Featured

ದಿಲ್ಲಿ ವಿಧಾನಸಭಾ ಕಟ್ಟಡದಿಂದ ಕೆಂಪು ಕೋಟೆಗೆ ಬ್ರಿಟಿಷರ ಕಾಲದ ಸುರಂಗ ಪತ್ತೆ -Vishwanews24

ದಿಲ್ಲಿ ವಿಧಾನಸಭಾ ಕಟ್ಟಡದಿಂದ ಕೆಂಪು ಕೋಟೆಗೆ ಬ್ರಿಟಿಷರ ಕಾಲದ ಸುರಂಗ ಪತ್ತೆ -Vishwanews24

ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಕಟ್ಟಡದಲ್ಲಿ ಗುರುವಾರ ಸುರಂಗ ರೀತಿಯ ನಿರ್ಮಾಣವೊಂದು ಪತ್ತೆಯಾಗಿದೆ. ಈ ಕುರಿತು ಮಾಹಿತಿ ನೀಡಿದ ಸ್ಪೀಕರ್ ರಾಮ್ ನಿವಾಸ್ ಗೋಯೆಲ್, ಈ ಸುರಂಗವು ವಿಧಾನಸಭಾ ಕಟ್ಟಡವನ್ನು ಕೆಂಪು ಕೋಟೆಗೆ ಸಂಪರ್ಕ ಕಲ್ಪಿಸುತ್ತದೆ ಹಾಗೂ ಬ್ರಿಟಿಷರ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಕೋರ್ಟಿಗೆ ಸಾಗಿಸುವ ಸಂದರ್ಭ ಜನರಿಂದ ವಿರೋಧ ಎದುರಾಗದಂತೆ ಈ ಸುರಂಗ ಮಾರ್ಗದಲ್ಲಿ ರಹಸ್ಯವಾಗಿ ಸಾಗಿಸಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

“ನಾನು 1993ರಲ್ಲಿ ಶಾಸಕನಾದಾಗ ಈ ಸುರಂಗದ ಬಗ್ಗೆ ಕೆಲವರು ಮಾತನಾಡುವುದನ್ನು ಕೇಳಿದ್ದೆ. ಆದರೆ ಯಾವುದೇ ಸ್ಪಷ್ಟತೆಯಿರಲಿಲ್ಲ. ಈಗ ಸುರಂಗದ ಬಾಯಿ ಪತ್ತೆಯಾಗಿದೆ ಆದರೆ ಇನ್ನೂ ಹೆಚ್ಚು ಅಗೆಯುವ ಕೆಲಸ ನಡೆಸಲಾಗುವುದಿಲ್ಲ. ಸುರಂಗದ ಮುಂದಿನ ಭಾಗಗಳು ಮೆಟ್ರೋ ಕಾಮಗಾರಿ ಹಾಗೂ ಒಳಚರಂಡಿಗಳಿಂದಾಗಿ ನಾಶವಾಗಿರಬಹುದು,” ಎಂದು ಅವರು ಹೇಳಿದರು.

“1912ರಲ್ಲಿ ರಾಜಧಾನಿಯನ್ನು ಬ್ರಿಟಿಷರು ಕೊಲ್ಕತ್ತಾದಿಂದ ದಿಲ್ಲಿಗೆ ವರ್ಗಾಯಿಸಿದ ನಂತರ 1926ರಲ್ಲಿ ಅದನ್ನು ನ್ಯಾಯಾಲಯವಾಗಿ ಬಳಸುತ್ತಿದ್ದ ಸಂದರ್ಭ ಈ ಸುರಂಗ ಮಾರ್ಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಕೋರ್ಟಿಗೆ ಹಾಜರುಪಡಿಸಲು ಬಳಸಲಾಗುತ್ತಿತ್ತು,” ಎಂದು ಹೇಳಿದರು.

Vishwa News 24

Recent Posts

ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ – vishwanews24

ಕೌಟುಂಬಿಕ ಕಲಹ : ಕೊಲೆಯಲ್ಲಿ  ಅಂತ್ಯ - ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ ಮೈಸೂರು: ಸಣ್ಣ…

57 minutes ago

ಲಡಾಖ್‌ನಲ್ಲಿ 4.1 ತೀವ್ರತೆಯ ಭೂಕಂಪ – vishwanews24

ಲಡಾಖ್‌ನಲ್ಲಿ 4.1 ತೀವ್ರತೆಯ ಭೂಕಂಪ ಲೇಹ್: ಗುರುವಾರ ಮುಂಜಾನೆ ಲಡಾಖ್‌ನಲ್ಲಿ4.1 ತೀವ್ರತೆಯ ಭೂಕಂಪ  ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ…

2 hours ago

ಬೆಂಗಳೂರಲ್ಲಿ ವರುಣನ ಆರ್ಭಟ : ಮೇ 1ರವರೆಗೂ ಮಳೆ ಮುನ್ಸೂಚನೆ – vishwanews24

ಬೆಂಗಳೂರಲ್ಲಿ ವರುಣನ ಆರ್ಭಟ : ಮೇ 1ರವರೆಗೂ ಮಳೆ ಮುನ್ಸೂಚನೆ ಬೆಂಗಳೂರು: ಬುಧವಾರ ಬೆಂಗಳೂರಿನಾದ್ಯಂತ ಸುರಿದ ಆಲಿಕಲ್ಲು ಮಳೆಗೆ 10…

2 hours ago

ಹಾಸನ: ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ಗೆ ವಧು ಕರೆತರಲು  ತೆರಳುತ್ತಿದ್ದ ವೇಳೆ ಅಪಘಾತ ; ವರ ಸಾವು – vishwanews24

ಹಾಸನ: ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ಗೆ ವಧು ಕರೆತರಲು  ತೆರಳುತ್ತಿದ್ದ ವೇಳೆ ಅಪಘಾತ ; ವರ ಸಾವು ಹಾಸನ: ಕೆಲವೇ…

2 hours ago

ಪುತ್ತೂರು: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸವಾರ ಸಾವು, ಯುವತಿಗೆ ಗಂಭೀರ ಗಾಯ – vishwanews24

ಪುತ್ತೂರು: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸವಾರ ಸಾವು, ಯುವತಿಗೆ ಗಂಭೀರ ಗಾಯ ಪುತ್ತೂರು: ಉಪ್ಪಿನಂಗಡಿಯ ಬಜತ್ತೂರು ಗ್ರಾಮದ ನೀರಕಟ್ಟೆ…

2 hours ago

ಸುದೀಪ್‌ ಶೆಟ್ಟಿ ಆತ್ಮಹತ್ಯೆ ಪ್ರಕರಣ : ಪತ್ನಿ ಸೌಮ್ಯ ಶೆಟ್ಟಿಗೆ ಜಾಮೀನು ನಿರಾಕರಣೆ – vishwanews24

ಸುದೀಪ್‌ ಶೆಟ್ಟಿ ಆತ್ಮಹತ್ಯೆ ಪ್ರಕರಣ : ಪತ್ನಿ ಸೌಮ್ಯ ಶೆಟ್ಟಿಗೆ ಜಾಮೀನು ನಿರಾಕರಣೆ ಉಡುಪಿ : ಸುದೀಪ್‌ ಶೆಟ್ಟಿ ಆತ್ಮಹತ್ಯೆ…

2 hours ago