Featured

ತಾಂಬೂಲ ಶಾಸ್ತ್ರದಲ್ಲಿ ವೀಳ್ಯದೆಲೆ ಮತ್ತು ಅಡಿಕೆ ಕೊಳೆತು ಹೋಗಿದ್ದರೆ..?? ಹಿಂದೂ ಪದ್ಧತಿಯಲ್ಲಿರುವ ತಾಂಬೂಲ ಶಾಸ್ತ್ರದ ಬಗ್ಗೆ ತಿಳಿದುಕೊಳ್ಳಬೇಕಾದ ಒಳಿತು ಕೆಡುಕುಗಳು – Vishwanews24

ತಾಂಬೂಲ ಶಾಸ್ತ್ರದಲ್ಲಿ ವೀಳ್ಯದೆಲೆ ಮತ್ತು ಅಡಿಕೆ ಕೊಳೆತು ಹೋಗಿದ್ದರೆ..??

ಹಿಂದೂ ಪದ್ಧತಿಯಲ್ಲಿರುವ ತಾಂಬೂಲ ಶಾಸ್ತ್ರದ ಬಗ್ಗೆ ತಿಳಿದುಕೊಳ್ಳಬೇಕಾದ ಒಳಿತು ಕೆಡುಕುಗಳು

ಭಾರತೀಯ ಸಂಪ್ರದಾಯದಲ್ಲಿ ತಾಂಬೂಲಕ್ಕೆ ಪ್ರಮುಖ ಸ್ಥಾನ ನೀಡಲಾಗಿದೆ. ನಿಶ್ಚಿತಾರ್ಥ, ಮದುವೆ, ಪೂಜೆ, ವ್ರತ, ಶುಭ ಸಮಾರಂಭಗಳಲ್ಲಿ ತಾಂಬೂಲ ಇರಲೇಬೇಕು. ಹಿಂದೆ ಯುದ್ಧದ ಸಂದರ್ಭದಲ್ಲಿ ರಣ ವೀಳ್ಯ ನೀಡುವಲ್ಲಿ ವೀಳ್ಯದೆಲೆ ಬಳಕೆಯಾಗುತ್ತಿತ್ತು ಎಂದು ಉಲ್ಲೇಖವಿದೆ. ಊಟವಾದ ಬಳಿಕ ಎಲೆ-ಅಡಿಕೆ ತಿನ್ನಬೇಕೆಂಬ ಸಂಪ್ರದಾಯವಿದೆ. ಹೀಗಾಗೇ ಮನೆಗೆ ಬಂದ ಅತಿಥಿಗಳಿಗೆ ಮೊದಲು ಕುಡಿಯಲು ನೀರು ಕೊಟ್ಟು, ಊಟ ಬಡಿಸಿ ನಂತರ ತಾಂಬೂಲ ನೀಡುವ ಪದ್ಧತಿ ಇಂದಿಗೂ ಕೆಲವೊಂದು ಕಡೆ ಆಚರಣೆಯಲ್ಲಿದೆ.

ತಾಂಬೂಲದಲ್ಲಿ ವೀಳ್ಯದೆಲೆಯ ಪಾತ್ರ ಮಹತ್ತರವಾದುದು. ವೀಳ್ಯದೆಲೆ ತುದಿಯಲ್ಲಿ ಲಕ್ಷ್ಮೀವಾಸವಾಗಿರ್ತಾಳೆ. ವೀಳ್ಯದೆಲೆ ಬಲಭಾಗದಲ್ಲಿ ಬ್ರಹ್ಮ ದೇವರ ವಾಸ, ವೀಳ್ಯದೆಲೆ ಮಧ್ಯದಲ್ಲಿ ಸರಸ್ವತಿ ದೇವಿ, ವೀಳ್ಯದೆಲೆ ಎಡಭಾಗದಲ್ಲಿ ಪಾರ್ವತಿ ದೇವಿ, ವೀಳ್ಯದೆಲೆಯ ಸಣ್ಣದಂಟಿನಲ್ಲಿ ಮಹಾವಿಷ್ಣುವಿನ ವಾಸ, ವೀಳ್ಯದೆಲೆ ಹಿಂಭಾಗದಲ್ಲಿ ಚಂದ್ರ ವಾಸ, ವೀಳ್ಯದೆಲೆಯ ಎಲ್ಲಾ ಮೂಲೆಗಳಲ್ಲಿ ಪರಮೇಶ್ವರನ ವಾಸ, ವೀಳ್ಯದೆಲೆಯ ಬುಡದಲ್ಲಿ ಮೃತ್ಯುದೇವತೆಯ ವಾಸವಿರುತ್ತೆ.

ತಾಂಬೂಲ ಕೊಡುವಾಗ 2 ವೀಳ್ಯದೆಲೆ, ಅಡಿಕೆ, 2 ಬಗೆಯ ಹಣ್ಣುಗಳು, 1 ನಾಣ್ಯ, ಅರಶಿನದಿಂದ ತಯಾರಿಸಿದ ಅಕ್ಷತೆಗಳು ಇವಿಷ್ಟನ್ನು ಇಟ್ಟು ಕೊಡಬೇಕು.ಹಾಗೇ ವೀಲ್ಯದೆಲೆಯಲ್ಲಿ ದೇವಾನಿದೇವತೆಗಳು ನೆಲೆಸಿರುತ್ತಾರೆ. ಆದರೆ ಅದರ ತೊಟ್ಟಿನಲ್ಲಿ ದರಿದ್ರ ಲಕ್ಷ್ಮೀ ನೆಲೆಸಿರುವುದರಿಂದ ತಾಂಬೂಲ ಕೊಡುವಾಗ ವೀಳ್ಯದೆಲೆ ತೊಟ್ಟನ್ನು ಮುರಿದು ಕೊಡಬೇಕು. ಈ ನಿಯಮ ಪಾಲಿಸಿದರೆ ನಿಮಗೆ ತಾಂಬೂಲ ನೀಡುವುದರ ಸಂಪೂರ್ಣ ಫಲ ದೊಕುತ್ತದೆ.
ತಾಂಬೂಲ ಹಾಕಿಕೊಳ್ಳುವಾಗ ತುದಿ ಭಾಗ ತೆಗೆದು ಹಾಕಿಕೊಳ್ಳಲಾಗುತ್ತೆ. ವೀಳ್ಯದೆಲೆ ತೊಟ್ಟಿನಲ್ಲಿ ಅಹಂಕಾರ ದೇವತೆ ಹಾಗೂ ದಾರಿದ್ರ್ಯಲಕ್ಷ್ಮೀ ಇರುತ್ತಾರೆ. ಆದುದರಿಂದಲೇ ವೀಳ್ಯದೆಲೆ ಹಾಕಿಕೊಳ್ಳುವವರು ತೊಟ್ಟನ್ನು ಮುರಿದು ಹಾಕ್ತಾರೆ. ವೀಳ್ಯದೆಲೆ ಮಧ್ಯಭಾಗದ ನಂತರ ಮನ್ಮಥನ ವಾಸ. ಈ ಎಲ್ಲಾ ದೇವರುಗಳು ಇರೋದ್ರಿಂದಲೇ, ವೀಳ್ಯದೆಲೆ ತಾಂಬೂಲಕ್ಕೆ ಇಷ್ಟೊಂದು ಮಹತ್ವವಿದೆ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಮನೆಗೆ ಬಂದ ಅತಿಥಿಗಳಿಗೆ ತಾಂಬೂಲ ಕೊಡುವ ಪದ್ಧತಿ ಇದೆ. ಇದು ಹಿಂದೂ ಧರ್ಮದ ಹಲವು ಸಂಸೃತಿಯಲ್ಲಿ ಒಂದಾಗಿದೆ. ನಾವು ಪೂಜಿಸುವ ಆಂಜನೇಯನಿಗೆ ವೀಳೆದೆಯಲ್ಲಿ ಹರಕೆ ಹಾಗೂ ಪೂಜೆಗಳನ್ನ ನೆರವೇರಿಸುವುದರಿಂದ ನಮ್ಮ ಹಲವು ಸಮಸ್ಯೆಗಳಿಗೆ ಒಳ್ಳೆಯ ಪರಿಹಾರಗಳು ದೊರೆಯುತ್ತವೆ. ಆದರೆ ಈ ತಾಂಬೂಲವನ್ನು ಕೊಡುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು.ಇಲ್ಲವಾದರೆ ದಾರಿದ್ರ್ಯ ಬೆನ್ನುಹತ್ತುತ್ತದೆ.

 

ತಾಂಬೂಲದ ಬಗ್ಗೆ ಅವಶ್ಯವಾಗಿ ತಿಳಿದುಕೊಳ್ಳಬೇಕಿರುವ ವಿಷಯಗಳು..

1.ವೀಳ್ಯದೆಲೆಯ ತಾಂಬೂಲ ಕೊಡುವಾಗ ವೀಳ್ಯದೆಲೆ ಹರಿದು ಹೋಗಿದೆ ಏನೂ ಅಂದುಕೊಳ್ಳಬೇಡಿ ಅಂತ ಬರೀ ಹಣ್ಣು ಅಥವಾ ತೆಂಗಿನ ಕಾಯಿಯನ್ನು ಕೊಟ್ಟರೆ. ನೀವು ಮಾಡುವ ಕಾರ್ಯಗಳಿಗೆ ತುಂಬಾ ಅಡಚಣೆ ಉಂಟಾಗುತ್ತದೆ. ಶುಭ ಕಾರ್ಯಗಳಿಗೆ ತುಂಬಾ ತೊಂದರೆಗಳಾಗುತ್ತವೆ .ಜನರ ಸಹಾಯ ದೊರೆಯುವುದಿಲ್ಲ. ಹಣಕಾಸಿಗೆ ಪರದಾಡಬೇಕಾಗುತ್ತದೆ.

2. ಎಲೆಯನ್ನು ಬಿಟ್ಟು ಬರಿಹಣ್ಣು ಅಥವಾ ತೆಂಗಿನ ಕಾಯಿಯನ್ನ ನೀಡಿದರೆ ನೀವು ಮಾಡುವ ಶುಭಕಾರ್ಯಗಳಲ್ಲಿ ವಿಘ್ನಗಳಾಗುತ್ತವೆ ಜನರ ಸಹಾಯ ದೊರೆಯುವುದಿಲ್ಲ

3.ಯಾರಾದರೂ ಕೊಟ್ಟ ತಾಂಬೂಲವನ್ನು ದೇವರಿಗೆ ಸಮರ್ಪಿಸಿದೆ ಯಾವುದೋ ಮೂಲೆಯಲ್ಲಿ ಇಟ್ಟು ಬಿಟ್ಟರೆ ಸಮಾಜದಲ್ಲಿ ಬಂಧುಗಳಲ್ಲಿ ಗೌರವ ಕಳೆದುಕೊಳ್ಳುತ್ತಾರೆ. ಮಕ್ಕಳಿಗೆ ಮರೆವಿನ ರೋಗ ಬರುತ್ತದೆ.

4.ನೀವು ಕೊಡುವ ವೀಳೇದೆಲೆ ಒಣಗಿದ್ದರೆ ನಿಮಗೆ ತುಂಬಾ ನಷ್ಟವಾಗುತ್ತದೆ ಅನಾರೋಗ್ಯ ನಿಮ್ಮನ್ನ ಕಾಡುತ್ತದೆ.

5.ತಾಂಬೂಲವನ್ನು ಕೊಡುವಾಗ ವಿಳ್ಳೇದೆಲೆ ಮತ್ತು ಅಡಿಕೆ ಕೊಳೆತು ಹೋಗಿದ್ದರೆ ದರಿದ್ರರಾಗುತ್ತಾರೆ, ಹಾಗೂ ಸಾಲದ ಸಮಸ್ಯೆ ಜಾಸ್ತಿಯಾಗುತ್ತದೆ.

6.ಯಾರಾದರೂ ತಾಂಬೂಲ ಕೊಟ್ಟಾಗ ಮನೆಗೆ ತರದೇ ಎಲ್ಲಿಯಾದರೂ ಬಿಟ್ಟು ಬಂದರೆ ನಿಮ್ಮ ಕಾರ್ಯಗಳಿಗೆ ತುಂಬಾ ನಿಧಾನವಾಗುತ್ತವೆ. ವಿವಾಹ ಕಾರ್ಯಗಳಿಗೆ ತುಂಬಾ ಅಡಚಣೆಗಳು ಉಂಟಾಗುತ್ತದೆ. ಶುಭ ಕಾರ್ಯಗಳು ನಿಧಾನವಾಗುತ್ತವೆ.

7. ತಾಂಬೂಲ ಕೆಳಗೆ ಬಿದ್ದರೆ ಮಾಡುವ ಕಾರ್ಯಗಳು ಅರ್ಧಕ್ಕೆ ನಿಂತು ಹೋಗುತ್ತವೆ.

8.ತಾಂಬೂಲ ಕೊಡುವಾಗ ವೀಳ್ಯದೆಲೆ ಮತ್ತು ಅಡಿಕೆ ಕೊಳೆತು ಹೋಗಿದ್ದರೆ ದರಿದ್ರರಾಗುತ್ತಾರೆ. ಸಾಲದ ಸಮಸ್ಯೆ ಜಾಸ್ತಿಯಾಗುತ್ತದೆ.

ತಾಂಬೂಲ ನೀಡುವ ಬಗೆ ಹೇಗೆ:
ಶುಭ ಸಮಾರಂಭಗಳಲ್ಲಿ, ಹಬ್ಬ, ಪೂಜೆ ವ್ರತಗಳನ್ನು ಆಚರಿಸಿದವರು ತಾಂಬೂಲ ನೀಡುವ ಆಚರಣೆ ಇದೆ. ಹೀಗೆ ತಾಂಬೂಳ ನೀಡುವಾಗ ಮೊದಲು ಮುತ್ತೈದೆಯರಿಗೆ ಅರಿಶಿನ, ಕುಂಕುಮ ನೀಡಬೇಕು. ನಂತರ ತಾಂಬೂಲ ನೀಡುವಾಗ ವೀಳ್ಯದೆಲೆಯ ತುದಿ ಹಾಗೂ ಬಾಳೆಹಣ್ಣಿನ ತುದಿ ನಮ್ಮ ಕಡೆಯಲ್ಲಿರಬೇಕು.

ವೀಳ್ಯೆದೆಲೆಯನ್ನು ಮೂರು ಅಥವಾ ಐದರ ಸಂಖ್ಯೆಯಲ್ಲಿ ಹಾಗೆಯೇ ಅಡಿಕೆಯನ್ನು, ಹಣ್ಣನ್ನು ಎರಡರ ಸಂಖ್ಯೆಯಲ್ಲಿಡಬೇಕು. ತಾಂಬೂಲದಲ್ಲಿ ಯಾವುದಾದರೂ ಒಂದು ಹಣ್ಣನ್ನು ನೀಡಬೇಕು. ಇನ್ನು ದೇವರಿಗೆ ನೈವೇದ್ಯ ಅರ್ಪಿಸುವಾಗ ಪೂರ್ವ ಅಥವಾ ಉತ್ತರ ದಿಕ್ಕಿಗೆ ತುದಿ ಬರುವ ತರಹ ವೀಳ್ಯದೆಲೆಯನ್ನು ಇಟ್ಟು ದೇವರಿಗೆ ನೈವೇದ್ಯ ಅರ್ಪಿಸಬೇಕು.

ಯಾರ ಮನೆಯಲ್ಲೇ ತಾಂಬೂಲ ಕೊಟ್ಟರೂ, ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿ, ಆ ನಂತರ ಉಪಯೋಗಿಸಬೇಕು. ಮಂಗಳವಾರ, ಶುಕ್ರವಾರಗಳಂದು ಯಾವುದೇ ಕಾರಣಕ್ಕೂ ವೀಳ್ಯದೆಲೆಯನ್ನು ಹೊರಗೆ ಬಿಸಾಕಬಾರದು. ಹಸಿರಾಗಿರುವ ಮತ್ತು ಅಂದವಾಗಿ ಹಸ್ತದ ಆಕಾರ ಇರುವ ಎಳೆಯ ವೀಳ್ಯದೆಲೆಯನ್ನೇ ದೇವರ ನೈವೇದ್ಯಕ್ಕೆ ಮತ್ತು ತಾಂಬೂಲ ನೀಡಲು ಬಳಸಬೇಕು.

ಒಳಿತುಗಳು :
ನಿಮ್ಮ ಮನೆಯಲ್ಲಿರುವ ತುಳಸಿ ಗಿಡಕ್ಕೆ ಒಣಗಿದ ವೀಳೇದೆಲೆಯನ್ನ ಪುಡಿ ಮಾಡಿ ಹಾಕುವುದರಿಂದ ನಿಮ್ಮ ಪಾಪಗಳೆಲ್ಲ ದೂರವಾಗುತ್ತವೆ.

ಅಡಕೆ ಪುಡಿಯನ್ನು ಒಣಗಿದ ಎಲೆಯ ಪುಡಿಯ ಜೊತೆ ಸೇವಿಸುವುದರಿಂದ ನಿಮಗೆ ಎಷ್ಟೋ ದಿನದಿಂದ ಬರಬೇಕಾದ ಹಣ ಶೀಘ್ರವಾಗಿ ಬರುತ್ತದೆ.

ವ್ರತ, ಪೂಜೆ ಮತ್ತು ಶುಭ ಕಾರ್ಯಗಳು ನಡೆಯುವಾಗ ಬಾಳೆಹಣ್ಣು ,ವಸ್ತ್ರ ,ಬಳೆಗಳ, ಜೊತೆಗೆ ವೀಳ್ಯದೆಲೆಯನ್ನು ಕೊಡುತ್ತಾರೆ. ತಾಂಬೂಲ ಕೊಡುವಾಗ ನಾವು ಕೆಲವು ನಿಯಮಗಳನ್ನು ಪಾಲಿಸಬೇಕು.

ತಾಂಬೂಲ ಕೊಡುವಾಗ ಸಿಪ್ಪೆ ಸುಲಿದಿರುವ ತೆಂಗಿನ ಕಾಯಿಯನ್ನು ಮಾತ್ರ ಕೊಡಬೇಕು. ಸಿಪ್ಪೆ ಸುಲಿದು ತೆಂಗಿನಕಾಯಿಗೆ ಲಕ್ಷ್ಮೀ ದೇವಿ ಅಥವಾ ಹೆಣ್ಣು ತೆಂಗಿನಕಾಯಿ ಎಂದು ಕರೆಯುತ್ತಾರೆ. ಹೀಗೆ ತೆಂಗಿನ ಕಾಯಿಯು ಲಕ್ಷ್ಮೀ ನಾರಾಯಣನ ಸಂಗಮವಾದ್ದರಿಂದ ಅತ್ಯಂತ ಶ್ರೇಷ್ಠ. ತೆಂಗಿನಕಾಯಿಗೆ ಸಂತಾನ ಲಕ್ಷ್ಮೀ ಎಂದು ಮತ್ತೊಂದು ಹೆಸರಿದೆ.

ಕಲಶಕ್ಕೆ ವೀಳ್ಯದೆಲೆ ಇಡುವ ಸಂಪ್ರದಾಯ ಇದ್ದರೆ ವಿಸರ್ಜನೆಯ ನಂತರ ಆ ವೀಳ್ಯದೆಲೆಯನ್ನು ಮನೆಯ ಹಿರಿಯರು ಮಾತ್ರ ತಿನ್ನಬೇಕು. ಮಗಳ ಅಳಿಯ ಅಥವಾ ಮಗ ಸೊಸೆ ತಿನ್ನಬಹುದು. ಈ ವೀಳ್ಯದೆಲೆಯನ್ನು ತಿನ್ನುವುದರಿಂದ ರೋಗ ನಿವಾರಣೆ ದರಿದ್ರತೆ ನಿವಾರಣೆಯಾಗುತ್ತದೆ.

ಯಾವ ಮನೆಯಲ್ಲಿ ತಾಂಬೂಲ ಕೊಟ್ಟರೂ ಮೊದಲು ಅದನ್ನು ತಂದು ದೇವರ ಮುಂದೆ ಇಟ್ಟು ನಮಸ್ಕರಿಸಿ ಆನಂತರ ಅದನ್ನು ಉಪಯೋಗಿಸಿದರೆ ತುಂಬಾ ಒಳ್ಳೆಯದು .

ತಾಂಬೂಲವನ್ನು ಕೊಡುವಾಗ ಅಥವಾ ಪಡೆಯುವಾಗ ಈ ವಿಧಾನಗಳನ್ನು ಅನುಸರಿಸುವುದರಿಂದ ಅದರಿಂದ ಸಿಗಬೇಕಾದ ಶ್ರೇಷ್ಠ ಫಲ ನಮ್ಮದಾಗುತ್ತದೆ ಅದರಲ್ಲಿ ಈ ರೀತಿಯ ಚಿಕ್ಕ ತಪ್ಪುಗಳನ್ನು ಮಾಡಿದರೆ ಯಾವುದೇ ರೀತಿಯ ಪ್ರತಿಫಲ ಸಿಗದೇ ಹಲವು ತೊಂದರೆಗೆ ಸಿಲುಕುತ್ತೇವೆ.

 

Vishwa News 24

Recent Posts

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ – vishwanews24

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…

1 minute ago

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ – vishwanews24

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು  :…

12 minutes ago

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ  – vishwanews24

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…

19 minutes ago

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ – vishwanews24

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…

39 minutes ago

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ – vishwanews24

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್‌ಪೋರ್ಟ್…

1 hour ago

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು – vishwanews24

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್‌ಜೆಟ್ (Spice Jet) ವಿಮಾನದಲ್ಲಿ…

2 hours ago