Featured

ನಾಗ ದೇವರ ಬೆಚ್ಚಿ ಬೀಳಿಸುವ ಪವಾಡ ; ಅರಮನೆಯಂತಿರುವ ಮನೆಯ ಒಳಗೆ ಪುರಾತನ ನಾಗ ಮೂರ್ತಿ ಪತ್ತೆ ..

ಉಡುಪಿ: ಹೆಬ್ರಿ ತಾಲೂಕಿನ ಮುದ್ರಾಡಿ ಬರ್ಸಬೆಟ್ಟುವಿನಲ್ಲಿ ಭಾನುವಾರ ಜ್ಯೋತಿಷಿಯೊಬ್ಬರು ಪ್ರಶ್ನಾ ಚಿಂತನೆಯಲ್ಲಿ ನೀಡಿದ್ದ ಮಾಹಿತಿ ಅನುಸರಿಸಿ ಮನೆಯ ವರಾಂಡ ಅಗೆದಾಗ 6 ಅಡಿ ಆಳದಲ್ಲಿ ನಾಗನ ಕಲ್ಲು ಪತ್ತೆಯಾಗಿದೆ.

ಮುಂಬಯಿ ಉದ್ಯಮಿ ಗಂಗಾಧರ ಶೆಟ್ಟಿ ತಮ್ಮ ಹಳೇ ಮನೆ ಕೆಡವಿ ಹೊಸ ಮನೆ ಕಟ್ಟಿದ್ದರು. ಮನೆ ನಿರ್ಮಿಸಿದ ಬಳಿಕ ಜೀವನದಲ್ಲಿ ವಿಪರೀತ ಸಮಸ್ಯೆಗಳು ಕಾಣಿಸಿಕೊಂಡು ಉದ್ಯಮ ನಷ್ಟದ ಹಾದಿ ಹಿಡಿಯಿತು.ತುಂಬಾ ನೊಂದಿದ್ದ ಗಂಗಾಧರ ಶೆಟ್ಟಿಯವರು ತಮ್ಮ ಸ್ನೇಹಿತರ ಸೂಚನೆಯಂತೆ ಧಾರ್ಮಿಕ ಚಿಂತಕ ತೀರ್ಥಹಳ್ಳಿಯ ಆರಗ ಅಗ್ರಹಾರ ನಾಗರಾಜ್ ಭಟ್ಟರಲ್ಲಿ ಹೋದರು.ನಾಗರಾಜ್ ಭಟ್ ಪ್ರಶ್ನೆ ಹಾಕಿ ನೋಡುವಾಗ  ಮನೆಯ ಹಾಲಿನ ಒಳಗ ನಾಗ ದೇವರ ಕಲ್ಲು‌‌ ಇದೆ’ ಅದರ ಮೇಲೆ ಮನೆ ಕಟ್ಟಿದ್ದಿರಿ’ಅದೇ ಈ ತೊಂದರೆಗೆಲ್ಲಾ‌‌ ಕಾರಣ,ಅದನ್ನು ಮೇಲೆ ತೆಗೆದು,ಆ ಮೂರ್ತಿಗೆ ಪೂಜೆಯನ್ನು ಮಾಡಬೇಕು ಎಂದು ಹೇಳಿದರು.

ನಾಗರಾಜ್ ಭಟ್ ಮನೆಯ ಒಳಗೆ ಬಂದು ಹಾಲಿನಲ್ಲಿ ಸ್ಥಳ ತೋರಿಸಿ‌ ಅಗೆಯಲು ಹೇಳಿದರು. ಆಗ ಅದೇ ಸ್ಥಳದಲ್ಲಿ ಅಗೆಯುವಾಗ ಆರು‌ ಅಡಿಯಲ್ಲಿ ಪುರಾತನ ಜೈನರ ಕಾಲದ ನಾಗದೇವರ ಕಲ್ಲು ದೊರಕಿದೆ.ಮನೆಯವರಿಗೆ ಮತ್ತು ಅಲ್ಲಿ ‌ನೆರದಿದ್ದ ಜನರಿಗೆ ಆಶ್ಚರ್ಯಕರವಾಗಿದೆ.ನಾಗರಾಜ್ ಭಟ್ಟರ ಪ್ರಕಾರ: ‘ಹಿಂದೆ ಆ ಪರಿಸರದಲ್ಲಿ ಜೈನರ ಆಳ್ವಿಕೆ ಇತ್ತು.ಅಲ್ಲಿ ‌ಕೆಲವು‌ ದೇವಾಲಯಗಳಿದ್ದವು, ಅವುಗಳು ನಾಶವಾಗಿದೆ  ಎಂದು ಹೇಳಿದರು.

vishwanews24

ನಿಜಕ್ಕೂ ಆಶ್ಚರ್ಯವಾಯಿತು. ಮನೆಯ ಮಧ್ಯದ ಹಾಲ್‌ನಲ್ಲಿ ನಾಗನ ಕಲ್ಲು ದೊರೆತಿದೆ. ನಾಗನಕಲ್ಲನ್ನು ತುಳಸಿಕಟ್ಟೆ ಸಮೀಪದ ಇಟ್ಟಿದ್ದೇವೆ. ಜ.14ರ ಬಳಿಕ ಹಳೇ ಕಲ್ಲು ವಿಸರ್ಜನೆ ಮಾಡಿ, ಹೊಸ ಕಲ್ಲು ಪ್ರತಿಷ್ಠಾಪಿಸಲಾಗುವುದು.
ಗಂಗಾಧರ ಶೆಟ್ಟಿ, ಮನೆ ಮಾಲೀಕರು

Vishwa News 24

Recent Posts

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ – vishwanews24

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…

17 hours ago

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ – vishwanews24

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು  :…

17 hours ago

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ  – vishwanews24

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…

17 hours ago

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ – vishwanews24

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…

17 hours ago

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ – vishwanews24

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್‌ಪೋರ್ಟ್…

18 hours ago

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು – vishwanews24

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್‌ಜೆಟ್ (Spice Jet) ವಿಮಾನದಲ್ಲಿ…

18 hours ago