ಬೆಂಗಳೂರು : ದರ್ಶನ್ ಅವರ 50ನೇ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದು ನನಗೆ ಖುಷಿ ಕೊಟ್ಟಿದೆ. ನಮ್ಮಿಬ್ಬರಲ್ಲಿ ದ್ವೇಷವಿಲ್ಲ; ಸ್ನೇಹವಿದೆ. ವೃತ್ತಿಯ ಬಗ್ಗೆ ಪರಸ್ಪರರಲ್ಲಿ ಗೌರವವಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಅವರಂಥ ದೊಡ್ಡ ನಟರನ್ನು ಕಡೆಗಣಿಸುವಂಥ ವ್ಯಕ್ತಿ ನಾನಲ್ಲ. ನಾನು ಸಿನಿಮಾರಂಗ ಮತ್ತು ರಾಜಕೀಯ ಕೆಲಸಗಳಲ್ಲಿ ಬ್ಯುಸಿ ಇದ್ದೆ. ಹೀಗಾಗಿ ಕುರುಕ್ಷೇತ್ರ ಚಿತ್ರಕ್ಕೆ ಡಬ್ಬಿಂಗ್ ಮಾಡುವುದು ಲೇಟ್ ಆಯಿತು ಅಷ್ಟೇ. ಆದರೆ, ಈ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳ ಬಗ್ಗೆ ಬೇಸರವಿದೆ” ಎಂದಿದ್ದಾರೆ ನಿಖಿಲ್.