ಅಹಮದಾಬಾದ್: ಅಮರಿಕ ಭಾರತವನ್ನು ಪ್ರೀತಿಸುತ್ತದೆ. ಅಮೆರಿಕ ಭಾರತವನ್ನು ಗೌರವಿಸುತ್ತದೆ ಮತ್ತು ಅಮೆರಿಕ ಭಾರತ ಹಾಗೂ ಭಾರತದ ಜನರಿಗೆ ಯಾವಾಗಲೂ ನಂಬಿಕಸ್ಥ ಮತ್ತು ನಿಷ್ಠೆಯುಳ್ಳ ಸ್ನೇಹಿತನಾಗಿರುತ್ತದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.
ಮೊಟೆರಾ ಕ್ರೀಡಾಂಗಣದಲ್ಲಿ ನಡೆದ ನಮಸ್ತೆ ಟ್ರಂಪ್ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾಷಣ ಬಳಿಕ ಮಾತನಾಡಿ ಅವರು, ಭಾರತದ ಬಗ್ಗೆ ತಮಗೆ ಯಾವಾಗಲೂ ಪ್ರೀತಿಯಿದೆ ಎಂದು ಹೇಳಿದರು. ಅಷ್ಟೇ ಅಲ್ಲದೆ ಭಾರತದೊಂದಿಗೆ 3 ಬಿಲಿಯನ್ ಯುಎಸ್ ಡಾಲರ್ಗಳಷ್ಟು(2,1545 ಲಕ್ಷ ಕೋಟಿ ರೂ.) ಮೊತ್ತದ ರಕ್ಷಣಾ ಒಪ್ಪಂದವನ್ನು ಘೋಷಿಸಿದರು. ನಾಳೆ ಈ ಅತಿದೊಡ್ಡ ಒಪ್ಪಂದಕ್ಕೆ ನಾವಿಬ್ಬರೂ ಸಹಿ ಹಾಕಲಿದ್ದೇವೆ ಎಂಬುದನ್ನು ಟ್ರಂಪ್ ಹೇಳಿದರು.
ಭಾರತದ ಈ ಆತಿಥ್ಯವನ್ನು ನಾವು ಸದಾಕಾಲ ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ. ಭಾರತಕ್ಕೆ ನಮ್ಮ ಹೃದಯದಲ್ಲಿ ವಿಶೇಷ ಸ್ಥಾನ ಇದೆ ಎಂದು ಹೇಳಿದ ಟ್ರಂಪ್ ನರೇಂದ್ರ ಮೋದಿಯವರನ್ನು ತುಂಬುಹೃದಯದಿಂದ ಹೊಗಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಚಹಾ ಮಾರಾಟ ಮಾಡುತ್ತಿದ್ದರು. ಅವರೊಬ್ಬ ಚಹಾ ವಾಲಾ ಎಂಬುದು ಎಲ್ಲರಿಗೂ ಗೊತ್ತು. ಅನೇಕಾನೇಕ ಜನರ ಪ್ರೀತಿಯನ್ನು ಅವರು ಗಳಿಸಿಕೊಂಡಿದ್ದಾರೆ. ಆದರೆ ಒಂದು ವಿಷಯ ಹೇಳುತ್ತೇನೆ. ನರೇಂದ್ರ ಮೋದಿಯವರು ಓರ್ವ ಕಠಿಣ ಪ್ರಧಾನಿ ಎಂದು ಹೇಳಿದರು.
ಪಿಎಂ ಮೋದಿ ಬರೀ ಗುಜರಾತ್ನ ಹೆಮ್ಮೆಯಲ್ಲ. ಕಠಿಣ ಪರಿಶ್ರಮ ಮತ್ತು ನಿಷ್ಠೆಗೆ ಮೋದಿಯವರು ಅದ್ಭುತ ಉದಾಹರಣೆ. ಭಾರತೀಯರು ಮನಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಅವರು ಸಾಕ್ಷಿ ಎಂದು ಮೋದಿಯವರನ್ನು ಹೊಗಳಿದರು.
ರಕ್ಷಣಾ ಕ್ಷೇತ್ರದಲ್ಲಿ ಯುಎಸ್ ಮತ್ತು ಭಾರತದ ಪರಸ್ಪರ ಸಹಕಾರವನ್ನು ಬಲಗೊಳಿಸಿಕೊಳ್ಳುವುದು ನಮ್ಮ ಉದ್ದೇಶ. ಜಗತ್ತಿನಲ್ಲಿಯೇ ಅತ್ಯಂತ ಬಲಶಾಲಿಯಾದ, ಅತ್ಯುತ್ತಮವಾದ ರಕ್ಷಣಾ ಸಾಧನಗಳನ್ನು, ಮಿಲಿಟರಿ ಉಪಕರಣಗಳನ್ನು ಭಾರತಕ್ಕೆ ನೀಡುವ ಬಗ್ಗೆ ಯುಎಸ್ ಚಿಂತನೆ ನಡೆಸುತ್ತಿದೆ. ಭಾರತ ಮತ್ತು ಯುಎಸ್ ಜತೆಯಾಗಿ ಅತ್ಯುತ್ತಮ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತೇವೆ ಎಂದು ಹೇಳಿದರು.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…