Featured

ತುಳುನಾಡ ಕಂಬಳದಲ್ಲಿ ಮಿಂಚುತ್ತಿರುವ ಕಾಪು ಕಲ್ಯಾದ ಯುವಕರ ತಂಡ,ಕಟಪಾಡಿ ಕಂಬಳದಲ್ಲೂ ಭಾಗವಹಿಸುವ ನಿರೀಕ್ಷೆ.

ತುಳುನಾಡ ಕಂಬಳದಲ್ಲಿ ಮಿಂಚುತ್ತಿರುವ ಕಾಪು ಕಲ್ಯಾದ ಯುವಕರ ತಂಡ,ಕಟಪಾಡಿ ಕಂಬಳದಲ್ಲೂ ಭಾಗವಹಿಸುವ ನಿರೀಕ್ಷೆ.

ಕಾಪು: ದೇಶ ವಿದೇಶದಲ್ಲಿ ಹೆಸರು ಪಡೆದಿರುವ ತುಳುನಾಡಿನ‌ ಕಂಬಳ ಕೂಟಗಳಲ್ಲಿ ಒಂದಿಷ್ಟು ಯುವಕರ ತಂಡ ಕೋಣ ಓಡಿಸುವ ಮೂಲಕ‌ ಹೊಸ ಮುನ್ನುಡಿ ಬರೆಯುತ್ತಿದ್ದಾರೆ ಹಾಗದರೇ ಆ ಯುವಕರು ಯಾರು ಎಂಬುದರ ಡೀಟೆಲ್ಸ್ ಇಲ್ಲಿದೆ.

ಹೌದು ಕಾಪು ಕಲ್ಯಾದ ಯುವಕರ ತಂಡವೊಂದು ಹಿರಿಯರ ಮಾರ್ಗದರ್ಶನದೊಂದಿಗೆ ತುಳುನಾಡಿನ‌ ಕಂಬಳ ಕೂಟಗಳಲ್ಲಿ ಭಾಗವಹಿಸಿ ಕೋಣ ಓಡಿಸುವ ಮೂಲಕ ಸಂಪ್ರದಾಯವನ್ನ‌ ಮುಂದುವರಿಸುತ್ತಿರುವುದು ಎಲ್ಲೆಡೆ ಸುದ್ದಿಯಾಗುತ್ತಿದೆ.

ಕಾಪು ಕಲ್ಯಾ ಜವನೆರ್ ನಾಮಾಕಿಂತದೊಂದಿಗೆ ಕಟಪಾಡಿ ಬೀಡು ಮೂಡು-ಪಡು ಕಂಬಳ ಕೂಟದಲ್ಲಿಯೂ ನೇಗಿಲು ಹಿರಿಯ A ಮತ್ತು B  ವಿಭಾಗದಲ್ಲಿ ಕೋಣ ಓಡಿಸುವ ಇರಾದೆಯನ್ನು ಇಟ್ಟುಕೊಂಡಿದ್ದಾರೆ.

ಹದಿಹರೆಯ ಯುವಕರು ಸಾಮಾನ್ಯವಾಗಿ ನಗರದ ಜೀವನಕ್ಕೆ ಹೊಂದಿಕೊಂಡು ಸಾಂಪ್ರದಾಯ ಕ್ರೀಡೆಯನ್ನ ಮರೆಯುತ್ತಿರುವ ಈ ಯುಗದಲ್ಲಿ ತುಳುನಾಡ ಕಂಬಳವನ್ನ‌ ಉಳಿಸಿ ಬೆಳೆಸುವ ನಿರ್ಧಾರದಿಂದ ಈ ರೀತಿಯ ಕಾರ್ಯಗಳು ನಡೆಯುತ್ತಿರುವುದು ಎಲ್ಲೆಡೆ ಶ್ಲಾಘನೀಯವಾಗಿದೆ.

ಈ ಬಗ್ಗೆ ಹಿರಿಯ ಕಂಬಳ ಕೋಣಗಳ ಯಜಮಾನರಾಗಿದ್ದ  ದಿವಂಗತ ಮುಂಡ್ಕೂರು ಯತೀಶ್ ಶೆಟ್ಟಿಯವರ ಪುತ್ರ ನಡಿಕರೆ ಸಚಿನ್ ಶೆಟ್ಟಿ ಹೀಗೆ ಅನ್ನುತ್ತಾರೆ ” ತುಳುನಾಡಿನ ಸಾಂಪ್ರದಾಯಿಕ ಕಂಬಳಕೂಟವು ಮುಂದುವರಿಯಬೇಕು ಮತ್ತು ಯುವಕರಿಗೂ ಅದರ ಬಗ್ಗೆ ಮಾಹಿತಿ ಹಾಗೂ ಆಸಕ್ತಿಮೂಡಬೇಕು ಅನ್ನುವ ಉದ್ದೇಶದಿಂದ ಯುವಕರೆಲ್ಲ ಒಗ್ಗಟ್ಟಾಗಿ ಕಂಬಳ ಕೂಟದಲ್ಲಿ ಭಾಗವಹಿಸುತ್ತಿದ್ದೇವೆ,ಈ ಭಾರಿಯ ಕಟಪಾಡಿ ಕಂಬಳದಲ್ಲಿ ಕೂಡ ಭಾಗವಹಿಸುವ ಇಚ್ಛೆಯನ್ನ ಇಟ್ಟುಕೊಂಡಿದ್ದೇವೆ ಮತ್ತು ಬಹುಮಾನ ಪಡೆಯುವುವ ಗುರಿಯಿದೆ .

ಒಟ್ಟಾರೆಯಾಗಿ ಪೇಟಾ ನಿರ್ಧಾರದಿಂದ ತೂಗುಕತ್ತಿಯಲ್ಲಿರುವ ಕಂಬಳಕೂಟವು ನಿಂತುಹೋಗುವ ಸಮಯದಲ್ಲೂ ಯುವಕರ ಪಡೆ ಕಂಬಳದಲ್ಲಿ ಆಸಕ್ತಿ ತೋರಿಸುತ್ತಿರುವುದು ಮತ್ತು ಸಕ್ರಿಯವಾಗಿ ಭಾಗವಹಿಸುತ್ತಿರುವುದು ಶ್ಲಾಘನೀಯವೆ ಸರಿ.

 


 

 

Add
Vishwa News 24

Recent Posts

ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ವಂಚನೆ ಪ್ರಕರಣ: ಪೋಕ್ಸೋ ಕಾಯಿದೆಯಡಿ ಇಬ್ಬರ ಬಂಧನ – vishwanews24

ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ವಂಚನೆ ಪ್ರಕರಣ: ಪೋಕ್ಸೋ ಕಾಯಿದೆಯಡಿ ಇಬ್ಬರ ಬಂಧನ ಉಡುಪಿ: ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಯ…

2 hours ago

ಹೆಜಮಾಡಿ ಕಾಂಗ್ರೆಸ್ ಗೆ ಭರವಸೆ ನಾಯಕ : ಪ್ರಭೋದ್ ಚಂದ್ರ ಹೆಜಮಾಡಿ – vishwanews24

ಹೆಜಮಾಡಿ ಕಾಂಗ್ರೆಸ್ ಗೆ ಭರವಸೆ ನಾಯಕ : ಪ್ರಭೋದ್ ಚಂದ್ರ ಹೆಜಮಾಡಿ ಕಾಪು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ…

6 hours ago

ಉಡುಪಿ: ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ  – vishwanews24

ಉಡುಪಿ: ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ  ಉಡುಪಿ: ಉಡುಪಿಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಮೀನು ಸಾಗಾಟದ ಲಾರಿಯೊಂದು…

7 hours ago

ಸತತ 4ನೇ ಬಾರಿ CNG ದರ ಏರಿಕೆ: ಪ್ರತಿ ಕೆಜಿಗೆ 2 ರೂ. ಹೆಚ್ಚಳ – vishwanews24

ಸತತ 4ನೇ ಬಾರಿ CNG ದರ ಏರಿಕೆ: ಪ್ರತಿ ಕೆಜಿಗೆ 2 ರೂ. ಹೆಚ್ಚಳ ನವದೆಹಲಿ: ಪೆಟ್ರೋಲ್‌, ಡೀಸೆಲ್‌ ಬಳಿಕ…

7 hours ago

ದುಬೈನಲ್ಲಿ ರಸ್ತೆ ಅಪಘಾತ : ಕಿನ್ನಿಗೋಳಿಯ ಯುವತಿ ಸಾವು – vishwanews24

ದುಬೈನಲ್ಲಿ ರಸ್ತೆ ಅಪಘಾತ : ಕಿನ್ನಿಗೋಳಿಯ ಯುವತಿ ಸಾವು ಮಂಗಳೂರು: ದುಬೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಕಳೆದ ಕೆಲವು…

8 hours ago

ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಮಂಗಳೂರಿನಲ್ಲಿ SDPI ಪ್ರತಿಭಟನೆ – vishwanews24

ಬಿಜೆಪಿ ಸಂಘಪರಿವಾರವು ದೇಶದ ಕಾನೂನಿಗೆ ವಿರುದ್ಧವಾಗಿದೆ: ರಿಯಾಝ್ ಫರಂಗಿಪೇಟೆ ಗಲಭೆಕೋರರ ವಿರುದ್ಧದ ಪ್ರಕರಣ ಹಿಂಪಡೆದ ಕ್ರಮಕ್ಕೆ SDPI ತೀವ್ರ ವಿರೋಧ…

8 hours ago