ತುಲಾ ರಾಶಿಯವರೇ ನಿಮ್ಮ ವೈರಿಗಳ ಕುರಿತು ಎಚ್ಚರಿಕೆ ಇರಲಿ , ನೋಡಿ ಇಂದಿನ ರಾಶಿ ಭವಿಷ್ಯ -ಶ್ರೀ ಗಣಪತಿ ಭಟ್ 8088827292 -Vishwanews24

ಮೇಷ:- ಇದುವರೆಗೂ ಸವೆಸಿದ ದಾರಿಗಳಿಗಿಂತ ಬೇರೆ ದಾರಿಯನ್ನೇ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೇರಳವಾಗಿರುವುದು. ಆದರೆ ಆ ದಾರಿಯಲ್ಲಿ ಕೂಡಾ ನೀವು ನಿಮ್ಮದೇ ಆದ ಛಾಪನ್ನು ಅಥವಾ ಹೆಜ್ಜೆ ಗುರುತುಗಳನ್ನು ಮೂಡಿಸುವಿರಿ.

ವೃಷಭ:- ಕಾಲ ಒಂದೇ ತೆರನಾಗಿರುವುದಿಲ್ಲ. ಹಾಗಾಗಿ ಎಂದಿನ ನಗೆ, ತಮಾಷೆಯನ್ನು ಮಾಡಲು ಹೋಗಿ ಕಚೇರಿಯಲ್ಲಿ ಬಾಸ್‌ ಕೆಂಗಣ್ಣಿಗೆ ಗುರಿ ಆಗುವಿರಿ. ಆದಷ್ಟು ಸೌಮ್ಯತೆಯಿಂದ ಇರುವುದನ್ನು ಕಲಿಯಿರಿ. ಇದರಿಂದ ಒಳಿತಾಗುವುದು.

ಮಿಥುನ:- ಒಗಟಾಗಿ ಮಾತನಾಡುವ ಮಂದಿ ನಿಮ್ಮನ್ನು ಉದ್ರೇಕಿಸುತ್ತಾರೆ. ಆದರೆ ಅದನ್ನು ಗಹನವಾಗಿ ತೆಗೆದುಕೊಳ್ಳದೆ ತಿಳಿಹಾಸ್ಯದಿಂದ ಅವರೆಲ್ಲರನ್ನು ಸಂಭಾಳಿಸುವಿರಿ. ಹಣಕಾಸಿನ ಪರಿಸ್ಥಿತಿಯಲ್ಲಿ ಹೆಚ್ಚಿನ ಪ್ರಗತಿ ಕಂಡುಬರುವುದಿಲ್ಲ.

ಕಟಕ:- ಆರೋಗ್ಯವನ್ನು ಅಲಕ್ಷಿಸಬಾರದು ಎಂಬುದು ನೆನಪಿರಲಿ. ಕೆಲಸಕ್ಕೆ ರಜೆ ಹಾಕಿಯಾದರೂ ವೈದ್ಯರನ್ನು ಸಂಪರ್ಕಿಸಿ. ಅವರ ಸಲಹೆಯನ್ನು ಪಡೆಯಿರಿ. ಸಂಜೆಯ ವೇಳೆಗೆ ನಿಮಗೆ ಇಷ್ಟವಾದ ಪುಸ್ತಕ ಇಲ್ಲವೆ ಕಾದಂಬರಿಯನ್ನು ಓದಿ.

ಸಿಂಹ:- ನಿಮ್ಮ ಲೇವಾದೇವಿ ವ್ಯವಹಾರದ ಪತ್ರಗಳು ಮತ್ತು ಬ್ಯಾಂಕ್‌ ವ್ಯವಹಾರದ ಪತ್ರಗಳನ್ನು ಹೊರಗಡೆ ಕೊಂಡೊಯ್ಯುವಾಗ ಜಾಗ್ರತೆ ಇರಲಿ. ಕೆಲವು ಪತ್ರಗಳು ಕಣ್ಮರೆ ಆಗುವ ಸಾಧ್ಯತೆಗಳು ಇವೆ. ಅಪರಿಚಿತ ಜನರೊಡನೆ ಹೆಚ್ಚು ಸಲುಗೆ ಬೇಡ.

ಕನ್ಯಾ:- ಬೇಡ ಬೇಡ ಎಂದರೂ ಒತ್ತಡ ತರುವ ಮಂದಿ ಹಣಕ್ಕೆ ಸಂಚಕಾರ ತರುವ ಸಾಧ್ಯತೆ ಇದೆ. ಹಾಗಾಗಿ ನೀವು ನಿಷ್ಠುರ ವ್ಯಕ್ತಿ ಎನಿಸಿಕೊಂಡರೂ ಪರವಾಗಿಲ್ಲ. ಅನ್ಯರಿಗೆ ಹಣಕಾಸಿನ ನೆರವು ನೀಡದಿರಿ.

ತುಲಾ:- ನಿಮ್ಮ ವೈರಿಗಳ ಕುರಿತು ಎಚ್ಚರಿಕೆ ಇರಲಿ. ಮೈಮರೆಯಬೇಡಿ. ಅವರು ನಿಮ್ಮನ್ನು ಯಾವ ರೀತಿಯಲ್ಲಾದರೂ ಖೆಡ್ಡಾಕ್ಕೆ ಕೆಡವಿಕೊಳ್ಳುವ ಸಾಧ್ಯತೆ ಇದೆ. ಮನೆಯಿಂದ ಹೊರಗಡೆ ಹೊರಡುವಾಗ ಭಯ ರಕ್ಷಕನಾದ ಶ್ರೀ ಲಕ್ಷ್ಮೀನಾರಸಿಂಹನನ್ನು ನೆನೆಯಿರಿ.

ವೃಶ್ಚಿಕ:- ಹೊಗಳುವ ಮಂದಿಯನ್ನು ನಂಬಬೇಡಿ. ಆದರೆ ನಂಬಿದಂತೆ ನಂಬಿ ಅವರು ತಿಳಿಸುವ ವಿಚಾರಗಳಲ್ಲಿ ಕೆಲವು ವಿಚಾರಗಳಿಗೆ ಸಮ್ಮತಿ ಸೂಚಿಸಿ. ಅವರ ನಿಜವಾದ ಆಂತರ್ಯ ನಿಮಗೆ ತಿಳಿಯುವುದು. ಇದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಹೊಸತನ ಮೂಡಿಬರಲಿದೆ.

ಧನುಸ್ಸು:- ನಿಮಗೆ ಅನಾರೋಗ್ಯ ಕಾಡುವ ಸಾಧ್ಯತೆ ಇದೆ. ಅದರಿಂದ ರಕ್ಷಣೆ ಪಡೆಯಲು ಸೂರ್ಯ ಮಂತ್ರ ಇಲ್ಲವೆ ಸೂರ್ಯ ಕವಚ ಪಠಿಸಿ. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಬಿಗಿ ಧೋರಣೆ ತಳೆಯುವುದು ಒಳ್ಳೆಯದು.

ಮಕರ:- ಬಾಳಸಂಗಾತಿಯ ಮಾತುಗಳನ್ನು ಆಲಿಸಿ. ಅವುಗಳನ್ನು ಪಾಲಿಸಲು ಪ್ರಯತ್ನಿಸಿ. ದಿನವೂ ರಗಳೆ ಎಂದು ರೇಗಾಡಬೇಡಿ. ಅವರು ಆಡುವ ಮಾತುಗಳ ಸತ್ಯಾಸತ್ಯತೆ ಸಂಜೆಯೊಳಗೆ ನಿಮ್ಮ ಅನುಭವಕ್ಕೆ ಬರುವ ಸಾಧ್ಯತೆ ಇದೆ.

ಕುಂಭ:- ನಿಮ್ಮ ಪಾಲಿಗೆ ಅದೃಷ್ಟ ಬರಲಾರದು ಎಂದು ನಿರಾಶರಾಗಬೇಡಿ. ನಿಮಗೆ ಬರಬೇಕಾದ ಅದೃಷ್ಟ ಮಹತ್ವವುಳ್ಳದ್ದಾಗಿರುವುದರಿಂದ ಅದು ಬರುವುದು ವಿಳಂಬವಾದೀತು ಅಷ್ಟೆ. ಆದರೆ ಅದು ಬಂದ ಮೇಲೆ ಹಿಂದೆ ತಿರುಗಿ ನೋಡುವ ಪ್ರಮೇಯವೇ ಬರುವುದಿಲ್ಲ.

ಮೀನ:- ಮನೋಮಂಡಲದಲ್ಲಿನ ಅನುಮಾನಗಳ ಹುತ್ತ ತಲೆ ಎತ್ತುತ್ತಿರುತ್ತದೆ. ನೀವು ಆಂಜನೇಯ ಸ್ವಾಮಿ ಮಂತ್ರ ಇಲ್ಲವೇ ಗಣಪತಿ ಸ್ತೋತ್ರ ಪಠಿಸಿ. ಸಾಧ್ಯವಾದಲ್ಲಿ ಕಡಲೆಕಾಳು ದಾನ ಮಾಡುವುದು ಕ್ಷೇಮ

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

2 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

2 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

2 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

2 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

2 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

2 days ago