ಮಂಡ್ಯ : ಅಂಬರೀಶ್ ಅವರ ಹುಟ್ಟುಹಬ್ಬ ಹಾಗೂ ಲೋಕಸಭೆ ಚುನಾವಣೆ ಗೆಲುವಿನ ಹಿನ್ನೆಲೆಯಲ್ಲಿ ಸಂದರ್ಭದಲ್ಲಿ ಮಾತನಾಡಿದ ಸುಮಲತಾ ಅಂಬರೀಷ್, ನಾನಿನ್ನೂ ಪ್ರಮಾಣ ವಚನ ಸ್ವೀಕರಿಸಿಲ್ಲ, ಆಗಲೇ ಏನೇನೋ ಮಾತನಾಡಲು ಆರಂಭಿಸಿದ್ಧಾರೆ. ಇದು ಅವರು ಬದಲಾಗಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಸುಮಲತಾ ಹೇಳಿದರು. ಚುನಾವಣೆ ಹೊತ್ತಲ್ಲಿ ಟೀಕೆ ಮಾಡುವುದು, ನಿಂದನೆ ಮಾಡುವುದು ಎಲ್ಲವೂ ಕೂಡ ಕಾಮನ್ ಬಿಡಿ. ಇನ್ನೂ ನಮ್ಮ ಕಡೆಯಿಂದ ದರ್ಶನ್ ಆಗ್ಲಿ, ಯಶ್ ಆಗಲಿ ಒಂದೂ ಕೆಟ್ಟ ಪದ ಬಳಸಿ ಮಾತನಾಡಿಲ್ಲ.
ನಾವು ಶಾಂತಿಯಿಂದ, ತಾಳ್ಮೆಯಿಂದ ಇದ್ದೆವು.. ಅವರು ಆಡಿರುವ ಮಾತುಗಳಿಗೆ ನಾವು ಉತ್ತರ ಕೊಡಲ್ಲ. ಜನರೇ ಉತ್ತರ ಕೊಡುತ್ತಾರೆ ಎಂದಿದ್ದೆ. ಈಗ ಈ ಉತ್ತರ ಕೊಟ್ಟಿರುವ ನಿಮಗೆ ನನ್ನ ವಂದನೆಗಳು’ ಎಂದು ಮಂಡ್ಯ ಜನತೆಗೆ ಸುಮಲತಾ ಕೃತಜ್ಞತೆ ಸಲ್ಲಿಸಿದರು.
‘ ಎಲೆಕ್ಷನ್ ವೇಳೆ ಜಿದ್ದಾಜಿದ್ದಿ ನಡೆದು ದ್ವೇಷದ ಮಾತುಗಳನ್ನ ಆಡಿದ್ದಾಗಿದೆ. ಈಗ ಅದೆಲ್ಲವನ್ನೂ ಮುಂದುವರಿಸುವುದು ಬೇಡ,ಅದನ್ನು ಇಲ್ಲಿಗೆ ಬಿಟ್ಟು ಬಿಡಿ. ಮಂಡ್ಯದ ರೈತರ ಮತ್ತು ನೀರಿನ ಸಮಸ್ಯೆಗಳನ್ನ ಎದುರಿಸಲು ನನ್ನ ಜೊತೆಯಾಗಿ ನಿಲ್ಲಿ ಎಂದು ನೂತನ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ತಮ್ಮ ವಿರೋಧಿಗಳಿಗೆ ಮನವಿ ಮಾಡಿದರು.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…