ಉಡುಪಿ

ನಮ್ಮೂರ ಗಣಪಣ ಅಂದ ಹೆಚ್ಚಿಸುವ , ಕಾಪು ಸಂಜೀವ ಅಂಚನ್ ಕೈಯಲ್ಲಿ ಮೂಡಿ ಬರುವ ಮುತ್ತು ಪೋಣಿಸಿದಂತೆ ಕಾಣುವ ಈ ಮಾಲೆ ಯಾವುದರದ್ದು ಗೊತ್ತಾ..?ಓದಿ ಈ ವರದಿ “ತೆರೆಮರೆ ಪ್ರತಿಭೆ”

ನಮ್ಮೂರ ಗಣಪಣ ಅಂದ ಹೆಚ್ಚಿಸುವ , ಕಾಪು ಸಂಜೀವ ಅಂಚನ್ ಕೈಯಲ್ಲಿ ಮೂಡಿ ಬರುವ ಮುತ್ತು ಪೋಣಿಸಿದಂತೆ ಕಾಣುವ ಈ ಮಾಲೆ ಯಾವುದರದ್ದು ಗೊತ್ತಾ..?ಓದಿ ಈ ವರದಿ “ತೆರೆಮರೆ ಪ್ರತಿಭೆ”

ಕಾಪು: ನಮ್ಮೊಳಗೆ ಅದೇಷ್ಟೋ ಪ್ರತಿಭೆಗಳು ಕಾಣ ಸಿಗುತ್ತೆ ಅದರಲ್ಲಿ ಕೆಲವರು ಪ್ರಚಾರಕ್ಕೆ ಬಂದರೆ ಇನ್ನು ಕೆಲವರು ತೆರೆಮರೆಯಲ್ಲಿಯೇ ತಮ್ಮ ಕಾಯಕವನ್ನ ಮಾಡುವವರೇ ಜಾಸ್ತಿ ಅಂತಹದೆ ಒಂದು ಹಿರಿಯ ಪ್ರತಿಭೆ ಕರ್ನಾಟಕದ ಕಾಪು ತಾಲೂಕಿನ ಪಡುಗ್ರಾಮದಲ್ಲಿದ್ದಾರೆ.

ಸದಾ ಹಸನ್ಮುಖಿಯಾಗಿ ಎಲ್ಲರೊಂದಿಗೆ ಬೆರೆಯುತ್ತಿರುವ ಇವರು ಮುತ್ತುಗಳನ್ನ ಪೋಣಿಸಿದಂತೆ ಕಾಣುವ ಈ ಮಾಲೆ ಸಿದ್ದ ಪಡಿಸುವ ಕಾರ್ಯದಲ್ಲಿ ಮಾತ್ರ ನಿಸ್ಸಿಮರು.ವ್ಯವಹಾರಿಕ ಮತ್ತು ಸಮಾಜಿಕ ಚಟುವಟಿಕೆಗಳಲ್ಲಿ ಸದಾ ತೊಡಗಿಸಿಕೊಳ್ಳುತ್ತಿರುವ ಸಂಜೀವ ಡಿ ಅಂಚನ್ ಮೂಲತಹ ಕಾಪುವಿನವರು.

ಗಣೇಶನ ಹಬ್ಬ ಬಂತೆಂದರೆ ಸಾಕು ಈ ವ್ಯಕ್ತಿ ಫುಲ್ ಬ್ಯೂಸಿ, ಒಂದು ತಿಂಗಳ ಹಿಂದೆಯೇ ಈ ಮಾಲೆ ಮಾಡುವ ಕಾರ್ಯದಲ್ಲಿ ಮಗ್ನರಾಗಿರುತ್ತಾರೆ ಹಾಗಾದರೇ ಆ ಮಾಲೇ ಯಾವುದು , ಹೇಗೆ ಮಾಡುತ್ತಾರೆಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

ನಾವು ಸಾಮಾನ್ಯವಾಗಿ ಜಾತ್ರೆ ಸಮಾರಂಭಗಳಲ್ಲಿ ಕಾಣ ಬಹುದಾದ ಒಂದು ಅಂಗಡಿ ಚರುಮುರಿ ಅಥವಾ ಬೇಲ್ ಪುರಿ. ಸಣ್ಣ ದೀಪದ ಕೆಳಗೆ ಕೂತು ಸ್ಟೀಲ್ ಪಾತ್ರೆಗೆ ಒಂದು ಚಮಚ ಬಡಿಯುತ್ತಾ ಗ್ರಾಹಕರನ್ನ ತನ್ನ ಕಡೆ ಸೆಳೆದು ಉಪ್ಪು ಖಾರಿ,ಖಾರ ಹುಳಿ ಬೆರೆಸಿ ಬಾಯಿಗೆ ರುಚಿ ತರುವ ಮಂಡಕ್ಕಿಯ ಖಾಧ್ಯವನ್ನ ಸಿದ್ದ ಪಡಿಸಿ ಕೈಗಿಟ್ಟರೆ ಸಾಕು ಕ್ಷಣಾರ್ದದಲ್ಲಿ ತಿಂದು ಮುಗಿಸಿ ಬಿಡುತ್ತೆವೆ ಆದರೇ ಅದೇ ಮಂಡಕ್ಕಿಯಲ್ಲಿ ಅಂದ ಚೆಂದದ ಮಾಲೆ ತಯಾರಿಸಲು ಸಾಧ್ಯ ಎಂಬುದನ್ನ ತೋರಿಸಿಕೊಟ್ಟವರೇ ಇವರು.

ಹೌದು ಕಳೆದ ಹದಿಮೂರು ವರ್ಷದಿಂದ ಬಿಳಿ ಮಂಡಕ್ಕಿಯನ್ನ ಉಪಯೋಗಿಸಿಕೊಂಡು ನಮ್ಮೂರ ಗಣಪನಿಗೆ ಅಂದ ಚೆಂದ ಮಾಲೆಯನ್ನ ಸಿದ್ಧ ಪಡಿಸಿ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪ್ರತಿಷ್ಠಪಿಸಿದ ವಿಘ್ನೇಶ್ವರನಿಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕಾಪು,ಕಾರ್ಕಳ,ಮಟ್ಟು,ಪಡುಬಿದ್ರಿ ಹೀಗೆ ನಾನಾ ಕಡೆ ಈ ಮಾಲೆಯನ್ನ ಸಮರ್ಪಿಸುತ್ತಾರೆ.

ಅರೇ ಮಂಡಾಕ್ಕಿಯಿಂದ ಮಾಲೆ ತಯಾರಿಸಲು ಸಾಧ್ಯನ ಅಂತಾ ನೀವೂ ಅಲೋಚಿಸಬಹುದು ಹೌದು ಮಂಡಾಕ್ಕಿಯಿಂದಲೇ ಸುಮಾರು ೨೦೦ ಮೀಟರ್ ಉದ್ದದ ಈ ಮಾಲೆಯನ್ನ ಸಿದ್ದ ಪಡಿಸುತ್ತಾರೆ, ಗಣೇಶ ಚತುರ್ಥಿ ಒಂದು ತಿಂಗಳ ಹಿಂದೆ ಈ ಕೆಲಸಕ್ಕೆ ಮೂಹುರ್ತ ಫಿಕ್ಸ್ ಮಾಡಿ ಶೃದ್ಧಾ ಭಕ್ತಿಯಿಂದ,ತಾಳ್ಮೆ ಸಂಯಮ ವಹಿಸಿ ಈ ಕಾಯಕವನ್ನ ಮಾಡುವುದು ಇವರ ವಿಶೇಷತೆ.

                          ಅರ್ಪನೆಗೆ ಸಿದ್ಧವಾದ ಮಂಡಕ್ಕಿ ಮಾಲೆ

ಹೇಗೆ ತಯಾರಿಸಬಹುದು…?

ನಗರಭಾಗದಲ್ಲಿ ಸಿಗುವ ಈ ಬಿಳಿ ಮಂಡಕ್ಕಿಯನ್ನ ತಂದು ಚೆನ್ನಾಗಿ ಆರಿಸಿ ಅದರಿಂದ ಒಂದೇ ಅಳತೆಯ ಮಂಡಕ್ಕಿಯನ್ನ ಆರಿಸಿ ಸ್ವಲ್ಪ ಹೊತ್ತು ಗಾಳಿಯಲ್ಲಿಟ್ಟು ತದನಂತರ ಒಂದೊಂದೆ ಮಂಡಕ್ಕಿಯನ್ನ ಸೂಜಿನೂಲಿ ಸಹಾಯದೊಂದಿಗೆ ಮುತ್ತುಗಳನ್ನ ಪೋಣಿಸಿದ ಹಾಗೆ ಪೋಣಿಸುತ್ತಾರೆ,ತದನಂತರ ಸುಮಾರು ೧೦ ಅಡಿ ಉದ್ದದ ಒಂದೊಂದೆ ಮಾಲೆಯನ್ನ ಜೋಡಿಸಿಕೊಂಡು ಉಂಡೆ ಮಾಡಿ ಪ್ಲಾಸ್ಟೀಕ್ ಬ್ಯಾಗ್ ನಲ್ಲಿ ಕಟ್ಟಿ ದಾಸ್ತಾನು ಮಾಡಬೇಕಾಗುತ್ತೆ ಆಮೇಲೆ ಆ ಮಾಲೆಯನ್ನ ಚೆಂದವಾಗಿ ತಯಾರುಮಾಡಬೇಕಾಗುತ್ತೆ.ಪೋಣಿಸಿದ ನಂತೆ ಅದನ್ನ ಅತ್ಯಂತ ನಾಜೂಕಿನಲ್ಲಿ ದಾಸ್ತನು ಮಾಡಬೇಕು ಇಲ್ಲವಾದಲ್ಲಿ ಗಾಳಿಗೆ ಅದು ಚಿರಿಟಿ ಹೋಗುವ ಸಾಧ್ಯತೆ ಹೆಚ್ಚು ಹಾಗಾಗಿ ಅತ್ಯಂತ ತಾಳ್ಮೆ ಹಾಗೂ ಜಾಗೃತೆಯಿಂದ ತಯಾರಿಸಬೇಕಾಗುತ್ತೆ, ಈ ಮಾಲೆಯನ್ನ ಸಿದ್ದ ಪಡಿಸಲು ಸುಮಾರು ೪ ರಿಂದ ೫ ಕೇಜಿ ಬಿಳಿ ಮಂಡಕ್ಕಿ ಬೇಕಾಗುತ್ತೆ ಹಾಗೇ ಪೋಣಿಸಿದ ಮಾಲೆಗೆ ಕೆಂಪು ಗುಲಾಬಿಹೂವಿನ ಎಸಲುಗಳನ್ನ ನೈದು ಮಾಲೆಯ ಮದ್ಯಭಾಗಕ್ಕೆ ಕಟ್ಟಿ ಮತ್ತಷ್ಟು ಅಂದ ಹೆಚ್ಚಿಸುವ ಕೆಲಸ ಮಾಡಿ ವಿಸರ್ಜನಾ ಮೆರವಣಿಗೆಯ ದಿನ ತಲುಪಿಸಬೇಕಾದ ಜಾಗಕ್ಕೆ ತಲುಪಿಸಿ ಗಣೇಶನಿಗೆ ಸಮರ್ಪಿಸುತ್ತಾರೆ.ಇದರ ಜತೆಗೆ ಕಪ್ಪು ಮತ್ತು ಬಿಳಿ ಕಡ್ಲೆಯ ಮಾಲೆಯನ್ನ ತಯಾರಿಸುವುದು ಕೂಡ ವಿಶೇಷತೆ.

ಮುತ್ತಿನಂತೆ ಮಂಡಕ್ಕಿ ಸೂಜಿನೂಲಿನ ಸಹಾಯದೊಂದಿಗೆ ಪೋಣಿಕೆ

ಬಾಳಿಕೆ ಕೇವಲ ಕೆಲವೇ ಗಂಟೆ

ಈ ಮಂಡಕ್ಕಿಯ ಮಾಲೆ ತಯಾರಿಸಲು ನೂರಾರು ಗಂಟೆ ಸಮಯ ಆದರೇ ಸಮರ್ಪಿಸಿದ ನಂತರ ಅದರ ಬಾಳಿಕೆ ಕೇವಲ ಒಂದು ದಿನ ಮಾತ್ರ ಯಾಕೆಂದರೆ ಗಾಳಿಗೆ ಮೈಯೊಡ್ಡುವುದರಿಂದ ಅತ್ಯಂತ ಬೇಗನೆ ಅದು ಚಿರಿಟಿ ಹೋಗುತ್ತೆ.

ಈ ಮಾಲೆ ನಾವೂ ತಯಾರಿಸಬಹುದೆಂದು ಜಂಬಕೊಚ್ಚಿಕೊಂಡವರು ಒಂದು ಅಡಿ ಉದ್ದದ ಮಾಲೆ ತಯಾರಿಸಿ ಕೈಗಳಿಗೆ ಸೂಚಿ ಚುಚ್ಚಿಸಿಕೊಂಡು ಸಾಕಪ್ಪ ಇದರ ಸಹವಾಸ ಅಂತಾ ಕೈಬಿಟ್ಟವರೇ ಹೆಚ್ಚು. ಸುಮಾರು ಹದಿಮೂರು ವರ್ಷದಿಂದ ಈ ಕಾಯಕದಲ್ಲಿ ಮಗ್ನರಾಗಿರುವ ಇವರು ಹೀಗೆನ್ನುತ್ತಾರೆ” ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಈ ಕಾರ್ಯ ಮಾಡುತ್ತಿದ್ದೆನೆ ,ತುಂಬಾ ಸಮಯದ ಅವಶ್ಯಕತೆ ಮತ್ತು ತಾಳ್ಮೆಯಿಂದ ನಿರ್ವಹಿಸಬೇಕಾಗುತ್ತೆ,ಒಂದು ವೇಳೆ ಬೇಜಬ್ದಾರಿತನ ವರ್ತಿಸಿದಲ್ಲಿ ಇಡಿ ಮಾಲೇ ಹಾಳಾಗುವುದರಿಂದ ಅತ್ಯಂತ ನಾಜೂಕಾಗಿ ಮಾಡಬೇಕಾಗುತ್ತೆ,ಮೊದಲ ಸಲ ಮಾಡುವಾಗ ಕಷ್ಟವಾದರೂ ನಂತರದ ದಿನದಲ್ಲಿ ಸಲೀಸಾಗಿ ಮಾಡುತ್ತ ಬರುತ್ತಿದ್ದೆನೆ. ಇದರ ಜತೆಗೆ ಬಿಳಿ ಮತ್ತು ಕಪ್ಪು ಕಡ್ಲೆಯ ಮಾಲೆಯನ್ನ ಸಿದ್ಧ ಪಡಿಸುತ್ತ ಗಣಪನಿಗೆ ಸಮರ್ಪಿಸುತ್ತಿದ್ದನೆ ಎಲ್ಲವೂ ವಿಘ್ಣನಿವಾರಕನ ಇಚ್ಚೆಯಂತೆ ಅನ್ನುತ್ತಾರೆ.”

                                                                                                            ಮಾಲೆ ಜೋಡನೆಯಲ್ಲಿ ನಿರತ ಅಂಚನ್

ಕಾಪು ಮತ್ತು ಪೊಲಿಪುವಿನಲ್ಲಿ ಸಮರ್ಪಿಸಿದ ಮಾಲೆ

ಒಟ್ಟಾರೆಯಾಗಿ ನಮ್ಮೂರಿನಲ್ಲೂ ಇಂತಕ ಹಲವಾರು ಪ್ರತಿಭೆಗಳು ಇದೆ ಆದರೆ ಪ್ರಚಾರಕ್ಕೆ ಬರುವುದು ಕಡಿಮೆ,ಅದರಲ್ಲೂ ಇಂತಹ ಕಾರ್ಯ ಮಾಡುವವರು ತುಂಬಾ ವಿರಳ.ಮನಸ್ಸಿದ್ದರೆ ಯಾವ ಪ್ರಾಯದಲ್ಲೂ ಸಾಧಿಸಬಹುದೆಂಬುದನ್ನ ಇವರನ್ನ ನೋಡಿ ಕಲಿಯಬೇಕು. ಇವರ ಈ ಕಾರ್ಯ ನಿರಂತರವಾಗಿ ನಡೆಯಲಿ ಎಂಬುದೇ ನಮ್ಮ ಹಾರೈಕೆ.

ಬ್ಯುರೋ ರಿಪೋರ್ಟ್

ವಿಶ್ವನ್ಯೂಸ್24,ಕಾಪು

 

Vishwa News 24

Recent Posts

ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮಹಿಳೆಯ ಮೇಲೆ ಹಲ್ಲೆ ಆರೋಪ; ಸಾರ್ವಜನಿಕರ ಆಕ್ರೋಶ – vishwanews24

ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮಹಿಳೆಯ ಮೇಲೆ ಹಲ್ಲೆ ಆರೋಪ; ಸಾರ್ವಜನಿಕರ ಆಕ್ರೋಶ ಉಡುಪಿ: ಜಿಲ್ಲೆಯ ಮಲ್ಪೆ ಮೀನುಗಾರಿಕಾ ದಕ್ಕೆಯಲ್ಲಿ ಮಹಿಳೆಯ…

8 hours ago

ವಿಧಾನಸಭಾ ಚುನಾವಣಾ ಸಮರ 2026: ಮೇ 4ಕ್ಕೆ ಐದು ರಾಜ್ಯಗಳ ಫಲಿತಾಂಶ – vishwanews24

ವಿಧಾನಸಭಾ ಚುನಾವಣಾ ಸಮರ 2026: ಮೇ 4ಕ್ಕೆ ಐದು ರಾಜ್ಯಗಳ ಫಲಿತಾಂಶ ನವದೆಹಲಿ :ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು…

8 hours ago

ಉಡುಪಿ : ಏರ್ ಕಂಡಿಷನರ್ ಸ್ಪೋಟಗೊಳ್ಳುತ್ತದೆ ಎಂಬುದು ತಪ್ಪು ಕಲ್ಪನೆ : ಕೃಷ್ಣರಾಜ ತಂತ್ರಿ – vishwanews24

ಏರ್ ಕಂಡಿಷನರ್ ಸ್ಪೋಟಗೊಳ್ಳುತ್ತದೆ ಎಂಬುದು ತಪ್ಪು ಕಲ್ಪನೆ.. ಏಸಿಯಲ್ಲಿ ಇರುವ ಗ್ಯಾಸ್‌ಗೆ ಯಾವುದೇ ರೀತಿಯಲ್ಲೂ ಬೆಂಕಿ ಹಿಡಿಯಲ್ಲ.. ಕರಾವಳಿಗೆ ಕೂಲರ್‌ಗಿಂದ…

10 hours ago

ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ – vishwanews24

ಕೌಟುಂಬಿಕ ಕಲಹ : ಕೊಲೆಯಲ್ಲಿ  ಅಂತ್ಯ - ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ ಮೈಸೂರು: ಸಣ್ಣ…

11 hours ago

ಲಡಾಖ್‌ನಲ್ಲಿ 4.1 ತೀವ್ರತೆಯ ಭೂಕಂಪ – vishwanews24

ಲಡಾಖ್‌ನಲ್ಲಿ 4.1 ತೀವ್ರತೆಯ ಭೂಕಂಪ ಲೇಹ್: ಗುರುವಾರ ಮುಂಜಾನೆ ಲಡಾಖ್‌ನಲ್ಲಿ4.1 ತೀವ್ರತೆಯ ಭೂಕಂಪ  ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ…

12 hours ago

ಬೆಂಗಳೂರಲ್ಲಿ ವರುಣನ ಆರ್ಭಟ : ಮೇ 1ರವರೆಗೂ ಮಳೆ ಮುನ್ಸೂಚನೆ – vishwanews24

ಬೆಂಗಳೂರಲ್ಲಿ ವರುಣನ ಆರ್ಭಟ : ಮೇ 1ರವರೆಗೂ ಮಳೆ ಮುನ್ಸೂಚನೆ ಬೆಂಗಳೂರು: ಬುಧವಾರ ಬೆಂಗಳೂರಿನಾದ್ಯಂತ ಸುರಿದ ಆಲಿಕಲ್ಲು ಮಳೆಗೆ 10…

12 hours ago