Featured

ತಮಿಳುನಾಡಿನಲ್ಲಿ ಕಮಲ ಅರಳಿಸಲಿದ್ದಾರೆ ರಜನಿಕಾಂತ್..

ಮಿಳುನಾಡಿನಲ್ಲಿ ಡಿಎಂಕೆ ಪಕ್ಷದ ನಾಯಕ ಕರುಣಾ ನಿಧಿ ಸಾವನ್ನಪ್ಪಿದ ಬೆನ್ನಲ್ಲೇ ಅಲ್ಲಿನ ರಾಜಕೀಯ ಚಿತ್ರಣಗಳ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗಳಾಗುತ್ತಿದೆ. ಕರುಣಾನಿಧಿ ಸಾವಿನಿಂದ ತಮಿಳುನಾಡಿನ ರಾಜಕೀಯ ಅವಕಾಶಗಳಿಂದ ತುಂಬಿ ತುಳುಕುತ್ತಿವೆ. ಈವರೆಗೂ ತಮಿಳುನಾಡಿನಲ್ಲಿ ಒಂದು ಹಂತದ ಹವಾ ಸೃಷ್ಟಿಸಿದ್ದ ಕಲೈಗ್ನರ್ ಈಗ ಅಸ್ತಂಗತರಾಗಿದ್ದು ಈಗ ಅನೇಕ ರಾಜಕೀಯ ಪಕ್ಷಗಳಿಗೆ ಬಾಗಿಲು ತೆರೆದಂತಾಗಿದೆ.

ತಮಿಳು ನಾಡಿನ ಜನತೆ ಅಮ್ಮಾ ಎಂದು ಕರೆಯುತ್ತಿದ್ದ ಜಯಲಲಿತಾನೂ ಇಲ್ಲ ಅಯ್ಯ ಎಂದು ಕರೆಯುತ್ತಿದ್ದ ಕರುಣಾ ನಿಧಿನೂ ಇಲ್ಲ. ಹೀಗಾಗಿ ಹಿರಿತಲೆಗಳು ಯಾವುದೂ ಇಲ್ಲವಾಗಿದ್ದು ಹೊಸ ತಲೆಮಾರಿನ ನಾಯಕತ್ವಗಳು ಉದಯಗೊಳ್ಳುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ. ಹೀಗಾಗಿ ಮುಂದಿನ ರಾಜಕೀಯದ ಕಿಂಗ್ ಮೇಕರ್ ಯಾರು ಎಂಬ ಪ್ರಶ್ನೆಯೂ ಮೂಡಿದೆ.

ಈ ಹಿಂದಿನ ಎಲ್ಲಾ ರಾಜಕೀಯ ಸ್ಥಿತಿಗತಿಗಳನ್ನು ಕಂಡಾಗ ತಮಿಳುನಾಡಿನಲ್ಲಿ ಸಿನಿಮಾ ರಂಗದ ದಿಗ್ಗಜರೇ ಆಡಳಿತದ ಚುಕ್ಕಾಣಿ ಹಿಡಿದಿದ್ದು ಅನೇಕ ದಶಕಗಳಿಂದ ಸಿನಿ ನಾಯಕರೇ ಮುಖ್ಯಮಂತ್ರಿಗಳೂ ಆಗಿದ್ದಾರೆ. ಕುರುಣಾ ನಿಧಿ, ಎಮ್.ಜಿ.ಆರ್., ಜಯಲಲಿತಾ ಸೇರಿದಂತೆ ಅನೇಕ ಸಿನಿ ನಾಯಕರು ತಮಿಳುನಾಡನ್ನು ಆಳಿದ್ದಾರೆ. ಇದೀಗ ಮುಂದಿನ ಸರದಿ ಯಾರದ್ದು ಎಂಬ ಪ್ರಶ್ನೆಯೂ ತಮಿಳು ಮಾತ್ರವಲ್ಲದೆ ರಾಷ್ಟ್ರೀಯ ರಾಜಕೀಯದಲ್ಲೂ ಮೂಡುತ್ತಿದೆ.

ಇದೀಗ ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ನಟ ರಜನಿ ಕಾಂತ್ ಅವರ ಹವಾ ಸಖತ್ತಾಗಿಯೇ ವರ್ಕೌಟ್ ಆಗುತ್ತಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ರಜನೀ ಪಾತ್ರ ತುಂಬಾನೇ ಮುಖ್ಯವಾಗಿದೆ. ಅಮ್ಮನಿಲ್ಲದೆ ಅಲ್ಲೋಲ ಕಲ್ಲೋಲವಾಗಿರುವ ಎ.ಐ.ಡಿ.ಎಂ.ಕೆ. ಪಕ್ಷ ಇದೀಗ ರಜನಿಕಾಂತ್ ಗಾಗಿ ಮುಕ್ತ ಅವಕಾಶ ನೀಡುತ್ತಿದೆ ಎಂದು ಹೇಳಲಾಗುತ್ತಿದೆ. ಎ.ಐ.ಡಿ.ಎಂ.ಕೆ. ಈಗಾಗಲೇ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡುವ ಕುರಿತು ಚರ್ಚಿಸಿದ್ದೂ ಹಾಗೂ ಇದು ಸಫಲವಾಗುವ ಲಕ್ಷಣಗಳೂ ಎದ್ದುಕಾಣುತ್ತಿದೆ. ರಜನಿ ಕಾಂತ್ ಈಗಾಗಲೇ ರಾಜಕೀಯ ಪ್ರವೇಶದ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿದ್ದು ಮುಂದಿನ ದಿನಗಳಲ್ಲಿ ಹೊಸ ಪಕ್ಷವನ್ನೂ ಕಟ್ಟುವ ಸೂಚನೆ ನೀಡಿದ್ದರು. ಆದರೆ ಹಿಂದಿನಿಂದಲೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಹತ್ತಿರವಾಗಿದ್ದ ರಜನಿ ತಮಿಳು ನಾಡಿನ ರಾಜಕೀಯ ರಂಗದಲ್ಲೂ ಮೋದಿಗೆ ಜೈ ಎನ್ನುವ ಸಾಧ್ಯತೆಗಳೂ ಹೆಚ್ಚಾಗಿದೆ.

2004ರಲ್ಲಿ ತಾನು ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕುತ್ತೇನೆ ಎಂದು ತಮಿಳು ತಲೈವಾ ರಜನಿಕಾಂತ್ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಅಂದಿನಿಂದ ಇಂದಿನವರೆಗೂ ಭಾರತೀಯ ಜನತಾ ಪಕ್ಷದ ವಿಚಾರದಲ್ಲಿ ರಜನಿ ಒಮ್ಮತವನ್ನು ಸೂಚಿಸುತ್ತಲೇ ಬಂದಿದ್ದರು. 2014ರಲ್ಲಿ ತನ್ನ ಆತ್ಮೀಯ ಸ್ನೇಹಿತ ಮೋದಿ ಪ್ರಧಾನಿಯಾದ ನಂತರವಂತೂ ಬಿಜೆಪಿ ಕಡೆ ಆಕರ್ಷಣೆ ಹೆಚ್ಚಾಗಿತ್ತು. ಆದರೆ ತಮಿಳುನಾಡಿನಲ್ಲಿ ಬಿಜೆಪಿ ಅಸ್ತಿತ್ವ ಕಡಿಮೆಯಾಗಿದ್ದರಿಂದ ರಾಜಕೀಯ ಪ್ರವೇಶದ ಅಧಿಕೃತ ಘೋಷಣೆ ಮಾಡಿ ನಂತರ ಯಾವ ಪಕ್ಷ ಎಂದು ಘೋಷಿಸದೆ ತಟಸ್ಥರಾಗಿದ್ದರು.

ಜಯಲಲಿತಾ ಇರುವವರೆಗೂ ತಮಿಳುನಾಡಿನಲ್ಲಿ ಎಲ್ಲವೂ ಅಮ್ಮನದ್ದೇ ಲೀಲೆ. ಆದರೆ ಈಗ ಹಾಗಿಲ್ಲ. ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ 39ರಲ್ಲಿ 37 ಸ್ಥಾನಗಳನ್ನು ಎ.ಐ.ಡಿ.ಎಂ.ಕೆ. (ಜಯಲಲಿತಾ ಪಕ್ಷ) ಹೊಂದಿತ್ತು. ಹಾಗೂ ಭಾರತೀಯ ಜನತಾ ಪಕ್ಷ ಒಂದು ಹಾಗೂ ಇತರೆ ಒಂದು ಸ್ಥಾನಗಳನ್ನು ಹೊಂದಿತ್ತು. ಆ ಚುನಾಣೆಯಲ್ಲಿ ಡಿಎಂಕೆ ಪಕ್ಷ ಒಂದೂ ಸ್ಥಾನಗಳನ್ನು ಗೆಲ್ಲಲು ಅಶಕ್ತವಾಗಿತ್ತು. ಮತ್ತೆ ಮತ್ತೆ ಸೋಲಿನಿಂದ ಡಿಎಂಕೆ ಪಕ್ಷ ಕಂಗೆಟ್ಟು ಹೋಗಿತ್ತು. ಎ.ಐ.ಡಿ.ಎಂ.ಕೆ. ಪಕ್ಷ ಮೇಲುಗೈ ಸಾಧಿಸಿತ್ತು. ಆದರೆ ಇದೀಗ ಎ.ಐ.ಡಿ.ಎಂ.ಕೆ. ಸಮರ್ಥವಾಗಿಲ್ಲ. ಮನೆಯೊಂದು ಮೂರು ಬಾಗಿಲಿನಂತಾಗಿರುವ ಈ ಪಕ್ಷ ದಾರಿ ತಪ್ಪಿದೆ. ಈ ಪಕ್ಷ ಇನ್ನಷ್ಟು ಸಧೃಢವಾಗಿರಬೇಕು ಹಾಗೂ ಮುಂದಿನ ಬಾರಿಯೂ ಅಧಿಕಾರ ಹಿಡಿಯಬೇಕೆಂದರೆ ಭಾರತೀಯ ಜನತಾ ಪಕ್ಷದ ಬೆಂಬಲ ಬೇಕಾಗುತ್ತದೆ. ಹಾಗೂ ಇದಕ್ಕೆ ರಜನಿಕಾಂತ್ ಅವರೂ ಬೆಂಬಲ ನೀಡಿದ್ದೇ ಆದಲ್ಲಿ ಮೋದಿ ಅಲೆ ತಮಿಳುನಾಡಿನಲ್ಲೂ ಮೋಡಿ ಮಾಡೋದ್ರಲ್ಲಿ ಅಚ್ಚರಿಯಿಲ್ಲ.

ತನ್ನದೇ ಪಕ್ಷದ ಸೈನ್ಯವನ್ನು ಕಮಲ ಪಾಳಯ ಸಂಘಟಿಸುತ್ತಿದೆ. ತಮಿಳುನಾಡಿನ ಪುದುಚೇರಿಯಲ್ಲಿ ಈಗಾಗಲೇ 10000 ಕಾರ್ಯಕರ್ತರನ್ನು ಸಂಘಟಿಸಿ ಬೂತ್ ಸಬಲೀಕರಣದತ್ತ ಬಿಜೆಪಿ ಪಕ್ಷವನ್ನು ಸಂಘಟಿಸುತ್ತಿದೆ. ಡಿಎಂಕೆ ಪಕ್ಷದ ನಾಯಕ, ಕರುಣಾ ನಿಧಿಯವರ ಮಗ ಸ್ಟಾಲಿನ್ ಇದ್ದರೂ ಬಿಜೆಪಿ ಹಾಗೂ ರಜನಿಕಾಂತ್ ಒಂದಾದರೆ ಅವರನ್ನು ಎದುರಿಸೋದು ಕಷ್ಟ. ರಜನಿಕಾಂತ್‍ಗೂ ಒಬ್ಬಂಟಿಯಾಗಿ ಪಕ್ಷವನ್ನು ಗೆಲ್ಲಿಸೋದು ಸುಲಭದ ಮಾತಲ್ಲ. ಅತ್ತ ಕಮಲ್ ಹಸನ್ ಪಕ್ಷ ಸಂಘಟಿಸುತ್ತಿದ್ದರೂ ಅವರ ಮೇಲೆ ಜನರಿಗೆ ಉತ್ತಮ ಅಭಿಪ್ರಾಯವಿಲ್ಲ. ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಕಮಲ್ ಹಸನ್ ಜನರಿಂದ ದೂರವಾಗಿದ್ದಾರೆ. ಆದರೆ ರಜನಿಕಾಂತ್ ಮಾತ್ರ ನರೇಂದ್ರ ಮೋದಿ ರೀತಿಯ ನಡವಳಿಕೆಯಿಂದ ಹೆಸರಾಗಿದ್ದಾರೆ. ಹೀಗಾಗಿ ಇಂತಹಾ ನಾಯಕ ಬೇಕು ಎಂದು ಜನರೂ ಅಪೇಕ್ಷಿಸುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಬಿಜೆಪಿ ಹಾಗೂ ರಜನಿಕಾಂತ್ ಒಂದಾದರೆ ತಮಿಳುನಾಡಿನಲ್ಲಿ ಮತ್ತೊಂದು ರಾಜಕೀಯ ಕ್ರಾಂತಿಗೂ ಒಳಗಾಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿದೆ.

Vishwa News 24

Recent Posts

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು – vishwanews24

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…

12 hours ago

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ – vishwanews24

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …

12 hours ago

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ – vishwanews24

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…

12 hours ago

ಮುಂಬೈನಲ್ಲಿ ಮುಂಗಾರು: ರೈಲು ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳು ಜಲಾವೃತ – vishwanews24

ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…

15 hours ago

ಜೂ.25 ರಂದು ಮಂಗಳೂರಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ – vishwanews24

ಜೂ.25ಕ್ಕೆ ಮಂಗಳೂರಿಗೆ ಶಾರುಖ್ ಖಾನ್: ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರು: ಬಾಲಿವುಡ್ ನ ಖ್ಯಾತ ನಟ ಹಾಗೂ…

16 hours ago

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು – vishwanews24

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು ರಾಯಚೂರು: ಜಿಲ್ಲೆಯ ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್‌ಟೇಬಲ್…

16 hours ago