ರಾಜ್ಯ ನ್ಯೂಸ್

“ನಮ್ಮ ಅಮೂಲ್ಯ ಮತಕ್ಕೆ ಬೆಲೆ ಸಿಗುವಂತೆ ಮತದಾನ ಮಾಡೋಣ”

ಹೌದು ಚುನಾವಣೆಯೆಂಬ ಹಬ್ಬಕ್ಕೆ ದಿನಗಣನೆ ಶುರುವಾಗಿದೆ ಅಂದರೆ ಮೇ 12 ಕ್ಕೆ ಚುನಾವಣೆ ಹಾಗೂ ಅದೇ ತಿಂಗಳ 15 ಕ್ಕೆ ಫಲಿತಾಂಶ ಅದಕ್ಕೆ ಈ ಬಾರಿಯಾದರೂ ನಮ್ಮ ಅಮೂಲ್ಯ ಮತಕ್ಕೆ ಬೆಲೆ ಸಿಗುವಂತೆ ಮತದಾನ ಮಾಡೋಣ. ಅಳಿವು-ಉಳಿವಿನ ಪ್ರಶ್ನೆಯಾಗಿರುವ ಮಹತ್ವದ ಚುನಾವಣೆಗೆ ಎಲ್ಲ ಪಕ್ಷಗಳು ಹಾಗೂ ಪಕ್ಷದ ಅಭ್ಯರ್ಥಿಗಳು ಅಂತಿಮಹಂತದ ಸಿದ್ಧತೆ ನಡೆಸಿವೆ.

ಇದರ ಮಧ್ಯ ಮತದಾರರ ಜವಾಬ್ದಾರಿ ಏನೆಂದರೆ ರಾಜಕೀಯ ಪಕ್ಷಗಳು ನೀಡುವ ಯಾವುದೇ ಆಮಿಷಕ್ಕೆ ಆಸೆಪಡದೆ ಒಬ್ಬ ಒಳ್ಳೆಯ ಜನಪ್ರತಿನಿಧಿಯನ್ನು ಆಯ್ಕೆ ಮಾಡುವುದು. ಅಂದರೆ ಬರಿ ಆಶ್ವಾಸನೆಗಳನ್ನೇ ನೀಡುತ್ತಾ ಬಂದಿರುವ ಜನಪ್ರತಿನಿಧಿಗಳ ಕೈಬಿಟ್ಟು ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗಾಗಿ ಒಳ್ಳೆಯ ಕೆಲಸ ಮಾಡುವ ಹಾಗು ಮಾಡಿಕೊಂಡು ಬಂದ ಜನಪ್ರತಿನಿಧಿಯನ್ನು ಆಯ್ಕೆಮಾಡಬೇಕು. ಪ್ರಸ್ತುತವಾಗಿ ಎಲ್ಲಾ ರಾಜಕೀಯ ಪಕ್ಷಗಳು ಒಂದೇ ವಾಕ್ಯವನ್ನು ಹೇಳುತ್ತಿದ್ದಾರೆ “ಯುವಜನತೆ ದೇಶದ ಶಕ್ತಿ” ಎಂದು ಈ ಮಾತಲ್ಲಿ ತುಂಬಾ ಶಕ್ತಿ ಇದೆ ಅದೇನೆಂದರೆ ಭಾರತದ ಸುಮಾರು 85 ಕೋಟಿ ಮತದಾರರ ಪೈಕಿ ಅರ್ಧದಷ್ಟು 35 ವರ್ಷದೊಳಗಿನ ಯುವ ಮತದಾರರಿದ್ದಾರೆ ಹಾಗಾಗಿ ರಾಜಕಾರಣಿಗಳ ಭವಿಷ್ಯ ನಿರ್ಧರಿಸುವ ಶಕ್ತಿ ಯುವ ಭಾರತದ ಕೈಯಲ್ಲಿದೆ.

ಹಾಗಾಗಿ ರಾಜಕೀಯ ಪಕ್ಷಗಳು ಯುವ ಮತದಾರರಿಗೆ ಮಣೆ ಹಾಕುತ್ತಿವೆ. ನಮ್ಮ ರಾಜ್ಯದಲ್ಲಿ ಈ ವರ್ಷದ ಮತದಾರರ ಸಂಖ್ಯೆ ಸುಮಾರು 5 ಕೋಟಿ ಇವರ ಪೈಕಿ ಅರ್ಧದಷ್ಟು ಯುವ ಮತದಾರರೇ ಇರುವರು ಅದರಲ್ಲೂ ಸುಮಾರು 65 ಲಕ್ಷ ಮಂದಿ ಮೊದಲ ಬಾರಿಗೆ ತಮ್ಮ ಮತವನ್ನು ಚಲಾಯಿಸಲಿದ್ದಾರೆ. ಸುಮಾರು 2.5 ಕೋಟಿ ಮತಗಳು ಯುವಜನರ ಕೈಯಲ್ಲಿವೆ ಈ ಯುವ ಮತದಾರರ ಮತಗಳು ಸೂಕ್ತರೀತಿಯಲ್ಲಿ ಚಲಾವಣೆ ಗೊಂಡರೆ ಮಾದರಿ ರಾಜ್ಯ ನಿರ್ಮಿಸಬಹುದು. ರೈತರ ಸಮಸ್ಯೆ, ಭ್ರಷ್ಟಾಚಾರ, ಬೆಲೆ ಏರಿಕೆ, ಕೋಮುವಾದ ಇವೆಲ್ಲವನ್ನು ತಡೆದು ಇವುಗಳಿಗೆ ಸೂಕ್ತ ಪರಿಹಾರ ಕಂಡು ಕೊಳ್ಳಬೇಕೆಂದರೆ ಇವೆಲ್ಲವನ್ನು ಅಸ್ತ್ರಗಳನ್ನಾಗಿ ಮಾಡಿಕೊಂಡು ಜಾತಿ ಧರ್ಮ ಸಂಘಟನೆಗಳ ಆಧಾರದ ಮೇಲೆ ನಾಟಕೀಯ ರಾಜಕೀಯ ಮಾಡುವ ರಾಜಕಾರಣಿಗಳಿಗೆ ಬೆಂಬಲ ನೀಡಬಾರದು. ಅಧಿಕಾರ ಎಂಬ ಮೋಹ ಬಿಟ್ಟು ನನ್ನ ರಾಜ್ಯ ನನ್ನ ಜನ ಎಂದು ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿ ಪ್ರಜಾಪ್ರಭುತ್ವವನ್ನು ಉಳಿಸಿ-ಬೆಳೆಸುವ ಅಭ್ಯರ್ಥಿಗಳಿಗೆ ನಮ್ಮ ಮತ ನೀಡಬೇಕು. ನಾವು ಸಜ್ಜನರಂತೆ ಕುಳಿತುಕೊಂಡರೆ ನಮ್ಮ ವ್ಯವಸ್ಥೆ ಸುಧಾರಣೆಯಾಗುವುದಿಲ್ಲ ಈ ಬಾರಿಯಾದರೂ ಚುನಾವಣೆಯಲ್ಲಿ ಯಾವುದೇ ಆಮಿಷಗಳಿಗೆ ಬಲಿಯಾಗದೆ ಒಬ್ಬ ಅತ್ಯುತ್ತಮ ಜನ ಸೇವಕನನ್ನು ಆಯ್ಕೆ ಮಾಡೋಣ.

 

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

6 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

6 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

6 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

6 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

6 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

6 days ago