ಕಾಪು: ಉಡುಪಿ ಜಿಲ್ಲಾ ಜೆಡಿಎಸ್ ನ ಜಿಲ್ಲಾಧ್ಯಕ್ಷರಾದ ಯೋಗಿಶ್ ಶೆಟ್ಟಿಯವರಿಗೆ ಪಲಿಮಾರು ಹಿರಿಯ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಗಳು ಲಾಕ್-ಡೌನ್ ಸಂತ್ರಸ್ತರಿಗೆ ವಿತರಿಸಲು ಕಿಟ್ ಹಸ್ತಾಂತರ ಕಾರ್ಯಕ್ರಮ ಪಲಿಮಾರು ಮಠದಲ್ಲಿ ನಡೆಯಿತು.
ಈ ಸಂಧರ್ಭದಲ್ಲಿ ಶ್ರೀಗಳು ಮಾತಾಡಿ ” ಕೊರೋನಾ ಎಂಬ ಮಹಮಾರಿಯನ್ನು ಸರ್ಕಾರದ ಆದೇಶ ಪಾಲಿಸುವ ಮೂಲಕ ಹತೋಟಿಗೆ ತರಲು ಪ್ರಯತ್ನಿಸಬೇಕು,ಒಂದು ಹೊತ್ತು ಊಟ ನೀಡುವುದರಿಂದ ಒಪ್ಪೊತ್ತಿನ ಹಸಿವು ನೀಗಿಸಬಹುದು ಆದರೆ ಈ ತರಹ ಕಿಟ್ ವಿತರಣೆ ಮಾಡಿದರೆ ಅದು ಕೆಲ ದಿನಗಳ ಊಟಕ್ಕೆ ವ್ಯವಸ್ಥೆ ಆಗುತ್ತದೆ ಮತ್ತು ಯೋಗಿಶ್ ಶೆಟ್ಟಿಯವರಿಗೆ ಕಿಟ್ ವಿತರಿಸಿರುವುದರಿಂದ ಅದು ಅರ್ಹರಿಗೆ ತಲುಪುತ್ತೆ ಎಂದರು.”
ಯೋಗಿಶ್ ಶೆಟ್ಟಿ ಬಾಲಾಜಿ ಮಾತಾಡಿ” ಪಲಿಮಾರು ಶ್ರೀಗಳ ಸಾಮಾಜಿಕ ಸೇವೆಯು ಸಮಾಜದಲ್ಲಿ ಆದರ್ಶಪ್ರಾಯವಾಗಿದೆ ಮತ್ತು ಆಪತ್ಕಾಲದಲ್ಲಿ ಸಮಾಜಕ್ಕೆ ಸ್ಪಂದಿಸುವ ಶ್ರೀಗಳ ಸೇವೆ ಶ್ಲಾಘನೀಯ ಎಂದರು.
ಈ ಹಿಂದೆ ಯೋಗಿಶ್ ಶೆಟ್ಟಿಯವರು ಸುಮಾರು 600 ಕುಟುಂಬಗಳಿಗೆ ವೈಯಕ್ತಿಕ ಕಿಟ್ ವಿತರಣೆ ಮಾಡಿದ್ದರು.
ಈ ಸಂಧರ್ಭದಲ್ಲಿ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಉದಯ ಹೆಗ್ಡೆ,ರಾಜ್ಯ ಅಲ್ಪಸಂಖ್ಯಾತ ಕಾರ್ಯದರ್ಶಿ ಇಸ್ಮಾಯಿಲ್ ಪಲಿಮಾರು, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ್ ಆಚಾರ್ಯ, ಶ್ರೀಕಾಂತ್ ಹೆಬ್ರಿ,ಸಮಾಜ ಸೇವಕ ರಘರಾಮ್ ಶೆಟ್ಟಿ ಕೊಪ್ಪಲಂಗಡಿ ಉಪಸ್ಥಿತರಿದ್ದರು
ಬೆಂಗಳೂರಿಗರೇ ಗಮನಿಸಿ: ನೂತನ ಸಿಎಂ ಆಗಿ ಡಿ.ಕೆ.ಶಿ ಪದಗ್ರಹಣದ ಹಿನ್ನೆಲೆ ನಾಳೆ ನಗರದ ಈ ರಸ್ತೆಗಳ ಸಂಚಾರದಲ್ಲಿ ಮಾರ್ಪಾಡು ಬೆಂಗಳೂರು:…
BREAKING : ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ `ಕೆ.ಅಣ್ಣಾಮಲೈ’ ರಾಜೀನಾಮೆ ಚೆನ್ನೈ: ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು…
ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚಾರಕ್ಕೂ ಮುನ್ನ ಗಮನಿಸಿ: ಜೂನ್ 15 ರಿಂದ ಹೊಸ ವೇಳಾಪಟ್ಟಿ ಜಾರಿಗೆ ಮುಂಬೈ: ಮುಂಬರುವ ಮುಂಗಾರು…
ಯಾವುದೇ ಹುದ್ದೆಯ ಆಕಾಂಕ್ಷೆ ಹೊಂದಿಲ್ಲ ; ನನಗೆ ಖಾತೆ ಮುಖ್ಯವಲ್ಲ , ಕೆಲಸ ಮುಖ್ಯ : ಯುಟಿ ಖಾದರ್ ಮಂಗಳೂರು:…
ಕಠಿಣ ಕಾನೂನು ಕ್ರಮ ಕೈಗೊಳ್ಳದ ಕಾರಣ ಅಪರಾಧವೆಸಗುವುದು ಸುಲಭವಾಗಿದೆ .. ಬೆಂಗಳೂರು: ಕೈ-ಕಾಲು ಕತ್ತರಿಸುವಂತಹ ಶಿಕ್ಷೆ ವಿಧಿಸಿದರೆ ಮಾತ್ರ ಜನರು…
ವಿದ್ಯಾರ್ಥಿ ನಾಯಕನಿಂದ, ಸಿಎಂ ಗದ್ದುಗೆವರೆಗೆ ಡಿಕೆಶಿ ರೋಚಕ ಪಯಣ ಬೆಂಗಳೂರು: ರಾಜ್ಯದ ನೂತನ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು…