ಮಂಗಳೂರು,: ಜನರು ಕೇಳದ, ಬಯಸದ ಸಿಎಎ ಜಾರಿಗೆ ತಂದು ಮೋದಿ ಸರ್ಕಾರ ಕ್ಕೆ ಇಲ್ಲಿನ ಜನರನ್ನು ಓಡಿಸಲು ಸಾಧ್ಯ ವಿಲ್ಲ. ಬಾಬರಿ ಮಸೀದಿ ತೀರ್ಪು ಬಂದಾಗ ನ್ಯಾಯಾಲಯ ತೀರ್ಪು ಗೆ ಗೌರವ ನೀಡಿದ್ದೇವೆ.ಆದರೆ ಮೋದಿ ಜನ ವಿರೋಧಿ ಕಾಯಿದೆ ತಂದರೆ ಅದನ್ನು ಒಪ್ಪಿಕೊಳ್ಳಲು ಯಾರು ತಯಾರಿಲ್ಲ. ಇದು ನಮ್ಮ ದೇಶಕ್ಕೆ ಮಾರಕ ಎಂದು ನ್ಯಾಯವಾದಿ ಸಾಮಾಜಿಕ ಹೋರಾಟ ಗಾರ ಸುಧೀರ್ ಕುಮಾರ್ ಮರೋಳಿ ಹೇಳಿದರು.
ಅವರು ಪೌರತ್ವ ಸಂರಕ್ಷಣಾ ವೇದಿಕೆ ಮಲ್ಲೂರು ಇದರ ಆಶ್ರಯದಲ್ಲಿ ಸಿಎಎ,ಎನ್. ಆರ್. ಸಿ,ಎನ್ ಪಿಆರ್ ವಿರುದ್ಧ ಮಲ್ಲೂರು ಬದ್ರೀಯಾ ನಗರ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಡಿ.19ರಿಂದ ನಿರಂತರ ಪ್ರತಿಭಟನೆ ಕರಾಳ ಕಾಯಿದೆ ವಿರುದ್ಧ ನಡೆಯುತ್ತಿದೆ. ಹೋರಾಟ ವನ್ನು ಮುಸ್ಲಿಮರ ಹೋರಾಟ ಎಂದು ಚಿತ್ರೀಕರಣ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ದಾರಿ ತಪ್ಪಿಸುವ ಕಾರ್ಯ ನಡೆಯುತ್ತಿದೆ. ಈ ಕರಾಳ ಕಾಯಿದೆ ವಿರುದ್ಧ ಹಿಂದೂ ಗಳು ಕೂಡಾ ಎದ್ದು ನಿಂತಿದ್ದಾರೆ. ನರೇಂದ್ರ ಮೋದಿ ಅವರ ಕಾನೂನಿಗೆ ಎದೆಗುಂದಬೇಕಾಗಿಲ್ಲ.ನಾವೇ ನಿಜ ವಾದ ದೇಶಪ್ರೇಮಿಗಳು.ದೇಶ ಕಟ್ಟುವುದರಲ್ಲಿ ಮುಸ್ಲಿಮರ ಪಾತ್ರ ಬಹಳಷ್ಟಿದೆ. ಮಂಗಳೂರುನಲ್ಲಿ ನಡೆದ ಅಮಾಯಕರ ಕೊಲೆಗೆ ಸಮರ್ಪಕ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿದರು.
ವೇದಿಕೆಯಲ್ಲಿ ಬಪ್ಪಳಿಗೆ ಮಸೀದಿ ಖತೀಬ್ ಅಹ್ಮದ್ ನಯೀಮ್ ಫೈಝಿ, ಎಸ್ಸೆಸ್ಸೆಫ್ ನ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ,ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ,ನ್ಯಾಯವಾದಿ ಬಿ.ಎ.ಮಹಮ್ಮದ್ ಹನೀಫ್, ಎಸ್ ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಡಿವೈಎಫ್ ಐ ಜಿಲ್ಲಾ ಧ್ಯಕ್ಷ ಬಿ.ಕೆ.ಇಂತಿಯಾಝ್ ,ನಿಝಾಮುದ್ದೀನ್, ಕಾಂಗ್ರೆಸ್ ಮುಖಂಡ ಪಿವಿ ಮೋಹನ್ ಉಪಸ್ಥಿತರಿದ್ದರು. ಎನ್.ಇ.ಮಹಮ್ಮದ್ ಸ್ವಾಗತಿಸಿದರು.
ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ ಬೆಂಗಳೂರು,: ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಸುರ್ಜೇವಾಲ…
ಕಾರವಾರ - ಮಡಗಾಂವ್ ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ ಶಿರಸಿ: ಕಾರವಾರ ಮತ್ತು ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಿಶೇಷ…
ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ, ಸ್ಪರ್ಧೆಯಲ್ಲೂ ಇಲ್ಲ: ರಾಜಣ್ಣ ಖಡಕ್ ಹೇಳಿಕೆ ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.…
ಬೆಳ್ತಂಗಡಿ ಮನೆ ಕಳ್ಳತನ ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ ; ₹23.67 ಲಕ್ಷ ಮೌಲ್ಯದ ಸೊತ್ತು ವಶ…
ಉಡುಪಿ : ಯುವಕ ನಾಪತ್ತೆ ಉಡುಪಿ : ಮೂಲತಃ ನೇಪಾಳ ದೇಶದವರಾದ, ಪ್ರಸ್ತುತ ಮಣಿಪಾಲದ ಲಕ್ಷಿö್ಮÃಶ ನಗರದಲ್ಲಿರುವ ಹೋಟೆಲ್ ಒಂದರಲ್ಲಿ…
ಉಡುಪಿ: ಜೂನ್ 9 ರಿಂದ ಕರ್ನಾಟಕದಾದ್ಯಂತ ಖಾಸಗಿ ಬಸ್ ಪ್ರಯಾಣ ದರ ಏರಿಕೆ : ಕುಯಿಲಾಡಿ ಸುರೇಶ್ ನಾಯಕ್ ಉಡುಪಿ…