ಮಂಗಳೂರು: ಮಂಗಳೂರಿನ ಸರಕಾರಿ ಕಛೇರಿ ಹಾಗೂ ಬಸ್ಸುಗಳಲ್ಲಿ ಕನ್ನಡ ಕಡ್ಡಾಯ ಮಾಡಿ ತುಳು ಭಾಷೆಯ ಮೇಲೆ ಸವಾರಿ ಮಾಡಿದ್ದಲ್ಲದೆ ದ.ಕ ಜಿಲ್ಲೆ ಸೇರಿ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಎಂದು ಸಚಿವ ಸುನೀಲ್ ಕುಮಾರ್ರವರು ಹೇಳಿಕೆ ನೀಡಿದ ವಿರುದ್ಧ ಇಂದು ಮಂಗಳೂರಿನ ಕ್ಲಾಕ್ ಟವರ್ ಎದುರುಗಡೆ ತುಳು ಭಾಷೆ ಸಂರಕ್ಷಣಾ ಸಮಿತಿಯವರು ಪ್ರತಿಭಟನೆ ನಡೆಸಿದರು.
ಈ ವೇಳೆ ಅದೇ ದಾರಿಯಲ್ಲಿ ಸಾಗುತ್ತಿದ್ದ ಶಾಸಕರಾದ ವೇದವ್ಯಾಸ ಕಾಮತ್ರವರು ಭೇಟಿ ಕೊಟ್ಟು ತುಳು ಪರವಾಗಿ ಹೋರಾಟ ಮಾಡುವವರಿಗೆ ಸಾಂತ್ವನ ಹೇಳಿ ನವರಾತ್ರಿ ಉತ್ಸವ ಮುಗಿದ ಕೂಡಲೇ ತುಳು ಅಧಿಕೃತ ಹಾಗೂ ೮ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ತುಳು ಸಂಘಟನೆಗಳನ್ನು ಒಟ್ಟು ಸೇರಿಸಿ ಮಹತ್ತರವಾದ ನಿರ್ಣಯವನ್ನು ತೆಗೆದು ಕೊಳ್ಳುವ ಹಾಗೆ ಸಚಿವರಾದ ಸುನೀಲ್ ಕುಮಾರ್ ಅವರಲ್ಲಿ ಮಾತನಾಡಿ, ಅವರು ಸಿಗುವ ದಿನಾಂಕವನ್ನು ನಿಗದಿ ಪಡಿಸಿ ತುರ್ತು ಮೀಟಿಂಗನ್ನು ಮಾಡುವ ಬಗೆ ಭರವಸೆ ನೀಡಿದರು.
ಇದನ್ನೂ ಓದಿ: ಎಚ್ಚರಿಕೆಯ ನಡೆ ಅಗತ್ಯ.. ನೋಡಿ ಇಂದಿನ ದಿನ ಭವಿಷ್ಯ.. ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564
ಮಂಗಳೂರಿನಲ್ಲಿ ತುಳುಲಿಪಿ ಬೋರ್ಡು ಹಾಕುವ ಬಗ್ಗೆ ಯಾರು ಅಡ್ಡಿ ಮಾಡುವುದಿಲ್ಲ. ಬಸ್ಸಿಗೆ ಬೇಕಾದವರು ಹಾಕ ಬಹುದು. ನನ್ನ ಕಛೇರಿಯಲ್ಲಿ ಕೂಡ ತುಳುಲಿಪಿ ಬೋರ್ಡ್ ಇದೆ ಎಂದು ಹೇಳಿ ಹೋರಾಟಗಾರರನ್ನು ಸಮದಾನ ಮಾಡಿದರು.
ಈ ಹೊತ್ತಿಗೆ ಇವರ ಜೊತೆ ರಾಜಕಾರಣಿ ಸಂತೋಷ್ ಕುಮಾರ್ ಬೋಳಿಯಾರ್ ಹಾಗೂ ಕಾರ್ಪೊರೇಟರ್ ಜಗದೀಶ್ ಅವರು ಭಾಗಿಯಾಗಿದ್ದರು.
ಅದಾದ ಮೇಲೆ ತುಳು ಸಂರಕ್ಷಣಾ ಸಮಿತಿಯವರು ”ಒರಿಪುಲೆ ಒರಿಪುಲೆ ತುಳು ಭಾಷೆ ಒರಿಪುಲೆ” ಘೋಷಣೆ ಕೂಗಿ ಬಸ್ಸಿಗೆ ತುಳು ಲಿಪಿ ಚಾರ್ಟ್ ಅಂಟಿಸಿದರು.
ಇದನ್ನೂ ಓದಿ: ಐಸಿಸಿ ಕಿವುಡರ ಟಿ20 ಟ್ರೋಫಿ : ಭಾರತ ತಂಡದಲ್ಲಿ ಸ್ಥಾನ ಪಡೆದ ಕುಂದಾಪುರದ ಪೃಥ್ವಿರಾಜ್ ಶೆಟ್ಟಿ – Vishwanews24
ಸಕಲೇಶಪುರ–ಸುಬ್ರಹ್ಮಣ್ಯ ಮಾರ್ಗದಲ್ಲಿ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಪರಿಶೀಲನೆ ಕಡಬ : ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ರೈಲು ಮಾರ್ಗದಲ್ಲಿ ನಡೆದ…
ಉಡುಪಿ : ಆ. 20 ರಂದು ನೇರ ಸಂದರ್ಶನ ಉಡುಪಿ : ನಗರದ ಅಂಬಲಪಾಡಿ ಕರಾವಳಿ ಬೈಪಾಸ್ ಬಳಿಯ ರೀಗಲ್…
ಉಡುಪಿ: ಗೃಹ ಜ್ಯೋತಿ ಫಲಾನುಭವಿಗಳು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ: ರಮೇಶ್ ಕಾಂಚನ್ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಗಳ ಮರುಪರಿಶೀಲನೆಗೆ…
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಆ.22ರಂದು ಉಡುಪಿಯಲ್ಲಿ ಸಭೆ ಉಡುಪಿ: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ…
ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಹೆಚ್ಚುವರಿ ಸಂಚಾರ ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಬೇಡಿಕೆಗೆ ಅನುಸಾರ…
ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…