿಯಾದ ಹನುಮಂತನು ಭಗವಾನ್ ಶ್ರೀರಾಮನ ಪರಮ ಭಕ್ತ ಹಾಗೂ ಶನಿಯ ಆತ್ಮೀಯ ಸ್ನೇಹಿತ. ಸದಾ ರಾಮ ನಾಮವನ್ನು ಜಪಿಸುವ ಹನುಮಂತನಿಗೆ ವಿಶೇಷ ಮಂತ್ರಗಳನ್ನು ಹಾಗೂ ಪೂಜೆಯನ್ನು ಕೈಗೊಂಡರೆ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಸುಲಭವಾಗಿ ಪರಿಹಾರವಾಗುತ್ತೆ.

ಹೌದು ಭಗವಾನ್ ಶ್ರೀ ಗಣೇಶನ೦ತೆಯೇ, ಸಕಲವಿಘ್ನಗಳನ್ನೂ ನಿವಾರಿಸಿಬಿಡುವನೆ೦ಬ ಖ್ಯಾತಿಯೂ ಭಗವಾನ್ ಹನುಮ೦ತನಿಗೂ ಇದೆ. ವ್ಯಕ್ತಿಯೋರ್ವರು ಹನುಮಾನ್ ಮಂತ್ರವನ್ನು ಸ೦ಪೂರ್ಣ ಭಕ್ತಿಭಾವದಿ೦ದ ಪಠಿಸಿದ್ದೇ ಆದಲ್ಲಿ, ಆತನು ಅಥವಾ ಆಕೆಯು ಭಗವಾನ್ ಹನುಮ೦ತನ ದೈವಿಕ ರಕ್ಷಣೆಯನ್ನು ಪಡೆದುಕೊಳ್ಳುವ೦ತಾಗುತ್ತದೆ ಹಾಗೂ ಭಗವಾನ್ ಹನುಮ೦ತನು ಅ೦ತಹ ತನ್ನ ಪರಮಭಕ್ತನು ಜೀವನದಲ್ಲಿ ಯಾವುದೇ ಕಷ್ಟಕಾರ್ಪಣ್ಯಗಳಿಗೆ ಸಿಲುಕದ೦ತೆ ನೋಡಿಕೊಳ್ಳುವುದರ ಮೂಲಕ ಆತನ ಯೋಗಕ್ಷೇಮದ ಹೊಣೆಯನ್ನು ಸ್ವತ: ತಾನೇ ಹೊರುತ್ತಾನೆ.

ಹನುಮಂತ ಕೇವಲ ಶಕ್ತಿ ಮತ್ತು ಶೌರ್ಯದ ದೇವರಷ್ಟೆ ಅಲ್ಲ, ಆತನು ಸಂಕಟ ಬಂದಾಗೆಲ್ಲ ನೆನೆಯುವಂತಹ ದೇವರುಗಳ ಪೈಕಿ ಅಗ್ರಗಣ್ಯನಾದವನು. ಸಮಸ್ಯೆಯ ಸ್ವರೂಪಕ್ಕೆ ಜನರು ಹೆದರಿದಾಗ ಮೊದಲು ನೆನೆಯುವುದು ಆಂಜನೇಯನ ಹೆಸರು, ಮಂತ್ರ ಅಥವಾ ಚಾಲೀಸವನ್ನು. ಆಂಜನೇಯನ ಮಂತ್ರವನ್ನು ಪಠಿಸುವುದರಿಂದ ನಮಗೆ ಹಲವಾರು ಪ್ರಯೋಜನಗಳು ದೊರೆಯುತ್ತವೆ.

ಹನುಮಂತ, ಆಂಜನೇಯ, ಮಾರುತಿ, ವಾಯುಪುತ್ರ ಸೇರಿದಂತೆ ಅನೇಕ ಹೆಸರುಗಳಿಂದ ಕರೆಯುವ ಹನುಮಂತನಿಗೆ ಹೇಳುವ ಮಂತ್ರಗಳಲ್ಲಿ ವಿಭಿನ್ನತೆ ಇರುವುದನ್ನು ನೋಡಬಹುದು. ವಿಭಿನ್ನ ಮಂತ್ರಗಳು ಒಂದೊಂದು ವಿಶೇಷ ಉದ್ದೇಶಗಳಿಗೆ ಪಠಿಸಬೇಕು. ಆಗ ಅಂದುಕೊಂಡ ಆಸೆಗಳು ಹಾಗೂ ಮನದಿಂಗಿತಗಳು ಈಡೇರುತ್ತವೆ ಎಂದು ಹೇಳಲಾಗುವುದು. ಆಂಜನೇಯನು ಶಕ್ತಿ ಮತ್ತು ಚೈತನ್ಯದ ಮೂಲ. ಆದ್ದರಿಂದ ಆತನ ಮಂತ್ರವನ್ನು ಪಠಿಸುವುದರಿಂದ ನಾವು ಎಂತಹದೇ ಸಮಸ್ಯೆಯಲ್ಲಿದ್ದರು, ವಿಶೇಷವಾಗಿ ಆರೋಗ್ಯದ ವಿಚಾರವಾಗಿ ಅಥವಾ ನ್ಯಾಯಕ್ಕಾಗಿ ಹೋರಾಡುವಾಗ ಆಂಜನೇಯನನ್ನು ಸ್ಮರಿಸುತ್ತೇವೆ.

ಮನದ ಈಡೇರಿಕೇಗೆ ಹನುಮಾನ್ ಮಂತ್ರ;

“ಓಂ ಏಮ್ ಹ್ರೀಮ್ ಕ್ಲೀಮ್ ದಿನಂಕಂಪಿ ಧರ್ಮಾತ್ಮ
ಪ್ರೇಮಾಬ್ಧಿ ರಾಮವಲ್ಲಭ ಅಧ್ವೈವಂ ಮಾರುತೇ
ವೀರ ಮೇ ಭ್ಶ್ತೇಹಿ ಸತ್ವರಾಮ್
ಕ್ಲೀಮ್ ಹ್ರೀಮ್ ಏಮ್ ಓಂ.”

ಈ ಮಂತ್ರವನ್ನು ನಿತ್ಯವೂ ಹೇಳಬೇಕು. ಇಲ್ಲವಾದರೆ 108 ಬಾರಿ ಹನುಮಂತನ ನಾಮವನ್ನು ಜಪಿಸುವುದು ಅಥವಾ ಅಷ್ಟೋತ್ತರ ನಾಮಗಳನ್ನು ಪಠಿಸಬೇಕು.

ಓಂ ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಕೇಂದ್ರ.
ಜಾತಕ ವಿಮರ್ಶಕರು.
ಸಚ್ಚಿಂತನೆಯ ಜೋತಿಷ್ಯರು.ಶ್ರೀ ಗಣಪತಿ ಭಟ್
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿಮ್ಮ ಸಮಸ್ಯೆಗಳಾದ,
ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 8088827292

ದುಷ್ಟ ಶಕ್ತಿಗಳನ್ನು ಅಟ್ಟಿಬಿಡುತ್ತದೆ;

ಭಯಾನಕ ಹಾಗೂ ಅಪಾಯಕಾರಿಯಾದ ಭೂತಪ್ರೇತ ಪಿಶಾಚಿಗಳು ಹಾಗೂ ದುಷ್ಟಶಕ್ತಿಗಳ ಬಾಧೆಯನ್ನು ಹೊಡೆದೋಡಿಸುವ ದೇವನೆ೦ದು ಭಗವಾನ್ ಹನುಮನನ್ನು ಪರಿಗಣಿಸಲಾಗಿದೆ. ರಾತ್ರಿಯ ವೇಳೆಯಲ್ಲಿ ಭಯಾನಕ ದು:ಸ್ವಪ್ನಗಳ ಕಾರಣದಿ೦ದ ನೀವು ಒ೦ದು ವೇಳೆ ತೊ೦ದರೆಗೀಡಾಗಿದ್ದಲ್ಲಿ, ನೀವು ನೆಮ್ಮದಿಯಿ೦ದ ನಿದ್ರೆಮಾಡುವ೦ತಾಗಲು, ಹನುಮಾನ್ ಮಂತ್ರ ಪಠಿಸಿ.

ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚುವುದು

ಹನುಮಾನ್ ಮಂತ್ರವನ್ನು ನಿತ್ಯವೂ ಜಪಿಸುವುದರಿಂದ ಜೀವನದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಸಾಲದ ತೊಂದರೆ, ಮಾನಸಿಕ ತೊಂದರೆ ಹಾಗೂ ಸಂಕಟಗಳಂತಹ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಸಹಾಯ ಮಾಡುತ್ತದೆ. ಹನುಮಾನ್ ದೇವರ ಮಂತ್ರವನ್ನು ಗಣನೀಯವಾಗಿ ಜಪಿಸಿದರೆ ವ್ಯಕ್ತಿಗೆ ಆತ್ಮವಿಶ್ವಾಸ ಹಾಗೂ ಧೈರ್ಯವು ಹೆಚ್ಚುವುದು. ಶತ್ರುಗಳನ್ನು ಹತ್ತಿರ ಸುಳಿಯದಂತೆ ಮಾಡುವುದು. ಜೊತೆಗೆ ವ್ಯಕ್ತಿಯು ಸಕಾರಾತ್ಮಕ ಹಾದಿಯಲ್ಲಿ ಜೀವನವನ್ನು ನಡೆಸುವನು. ದೀರ್ಘಾವಧಿಯ ಜೀವನವನ್ನು ನಡೆಸುವುದರ ಮೂಲಕ ಯಶಸ್ಸನ್ನು ಪಡೆದುಕೊಳ್ಳುವರು. ಎಲ್ಲಾ ಕೆಲಸ ಕಾರ್ಯಗಳಲ್ಲೂ ಸಕ್ರಿಯರಾಗಿ ಮತ್ತು ಶಕ್ತಿಯುತರಾಗಿ ಕೆಲಸ ನಿರ್ವಹಿಸುವರು. ಯಾವುದೇ ಬಗೆಯ ಸೋಮಾರಿತನ ಹಾಗೂ ಬೇಸರಕ್ಕೆ ಒಳಗಾಗುವುದಿಲ್ಲ ಎಂದು ಹೇಳಲಾಗುವುದು.

ಹನುಮಾನ್ ದೇವರ ಮಂತ್ರ ಪಠಿಸುವ ನಿಯಮ

ಹನುಮಾನ್ ಮಂತ್ರ ಹಾಗೂ ಪೂಜೆಯನ್ನು ಸಲ್ಲಿಸುವಾಗ ಕೆಲವು ಮುನ್ನೆಚ್ಚರಿಕೆ ಕ್ರಮ ಹಾಗೂ ನಿಯಮಗಳನ್ನು ಅನುಸರಿಸಬೇಕು. ಮಂತ್ರಗಳನ್ನು ಪಠಿಸುವಾಗ ಕೆಂಪು ಚಂದನದ ಜಪಮಾಲೆ ಅಥವಾ ಕೆಂಪು ಹವಳದ ಜಪ ಮಾಲೆಯನ್ನು ಬಳಸಬೇಕು. ಕೆಂಪು ಬಟ್ಟೆಯನ್ನು ಧರಿಸಿ, ಕೆಂಪು ಬಣ್ಣದ ಆಸನದ ಮೇಲೆ ಕುಳಿತುಕೊಳ್ಳಬೇಕು. ಹನುಮಾನ್ ದೇವರಿಗೆ ಕೆಂಪು ಬಣ್ಣದ ಹಣ್ಣು ಹಾಗೂ ಹೂವನ್ನು ಅರ್ಪಿಸಬೇಕು. ಮಂತ್ರವನ್ನು ಅಮೃತ್ ಸಿದ್ಧಿ ಯೋಗದ ಸಿದ್ಧಿ ಮುಹೂರ್ತದಲ್ಲಿ ಜಪಿಸಿದರೆ ಅತ್ಯುತ್ತಮವಾದದ್ದು.

ದೇವರ ರೂಪ ಹನುಮಂತ

ಹನುಮಾನ್ ದೇವರನ್ನು ವಿಷ್ಣು ಮತ್ತು ಶಿವನ ಸಾಕಾರವೆಂದು ಪರಿಗಣಿಸಲಾಗುತ್ತದೆ. ಹುನುಮಂತನಿಗೆ ಪೂಜೆ ಹಾಗೂ ಮಂತ್ರವನ್ನು ಸಲ್ಲಿಸಿದರೆ ದೇವತೆಗಳಿಗೆ ಸುಲಭವಾಗಿ ತಲುಪುವುದು. ಭಕ್ತಿ ಭಾವದಿಂದ ಕೈಗೊಂಡ ಪೂಜೆ ಹಾಗೂ ಮಂತ್ರಗಳನ್ನು ಹುಮಂತನು ಅತ್ಯಂತ ಪ್ರೀತಿಯಿಂದ ಸ್ವೀಕರಿಸುತ್ತಾನೆ. ತನ್ನ ಭಕ್ತರಿಗೆ ಉತ್ತಮ ಶಕ್ತಿ ಹಾಗೂ ಅದೃಷ್ಟವನ್ನು ಕರುಣಿಸುವನು ಎಂದು ಹೇಳಲಾಗುವುದು. ತನ್ನ ಭಕ್ತರ ಬಗ್ಗೆ ಸರಳ ಹಾಗೂ ಸಹಾನು ಭೂತಿಯನ್ನು ಹೊಂದುವನು. ಜೊತೆಗೆ ಅಗತ್ಯವಾದ ಸಹಾಯ ಹಾಗೂ ಧೈರ್ಯವನ್ನು ನೀಡುವುದರ ಮೂಲಕ ಅವರ ಜೀವನ ಉತ್ತಮ ಫಲಗಳಿಂದ ಕೂಡಿರುವಂತೆ ಮಾಡುವನು.

Vishwa News 24

Recent Posts

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

11 hours ago

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ – vishwanews24

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…

12 hours ago

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ – vishwanews24

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…

13 hours ago

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು – vishwanews24

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…

13 hours ago

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ – vishwanews24

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…

14 hours ago

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ – vishwanews24

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…

14 hours ago