Featured

ನಮಗೆ ಯಾವುದೇ ಒತ್ತಡವಿಲ್ಲ , ಡಿಕೆಶಿ ಕಡೆಯಿಂದ ನಮ್ಮ ಮಗಳನ್ನು ರಕ್ಷಿಸಿ : ಸಿಡಿ ಯುವತಿ ಪೋಷಕರ ಹೇಳಿಕೆ -Vishwanews24

ನಮಗೆ ಯಾವುದೇ ಒತ್ತಡವಿಲ್ಲ , ಡಿಕೆಶಿಯವರ ಕಡೆಯಿಂದ ನಮ್ಮ ಮಗಳನ್ನು ರಕ್ಷಿಸಿ : ಸಿಡಿ ಯುವತಿ ಪೋಷಕರ ಹೇಳಿಕೆ -Vishwanews24

ಬೆಳಗಾವಿ: ಕಳೆದ 25ಕ್ಕೂ ಹೆಚ್ಚು ದಿನಗಳಿಂದ ನನ್ನ ಅಕ್ಕನಿಗೆ ಎಷ್ಟು ಚಿತ್ರಹಿಂಸೆ ಮಾಡುತ್ತಿದ್ದಾರೆ ದೇವರಿಗೆ ಗೊತ್ತು. ಡಿ.ಕೆ. ಶಿವಕುಮಾರ್ ಹೇಳಿದ ಹಾಗೆ ಆಕೆ ಮಾಡುತ್ತಿದ್ದಾಳೆ. ಅವಳನ್ನು ರಕ್ಷಿಸಿ ಎಂದು ಸಿಡಿ ಯುವತಿಯ ಮನೆಯವರು ಹೇಳಿಕೆ ನೀಡಿದ್ದಾರೆ.

ನಗದಲ್ಲಿ ಸಿಡಿ ಸಂತ್ರಸ್ತ ಯುವತಿ ತಂದೆ-ತಾಯಿ, ಸಹೋದರರು ಸುದ್ದಿಗಾರರೊಂದಿಗೆ ಮಾತನಾಡಿದ್ದು, ಪ್ರಕರಣ ಹೊರ ಬಂದಂತೆ ನಾವು ಆಕೆಯನ್ನು ಸಂಪರ್ಕಿಸಿದ್ದವು. ಆಕೆ ಅದೆಲ್ಲವೂ ಸುಳ್ಳು, ಗ್ರಾಫಿಕ್ಸ್ ಎಂಬುದಾಗಿಯೂ ತಿಳಿಸಿದ್ದಳು. ನಮ್ಮ ಮಗಳ ಮೇಲೆ ನಮಗೆ ನಂಬಿಕೆ ಇದೆ. ಆಕೆ ಇಂತಹ ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬುದಾಗಿ ಹೇಳಿದರು.

ಇದನ್ನೂ ಓದಿ : ಸಿಡಿ ಪ್ರಕರಣ : ಸಂತ್ರಸ್ತೆ ಬಂದು ದೂರು ನೀಡುವವರೆಗೂ ಯಾರನ್ನೂ ಬಂಧಿಸಲು ಆಗಲ್ಲ: ಪ್ರಹ್ಲಾದ್‌ ಜೋಶಿ -Vishwanews24

ನಮ್ಮ ಮಗಳಿಂದ ದಿನಕ್ಕೊಂದು ಹೇಳಿಕೆಯನ್ನು ಒತ್ತಾಯಪೂರ್ವಕವಾಗಿಯೇ ಕೊಡಿಸುತ್ತಿದ್ದಾರೆ. ಪ್ರಕರಣದ ಹಿಂದೆ ಡಿಕೆ ಶಿವಕುಮಾರ್ ಇದ್ದಾರೆ. ಅವರನ್ನು ಆಕೆ ಭೇಟಿಯಾಗಿದ್ದಾಗಿಯೂ ಹೇಳಿದ್ದಾಳೆ. ಹಣ ಕೊಟ್ಟು ಗೋವಾ ಸೇರಿದಂತೆ ಬೇರೆ ಬೇರೆ ಸ್ಥಳಗಳಿಗೆ ಕಳುಹಿಸಿ ಕೊಡಲಾಗಿದೆ. ಒತ್ತಡ, ಒತ್ತಾಯದೊಂದಿಗೆ ಆಕೆ ಹೀಗೆಲ್ಲಾ ಹೇಳಿಕೆ ನೀಡುತ್ತಿದ್ದಾಳೆ. ಆಕೆಯನ್ನು ನಾವು ಮಾತನಾಡಿಸೋದು ಬಿಟ್ಟಿಲ್ಲ. ಆಕೆ ನಮ್ಮ ಜೊತೆಗೆ ಇರಲು ಬಯಸಿದ್ರೇ ಬರಲಿ ಎಂದರು.

ಆಕೆ 25 ದಿನಗಳಿಂದ ಯಾವ ರೀತಿ ಹೇಳಿಕೆ ನೀಡುತ್ತಿದ್ದಾರೆಂದು ರಾಜ್ಯದ ಸಿಎಂ, ನ್ಯಾಯಾಧೀಶರು, ಗೃಹ ಸಚಿವರು ಪರಿಗಣಿಸಬೇಕು. ಆಕೆಗೆ 3-4 ದಿನಗಳ ಕಾಲ ಸಮಯ ನೀಡಬೇಕು. ಕೌನ್ಸಲಿಂಗ್ ಮಾಡಿಸಬೇಕು ಎಂದರು.

ಡಿ ಕೆ ಶಿವಕುಮಾರ್ ಮತ್ತು ಸಿಡಿ ಗುಂಪು ಷಡ್ಯಂತ್ರ ನಡೆಸುತ್ತಿದೆ. ಡಿಕೆಶಿಯವರ ಕಡೆಯಿಂದ ನಮ್ಮ ಮಗಳನ್ನು ರಕ್ಷಿಸಿ ಎಂದು ಯುವತಿ ಪೋಷಕರು ನೇರ ಆರೋಪ ಮಾಡಿದರು.

ನಾನು ನಿವೃತ್ತ ಸೈನಿಕನಿದ್ದೇನೆ. ನನ್ನ ಮಗಳಿಗೆ ನಾನು ಭದ್ರತೆ ನೀಡುತ್ತೇನೆ. ಅವಳು ಇಲ್ಲಿದೆ ಬರಲಿ ಎಂದು ಯುವತಿಯ ತಂದೆ ಹೇಳಿದರು.

ಇದನ್ನೂ ಓದಿ :ರಮೇಶ್ ಜಾರಕೊಹೊಳಿ ಅವರನ್ನು ಬಂಧಿಸುವಂತೆ ಕಾಂಗ್ರೆಸ್‌ ಪ್ರತಿಭಟನೆ : ಮಿಥುನ್‌ ರೈ, ನಲಪಾಡ್ ‌ಸೇರಿದಂತೆ ಹಲವರು ಪೊಲೀಸ್‌ ವಶಕ್ಕೆ -Vishwanews24

Vishwa News 24

Recent Posts

ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ -vishwanews24

ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ ಉಡುಪಿ: ಉದ್ಯಾವರ…

7 hours ago

ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ -vishwanews24

ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ ಮಂಗಳೂರು: ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ…

7 hours ago

ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ -vishwanews24

ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ…

7 hours ago

ಕಾರ್ಕಳ : ಯಕ್ಷರಂಗಾಯಣದ ಹೆಸರನ್ನು ಬದಲಾಯಿಸಿರುವುದು ಅತ್ಯಂತ ಬೇಜವಾಬ್ದಾರಿ ಹಾಗೂ ಏಕಪಕ್ಷೀಯ ನಿರ್ಧಾರ : ಸುನಿಲ್‌ ಕುಮಾರ್‌ ಆಕ್ರೋಶ -vishwanews24

ಕಾರ್ಕಳ :ಯಕ್ಷರಂಗಾಯಣ ದ ಹೆಸರು ಬದಲಾವಣೆಗೆ ಶಾಸಕ ಸುನಿಲ್‌ ಕುಮಾರ್‌ ಆಕ್ರೋಶ ಮೂಲ ಹೆಸರನ್ನೇ ಉಳಿಸಿಕೊಳ್ಳಲು ಸರಕಾರಕ್ಕೆ ಆಗ್ರಹ ಕಾರ್ಕಳ:…

10 hours ago

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ -vishwanews24

ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು…

11 hours ago

ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ -vishwanews24

ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ ಉಡುಪಿ :…

11 hours ago