ಮಂಡ್ಯ : ಅಂಬರೀಶ್ ಅವರ ಹುಟ್ಟುಹಬ್ಬ ಹಾಗೂ ಲೋಕಸಭೆ ಚುನಾವಣೆ ಗೆಲುವಿನ ಹಿನ್ನೆಲೆಯಲ್ಲಿ ಸಂದರ್ಭದಲ್ಲಿ ಮಾತನಾಡಿದ ಸುಮಲತಾ ಅಂಬರೀಷ್, ನಾನಿನ್ನೂ ಪ್ರಮಾಣ ವಚನ ಸ್ವೀಕರಿಸಿಲ್ಲ, ಆಗಲೇ ಏನೇನೋ ಮಾತನಾಡಲು ಆರಂಭಿಸಿದ್ಧಾರೆ. ಇದು ಅವರು ಬದಲಾಗಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಸುಮಲತಾ ಹೇಳಿದರು. ಚುನಾವಣೆ ಹೊತ್ತಲ್ಲಿ ಟೀಕೆ ಮಾಡುವುದು, ನಿಂದನೆ ಮಾಡುವುದು ಎಲ್ಲವೂ ಕೂಡ ಕಾಮನ್ ಬಿಡಿ. ಇನ್ನೂ ನಮ್ಮ ಕಡೆಯಿಂದ ದರ್ಶನ್ ಆಗ್ಲಿ, ಯಶ್ ಆಗಲಿ ಒಂದೂ ಕೆಟ್ಟ ಪದ ಬಳಸಿ ಮಾತನಾಡಿಲ್ಲ.
ನಾವು ಶಾಂತಿಯಿಂದ, ತಾಳ್ಮೆಯಿಂದ ಇದ್ದೆವು.. ಅವರು ಆಡಿರುವ ಮಾತುಗಳಿಗೆ ನಾವು ಉತ್ತರ ಕೊಡಲ್ಲ. ಜನರೇ ಉತ್ತರ ಕೊಡುತ್ತಾರೆ ಎಂದಿದ್ದೆ. ಈಗ ಈ ಉತ್ತರ ಕೊಟ್ಟಿರುವ ನಿಮಗೆ ನನ್ನ ವಂದನೆಗಳು’ ಎಂದು ಮಂಡ್ಯ ಜನತೆಗೆ ಸುಮಲತಾ ಕೃತಜ್ಞತೆ ಸಲ್ಲಿಸಿದರು.
‘ ಎಲೆಕ್ಷನ್ ವೇಳೆ ಜಿದ್ದಾಜಿದ್ದಿ ನಡೆದು ದ್ವೇಷದ ಮಾತುಗಳನ್ನ ಆಡಿದ್ದಾಗಿದೆ. ಈಗ ಅದೆಲ್ಲವನ್ನೂ ಮುಂದುವರಿಸುವುದು ಬೇಡ,ಅದನ್ನು ಇಲ್ಲಿಗೆ ಬಿಟ್ಟು ಬಿಡಿ. ಮಂಡ್ಯದ ರೈತರ ಮತ್ತು ನೀರಿನ ಸಮಸ್ಯೆಗಳನ್ನ ಎದುರಿಸಲು ನನ್ನ ಜೊತೆಯಾಗಿ ನಿಲ್ಲಿ ಎಂದು ನೂತನ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ತಮ್ಮ ವಿರೋಧಿಗಳಿಗೆ ಮನವಿ ಮಾಡಿದರು.
ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…
ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು :…
ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…
ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…
ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್ಪೋರ್ಟ್…
ದೆಹಲಿ-ಪುಣೆ ಸ್ಪೈಸ್ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್ಜೆಟ್ (Spice Jet) ವಿಮಾನದಲ್ಲಿ…