ಉಡುಪಿ

ನರಸತ್ತ ಕಾಪು ಪುರಸಭೆ ಪ್ರಖ್ಯಾತ ಹೋಟೆಲುಗಳ ತ್ಯಾಜ್ಯ ನೀರು ಒಳಚರಂಡಿ ಸೇರುತ್ತಿದೆ : vishwanews24

ನರಸತ್ತ ಕಾಪು ಪುರಸಭೆ ಪ್ರಖ್ಯಾತ ಹೋಟೆಲುಗಳ ತ್ಯಾಜ್ಯ ನೀರು ಒಳಚರಂಡಿ ಸೇರುತ್ತಿದೆ : vishwanews24

ಚರಂಡಿಯ ಇಕ್ಕೆಲದಲ್ಲಿ ಕಾಂಡೋಮ್ ತೇಲುತ್ತಿದೆ,ಮೀನುಮಾಂಸ ತ್ಯಾಜ್ಯ ಹೊರ ಬರುತ್ತಿದೆ,ಬೀದಿ ನಾಯಿ ಕಾಯುತ್ತಿದೆ!!

ಅಧಿಕಾರ ವರ್ಗ ಮಾತ್ರ ಬೆಚ್ಚಗೆ ಸೊಳ್ಳೆ ಪರದೆ ಹಾಕಿ ಮಲಗಿದೆ..!!!

ಕಾಪು : ಇಲ್ಲಿನ ಪುರಸಭೆಯ ಅಧಿಕಾರಿಗಳಿಗೆ ಯಾಕೋ‌ ಹವಾನಿಯಂತ್ರಿತ ಕೊಠಡಿ ಬಿಟ್ಟು ಹೊರಗೆ ಬರಲು ಮನಸ್ಸಿಲ್ಲ ಕಾಣುತ್ತಿದೆ ಹಾಗಾಗಿ ಪ್ರಖ್ಯಾತ ಹೋಟೆಲ್‌ ಲಾಡ್ಜುಗಳ ತ್ಯಾಜ್ಯ ನೀರು ಹದಗೆಟ್ಟ ಒಳಚರಂಡಿಯಲ್ಲಿ ಹರಿದು ಶೈಕ್ಷಣಿಕ ಬೀಡು, ದೇಗುಲದ ನಾಡು,ಪ್ರವಾಸೋದ್ಯಮ ಕೇಂದ್ರವಾದ ಕಾಪು ನಗರ ಗಬ್ಬು ನಾರುತ್ತಿದೆ..

ಒಳಚರಂಡಿಯಲ್ಲಿನ ನೀರು ಹೊರಬಂದು ಕಾಂಡೋಮ್ ಗಳು ಮೀನಿನಂತೆ ತೇಲಾಡುತ್ತಿದೆ,ಮೂಳೆ ಮಾಂಸಗಳ ತ್ಯಾಜ್ಯ ಚರಂಡಿಯ ಇಕ್ಕೆಲಗಳಲ್ಲಿ ತಲೆ ಎತ್ತಿ ನಾನು ಹೊರಗೆ ಬರಲೇ ಅನ್ನುತ್ತಿದೆ ಇಷ್ಟೆಲ್ಲಾ ಆದರೂ ಮಾತ್ರ ಕಾಪು ಪುರಸಭೆಯ ಅಧಿಕಾರಿಗಳು ತಾವೂ ಕುಳಿತಿರುವ ಖುರ್ಚಿಗೆ ಕಾವು ನೀಡುತ್ತಿದ್ದಾರೆ.

ತ್ಯಾಜ್ಯ ನಿರ್ವಹಣೆಯೊಂದು ಬಿಟ್ಟರೆ ಕಾಪು ಪುರಸಭೆ ಏನು ಮಾಡುತ್ತಿದೆಂಬ ಪ್ರಶ್ನೆಗೆ ಉತ್ತರ ಇದುವರೆಗೂ ಸಿಕ್ಕಿಲ್ಲ,ಹೋಟೆಲುಗಳು ಅನಾಚರಕ್ಕೆ ಕೊನೆಯಿಲ್ಲ ,ಪುರಸಭೆಯದಂತೂ ಸುದ್ದಿಯೇ ಇಲ್ಲದಂತಾಗಿದೆ.

ಕತ್ತಲೆಯಾದರೇ ಸಾಕು ಇಡೀ ಕಾಪು ನಗರ,ವೇಗದೂತ ಬಸ್ಸು ನಿಲ್ದಾಣದ ಸುತ್ತಲೂ ಗಬ್ಬು ವಾಸನೆ ಮೂಗಿಗೆ ಬಡಿದು ವಾಸನೆ ಗ್ರಹಿಸುವ ನರವೇ ಸತ್ತು ಹೋಗಿದೆ,ಸೊಳ್ಳೆಗಳು ರಾಜರೋಷವಾಗಿ ರಕ್ತ ಹೀರುತ್ತಿದೆ,ಬೀದಿ ನಾಯಿಗಳು ಚರಂಡಿಯ ಇಕ್ಕೆಲದಲ್ಲಿ ಹೊರಬರುವ ಮೂಳೆ ಮಾಂಸಕ್ಕೆ ಕಾಯುತ್ತಿದ್ದೆ ಅಧಿಕಾರ ವರ್ಗ ಬೆಚ್ಚಗೆ ಮನೆಯಲ್ಲಿ ಮಲಗಿದ್ದಾರೆ.

ವಿಪರ್ಯಾಸವೆಂದರೆ ಕೋಟಿಗಟ್ಟಲೆ ಹಣ ಪುರಸಭೆಗೆ ತಂದು ಹಾಕಿದ್ದೇವೆ ಅನ್ನುತ್ತಿದ್ದಾರೆ ಕಾಂಗ್ರೆಸ್ ಬಿಜೆಪಿ ನಾಯಕರುಗಳು ಆ‌ ಕೋಟಿಯಲ್ಲಿ ಈ ಲೆಕ್ಕಾಚಾರ ತಪ್ಪಿ ಹೋಗಿದೆಯೋ ಅಥವಾ ಗಬ್ಬು ನಾತದ ಲೆಕ್ಕಾಚಾರ ಗೊತ್ತಿದ್ದರೂ ಅಧಿಕಾರಿಗಳು “ಕುರುಡು ಕಾಂಚನಾ” ಕ್ಕೆ ಬಲಿಯಾಗುತ್ತಿದ್ದರೋ ಗೊತ್ತಿಲ್ಲ ಒಟ್ಟಾರೆ ಕಾಪು ನಗರ ವಾಸನೆಗೀಡಾಗಿದೆ.

ಬ್ಯುರೋ ರಿಪೋರ್ಟ್ : ವಿಶ್ವನ್ಯೂಸ್24

Vishwa News 24

Recent Posts

ಉಡುಪಿ ಕೃಷ್ಣ ಮಠದಲ್ಲಿ ತಪ್ತಮುದ್ರಾಧಾರಣೆ – vishwanews24

ಉಡುಪಿ ಕೃಷ್ಣ ಮಠದಲ್ಲಿ ತಪ್ತಮುದ್ರಾಧಾರಣೆ ಉಡುಪಿ: ಆಷಾಢ ಶುಕ್ಲ ಪ್ರಥಮ ಏಕಾದಶಿ ಅಂಗವಾಗಿ ಉಡುಪಿ ಜಿಲ್ಲೆಯ ಪ್ರಮುಖ ಮಠಗಳಲ್ಲಿ ತಪ್ತ…

17 hours ago

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ; ಆರೋಪಿಗಾಗಿ ಶೋಧ- vishwanews24

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದ ಘಟನೆ ನಗರದ ಲಾಲ್ ಬಾಗ್ ಸಿಗ್ನಲ್ ಬಳಿ…

17 hours ago

ಆರು ದಿನಗಳ ನಂತರ ಅಮರನಾಥ ಯಾತ್ರೆ ಪುನರಾರಂಭ -vishwanews24

ಹವಾಮಾನ ವೈಪರೀತ್ಯದಿಂದಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನರಾರಂಭ ಅಮರನಾಥ :ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಆರು ದಿನಗಳಿಂದ ನಿರಂತರ ಮಳೆ,…

18 hours ago

BREAKING NEWS : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ – vishwanews24

 ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನವದೆಹಲಿ: ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳ ಆಕ್ರೋಶ ಭುಗಿಲೆದ್ದ…

18 hours ago

ಕಾಮನ್‌ವೆಲ್ತ್ ಗೇಮ್ಸ್ 2026 : ಪ್ಯಾರಾ ಪವರ್‌ ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದ ಝಂದು ಕುಮಾರ್ – vishwanews24

ಕಾಮನ್‌ವೆಲ್ತ್ ಗೇಮ್ಸ್ 2026 : ಭಾರತದ ಪದಕದ ಖಾತೆ ತೆರೆದ ಝಂದು ಕುಮಾರ್‌: ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಕಂಚಿನ ಸಾಧನೆ ಗ್ಲಾಸ್ಕೊ…

19 hours ago

ಅಯೋಧ್ಯೆ ಶ್ರೀರಾಮ ಮಂದಿರ ಧಾರ್ಮಿಕ ಸಮಿತಿಯಲ್ಲಿ ಪೇಜಾವರ ಶ್ರೀಗಳಿಗೆ ಸ್ಥಾನ – vishwanews24

ಅಯೋಧ್ಯೆ ಶ್ರೀರಾಮ ಮಂದಿರ ಧಾರ್ಮಿಕ ಸಮಿತಿಯಲ್ಲಿ ಪೇಜಾವರ ಶ್ರೀಗಳಿಗೆ ಸ್ಥಾನ ಅಯೋಧ್ಯೆ: ಶ್ರೀ ರಾಮಮಂದಿರದ ಪೂಜಾ ವಿಧಿವಿಧಾನಗಳು ಹಾಗೂ ಧಾರ್ಮಿಕ…

20 hours ago