ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿಒಂದಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ನಾಳೆಯಿಂದ ಬ್ರಹ್ಮಕಲಶೋತ್ಸವ ಸಂಭ್ರಮ -Vishwanews24

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿಒಂದಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿಜ.22ರಿಂದ ಫೆ.3ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಹಲವು ಅಭಿವೃದ್ಧಿ ಕಾರ್ಯಗಳು, ಸಿದ್ಧತೆಗಳು ನಡೆಯುತ್ತಿವೆ.

ಈ ಮೊದಲು 2007ರ ಏಪ್ರಿಲ್‌ನಲ್ಲಿಬ್ರಹ್ಮಕಲಶೋತ್ಸವ ನಡೆದಿದ್ದು, ಇದೀಗ ಮತ್ತೆ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿದೆ. ಏತನ್ಮಧ್ಯೆ 2019ರ ಜ.25ರಂದು ಅಷ್ಟಬಂಧ ಪ್ರತಿಷ್ಠೆ, ಜ.29ರಂದು ಸಾನ್ನಿಧ್ಯ ಕಲಶಾಭಿಷೇಕ ನಡೆದಿದ್ದು, ಒಂದು ವರ್ಷ ಬಳಿಕ 2020ರ ಜ.30ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ.

ಭ್ರಾಮರೀ ವನದಲ್ಲಿ48 ಯಜ್ಞವೃಕ್ಷಗಳ ಯಾಜ್ಞಿಕ ವನ: ಕಟೀಲು ದೇವಿಯ ಮೂಲ ಸಾನ್ನಿಧ್ಯ ಭ್ರಾಮರೀ ವನದಲ್ಲಿಪೂರ್ವಸಿದ್ಧತೆ ಪೂರ್ಣಗೊಂಡಿದೆ. ಬ್ರಹ್ಮಕಲಶೋತ್ಸವ ಸಂದರ್ಭ ನಡೆಯುವ ಮೂರು ಪ್ರಮುಖ ಧಾರ್ಮಿಕ ವಿಧಿಗಳಾದ ಫೆ.1ರ ನಾಗಮಂಡಲೋತ್ಸವ, ಫೆ.2ರ ಕೋಟಿ ಜಪಯಜ್ಞ ಸಮಾಪ್ತಿ ಹಾಗೂ ಫೆ.3ರಂದು ಹತ್ತು ಮಹಾಕುಂಡಗಳಲ್ಲಿಸಹಸ್ರ ಚಂಡಿಕಾಯಾಗಗಳು ಭ್ರಾಮರೀ ವನದಲ್ಲಿಯೇ ನಡೆಯಲಿದೆ. ಹತ್ತು ಮಹಾಕುಂಡಗಳಲ್ಲಿನಡೆಯಲಿರುವ ಸಹಸ್ರ ಚಂಡಿಕಾಯಾಗಕ್ಕೆ ಸಿದ್ಧತೆ ನಡೆಯುತ್ತಿದೆ.

ಪ್ರಧಾನ ಗರ್ಭಗುಡಿಯಲ್ಲಿಶ್ರೀ ದೇವಿಗೆ ನೂತನ ಸ್ವರ್ಣಮಂಟಪ ಪ್ರತಿಷ್ಠೆ ಸಹಿತ ಇತರ ನವೀಕರಣ, ಧ್ವಜಸ್ತಂಭಕ್ಕೆ ಚಿನ್ನದ ಕವಚ ಅಳವಡಿಕೆ, ಮಹಾಬಲಿ ಪೀಠಕ್ಕೆ ಬೆಳ್ಳಿ ಕವಚ ನವೀಕರಣ, ತೀರ್ಥ ಮಂಟಪದ ಮುಂಭಾಗ ಬೆಳ್ಳಿಯ ತೋರಣ ಮಂಟಪ ನಿರ್ಮಾಣ ಮುಂತಾದ ಪ್ರಮುಖ ಕಾರ್ಯಗಳ ಅನುಷ್ಠಾನ ನಡೆಯುತ್ತಿದೆ.

ಬ್ರಹ್ಮಕಲಶಕ್ಕೆ 1127 ಬೆಳ್ಳಿ ಕಲಶ ಸಿದ್ಧ: ಜ.30ರಂದು ಬೆಳಗ್ಗೆ 9.37ರ ಮೀನ ಲಗ್ನ ಸುಮುಹೂರ್ತದಲ್ಲಿಪ್ರಧಾನ ಸ್ವರ್ಣಕಲಶ ಹಾಗೂ 1,127 ಬೆಳ್ಳಿ ಕಲಶಗಳಿಂದ ಶ್ರೀದೇವಿಗೆ ಅಭಿಷೇಕ ನಡೆಯಲಿದೆ. ಕಲಶಮಂಡಲ ಪೂಜೆಯ ವೇಳೆ ಪ್ರಧಾನ ಸ್ವರ್ಣ ಕಲಶವನ್ನು ಮಂಡಲ ಮಧ್ಯೆ ಪ್ರತಿಷ್ಠಾಪಿಸಲಾಗುತ್ತದೆ. 27 ದೊಡ್ಡ ಗಾತ್ರದ ಬೆಳ್ಳಿಯ ಖಂಡ ಕಲಶಗಳು ಹಾಗೂ 1100 ಬೆಳ್ಳಿಯ ಸಣ್ಣ ಕಲಶಗಳನ್ನು ಮಂಡಲದಲ್ಲಿಇರಿಸಿ ಪೂಜಿಸಿ ಬಳಿಕ ದೇವಿಗೆ ಅಭಿಷೇಕ ಮಾಡಲಾಗುತ್ತದೆ.

ಗಜಲಕ್ಷಿತ್ರ್ಮೕಗೆ ನೂತನ ಗಜಾಲಯ:ಕ್ಷೇತ್ರದ ಮಹಾಲಕ್ಷಿತ್ರ್ಮೕ ಆನೆಗೆ ಸುಮಾರು 50 ವರ್ಷ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಅದೇ ಜಾಗದಲ್ಲಿ9 ಮೀ. ಎತ್ತರದ ನೂತನ ಗಜಾಲಯ ನಿರ್ಮಿಸಲಾಗಿದೆ. ಆನೆಗೆ ಸ್ನಾನಕ್ಕೆ ಶವರ್‌ಬಾತ್‌ ವ್ಯವಸ್ಥೆ, ಲೈಟ್‌, ಫ್ಯಾನ್‌, ಕುಡಿಯುವ ನೀರಿನ ಟ್ಯಾಂಕ್‌ ಹಾಗೂ ನೀರು ಸರಬರಾಜು ಸಂಪರ್ಕ, ಸುಲಭ ಸ್ವಚ್ಛತಾ ವ್ಯವಸ್ಥೆಗೆ ಅನ್ವಯಿಸುವಂತೆ ನೆಲದ ಕಾಮಗಾರಿ ನಿರ್ವಹಿಸಲಾಗಿದೆ. ಗಜಾಲಯದ ಮಾಡಿಗೆ ಪಬ್‌ ಶೀಟುಗಳನ್ನು ಹಾಕಲಾಗುವುದರಿಂದ ನಿರಂತರ ತಣ್ಣನೆಯ ವಾತಾವರಣ ಸಿಗಲಿದೆ.

ಬ್ರಹ್ಮರಥ-ಬೆಳ್ಳಿರಥಕ್ಕೆ ನೂತನ ಕೊಠಡಿ:

ರಥಬೀದಿಯಲ್ಲಿದೇವಾಲಯದ ಬ್ರಹ್ಮರಥ ಹಾಗೂ ಬೆಳ್ಳಿರಥಗಳ ಸುಸಜ್ಜಿತ ಕೊಠಡಿ ನಿರ್ಮಾಣಗೊಂಡಿದೆ. ಪ್ರತ್ಯೇಕ ಸ್ಥಳಗಳಲ್ಲಿದ್ದ ಎರಡು ಕೊಠಡಿಗಳನ್ನು ತೆರವುಗೊಳಿಸಿ, ರಥಬೀದಿಯಲ್ಲಿಬ್ರಹ್ಮರಥ ಹಾಗೂ ಬೆಳ್ಳಿರಥಕ್ಕೆ ಸುಸಜ್ಜಿತ ಕೊಠಡಿ ನಿರ್ಮಿಸಲಾಗಿದೆ.

ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ: ಈ ಬಾರಿಯ ಬ್ರಹ್ಮಕಲಶೋತ್ಸವ ಪ್ಲಾಸ್ಟಿಕ್‌ ಮುಕ್ತವಾಗಿರುವುದು ವಿಶೇಷ. ಬ್ರಹ್ಮಕಲಶೋತ್ಸವ ಸಮಿತಿಯಿಂದ ಮುದ್ರಿಸಿರುವ ಎಲ್ಲಬ್ಯಾನರ್‌ಗಳೂ ಬಟ್ಟೆಯದ್ದಾಗಿದೆ. ಊಟ ಹಾಗೂ ಉಪಾಹಾರಕ್ಕೆ ಸ್ಟೀಲ್‌ ಬಟ್ಟಲು ಬಳಸಲು ನಿರ್ಧರಿಸಲಾಗಿದೆ. ನೀರು, ಕಾಫಿ, ಚಾ, ಪಾನೀಯಗಳಿಗೂ ಸ್ಟೀಲ್‌ ಹಾಗೂ ಕಾಗದದ ಲೋಟೆಗಳನ್ನೇ ಬಳಸಲು ತೀರ್ಮಾನಿಸಲಾಗಿದೆ. ದೇವಾಲಯದಲ್ಲಿಬಟ್ಟೆಯ ಚೀಲಗಳನ್ನೇ ಬಳಸಲು ಮುತುವರ್ಜಿ ವಹಿಸಲಾಗಿದ್ದು ಪಂಚಕಜ್ಜಾಯಕ್ಕೂ ಕಾಗದದ ಲಕೋಟೆ ಬಳಸಲಾಗುತ್ತಿದೆ. ತೀರ್ಥದ ಬಾಟಲಿ ಹಾಗೂ ತ್ರಿಮಧುರ ಪ್ರಸಾದವನ್ನು ಉತ್ತಮ ದರ್ಜೆಯ ಪ್ಲಾಸ್ಟಿಕ್‌ ಬಾಟಲಿಯಲ್ಲಿಕೊಡಲಾಗುತ್ತಿದೆ.

ಪ್ರಮುಖ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ
ಜ.22ರಂದು ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ನಡೆಯಲಿದ್ದು, ಮೈಸೂರಿನ ರಾಜವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್‌ ಭಾಗವಹಿಸಲಿದ್ದಾರೆ. 23ರಂದು ಸಹಸ್ರ ಚಂಡಿಕಾ ಸಪ್ತಶತೀ ಪಾರಾಯಣ, ಕೋಟಿ ಜಪ ಯಜ್ಞ, 24ರಂದು ನೂತನ ಸುವರ್ಣ ಧ್ವಜಪ್ರತಿಷ್ಠೆ, 25ರಿಂದ 29ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, 30ರಂದು ಬೆಳಗ್ಗೆ 9.37ಕ್ಕೆ ಮೀನ ಲಗ್ನ ಸುಮುಹೂರ್ತದಲ್ಲಿಬ್ರಹ್ಮಕಲಶಾಭಿಷೇಕ, ಸಂಜೆ ಮಹಾರಥೋತ್ಸವ, ಫೆ.1ರಂದು ಸಂಜೆ 7 ಗಂಟೆಗೆ ಸಗ್ರಿ ಗೋಪಾಲಕೃಷ್ಣ ಸಾಮಗರ ನೇತೃತ್ವದಲ್ಲಿಮದ್ದೂರು ಕೃಷ್ಣಪ್ರಸಾದ ವೈದ್ಯ ಬಳಗದ ಸಹಕಾರದಲ್ಲಿನಾಗಮಂಡಲೋತ್ಸವ, ಫೆ.2ರಂದು ಬೆಳಗ್ಗೆ ಸಹಸ್ರ ನಾರಿಕೇಳ ಗಣಯಾಗ, ಕೋಟಿ ಜಪಯಜ್ಞ ಪರಿಸಮಾಪ್ತಿ, ಫೆ.3ರಂದು ಸಹಸ್ರ ಚಂಡಿಕಾಯಾಗ ಪೂರ್ಣಾಹುತಿ ನಡೆಯಲಿದೆ.

24ರಂದು ಸುವರ್ಣಧ್ವಜ ಪ್ರತಿಷ್ಠೆ, 30ರಂದು ಬ್ರಹ್ಮಕಲಶೋತ್ಸವ, ಫೆಬ್ರುವರಿ 1ರಂದು ನಾಗಮಂಡಲ, 2ರಂದು ಕೋಟಿ ಜಪಯಜ್ಞ, 3ರಂದು ಸಹಸ್ರ ಚಂಡಿಕಾಯಾಗ ನಡೆಯಲಿದೆ.

‘22ರಂದು ಬೆಳಿಗ್ಗೆ 10ಕ್ಕೆ ಮೈಸೂರಿನ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಧ್ಯಕ್ಷತೆಯ ಸಮಾರಂಭದಲ್ಲಿ ಉಗ್ರಾಣ ಮುಹೂರ್ತ, ಸಾಂಸ್ಕೃತಿಕ ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿವೆ. ಅಂದಿನಿಂದ 31ರ ತನಕ ಪ್ರತಿದಿನ ಸಂಜೆ 5ಕ್ಕೆ ಧಾರ್ಮಿಕ ಸಭೆಗಳು ನಡೆಯಲಿದ್ದು, 24ರಂದು ಸುವರ್ಣ ಧ್ವಜ ಪ್ರತಿಷ್ಠೆ ಮತ್ತು 30ರಂದು ಬ್ರಹ್ಮಕಲಶಾಭಿಷೇಕವು ನೆರವೇರಲಿದೆ’ ಎಂದು ಕಟೀಲು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಶಾಸಕ ಉಮಾನಾಥ ಕೋಟ್ಯಾನ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಪ್ರತಿನಿತ್ಯ ರಾತ್ರಿ 8ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ’ ಎಂದರು.

 

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

 

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

2 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

2 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

2 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

2 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

2 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

2 days ago