ಕಾಪು : ಕಾಪು ಸಮೀಪದ ಇನ್ನಂಜೆ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕಬ್ಬಡಿ ಪಂದ್ಯಾಕೂಟ, ತೀರ್ಪುಗಾರಿಕೆ ದೋಷ ಆಗಿದೆ ಎಂದು ಆರೋಪಿಸಿ ಪೊಲಿಪು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟಿಸಿದರ ಪರಿಣಾಮ ಕಬ್ಬಡ್ಡಿ ಪಂದ್ಯಾಕೂಟ ರದ್ದುಗೊಂಡ ಘಟನೆ ನಡೆದಿದೆ.
ಯಾವುದೇ ಪೂರಕ ವ್ಯವಸ್ಥೆಯಿಲ್ಲದೆ ಹಾಗೂ ಕೇವಲ ಬೆರಳೆಣೆಕೆ ಮಂದಿ ತೀರ್ಪುಗಾರರೊಂದಿಗೆ ಆರಂಭಗೊಂಡ ಈ ಪಂದ್ಯಾಕೂಟ ಬಾಲಕಿಯರ ವಿಭಾಗದಲ್ಲಿ ಯಾವುದೇ ತೊಂದರೆ ಇಲ್ಲದೆ ಅಂತ್ಯಗೊಂಡರೆ, ಬಾಲಕರ ವಿಭಾಗದಲ್ಲಿ ಮಾತ್ರ ಪೊಲಿಪು ಸರ್ಕಾರಿ ಶಾಲೆ ಹಾಗೂ ಮುದರಂಗಡಿ ಖಾಸಗಿ ಶಾಲೆಯ ನಡುವೆ ಕ್ವಾಟರ್ ಫೈನಲ್ ಮಧ್ಯೆ ಆರಂಭಗೊಂಡಿದ್ದು, ಅಂತಿಮವಾಗಿ ತೀರ್ಪೂಗಾರರು ಪೊಲಿಪು ವಿರುದ್ಧ ತೀರ್ಪು ನೀಡಿದ್ದಾರೆ ಎಂಬುದಾಗಿ ಪಂದ್ಯ ಕಳಕೊಂಡ ಬಳಿಕ ಆರೋಪಿಸಿದ ಪೊಲಿಪು ತಂಡದ ಆಟಗಾರರು ಬಿಸಿಲು ಮಳೆಯನ್ನೂ ಲೆಕ್ಕಿಸದೆ ಆಟದ ಮೈದಾನದಲ್ಲೇ ಕುಳಿತು ಪ್ರತಿಭಟಿಸಿದರು. ಅವರ ಮನವೊಲಿಸಲು ತೀರ್ಪುಗಾರರು ಹಾಗೂ ಸಂಘಟಕರು ಯತ್ನಿಸಿದರೂ ಪ್ರಯತ್ನ ವಿಫಲಗೊಂಡಿತ್ತು. ಸಾರ್ವಜನಿಕರು ಎರಡೂ ತಂಡಗಳಿಗೆ ಬೆಂಬಲವಾಗಿ ಕಿರುಚಾಟ ನಡೆಸುತ್ತಿದ್ದಂತೆ, ಸಂಘಟಕರು ಹಾಗೂ ದೈಹಿಕ ಶಿಕ್ಷಕರು ಪಂದ್ಯಾಕೂಟ ರದ್ದುಗೊಳಿಸಲಾಗಿದೆ ಎಂಬುದಾಗಿ ಘೋಷಿಸಿದರು.
ಈ ಬಗ್ಗೆ ಮಾತನಾಡಿದ ದೈಹಿಕ ಶಿಕ್ಷಕ ಚಂದ್ರಶೇಖರ್, ” ತೀರ್ಪುಗಾರಿಕೆಯಲ್ಲಿ ಯಾವುದೇ ದೋಷವಾಗಿಲ್ಲ , ಸೋಲಿನ ಹತಾಶೆಯಿಂದ ವಿನಾ ಕಾರಣ ವಿದ್ಯಾರ್ಥಿಗಳು ಆ ರೀತಿ ವರ್ತಿಸಿದ್ದಾರೆ, ಅವರ ವರ್ತನೆಯಿಂದ ಪಂದ್ಯಾಕೂಟ ಮುಂದುವರಿಸಲು ಅಸಾಧ್ಯವಾಗಿದ್ದರಿಂದ ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.
ಪೊಲಿಪು ಶಾಲಾ ಆಟಗಾರರು ಮಾತನಾಡಿ, “ಯಾವುದೇ ವ್ಯವಸ್ಥೆಯಿಲ್ಲದೆ ಕಬ್ಬಡಿ ಪಂದ್ಯಾಕೂಟ ನಡೆಸಿದ್ದಲ್ಲದೆ, ಕುಡಿಯುವುದಕ್ಕೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಿಲ್ಲ, ಹಾಗೂ ಅಂಕ ಬರೆಯುವುದಕ್ಕೆ ಯಾರೋ ಶಿಕ್ಷಣ ಇಲಾಖೆ ಸಂಬಂಧ ಪಡದ ವ್ಯಕ್ತಿಯನ್ನು ನೇಮಿಸಿದ್ದಾರೆ, ಅಲ್ಲದೇ ಅಂಕಪಟ್ಟಿ ನೋಡುವುದಕ್ಕೆ ಅವಕಾಶ ನೀಡಲಿಲ್ಲ , ತೀರ್ಪುಗಾರರು ನಮಗೆ ಅನ್ಯಾಯ ಮಾಡಿದ್ದಾರೆ ಎಂಬುದಕ್ಕೆ ಮೊಬೈಲಿನಲ್ಲಿ ಚಿತ್ರೀಕರಿಸಿದ ವಿಡಿಯೋ ನಮ್ಮಲ್ಲಿದೆ ” ಎಂದಿದ್ದಾರೆ.
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…