Featured

ತುಳುನಾಡಿದ ಆರಾಧ್ಯ ದೈವ ಗುಳಿಗನಿಗೆ ಅವಮಾನಿಸಿದ ಅರಗ ಜ್ಞಾನೇಂದ್ರ ಅವರ ವರ್ತನೆಯನ್ನು ಕ್ಷಮಿಸುವಂತಿಲ್ಲ : ನವೀನ್ ಸಾಲಿಯಾನ್ – Vishwanews24

ದೈವಗಳ ಪವಿತ್ರತೆಗೆ ದಕ್ಕೆ ಉಂಟು ಮಾಡಿದಾಗ ಹೋರಾಟ ಮಾಡಿ ಕಾಪಾಡುವುದು ತುಳುನಾಡಿನವರಾದ ನಮ್ಮ ಆದ್ಯ ಕರ್ತವ್ಯ : ನವೀನ್ ಸಾಲಿಯಾನ್

ಕಾರ್ಯಕ್ರಮವೊಂದರಲ್ಲಿ ಶಿವಧೂತ ಗುಳಿಗ ನಾಟಕದ ಬಗ್ಗೆ ಅವಹೇಳನ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತುಳುನಾಡಿನ ದೈವಗಳ ಬಗ್ಗೆ ಕೇವಲವಾಗಿ ಮಾತನಾಡಲು ಯಾರು ಎಂದು ಕಾಪು ಬ್ಲಾಕ್ ಉತ್ತರ ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್ ಸಾಲಿಯಾನ್ ಪ್ರಶ್ನಿಸಿದ್ದಾರೆ.

ಬೇರೆ ಪಕ್ಷದವರು ಮಾತನಾಡಿದರೆ ತಪ್ಪು ಆದರೆ ಬಿಜೆಪಿಗರು ಏನೇ ಮಾತನಾಡಿದರೂ ಅಥವ ತುಳುನಾಡಿನ ವಿರುದ್ದ ಅವಹೇಳನ ಮಾಡಿದರೆ ಅದನ್ನು ಸಮರ್ಥಿಸುವ ಸಂಸ್ಕೃತಿಗೆ ನಮ್ಮ ಧಿಕ್ಕಾರವಿದೆ. ತುಳುನಾಡಿದ ದೈವಗಳ ಬಗ್ಗೆ ಕನಿಷ್ಠ ಜ್ಞಾನವೂ ಇರದ ಒರ್ವ ಗೃಹಸಚಿವರು ಅನಾಗರಿಕರಾಗಿ ಮಾತನಾಡಿರುವುದು ಖಂಡನೀಯ. ತುಳು ಸಂಸ್ಕೃತಿ ಎಂದರೆ ಅದು ತುಳುವರ ಬದುಕು ಮತ್ತು ನಂಬಿಕೆಯಾಗಿದೆ. ತುಳುನಾಡಿದ ಆರಾಧ್ಯ ದೈವ ಗುಳಿಗನಿಗೆ ಅವಮಾನಿಸಿದ ಅರಗ ಜ್ಞಾನೇಂದ್ರ ಅವರ ವರ್ತನೆಯನ್ನು ಕ್ಷಮಿಸುವಂತಿಲ್ಲ.

ತುಳುನಾಡಿನವರು ಆದ ನಾವು ನಮ್ಮನ್ನು ಕಾಪಾಡುವ ಧರ್ಮ ದೈವಗಳಿಗೆ ಅವಮಾನ ಮಾಡಿದಾಗ ಧರ್ಮ ದೈವಗಳ ಪವಿತ್ರತೆಗೆ ದಕ್ಕೆ ಉಂಟು ಮಾಡಿದಾಗ ದೈವಗಳ ಪಾವಿತ್ರತೆಯನ್ನು ಹೋರಾಟ ಮಾಡಿ ಕಾಪಾಡುವುದು ತುಳುನಾಡಿನವರಾದ ನಮ್ಮ ಆದ್ಯ ಕರ್ತವ್ಯವಾಗಿದ್ದು ಇಂತಹ ಅನಾಗರಿಕ ಹೇಳಿಕೆಯನ್ನು ನೀಡಿದ ಗೃಹಸಚಿವರು ತುಳುನಾಡಿಗರ ಕ್ಷಮೆಯನ್ನು ಯಾಚಿಸುವಂತೆ ನವೀನ್ ಸಾಲಿಯಾನ್ ಆಗ್ರಹಿಸಿದ್ದಾರೆ.

Vishwa News 24

Recent Posts

ಪಡುಬಿದ್ರಿ : ಉದ್ಯಮಿ ಇನ್ನಾ ಉದಯ ಶೆಟ್ಟಿ ನಿಧನ – vishwanews24

ಪಡುಬಿದ್ರಿ : ಉದ್ಯಮಿ ಇನ್ನಾ ಉದಯ ಶೆಟ್ಟಿ ನಿಧನ ಪಡುಬಿದ್ರೆ: ಉದ್ಯಮಿ ಇನ್ನಾ ಉದಯ ಶೆಟ್ಟಿ(50) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ…

4 hours ago

ಯೋಗೀಶ್‌ ಗೌಡ ಕೊಲೆ ಪ್ರಕರಣ : ವಿನಯ್‌ ಕುಲಕರ್ಣಿ ಸೇರಿ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ – vishwanews24

ಯೋಗೀಶ್‌ ಗೌಡ ಕೊಲೆ ಪ್ರಕರಣ : ವಿನಯ್‌ ಕುಲಕರ್ಣಿ ಸೇರಿ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಬೆಂಗಳೂರು: ಯೋಗೇಶ್ ಗೌಡ…

6 hours ago

ಜಮೀರ್ ಅಹ್ಮದ್ ಅವರು ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಿದ್ದಾರೆ : ಯತೀಂದ್ರ ಸಿದ್ದರಾಮಯ್ಯ – vishwanews24

ಜಮೀರ್ ಅಹ್ಮದ್ ಅವರು ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಿದ್ದಾರೆ : ಯತೀಂದ್ರ ಸಿದ್ದರಾಮಯ್ಯ ಬೆಳಗಾವಿ : ಜಮೀರ್ ಅಹ್ಮದ್ ಅವರು ನಮ್ಮ…

8 hours ago

ಮಂಗಳೂರು: 16 ವರ್ಷದ ಬಾಲಕಿ ನಾಪತ್ತೆ; ಪೊಲೀಸರಿಂದ ಲುಕ್‌ಔಟ್ ನೋಟಿಸ್ ಜಾರಿ – vishwanews24

ಮಂಗಳೂರು: 16 ವರ್ಷದ ಬಾಲಕಿ ನಾಪತ್ತೆ; ಪೊಲೀಸರಿಂದ ಲುಕ್‌ಔಟ್ ನೋಟಿಸ್ ಜಾರಿ ಮಂಗಳೂರು: ಕೊಣಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಜೀರು…

8 hours ago

ಪಡುಬಿದ್ರಿ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ : ಪೂರ್ವಭಾವಿ ಸಭೆ – vishwanews24

ಪಡುಬಿದ್ರಿ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ : ಪೂರ್ವಭಾವಿ ಸಭೆ ಪಡುಬಿದ್ರಿ: ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಬ್ರಹ್ಮಕಲಾಶೋತ್ಸವದ ಪ್ರಯುಕ್ತ…

10 hours ago

ಯಾದಗಿರಿ: ಬಸ್- ಕಾರು ಮಧ್ಯೆ ಭೀಕರ ಅಪಘಾತ; 6 ಮಂದಿ ಸಜೀವ ದಹನ – vishwanews24

ಯಾದಗಿರಿ: ಬಸ್- ಕಾರು ಮಧ್ಯೆ ಭೀಕರ ಅಪಘಾತ; 6 ಮಂದಿ ಸಜೀವ ದಹನ ಸುರಪುರ : ಬಸ್ ಮತ್ತು ಕಾರಿನ…

10 hours ago