Featured

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಯೆಲ್ಲೋ ಅಲರ್ಟ್ ಘೋಷಣೆ – vishwanews24

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಯೆಲ್ಲೋ ಅಲರ್ಟ್ ಘೋಷಣೆ

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಲವೆಡೆ ಸೋಮವಾರ ವ್ಯಾಪಕ ಮಳೆಯಾಗಿದ್ದು, ಕೆಲವೆಡೆ ಜನರಿಗೆ ಬಿಸಿಲಿನ ತಾಪದಿಂದ ನಿರಾಳತೆ ನೀಡಿದರೆ, ಇನ್ನೂ ಹಲವೆಡೆ ರಸ್ತೆಗಳು, ಚರಂಡಿಗಳು ಹಾಗೂ ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಉಭಯ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಮುಂದಿನ ದಿನಗಳಲ್ಲಿಯೂ ಬಲವಾದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ, ಪುತ್ತೂರು, ಉಳ್ಳಾಲ, ತೊಕ್ಕೊಟ್ಟು, ತಲಪಾಡಿ, ಮುಡಿಪು, ಕಲ್ಲಡ್ಕ, ಮಾಣಿ, ಉಪ್ಪಿನಂಗಡಿ, ನೆಲ್ಯಾಡಿ, ಬೆಳ್ತಂಗಡಿ, ಸುಳ್ಯ ಹಾಗೂ ಕಡಬ ಸೇರಿದಂತೆ ಹಲವೆಡೆ ಸೋಮವಾರ ಬೆಳಗ್ಗಿನ ವೇಳೆಯಲ್ಲಿ ಉತ್ತಮ ಮಳೆಯಾಗಿದೆ. ಮಧ್ಯಾಹ್ನದ ಬಳಿಕ ಮಳೆಯ ತೀವ್ರತೆ ಕಡಿಮೆಯಾಗಿ ಸಾಧಾರಣ ಮಳೆಯಾಯಿತು.

ಹವಾಮಾನ ಇಲಾಖೆ ಆಗಸ್ಟ್ 9 ರವರೆಗೆ ಜಿಲ್ಲೆಯಲ್ಲಿ ಬಿರುಗಾಳಿಯೊಂದಿಗೆ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಯೆಲ್ಲೋ ಅಲರ್ಟ್ ಮುಂದುವರಿಸಿದೆ.

ಘಟ್ಟ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉಕ್ಕಿ ಹರಿದ ನೇತ್ರಾವತಿ ನದಿಯ ನೀರಿನ ಮಟ್ಟ ಸೋಮವಾರ ಸಂಜೆ ವೇಳೆಗೆ ಇಳಿಕೆಯಾಗಿದೆ. ಭಾನುವಾರ ಸಂಜೆ 8.3 ಮೀಟರ್ ಇದ್ದ ನೀರಿನ ಮಟ್ಟ ಸೋಮವಾರ ಸಂಜೆ ವೇಳೆಗೆ 6.4 ಮೀಟರ್‌ಗೆ ಇಳಿದಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಪಾಣೆಮಂಗಳೂರು ಸಮೀಪದ ಅಲಡ್ಕದ 15 ಕುಟುಂಬಗಳ ಸದಸ್ಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಬಂಟ್ವಾಳದ ಹಲವು ಮನೆಗಳು ಮತ್ತು ಅಂಗಡಿಗಳಿಗೆ ನುಗ್ಗಿದ್ದ ಪ್ರವಾಹದ ನೀರು ಸೋಮವಾರ ಬೆಳಿಗ್ಗೆ ಇಳಿದಿದ್ದರೂ, ಕೆಲವು ಕೃಷಿಭೂಮಿಗಳಲ್ಲಿ ಇನ್ನೂ ನೀರು ನಿಂತಿದೆ.

ಉಡುಪಿ, ಮಣಿಪಾಲ, ಕಾಪು, ಉಚ್ಚಿಲ, ಬ್ರಹ್ಮಾವರ, ಕುಂದಾಪುರ, ಹೆಬ್ರಿ ಹಾಗೂ ಕಾರ್ಕಳ ತಾಲೂಕುಗಳಲ್ಲಿ ಬೆಳಗ್ಗೆ ಸಾಧಾರಣ ಮಳೆಯಾಗಿದ್ದು, ಬಳಿಕ ಮೋಡ ಕವಿದ ವಾತಾವರಣ ನಿರ್ಮಾಣವಾಯಿತು. ಮಧ್ಯಾಹ್ನದ ನಂತರ ಮತ್ತೆ ಉತ್ತಮ ಮಳೆಯಾಯಿತು.

ಹವಾಮಾನ ಇಲಾಖೆ ಉಡುಪಿ ಜಿಲ್ಲೆಗೆ ಆಗಸ್ಟ್ 4ರಂದು ಯೆಲ್ಲೋ ಅಲರ್ಟ್ ಘೋಷಿಸಿದೆ. ಕಳೆದ 24 ಗಂಟೆಗಳಲ್ಲಿ ಕಾರ್ಕಳದಲ್ಲಿ 42.8 ಮಿ.ಮೀ., ಹೆಬ್ರಿಯಲ್ಲಿ 41.7 ಮಿ.ಮೀ., ಬೈಂದೂರಿನಲ್ಲಿ 30.6 ಮಿ.ಮೀ., ಕುಂದಾಪುರದಲ್ಲಿ 28.3 ಮಿ.ಮೀ., ಉಡುಪಿಯಲ್ಲಿ 20.2 ಮಿ.ಮೀ., ಬ್ರಹ್ಮಾವರದಲ್ಲಿ 15.7 ಮಿ.ಮೀ., ಕಾಪುವಿನಲ್ಲಿ 11 ಮಿ.ಮೀ. ಮಳೆ ಪ್ರಮಾಣ ದಾಖಲಾಗಿದೆ. ಜಿಲ್ಲೆಯ ಸರಾಸರಿ ಮಳೆ ಪ್ರಮಾಣ 30.1 ಮಿ.ಮೀ. ದಾಖಲಾಗಿದೆ.

ಕಳೆದ ಕೆಲವು ದಿನಗಳಿಂದ ಹೆಬ್ರಿ ಹಾಗೂ ಕಾರ್ಕಳ ತಾಲೂಕುಗಳಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ನದಿಗಳು ಮತ್ತು ಹೊಳೆಗಳ ನೀರಿನ ಹರಿವು ಹೆಚ್ಚಿದ್ದು, ತಗ್ಗು ಪ್ರದೇಶಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಮಾಲ, ಹೊಸ್ಮಾರು, ಹೆಬ್ರಿ, ಕಬ್ಬಿನಾಲೆ, ಸೋಮೇಶ್ವರ, ಅಂಡಾರು, ಮುದ್ರಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ ಮುಂದುವರಿದಿದೆ.

 

 

Vishwa News 24

Recent Posts

ಮಂಗಳೂರು : ಆಳಸಮುದ್ರ ಮೀನುಗಾರಿಕೆ ಆರಂಭ; ಮಲ್ಪೆಯಲ್ಲಿ ಕಡಲಿಗಿಳಿಯದ ದೋಣಿಗಳು – vishwanews24

ಮಂಗಳೂರು : ಆಳಸಮುದ್ರ ಮೀನುಗಾರಿಕೆ ಆರಂಭ ಮಲ್ಪೆಯಲ್ಲಿ ಇನ್ನೂ ಸಮುದ್ರಕ್ಕಿಳಿಯದ ಮೀನುಗಾರಿಕಾ ದೋಣಿಗಳು ಮಂಗಳೂರು/ಉಡುಪಿ: ಮೀನುಗಾರಿಕೆ ನಿಷೇಧ ತೆರವಾಗಿರುವ ಮೂರನೇ…

5 minutes ago

ಉಡುಪಿ: ಪುಷ್ಪಾನಂದ ಫೌಂಡೇಶನ್ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ : ಯಶ್ಪಾಲ್ ಸುವರ್ಣ – vishwanews24

ಉಡುಪಿ: ಪುಷ್ಪಾನಂದ ಫೌಂಡೇಶನ್ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ : ಯಶ್ಪಾಲ್ ಸುವರ್ಣ ಉಡುಪಿ: ಪುಷ್ಪಾನಂದ ಫೌಂಡೇಶನ್ ವತಿಯಿಂದ 2025-2026ನೇ…

12 minutes ago

ಉಡುಪಿ: ವ್ಯಕ್ತಿ ನಾಪತ್ತೆ – vishwanews24

ಉಡುಪಿ: ವ್ಯಕ್ತಿ ನಾಪತ್ತೆ      ಉಡುಪಿ: ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ಹರಿಕಾರಬೆಟ್ಟು ನಿವಾಸಿ ಲಕ್ಷö್ಮಣ ಪೂಜಾರಿ (37) ಎಂಬವರು ಕೂಲಿ…

23 minutes ago

ಮಣ್ಣು ತೆರವು ಕಾರ್ಯ ಪೂರ್ಣ : ಮಂಗಳೂರು-ಬೆಂಗಳೂರು ರೈಲು ಸಂಚಾರ ಪುನರಾರಂಭ – vishwanews24

ಮಣ್ಣು ತೆರವು ಕಾರ್ಯ ಪೂರ್ಣ : ಮಂಗಳೂರು-ಬೆಂಗಳೂರು ರೈಲು ಸಂಚಾರ ಪುನರಾರಂಭ ಮಂಗಳೂರು: ಎಡಕುಮೇರಿ ಮತ್ತು ಸಿರಿಬಾಗಿಲು ನಡುವಿನ ಭೂಕುಸಿತದಿಂದ ಹಾನಿಗೊಳಗಾದ…

29 minutes ago

ಉಡುಪಿ : ಆಗಸ್ಟ್ 6 ರಂದು ನೇರ ಸಂದರ್ಶನ – vishwanews24

ಉಡುಪಿ : ಆಗಸ್ಟ್ 6 ರಂದು ನೇರ ಸಂದರ್ಶನ ಉಡುಪಿ : ನಗರದ ಮಣಿಪಾಲ ರಜತಾದ್ರಿ ರಸ್ತೆಯ ವಿದ್ಯಾರತ್ನ ನಗರದ…

33 minutes ago

ಉಡುಪಿ: ನಿರಂತರ ಮಳೆ ; ಜಿಲ್ಲೆಯ ಪ್ರಾಥಮಿಕ- ಪ್ರೌಢ ಶಾಲೆಗಳಿಗೆ ಆ.04 (ನಾಳೆ) ರಂದು ರಜೆ ಘೋಷಣೆ -vishwanews24

ಉಡುಪಿ: ನಿರಂತರ ಮಳೆ ; ಜಿಲ್ಲೆಯ ಪ್ರಾಥಮಿಕ- ಪ್ರೌಢ ಶಾಲೆಗಳಿಗೆ ಆ.04 (ನಾಳೆ) ರಂದು ರಜೆ ಘೋಷಣೆ ಉಡುಪಿ ಜಿಲ್ಲೆಯಾದ್ಯಂತ…

13 hours ago