Featured

ನಮಗೆ ಯಾವುದೇ ಒತ್ತಡವಿಲ್ಲ , ಡಿಕೆಶಿ ಕಡೆಯಿಂದ ನಮ್ಮ ಮಗಳನ್ನು ರಕ್ಷಿಸಿ : ಸಿಡಿ ಯುವತಿ ಪೋಷಕರ ಹೇಳಿಕೆ -Vishwanews24

ನಮಗೆ ಯಾವುದೇ ಒತ್ತಡವಿಲ್ಲ , ಡಿಕೆಶಿಯವರ ಕಡೆಯಿಂದ ನಮ್ಮ ಮಗಳನ್ನು ರಕ್ಷಿಸಿ : ಸಿಡಿ ಯುವತಿ ಪೋಷಕರ ಹೇಳಿಕೆ -Vishwanews24

ಬೆಳಗಾವಿ: ಕಳೆದ 25ಕ್ಕೂ ಹೆಚ್ಚು ದಿನಗಳಿಂದ ನನ್ನ ಅಕ್ಕನಿಗೆ ಎಷ್ಟು ಚಿತ್ರಹಿಂಸೆ ಮಾಡುತ್ತಿದ್ದಾರೆ ದೇವರಿಗೆ ಗೊತ್ತು. ಡಿ.ಕೆ. ಶಿವಕುಮಾರ್ ಹೇಳಿದ ಹಾಗೆ ಆಕೆ ಮಾಡುತ್ತಿದ್ದಾಳೆ. ಅವಳನ್ನು ರಕ್ಷಿಸಿ ಎಂದು ಸಿಡಿ ಯುವತಿಯ ಮನೆಯವರು ಹೇಳಿಕೆ ನೀಡಿದ್ದಾರೆ.

ನಗದಲ್ಲಿ ಸಿಡಿ ಸಂತ್ರಸ್ತ ಯುವತಿ ತಂದೆ-ತಾಯಿ, ಸಹೋದರರು ಸುದ್ದಿಗಾರರೊಂದಿಗೆ ಮಾತನಾಡಿದ್ದು, ಪ್ರಕರಣ ಹೊರ ಬಂದಂತೆ ನಾವು ಆಕೆಯನ್ನು ಸಂಪರ್ಕಿಸಿದ್ದವು. ಆಕೆ ಅದೆಲ್ಲವೂ ಸುಳ್ಳು, ಗ್ರಾಫಿಕ್ಸ್ ಎಂಬುದಾಗಿಯೂ ತಿಳಿಸಿದ್ದಳು. ನಮ್ಮ ಮಗಳ ಮೇಲೆ ನಮಗೆ ನಂಬಿಕೆ ಇದೆ. ಆಕೆ ಇಂತಹ ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬುದಾಗಿ ಹೇಳಿದರು.

ಇದನ್ನೂ ಓದಿ : ಸಿಡಿ ಪ್ರಕರಣ : ಸಂತ್ರಸ್ತೆ ಬಂದು ದೂರು ನೀಡುವವರೆಗೂ ಯಾರನ್ನೂ ಬಂಧಿಸಲು ಆಗಲ್ಲ: ಪ್ರಹ್ಲಾದ್‌ ಜೋಶಿ -Vishwanews24

ನಮ್ಮ ಮಗಳಿಂದ ದಿನಕ್ಕೊಂದು ಹೇಳಿಕೆಯನ್ನು ಒತ್ತಾಯಪೂರ್ವಕವಾಗಿಯೇ ಕೊಡಿಸುತ್ತಿದ್ದಾರೆ. ಪ್ರಕರಣದ ಹಿಂದೆ ಡಿಕೆ ಶಿವಕುಮಾರ್ ಇದ್ದಾರೆ. ಅವರನ್ನು ಆಕೆ ಭೇಟಿಯಾಗಿದ್ದಾಗಿಯೂ ಹೇಳಿದ್ದಾಳೆ. ಹಣ ಕೊಟ್ಟು ಗೋವಾ ಸೇರಿದಂತೆ ಬೇರೆ ಬೇರೆ ಸ್ಥಳಗಳಿಗೆ ಕಳುಹಿಸಿ ಕೊಡಲಾಗಿದೆ. ಒತ್ತಡ, ಒತ್ತಾಯದೊಂದಿಗೆ ಆಕೆ ಹೀಗೆಲ್ಲಾ ಹೇಳಿಕೆ ನೀಡುತ್ತಿದ್ದಾಳೆ. ಆಕೆಯನ್ನು ನಾವು ಮಾತನಾಡಿಸೋದು ಬಿಟ್ಟಿಲ್ಲ. ಆಕೆ ನಮ್ಮ ಜೊತೆಗೆ ಇರಲು ಬಯಸಿದ್ರೇ ಬರಲಿ ಎಂದರು.

ಆಕೆ 25 ದಿನಗಳಿಂದ ಯಾವ ರೀತಿ ಹೇಳಿಕೆ ನೀಡುತ್ತಿದ್ದಾರೆಂದು ರಾಜ್ಯದ ಸಿಎಂ, ನ್ಯಾಯಾಧೀಶರು, ಗೃಹ ಸಚಿವರು ಪರಿಗಣಿಸಬೇಕು. ಆಕೆಗೆ 3-4 ದಿನಗಳ ಕಾಲ ಸಮಯ ನೀಡಬೇಕು. ಕೌನ್ಸಲಿಂಗ್ ಮಾಡಿಸಬೇಕು ಎಂದರು.

ಡಿ ಕೆ ಶಿವಕುಮಾರ್ ಮತ್ತು ಸಿಡಿ ಗುಂಪು ಷಡ್ಯಂತ್ರ ನಡೆಸುತ್ತಿದೆ. ಡಿಕೆಶಿಯವರ ಕಡೆಯಿಂದ ನಮ್ಮ ಮಗಳನ್ನು ರಕ್ಷಿಸಿ ಎಂದು ಯುವತಿ ಪೋಷಕರು ನೇರ ಆರೋಪ ಮಾಡಿದರು.

ನಾನು ನಿವೃತ್ತ ಸೈನಿಕನಿದ್ದೇನೆ. ನನ್ನ ಮಗಳಿಗೆ ನಾನು ಭದ್ರತೆ ನೀಡುತ್ತೇನೆ. ಅವಳು ಇಲ್ಲಿದೆ ಬರಲಿ ಎಂದು ಯುವತಿಯ ತಂದೆ ಹೇಳಿದರು.

ಇದನ್ನೂ ಓದಿ :ರಮೇಶ್ ಜಾರಕೊಹೊಳಿ ಅವರನ್ನು ಬಂಧಿಸುವಂತೆ ಕಾಂಗ್ರೆಸ್‌ ಪ್ರತಿಭಟನೆ : ಮಿಥುನ್‌ ರೈ, ನಲಪಾಡ್ ‌ಸೇರಿದಂತೆ ಹಲವರು ಪೊಲೀಸ್‌ ವಶಕ್ಕೆ -Vishwanews24

Vishwa News 24

Recent Posts

ವಿಧಾನ ಪರಿಷತ್‌ ನೂತನ ಸಭಾಪತಿಯಾಗಿ ಸಲೀಂ ಅಹಮದ್ ಆಯ್ಕೆ – vishwanews24

ವಿಧಾನ ಪರಿಷತ್‌ ನೂತನ ಸಭಾಪತಿಯಾಗಿ ಸಲೀಂ ಅಹಮದ್ ಆಯ್ಕೆ ಬೆಂಗಳೂರು: ಬಸವರಾಜ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್‌…

11 hours ago

15,000 ಸರ್ಕಾರಿ ಶಿಕ್ಷಕರ ಬೃಹತ್ ನೇಮಕಾತಿ ಪ್ರಕ್ರಿಯೆಗೆ ಚಾಲನೆ :  ಆ.18ರಿಂದ ಅರ್ಜಿ ಸಲ್ಲಿಕೆ ಆರಂಭ – vishwanews24

15,000 ಸರ್ಕಾರಿ ಶಿಕ್ಷಕರ ಬೃಹತ್ ನೇಮಕಾತಿ :  ಆ.18ರಿಂದ ಅರ್ಜಿ ಸಲ್ಲಿಕೆ ಆರಂಭ ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ…

12 hours ago

ಕರ್ನಾಟಕದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ ಗೌರವ – vishwanews24

ಕರ್ನಾಟಕದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ ಗೌರವ ಬೆಂಗಳೂರು : ದೇಶದ 80ನೇ ಸ್ವಾತಂತ್ರ್ಯ ದಿನೋತ್ಸವದ…

12 hours ago

ಗುಟ್ಕಾ ನಿಷೇಧ ಆದೇಶ ಶೀಘ್ರದಲ್ಲೇ ಹಿಂಪಡೆಯಲು ಸಿಎಂ ಡಿಕೆಶಿ ಸೂಚನೆ – vishwanews24

 ಏಳೆಂಟು ಜಿಲ್ಲೆಯ ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಗುಟ್ಕಾ ನಿಷೇಧ ಆದೇಶ ಶೀಘ್ರದಲ್ಲೇ ಹಿಂಪಡೆಯಲು ಸಿಎಂ ಡಿಕೆಶಿ ಸೂಚನೆ ಬೆಂಗಳೂರು…

12 hours ago

ಉಡುಪಿ:ಮಾದಕ ದ್ರವ್ಯ ಪ್ರಕರಣ :  ಪಿಐಟಿ–ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ – vishwanews24

ಉಡುಪಿ:ಮಾದಕ ದ್ರವ್ಯ ಪ್ರಕರಣ :  ಪಿಐಟಿ ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿ ಬಂಧನ ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶ ಉಡುಪಿ:…

12 hours ago

ಕುದುರೆಮುಖ ಆಫ್ ರೋಡಿಂಗ್ ಚಟುವಟಿಕೆ ವಿರುದ್ಧ ತೀವ್ರ ಆಕ್ರೋಶ – vishwanews24

ಕುದುರೆಮುಖದಲ್ಲಿ ಅನಧಿಕೃತ ಜೀಪುಗಳ ಆಫ್ ರೋಡಿಂಗ್ .. ನಿಷೇಧಿಸುವಂತೆ ಜಿಲ್ಲಾಡಳಿತಕ್ಕೆ ಸ್ಥಳೀಯರು, ಪರಿಸರ ಪ್ರೇಮಿಗಳ ಒತ್ತಾಯ ಮೋಜು-ಮಸ್ತಿಗಾಗಿ ಸೂಕ್ಷ್ಮ ಪರಿಸರದಲ್ಲಿ…

15 hours ago