desha

ನನಗೆ ಟಿಕೆಟ್ ಮಿಸ್ ಆಗಿರಬಹುದು ,ಶಾಸಕನಾಗದೇ ಇರಬಹುದು ಆದ್ರೇ ನನ್ನ ಜತೆ ಜನತೆ ಇರುವಾಗ ಇದಕ್ಕಿಂತ ದೊಡ್ಡ ಶಾಸಕಗಿರಿ ಯಾವ ಲೆಕ್ಕ: ಗುರ್ಮೆ ಸುರೇಶ್ ಶೆಟ್ಟಿ

ಕಾಪು : ಕಾಪು ವಿಧಾನಸಭಾ ಕ್ಷೇತ್ರದ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗುರ್ಮೆ ಸುರೇಶ್ ಶೆಟ್ಟಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಆಗಮಿಸುವ ಸುದ್ದಿ ತಿಳಿಯುತ್ತಿದ್ದಂತೆ ಗುರ್ಮೆ ಅಭಿಮಾನಿಗಳು, ಬಿಜೆಪಿ ಮುಖಂಡರು,ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಯ ಮುಖಂಡರು ಕಳತ್ತೂರಿನ ನಿವಾಸದಲ್ಲಿ ಸೇರಿ ಗುರ್ಮೆಯ ಮುಂದಿನ ನಡೆ ಏನು ಎಂಬುದರ ಚರ್ಚೆ ನಡೆಸಿದರು.

ಇಡೀ ಕಾಪು ವಿಧಾನ ಸಭಾ ಕ್ಷೇತ್ರದ ಸಾವಿರಾರು ಗುರ್ಮೆ ಅಭಿಮಾನಿಗಳು ಹೈಕಾಮಂಡ್ ವಿರುದ್ದ ಘೋಷನೆ ಕೂಗುತ್ತಿದ್ದಂತೆ ಗುರ್ಮೆ ಮಧ್ಯ ಪ್ರವೇಶಿಸಿ ಯಾರು ಕೂಡ ನಮ್ಮ ಪಕ್ಷದ ಹಿರಿಯರ ವಿರುದ್ದ ಘೋಷನೆ ಹಾಕದಂತೆ ವಿನಂತಿಸಿಕೊಂಡರು. ಹಿರಿಯ ವ್ಯಕ್ತಿಗಳು.ಅಭಿಮಾನಿಗಳು ಸುರೇಶ್ ಶೆಟ್ಟಿ ಗುರ್ಮೆ ಟಿಕೆಟ್ ಕೈ ತಪ್ಪಿರುವುದಕ್ಕೆ ಬೇಸರದ ಮಾತುಗಳನ್ನ ವ್ಯಕ್ತ ಪಡಿಸಿ ಪಕ್ಷೇತರ ನಿಲ್ಲುವಂತೆ ಒತ್ತಾಯಿಸಿದರು.

ತದನಂತರ ಮಾತಾಡಿದ ಸುರೇಶ್ ಶೆಟ್ಟಿ”ನಾನು ರಾಜಕೀಯಕ್ಕೆ ಬಂದಿರುವುದು ಆಕಸ್ಮಿಕ ಸ್ನೇಹಿತರ ಒತ್ತಡಕ್ಕೆ ಮಣಿದು ಈ ರಂಗಕ್ಕೆ ಬರಬೇಕಾಯಿತು , ಖಾಲಿ ಕೈಯಲ್ಲಿ ಊರು ಬಿಟ್ಟು ಪರಊರಿನಲ್ಲಿ ಉದ್ಯಮ ನಡೆಸುತ್ತಿರಬಹುದು ಆದರ ಬಡವರ ಕಷ್ಟ ನನಗೆ ತಿಳಿದಿದೆ.  ರಾಜಕೀಯದಿಂದ ದುಡ್ಡು ಮಾಡುವ ಅವಶ್ಯಕತೇ ಇಲ್ಲ ಅಥವಾ ಅಂತಹ ದಾರಿದ್ರ್ಯ ನನಗಿನ್ನು ಬಂದಿಲ್ಲ , ನಾನು ಸಂಪಾದಿಸಿದ ಹಣದಲ್ಲಿ ಅರ್ಧಕಿಂತಲೂ ಹೆಚ್ಚಿನ ಭಾಗ ಜಾತಿ ಮತ ಬೇಧವಿಲ್ಲದೆ ದಾನ ಧರ್ಮ ಮಾಡಿದ್ದೆನೆ ಮತ್ತು ಪಕ್ಷದ ಎಲ್ಲಾ ಕಾರ್ಯ ಚಟುವಟಿಕೆಗಳನ್ನ ನಿ‍ಷ್ಠೆಯಿಂದ ಧರ್ಮ ಪ್ರಕಾರ ಮಾಡಿದ್ದೆನೆ ಆದರೇ ಇವತ್ತು ನನಗೆ ಟಿಕೆಟ್ ಮಿಸ್ ಆಗಿರಬಹುದು ಅಥವಾ ಶಾಸಕನಾಗದೇ ಇರಬಹುದು ಆದ್ರೇ ನನ್ನ ಜತೆ ನೀವೆಲ್ಲ ಇರುವಾಗ ಇದಕ್ಕಿಂತ ದೊಡ್ಡ ಶಾಸಕಗಿರಿ ಯಾವ ಲೆಕ್ಕ ಎಂದು ನುಡಿದರು.ಮತ್ತು ಈ ಟಿಕೆಟ್ ಕೈ ತಪ್ಪಿರುವುದು ಸಹ ದೇವರು ನನಗೆ ಒಳ್ಳೆಯದನ್ನೆ ಮಾಡಲು ಹೀಗೆ ಮಾಡಿರಬಹುದೆಂದು ಹೇಳಿ ಭಾವುಕರಾಧರು.ಹಾಗೂ ನಾನು ಯಾವುದೇ ಕಾರಣಕ್ಕೂ ಪಕ್ಷವನ್ನು ತ್ಯಜಿಸುವುದಿಲ್ಲ ಆದರೇ ಮುಂದಿನ ನಡೆ ಏನು ಎಂಬುದನ್ನು ಎರಡು ದಿನದೊಳಗೆ ಸಭೆ ಕರೆದು ತಿಳಿಸುತ್ತೆನೆ ಎಂದರು”.

ಸುರೇಶ್ ಶೆಟ್ಟಿ ಗುರ್ಮೆ ಅವರು ಕಳೆದ ನಾಲ್ಕು ವರ್ಷಗಳಿಂದ ಬಿಜೆಪಿ ಕಾರ್ಯಕರ್ತರಾಗಿ, ಪದಾ„ಕಾರಿಯಾಗಿ, ಜಿಲ್ಲಾ ಮುಖಂಡರಾಗಿ ಸಕ್ರಿಯರಾಗಿದ್ದು, ಕಾಪು ವಿಧಾನಸಭಾ ಕ್ಷೇತ್ರ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕಳೆದ ಲೋಕಸಭಾ ಚುನಾವಣೆ, ಗ್ರಾ.ಪಂ., ತಾ.ಪಂ. ಮತ್ತು ಜಿ.ಪಂ. ಚುನಾವಣೆಗಳಲ್ಲಿ ಪಕ್ಷದ ಪ್ರಧಾನ ಶಕ್ತಿಯಾಗಿ, ಚೈತನ್ಯ ತುಂಬಿದ್ದ ಅವರು ಕಾರ್ಯಕರ್ತರ ಪ್ರತೀ ಕಷ್ಟಗಳಲ್ಲಿಯೂ ನೇರವಾಗಿ ಭಾಗಿಯಾಗುತ್ತಿದ್ದರು. ಅವರಿಗೆ ಬಿಜೆಪಿ ಕೊನೇ ಕ್ಷಣದಲ್ಲಿ ಟಿಕೆಟ್ ನಿರಾಕರಿಸಿರುವುದು ಕಾರ್ಯಕರ್ತರು ಮತ್ತು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದು ರವಿವಾರ ಅವರ ಮನೆಗೆ ಭೇಟಿ ನೀಡಿದ ಅಭಿಮಾನಿಗಳು ಮತ್ತು ಕಾರ್ಯಕರ್ತರು ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು.

 

 

Vishwa News 24

Recent Posts

ಕಾಸರಗೋಡು: ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ ತೆರಳಿದ್ದ 8ನೇ ತರಗತಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು – vishwanews24

ಕಾಸರಗೋಡು: ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ ತೆರಳಿದ್ದ 8ನೇ ತರಗತಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು ಕಾಸರಗೋಡು: ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ…

6 minutes ago

ರಾಜ್ಯಾದ್ಯಂತ 1 ವರ್ಷ ಗುಟ್ಕಾ, ಪಾನ್ ಮಸಾಲಾ ಮಾರಾಟ ನಿಷೇಧ – vishwanews24

ರಾಜ್ಯಾದ್ಯಂತ 1 ವರ್ಷ ಗುಟ್ಕಾ, ಪಾನ್ ಮಸಾಲಾ ಮಾರಾಟ ನಿಷೇಧ ಬೆಂಗಳೂರು: ಕರ್ನಾಟಕ ಸರ್ಕಾರವು  ತಂಬಾಕು ಮತ್ತು ನಿಕೋಟಿನ್ ಹೊಂದಿರುವ…

21 minutes ago

ಉಡುಪಿ : ಶ್ರೀ ಕೃಷ್ಣ ಮಠಕ್ಕೆ ಅಣ್ಣಾಮಲೈ  ಭೇಟಿ  – vishwanews24

ಉಡುಪಿ : ಶ್ರೀ ಕೃಷ್ಣ ಮಠಕ್ಕೆ ಭೇಟಿ  ನೀಡಿ ದೇವರ ದರ್ಶನ ಪಡೆದ ಅಣ್ಣಾಮಲೈ  ಉಡುಪಿ: ಮಾಜಿ ಐಪಿಎಸ್ ಅಧಿಕಾರಿ…

36 minutes ago

ನಾಳಿನ ‘ಕರ್ನಾಟಕ ಬಂದ್’ಗೆ ನಮ್ಮ ಬೆಂಬಲವಿಲ್ಲ: ಕರವೇ ಪ್ರವೀಣ್ ಶೆಟ್ಟಿ ಸ್ಪಷ್ಟನೆ – vishwanews24

‘ಕರ್ನಾಟಕ ಬಂದ್’ಗೆ ನಮ್ಮ ಬೆಂಬಲವಿಲ್ಲ: ಕರವೇ ಪ್ರವೀಣ್ ಶೆಟ್ಟಿ ಸ್ಪಷ್ಟನೆ ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ…

2 hours ago

ನಟ ಪ್ರಕಾಶ್ ರಾಜ್ ಮತದಾರರ ಪಟ್ಟಿ ಹೆಸರು ಕೈಬಿಟ್ಟ ಆರೋಪ ಸುಳ್ಳು: ಬಿಬಿಎಂಪಿ ಸ್ಪಷ್ಟನೆ – vishwanews24

ವೋಟರ್ ಲಿಸ್ಟ್​ನಿಂದ ತಮ್ಮ ಹೆಸರು ಕೈಬಿಡಲಾಗಿದೆ : ನಟ ಪ್ರಕಾಶ್​ ರಾಜ್ ಆರೋಪಕ್ಕೆ ಚುನಾವಣಾಧಿಕಾರಿ ಸ್ಪಷ್ಟನೆ ಬೆಂಗಳೂರು: ಮತದಾರರ ಪಟ್ಟಿಯಿಂದ…

3 hours ago

ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ. ಕೆ. ಶಿವಕುಮಾರ್ – vishwanews24

ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಅವರ ಸಚಿವ ಸಂಪುಟಕ್ಕೆ…

3 hours ago