Featured

ಧೂಳಿನಿಂದಾಗುವ ‘ಅಲರ್ಜಿ’ ಸಮಸ್ಯೆಗೆ ಪರಿಣಾಮಕಾರಿ ಈ ‘ಮನೆಮದ್ದು -Vishwanews24

ನಿತ್ಯ ಒಂದು ಕಡೆಯಿಂದ ಮತ್ತೊಂದು ಕಡೆಗೆ, ನಗರದ ಸಿಟಿ ಜೀವನದ ಧೂಳಿನಿಂದಾಗಿ ಅನೇಕರು ಅಲರ್ಜಿಯಿಂದಾಗಿ ನೆಗಡಿ, ಉಸಿರಾಟದ ಸಮಸ್ಯೆ, ಎದೆಯ ಬಿಗಿತ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇಂತಹ ಧೂಳಿನ ಅಲರ್ಜಿಗೆ ಏನೇನೋ ಔಷಧಿಗಳ ಪ್ರಯೋಗ ಮಾಡಿದ ನೀವು, ನಾವು ಹೇಳುವಂತೆ ಮನೆ ಮದ್ದು ಮಾಡಿಕೊಂಡು ಬಳಕೆ ಮಾಡಿದ್ರೇ, ಖಂಡಿತವಾಗಿ ನಿಮಗೆ ದೀರ್ಘವಾದಂತ ಪರಿಹಾರ ದೊರೆಯುತ್ತದೆ.

ಹೌದು… ಧೂಳಿನಿಂದ ಉಂಟಾಗುವ ಅಲರ್ಜಿ ನಿಮ್ಮನ್ನು ಮತ್ತಾವುದೋ ರೋಗಕ್ಕೆ ಗುರಿ ಮಾಡಬಹುದು. ಅಂತಹ ಸಮಸ್ಯೆಯಿಂದ ಪಾರಾಗಲು, ಬೇರೆ ಯಾವುದೋ ಔಷಧಿ ಬಳಸುವ ಬದಲು, ಮನೆಯಲ್ಲಿಯೇ ನೀವು ಮನೆ ಮದ್ದು ತಯಾರಿಸುವ ಮೂಲಕ, ಪರಿಹಾರವನ್ನು ಪಡೆಯಬಹುದಾಗಿದೆ. ಆ ಮನೆಮದ್ದುಗಳು ಈ ಕೆಳಗಿನಂತಿವೆ..

c

ಧೂಳಿನ ಅಲರ್ಜಿಗೆ ಇಲ್ಲಿವೆ ಮನೆಮದ್ದು

ತುಪ್ಪದಿಂದ ತಯಾರಿಕೆ ಮಾಡಬಹುದಾದ ಮನೆ ಮದ್ದು

ನೀವು ನಿತ್ಯ ಧೂಳಿನಿಂದ ಅಲರ್ಜಿ ಅನುಭವಿಸುತ್ತಿರುವಾಗ, ಇಂತಹ ಸಮಸ್ಯೆಯಿಂದ ಪಾರಾಗಲು ನಿಮ್ಮ ಮನೆಯಲ್ಲಿಯೇ ಸಿಗುವಂತ ತುಪ್ಪದಿಂದ ಮನೆ ಮದ್ದನ್ನು ತಯಾರಿಸಬಹುದಾಗಿದೆ. ಅಲರ್ಜಿಯಿಂದ ಉದ್ಬವಿಸುವ ಸೀನಿಗಾಗಿ ಕಾಲು ಚಮಟ ತುಪ್ಪ, ರುಚಿಗೆ ತಕ್ಕಷ್ಟು ಬೆಲ್ಲ ಸೇರಿಸಿ ತಿಂದ್ರೇ, ಸೀನುವ ಸಮಸ್ಯೆ ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ.

ಪುದಿನಾ ಬಳಸಿ ತಯಾರಿಸಬಹುದಾದಂತ ಮನೆ ಮದ್ದು

ಪುದಿನಾ ಎಲೆಯಲ್ಲಿ ವೊಲಾಟೈಲ್ ಎನ್ನುವಂತ ಮೆಂತಾಲ್ ಎಂಬ ಎಣ್ಣೆಯ ಅಂಶವಿದೆ. ಇದರಿಂದಾಗಿ ಶೀತ, ಕೆಮ್ಮಿಗೂ ರಾಮಬಾಣ. ಪುದೀನಾ ಎಲೆ ಹಾಗೂ ಒಂದು ಚಮಚ ಜೇನು ತುಪ್ಪವನ್ನು ಹಾಕಿದ ಟೀ ಮಾಡಿ, ದಿನದಲ್ಲಿ ಕನಿಷ್ಠ ಮೂರು ಬಾರಿ ಸೇವಿಸಿದ್ರೇ, ಅಲರ್ಜಿಯಿಂದ ನಿಮ್ಮನ್ನು ದೂರ ಮಾಡುತ್ತದೆ.

ಅರಿಶಿನ ಬಳಸಿ ತಯಾರಿಸಬಹುದಾಂತ ಮನೆ ಮದ್ದು

ಅರಿಶಿನ ಅಂದ್ರೇ ಸಾಕು ರೋಗ ನಿರೋಧಕ ಶಕ್ತಿ ಇರುವ ಮನೆ ಮದ್ದು. ಇಂತಹ ಅರಿಶಿನವನ್ನು ಒಂದು ಲೋಟ ಹಾಲಿಗೆ ಹಾಕಿಕೊಂಡು, ಜೊತೆಗೆ ಮೆಣಸು ಬೆರೆಸೆ, ಕುದಿಸಿದ ನಂತ್ರ ಅದಕ್ಕೆ ಜೇನುತುಪ್ಪ ಸೇರಿಸಿಕೊಂಡು ತಣ್ಣಗಾದ ನಂತ್ರ ಸೇವಿಸಿದ್ರೇ, ನಿಮ್ಮ ಅಲರ್ಜಿಗೆ ಶೀಘ್ರವಾದಂತ ನಿವಾರಣೆಯನ್ನು ನೀಡಲಿದೆ.

Vishwa News 24

Recent Posts

ಬೆಳ್ತಂಗಡಿ : ಹೊತ್ತಿ ಉರಿದ ಸ್ಕೂಟಿ ; ಗಾಯಗೊಂಡಿದ್ದ ಬಾಲಕ ಮೃತ್ಯು – vishwanews24

ಬೆಳ್ತಂಗಡಿ : ಹೊತ್ತಿ ಉರಿದ ಸ್ಕೂಟಿ ; ಗಾಯಗೊಂಡಿದ್ದ ಬಾಲಕ ಮೃತ್ಯು ಬೆಳ್ತಂಗಡಿ: ತಾಲೂಕಿನ ಬೆಳಾಲು ಗ್ರಾಮದ ಮಿನಂದೇಲುವಿನಲ್ಲಿ ಸ್ಕೂಟಿಯೊಂದು…

4 minutes ago

ಬೆಳ್ತಂಗಡಿ: ಗಡಾಯಿಕಲ್ಲು ಪ್ರವೇಶ ಮತ್ತೆ ಆರಂಭ ; ಗುರುತಿನ ಚೀಟಿ, ಶುಲ್ಕ ಕಡ್ಡಾಯ – vishwanews24

ಬೆಳ್ತಂಗಡಿ: ಗಡಾಯಿಕಲ್ಲು ಪ್ರವೇಶ ಆರಂಭ - ಈ ನಿಯಮ ಪಾಲನೆ ಕಡ್ಡಾಯ ಅಧಿಕೃತ ವೆಬ್‌ಸೈಟ್‌ ಮೂಲಕ ಪೂರ್ವ ನೋಂದಣಿ ಮಾಡಿಸಿಕೊಳ್ಳುವುದು…

12 minutes ago

ಉಡುಪಿ: ಡಿವೈಡರ್  ಮೇಲೇರಿದ ಸ್ಕೂಲ್‌ ಬಸ್‌ ; ತಪ್ಪಿದ ಅನಾಹುತ – vishwanews24

ಉಡುಪಿ: ಡಿವೈಡರ್  ಮೇಲೇರಿದ ಸ್ಕೂಲ್‌ ಬಸ್‌ ; ತಪ್ಪಿದ ಅನಾಹುತ ಉಡುಪಿ: ಅಲ್-ಇಬಾದಾ ಇಂಡಿಯನ್ ಸ್ಕೂಲ್‌ಗೆ ಸೇರಿದ ಬಸ್‌ವೊಂದು ಗುರುವಾರ…

34 minutes ago

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು – vishwanews24

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…

19 hours ago

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ – vishwanews24

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …

19 hours ago

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ – vishwanews24

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…

19 hours ago