ಮುಂಬೈ: ಬಾಲಿವುಡ್ ನಟಿ ತನುಶ್ರೀ ದತ್ತ ಹಾಗೂ ನಟ ನಾನಾ ಪಾಟೇಕರ್ ವಿವಾದದ ಮಧ್ಯೆ ಈಗ ಹಾಟ್ ಬೆಡಗಿ ರಾಖಿ ಸಾವಂತ್ ಎಂಟ್ರಿ ಕೊಟ್ಟಿದ್ದು, ತನುಶ್ರೀ ದತ್ತ ಸಲಿಂಗಕಾಮಿ, ಆಕೆ ನನ್ನ ಮೇಲೆ ಸಾಕಷ್ಟು ಬಾರಿ ಅತ್ಯಾಚಾರ ನಡೆಸಿದ್ದಾರೆ ಎನ್ನುವ ಮೂಲಕ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.
ತನುಶ್ರೀ ದತ್ತಾ ನನ್ನ ಮೇಲೆ ಸತತವಾಗಿ ಅತ್ಯಾಚಾರ ಎಸಗಿದ್ದಾಳೆ. ತನುಶ್ರೀ ಯುವತಿಯಲ್ಲ. ಆಕೆ ಹುಡುಗರ ಸ್ವಭಾವ ಹೊಂದಿರುವವಳು. ಅವಳು ಸಲಿಂಗಿ(ಲೆಸ್ಬಿಯನ್). ಎಲ್ಲರೂ ಮೀಟೂ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಶಿ ಟೂ(#SheToo) ಎನ್ನುತ್ತೇನೆ ಎಂದು ಹೇಳಿಕೊಂಡಿರುವ ರಾಖಿ, ತನುಶ್ರೀ ನನ್ನ ಆತ್ಮೀಯ ಗೆಳತಿಯಾಗಿದ್ದಳು. ನನ್ನನ್ನು ಪಾರ್ಟಿಗಳಿಗೆ ಕರೆದೊಯ್ದಿದ್ದಾಳೆ ಎಂದರು.
ಈ ಘಟನೆ ನಡೆದಿದ್ದು 12 ವರ್ಷಗಳ ಹಿಂದೆ. ನಾನು ತನುಶ್ರೀ ಮನೆಗೆ ತೆರಳಿದ್ದಾಗ ಅಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು. ಈ ಬಗ್ಗೆ ನನ್ನ ಬಳಿ ಸಾಕ್ಷಿಗಳಿವೆ ಎಂದು ಆರೋಪಿಸಿದ್ದಾರೆ.
ಈ ಎಲ್ಲಾ ಮಾಹಿತಿ ಬಹಿರಂಗೊಳಿಸಿದಂತೆ ನನಗೆ ಸಾಕಷ್ಟು ಜೀವ ಬೆದರಿಕೆ ಕರೆ ಬರುತ್ತಿವೆ. ಅದನ್ನು ಬೆದರಿಕೆಗಳನ್ನು ನೆನೆದರೆ ನನ್ನ ಕೈ ಕಾಲುಗಳು ಭಯದಿಂದ ನಡುಗುತ್ತಿವೆ. ಈಗ ನನಗೆ ಆಕೆಯ ಹೆಸರು ಹೇಳಲು ಸಹ ಭಯವಾಗುತ್ತಿದೆ. ತನುಶ್ರೀಯೇ ನನ್ನನ್ನು ಬಲತ್ಕಾರ ಮಾಡಿದ್ದು, ಇದು ಆಗಿನ 377 ಕಲಂ ವ್ಯಾಪ್ತಿಗೆ ಇದು ಬರುತ್ತದೆ. ತನುಶ್ರೀ ಹುಡುಗಿಯಲ್ಲ. ಆಕೆ ಮಿಸ್ ಇಂಡಿಯಾ ಆಗಿ ನನ್ನ ಉತ್ತಮ ಸ್ನೇಹಿತಳಾಗಿದ್ದಳು. ಸಿಗರೇಟ್ ನಲ್ಲಿ ತಂಬಾಕು ಖಾಲಿ ಮಾಡಿ ಡ್ರಗ್ಸ್ ಸೇರಿಸಿ, ತಾನು ಸೇವನೆ ಮಾಡಿದ್ದಲ್ಲದೆ, ನನಗೂ ಕೊಡಿಸಿದ್ದಳು..
ನನಗೆ ಇದನ್ನು ಹೇಳುವುದ್ದಕ್ಕೆ ತುಂಬಾ ನಾಚಿಕೆ ಆಗುತ್ತಿದೆ ಹಾಗೂ ದುಃಖವಾಗುತ್ತಿದೆ. ಒಬ್ಬಳು ಯುವತಿಯಾಗಿ ನಾನು ಈ ರೀತಿ ಹೇಳುವುದು ಸರಿಯಲ್ಲ. ಆದರೆ ನನಗೆ ಇಂದು ಹೇಳಲು ನಾಚಿಕೆಯಾಗುತ್ತಿದೆ ಎಂದು ರಾಖಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…
ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು :…
ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…
ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…
ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್ಪೋರ್ಟ್…
ದೆಹಲಿ-ಪುಣೆ ಸ್ಪೈಸ್ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್ಜೆಟ್ (Spice Jet) ವಿಮಾನದಲ್ಲಿ…