desha

ನನಗೆ ಟಿಕೆಟ್ ಮಿಸ್ ಆಗಿರಬಹುದು ,ಶಾಸಕನಾಗದೇ ಇರಬಹುದು ಆದ್ರೇ ನನ್ನ ಜತೆ ಜನತೆ ಇರುವಾಗ ಇದಕ್ಕಿಂತ ದೊಡ್ಡ ಶಾಸಕಗಿರಿ ಯಾವ ಲೆಕ್ಕ: ಗುರ್ಮೆ ಸುರೇಶ್ ಶೆಟ್ಟಿ

ಕಾಪು : ಕಾಪು ವಿಧಾನಸಭಾ ಕ್ಷೇತ್ರದ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗುರ್ಮೆ ಸುರೇಶ್ ಶೆಟ್ಟಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಆಗಮಿಸುವ ಸುದ್ದಿ ತಿಳಿಯುತ್ತಿದ್ದಂತೆ ಗುರ್ಮೆ ಅಭಿಮಾನಿಗಳು, ಬಿಜೆಪಿ ಮುಖಂಡರು,ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಯ ಮುಖಂಡರು ಕಳತ್ತೂರಿನ ನಿವಾಸದಲ್ಲಿ ಸೇರಿ ಗುರ್ಮೆಯ ಮುಂದಿನ ನಡೆ ಏನು ಎಂಬುದರ ಚರ್ಚೆ ನಡೆಸಿದರು.

ಇಡೀ ಕಾಪು ವಿಧಾನ ಸಭಾ ಕ್ಷೇತ್ರದ ಸಾವಿರಾರು ಗುರ್ಮೆ ಅಭಿಮಾನಿಗಳು ಹೈಕಾಮಂಡ್ ವಿರುದ್ದ ಘೋಷನೆ ಕೂಗುತ್ತಿದ್ದಂತೆ ಗುರ್ಮೆ ಮಧ್ಯ ಪ್ರವೇಶಿಸಿ ಯಾರು ಕೂಡ ನಮ್ಮ ಪಕ್ಷದ ಹಿರಿಯರ ವಿರುದ್ದ ಘೋಷನೆ ಹಾಕದಂತೆ ವಿನಂತಿಸಿಕೊಂಡರು. ಹಿರಿಯ ವ್ಯಕ್ತಿಗಳು.ಅಭಿಮಾನಿಗಳು ಸುರೇಶ್ ಶೆಟ್ಟಿ ಗುರ್ಮೆ ಟಿಕೆಟ್ ಕೈ ತಪ್ಪಿರುವುದಕ್ಕೆ ಬೇಸರದ ಮಾತುಗಳನ್ನ ವ್ಯಕ್ತ ಪಡಿಸಿ ಪಕ್ಷೇತರ ನಿಲ್ಲುವಂತೆ ಒತ್ತಾಯಿಸಿದರು.

ತದನಂತರ ಮಾತಾಡಿದ ಸುರೇಶ್ ಶೆಟ್ಟಿ”ನಾನು ರಾಜಕೀಯಕ್ಕೆ ಬಂದಿರುವುದು ಆಕಸ್ಮಿಕ ಸ್ನೇಹಿತರ ಒತ್ತಡಕ್ಕೆ ಮಣಿದು ಈ ರಂಗಕ್ಕೆ ಬರಬೇಕಾಯಿತು , ಖಾಲಿ ಕೈಯಲ್ಲಿ ಊರು ಬಿಟ್ಟು ಪರಊರಿನಲ್ಲಿ ಉದ್ಯಮ ನಡೆಸುತ್ತಿರಬಹುದು ಆದರ ಬಡವರ ಕಷ್ಟ ನನಗೆ ತಿಳಿದಿದೆ.  ರಾಜಕೀಯದಿಂದ ದುಡ್ಡು ಮಾಡುವ ಅವಶ್ಯಕತೇ ಇಲ್ಲ ಅಥವಾ ಅಂತಹ ದಾರಿದ್ರ್ಯ ನನಗಿನ್ನು ಬಂದಿಲ್ಲ , ನಾನು ಸಂಪಾದಿಸಿದ ಹಣದಲ್ಲಿ ಅರ್ಧಕಿಂತಲೂ ಹೆಚ್ಚಿನ ಭಾಗ ಜಾತಿ ಮತ ಬೇಧವಿಲ್ಲದೆ ದಾನ ಧರ್ಮ ಮಾಡಿದ್ದೆನೆ ಮತ್ತು ಪಕ್ಷದ ಎಲ್ಲಾ ಕಾರ್ಯ ಚಟುವಟಿಕೆಗಳನ್ನ ನಿ‍ಷ್ಠೆಯಿಂದ ಧರ್ಮ ಪ್ರಕಾರ ಮಾಡಿದ್ದೆನೆ ಆದರೇ ಇವತ್ತು ನನಗೆ ಟಿಕೆಟ್ ಮಿಸ್ ಆಗಿರಬಹುದು ಅಥವಾ ಶಾಸಕನಾಗದೇ ಇರಬಹುದು ಆದ್ರೇ ನನ್ನ ಜತೆ ನೀವೆಲ್ಲ ಇರುವಾಗ ಇದಕ್ಕಿಂತ ದೊಡ್ಡ ಶಾಸಕಗಿರಿ ಯಾವ ಲೆಕ್ಕ ಎಂದು ನುಡಿದರು.ಮತ್ತು ಈ ಟಿಕೆಟ್ ಕೈ ತಪ್ಪಿರುವುದು ಸಹ ದೇವರು ನನಗೆ ಒಳ್ಳೆಯದನ್ನೆ ಮಾಡಲು ಹೀಗೆ ಮಾಡಿರಬಹುದೆಂದು ಹೇಳಿ ಭಾವುಕರಾಧರು.ಹಾಗೂ ನಾನು ಯಾವುದೇ ಕಾರಣಕ್ಕೂ ಪಕ್ಷವನ್ನು ತ್ಯಜಿಸುವುದಿಲ್ಲ ಆದರೇ ಮುಂದಿನ ನಡೆ ಏನು ಎಂಬುದನ್ನು ಎರಡು ದಿನದೊಳಗೆ ಸಭೆ ಕರೆದು ತಿಳಿಸುತ್ತೆನೆ ಎಂದರು”.

ಸುರೇಶ್ ಶೆಟ್ಟಿ ಗುರ್ಮೆ ಅವರು ಕಳೆದ ನಾಲ್ಕು ವರ್ಷಗಳಿಂದ ಬಿಜೆಪಿ ಕಾರ್ಯಕರ್ತರಾಗಿ, ಪದಾ„ಕಾರಿಯಾಗಿ, ಜಿಲ್ಲಾ ಮುಖಂಡರಾಗಿ ಸಕ್ರಿಯರಾಗಿದ್ದು, ಕಾಪು ವಿಧಾನಸಭಾ ಕ್ಷೇತ್ರ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕಳೆದ ಲೋಕಸಭಾ ಚುನಾವಣೆ, ಗ್ರಾ.ಪಂ., ತಾ.ಪಂ. ಮತ್ತು ಜಿ.ಪಂ. ಚುನಾವಣೆಗಳಲ್ಲಿ ಪಕ್ಷದ ಪ್ರಧಾನ ಶಕ್ತಿಯಾಗಿ, ಚೈತನ್ಯ ತುಂಬಿದ್ದ ಅವರು ಕಾರ್ಯಕರ್ತರ ಪ್ರತೀ ಕಷ್ಟಗಳಲ್ಲಿಯೂ ನೇರವಾಗಿ ಭಾಗಿಯಾಗುತ್ತಿದ್ದರು. ಅವರಿಗೆ ಬಿಜೆಪಿ ಕೊನೇ ಕ್ಷಣದಲ್ಲಿ ಟಿಕೆಟ್ ನಿರಾಕರಿಸಿರುವುದು ಕಾರ್ಯಕರ್ತರು ಮತ್ತು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದು ರವಿವಾರ ಅವರ ಮನೆಗೆ ಭೇಟಿ ನೀಡಿದ ಅಭಿಮಾನಿಗಳು ಮತ್ತು ಕಾರ್ಯಕರ್ತರು ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು.

 

 

Vishwa News 24

Recent Posts

ರನ್‌ವೇಯಲ್ಲಿ ಮುಖಾಮುಖಿಯಾದ ಏರ್ ಇಂಡಿಯಾ, ಇಂಡಿಗೋ ವಿಮಾನಗಳು : ತಪ್ಪಿದ ಭಾರೀ ದುರಂತ – vishwanews24

ರನ್‌ವೇಯಲ್ಲಿ ಮುಖಾಮುಖಿಯಾದ ಏರ್ ಇಂಡಿಯಾ, ಇಂಡಿಗೋ ವಿಮಾನಗಳು : ತಪ್ಪಿದ ಭಾರೀ ದುರಂತ ಅಹಮದಾಬಾದ್,: ಗುಜರಾತ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್…

4 minutes ago

ಬೆಳ್ತಂಗಡಿ : ಹೊತ್ತಿ ಉರಿದ ಸ್ಕೂಟಿ ; ಗಾಯಗೊಂಡಿದ್ದ ಬಾಲಕ ಮೃತ್ಯು – vishwanews24

ಬೆಳ್ತಂಗಡಿ : ಹೊತ್ತಿ ಉರಿದ ಸ್ಕೂಟಿ ; ಗಾಯಗೊಂಡಿದ್ದ ಬಾಲಕ ಮೃತ್ಯು ಬೆಳ್ತಂಗಡಿ: ತಾಲೂಕಿನ ಬೆಳಾಲು ಗ್ರಾಮದ ಮಿನಂದೇಲುವಿನಲ್ಲಿ ಸ್ಕೂಟಿಯೊಂದು…

14 minutes ago

ಬೆಳ್ತಂಗಡಿ: ಗಡಾಯಿಕಲ್ಲು ಪ್ರವೇಶ ಮತ್ತೆ ಆರಂಭ ; ಗುರುತಿನ ಚೀಟಿ, ಶುಲ್ಕ ಕಡ್ಡಾಯ – vishwanews24

ಬೆಳ್ತಂಗಡಿ: ಗಡಾಯಿಕಲ್ಲು ಪ್ರವೇಶ ಆರಂಭ - ಈ ನಿಯಮ ಪಾಲನೆ ಕಡ್ಡಾಯ ಅಧಿಕೃತ ವೆಬ್‌ಸೈಟ್‌ ಮೂಲಕ ಪೂರ್ವ ನೋಂದಣಿ ಮಾಡಿಸಿಕೊಳ್ಳುವುದು…

21 minutes ago

ಉಡುಪಿ: ಡಿವೈಡರ್  ಮೇಲೇರಿದ ಸ್ಕೂಲ್‌ ಬಸ್‌ ; ತಪ್ಪಿದ ಅನಾಹುತ – vishwanews24

ಉಡುಪಿ: ಡಿವೈಡರ್  ಮೇಲೇರಿದ ಸ್ಕೂಲ್‌ ಬಸ್‌ ; ತಪ್ಪಿದ ಅನಾಹುತ ಉಡುಪಿ: ಅಲ್-ಇಬಾದಾ ಇಂಡಿಯನ್ ಸ್ಕೂಲ್‌ಗೆ ಸೇರಿದ ಬಸ್‌ವೊಂದು ಗುರುವಾರ…

43 minutes ago

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು – vishwanews24

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…

19 hours ago

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ – vishwanews24

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …

19 hours ago