ಉಡುಪಿ

ತೆರದ ಲಾರಿ ಟಿಪ್ಪರ್‍ಗಳಲ್ಲಿ ಕಲ್ಲು ಬಂಡೆ ಸಾಗಾಟ ಹಿಂಬದಿ ವಾಹನ ಸವಾರರಿಗೆ ಪ್ರಾಣ ಸಂಕಟ ಕಣ್ಮುಚ್ಚಿ ಕುಳಿತ ಗಣಿ, ಪೋಲಿಸ್ ಇಲಾಖೆ.

ಉಡುಪಿ: ಕರಾವಳಿ ಭಾಗದಲ್ಲಿ ಕಡಲ್ಕೊರೆತ ತಪ್ಪಿಸಲು ಕಲ್ಲು ಹಾಕುವ ಕಾರ್ಯ ಅಲ್ಲಲ್ಲಿ ನಡೆಯುತ್ತಿರುವ ಕಾರಣ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಲ್ಲುಗಳ ಸಾಗಾಟ ನಡೆಯುತ್ತಿದ್ದು ಗುಜರಿ ಟಿಪ್ಪರ್‌ಗಳು ಅಪಾಯಕಾರಿಯಾಗಿದ್ದು ಇವುಗಳಿಗೆ ಬ್ರೇಕ್‌ ಹಾಕಲು ಒತ್ತಾಯ ಕೇಳಿ ಬರುತ್ತಿದೆ.

ಕಳೆದ ಹಲಾವಾರು ದಿನಗಳಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಯಮಧೂತರಂತೆ ತೆರೆದ ಟಿಪ್ಪರ್ ವಾಹನಗಳಲ್ಲಿ ಕಲ್ಲುಬಂಡೆಗಳ ಸಾಗಾಟ ಹೆಚ್ಚಾಗುತ್ತಿದ್ದು ಯಾವುದೇ ಮುಜಾಗ್ರತೆ ಕ್ರಮ ಕೈಗೊಳ್ಳದೆ ಈ ರೀತಿ ಸಾಗುತ್ತಿರುವುದು ಘನವಾಹನಗಳ ಹಿಂಬದಿ ಸವಾರರಿಗೆ ಪ್ರಾಣ ಸಂಕಟ ಎದುರಾಗಿದೆ. ಈ ವಾಹನಗಳ ನಿಯಮಿತ ವೇಗದಲ್ಲಿ ಸಾಗದೇ ಅತ್ಯಂತ ರಭಸದಲ್ಲಿ ಚಲಿಸುವುದರಿಂದ ಹೊತ್ತೋಯ್ದ ಬಂಡೆಕಲ್ಲುಗಳು ಈಗ ಬೀಳುತ್ತೆ ಮತ್ತೆ ಬೀಳುತ್ತೆ ಅನ್ನುನ ಸ್ಥಿತಿ ಎದುರಾಗಿದೆ.

ಅಧಿಕಾರಿಗಳು ಮೌನ: ದ್ವಿಚಕ್ರ ವಾಹನದ ಸವಾರ, ಹಿಂಬದಿ ಸವಾರರಿಗೆ ಹೆಲ್ಮೆಟ್‌ ಇಲ್ಲ ಎಂದು ತಲೆ ತಿಂದು ಕೇಸು ಜಡಿಯುವ, ರಿಕ್ಷಾ ಚಾಲಕರಿಗೆ ಖಾಕಿ ಇಲ್ಲ, ಟ್ಯಾಕ್ಸಿ ಚಾಲಕರಿಗೆ ಬಿಳಿ ಇಲ್ಲ ಎಂದು ರಸ್ತೆಗಳಲ್ಲಿ ಅಡ್ಡ ಹಾಕುವ ಸಾರಿಗೆ ಆಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ಈ ಅಪಾಯಕಾರಿ ಬಂಡೆ ಹೊರುವ ಗುಜರಿ ಟಿಪ್ಪರ್‌ಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇರುವುದು ಅವರಿವರ ನಡುವೆ ಹೊಂದಾಣಿಕೆಯ ಸಂಶಯ ಮೂಡಿಸಿದೆ. ಎನಿದ್ದರೂ ಘನಘೋರ ಅವಘಡ ನಡೆಯದೆ ನಮ್ಮ ಅಧಿಕಾರಿಗಳು ಕ್ರಮ ಕೈಗೊಳ್ಳಲಾರರು ಎನ್ನುವುದು ನಾಗರಿಕರು  ಮಾತಾಡುತ್ತಿದ್ದಾರೆ.

Vishwa News 24

Recent Posts

13 ವರ್ಷದ ಕೋಮಾ ಜೀವನ ಅಂತ್ಯ : ದಯಾಮರಣಕ್ಕೆ ಅನುಮತಿ ಪಡೆದಿದ್ದ ಹರೀಶ್ ರಾಣಾ ನಿಧನ – vishwanews24

13 ವರ್ಷದ ಕೋಮಾ ಜೀವನ ಅಂತ್ಯ : ದಯಾಮರಣಕ್ಕೆ ಅನುಮತಿ ಪಡೆದಿದ್ದ ಹರೀಶ್ ರಾಣಾ ನಿಧನ ಹೊಸದಿಲ್ಲಿ: 13 ವರ್ಷಗಳಿಂದ…

1 hour ago

ಕರಾವಳಿ ಜಿಲ್ಲೆಯಲ್ಲಿ ಮುಂದಿನ ಎರಡು – ಮೂರು ದಿನ ಮಳೆ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ – vishwanews24

ಕರಾವಳಿ ಜಿಲ್ಲೆಯಲ್ಲಿ ಮುಂದಿನ ಎರಡು-ಮೂರು ದಿನ ಮಳೆ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ ಮಂಗಳೂರು: ದಕ್ಷಿಣ ಕನ್ನಡ, ಉಡುಪಿ…

1 hour ago

ಡಿವೈಡರ್‌ಗೆ ಕಾರು ಡಿಕ್ಕಿ : ಖ್ಯಾತ ನಟಿ  ಮಾಡೆಲ್ ಹರ್ಷಿಲ್ ಕಾಲಿಯಾ ಸಾವು – vishwanews24

ಡಿವೈಡರ್‌ಗೆ ಕಾರು ಡಿಕ್ಕಿ :  ಭೀಕರ ಅಪಘಾತದಲ್ಲಿ ಖ್ಯಾತ ನಟಿ  ಮಾಡೆಲ್ ಹರ್ಷಿಲ್ ಕಾಲಿಯಾ ಸಾವು ಜೈಪುರ: ಜೈಪುರದಲ್ಲಿ ಕಾರು…

2 hours ago

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

6 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

6 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

6 days ago