ಬೆಳಗಾವಿ : ಮಳೆಯಿಂದ ಸೇತುವೆ ಹಾನಿಗೊಳಗಾಗಿತ್ತು. ಆದರೂ ಕಿರಿದಾದ ಸೇತುವೆಯ ಮೇಲೆ ಚಾಲಕರು ಲಾರಿ ಚಲಾಯಿಸುತ್ತಿದ್ದರು. ಇದನ್ನು ನೋಡಿದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಲಾರಿ ಚಾಲಕನನ್ನು ತರಾಟೆ ತೆಗೆದುಕೊಂಡಿದ್ದಾರೆ.
ಖಾನಾಪುರ ಪಟ್ಟಣದಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಲಾರಿ ಚಾಲಕನಿಗೆ ಬೈದು ವಾಪಸ್ ಕಳುಹಿಸಿದ್ದಾರೆ. ಇಷ್ಟು ದೊಡ್ಡ ಗಾಡಿ ಕಿರಿದಾದ ಸೇತುವೆ ಮೇಲೆ ಬಂದರೆ ಸಣ್ಣ ವಾಹನಗಳು ಹೇಗೆ ಓಡಾಡುತ್ತವೆ. ನೀನು ಒಂದು ದಿನ ಅರ್ಧ ಗಂಟೆ ಬಂದು ಹೋಗುತ್ತೀಯಾ, ನಂತರ ಇಲ್ಲಿನ ಹಾಗೂ ಸುತ್ತಮುತ್ತಲಿನ ಜನರು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಆಕ್ರೋಶದಿಂದ ಹೇಳಿದರು.
ಖಾನಾಪುರ-ಪಣಡಿ ಸಂಪರ್ಕ ಸೇತುವೆ ಹಾಳಾಗಿತ್ತು. ಹೀಗಾಗಿ ಮರು ನಿರ್ಮಾಣ ಯೋಜನೆಗೆ ಶಾಸಕ ಅಂಜಲಿ ನಿಂಬಾಳ್ಕರ್ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಭಾರಿ ವಾಹನ ನಿಷೇಧದ ಬೋರ್ಡ್ ಇದ್ದರೂ, ಲಾರಿ ಚಾಲಕನೊಬ್ಬ ಸೇತುವೆ ಮೇಲೆ ಚಲಾಯಿಸಲು ಯತ್ನಿಸಿದನು.
ಇದನ್ನು ಸ್ಥಳದಲ್ಲಿದ್ದ ಶಾಸಕಿ ಅಂಜಲಿ ನಿಂಬಾಳ್ಕರ್ ಗಮನಿಸಿದ್ದೇ ತಡೇ, ಸೇತುವೆ ಬಳಿ ತೆರಳಿ ಲಾರಿಯ ಮುಂದೆ ನಿಂತು ಚಾಲಕನಿಗೆ ಬೋರ್ಡ್ ನೋಡದೇ ದುರಸ್ತಿಯಾಗಿರುವ ಸೇತುವೆಯ ಮೇಲೆ ಲಾರಿ ಚಲಾಯಿಸಲು ಪ್ರಯತ್ನಿಸಿದ್ದಕ್ಕೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಅಲ್ಲದೇ ಈ ಸೇತುವೆ ಮೇಲೆ ಚಲಾಯಿಸುವಂತಿಲ್ಲ ಎಂದು ಖಡಕ್ ಆಗೇ ಸೂಚಿಸಿದರು.
ಉಡುಪಿ: ಮಹಾವೀರ ಜಯಂತಿ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ ಮಾ.31ರ ಮಂಗಳವಾರ ಬದಲಾಗಿ ಮಾ. 30ರ ಸೋಮವಾರ ರಜೆ ಘೋಷಣೆ ಉಡುಪಿ:…
ಮಾ.30ಕ್ಕೆ ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ ಬೆಂಗಳೂರು: ಮಾ.30ಕ್ಕೆ ನಡೆಯಬೇಕಿದ್ದ ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ…
1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ನಿಯಮದಲ್ಲಿಈ ವರ್ಷವೂ 60 ದಿನಗಳ ವಿನಾಯಿತಿ : ಮಧು ಬಂಗಾರಪ್ಪ ಬೆಂಗಳೂರು:…
ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಆಹ್ವಾನ ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ…
ಬಂಟ್ವಾಳ: ಯುವತಿ ನಾಪತ್ತೆ; ಪ್ರಕರಣ ದಾಖಲು ಬಂಟ್ವಾಳ: ಕೆಲಸಕ್ಕೆಂದು ಹೊರಟ ಯುವತಿ ಮನೆಗೆ ಮರಳದೇ ನಾಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕಿನ…
ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜಯ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉಡುಪಿ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಎರಡೂ…