ನಿತ್ಯ ಪೂಜೆ ಮಾಡುವಾಗ ಲಕ್ಷ್ಮೀ ದೇವಿಯ ಆರಾಧನೆ ಮಾಡಿ -Vishwanews24

ನಿತ್ಯ ಪೂಜೆ ಮಾಡುವಾಗ ಲಕ್ಷ್ಮೀ ದೇವಿಯ ಆರಾಧನೆ ಮಾಡಿ -Vishwanews24

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಕೇಂದ್ರ.

ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು

ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681

ಹಣದ ದೇವತೆಯಾದ ಲಕ್ಷ್ಮಿ ದೇವಿಯ ಕೃಪೆ ಇಲ್ಲದೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಹಾಗೊಮ್ಮೆ ಕೆಲಸ ಪೂರ್ಣಗೊಂಡರೆ ನಷ್ಟ ಹಾಗೂ ತೊಂದರೆ ಉಂಟಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ನಾವು ನಿತ್ಯ ಪೂಜೆ ಮಾಡುವಾಗ ಲಕ್ಷ್ಮಿಯ ಆರಾಧನೆಯನ್ನು ಧಾರ್ಮಿಕ ಆಚರಣೆಗೆ ಅನುಗುಣವಾಗಿ ಕೈಗೊಳ್ಳಬೇಕು.

ಅಲಂಕಾರ ಪ್ರಿಯಳಾದ ಲಕ್ಷ್ಮಿ ದೇವಿಗೆ ಪ್ರತಿ ಶುಕ್ರವಾರ ವಿಶೇಷ ಅಲಂಕಾರ, ಹೂವುಗಳ ಅರ್ಪಣೆ, ಮನೆಯಲ್ಲಿ ಶುದ್ಧ ಹಾಗೂ ಶಾಂತತೆ ನೆಲೆಸಿರಬೇಕು. ಪ್ರತಿ ಶುಕ್ರವಾರ ಉಪವಾಸ ಕ್ರಮವನ್ನು ಅನುಸರಿಸಿ ತಾಯಿ ಲಕ್ಷ್ಮಿಯ ಆರಾಧನೆ ಮಾಡಿದರೆ ಆರ್ಥಿಕ ಸ್ಥಿತಿಯು ಸುಲಭವಾಗಿ ಸುಧಾರಣೆಯಾಗುವುದು. ಕೆಲವು ಪುರಾಣ ಹಿನ್ನೆಲೆ ಹಾಗೂ ಧಾರ್ಮಿಕ ಚಿಂತನೆಗಳ ಪ್ರಕಾರ ಕೆಲವು ಕ್ರಮವನ್ನು ಅನುಸರಿಸಿದರೆ ಲಕ್ಷ್ಮಿ ದೇವಿ ಸದಾ ಕಾಲ ನಮ್ಮೊಂದಿಗೆ ಇರುವಳು. ಹಣದ ಸಮಸ್ಯೆಯನ್ನು ನಿವಾರಿಸುವಳು. ಬಡತನ ಎನ್ನುವುದು ನಮ್ಮೆಡೆಗೆ ಸುಳಿಯದಂತೆ ನೋಡುವಳು ಎಂದು ಹೇಳಲಾಗುವುದು. ಹಾಗಾದರೆ ಆ ಪವಿತ್ರ ಕ್ರಮಗಳು ಯಾವವು? ಎನ್ನುವುದನ್ನು ಪರಿಶೀಲಿಸಿ.

ಅಡಿಕೆಯ ಬಳಕೆ
ಶುಕ್ರವಾರದಂದು ದೇವರ ಮನೆಯಲ್ಲಿ, ಸ್ವಲ್ಪ ಬಿಳಿ ಅಕ್ಕಿ, ಕುಂಕುಮ ಮತ್ತು ಕೆಂಪು ಬಟ್ಟೆಯಲ್ಲಿ ಸುತ್ತಿದ ಅಡಿಕೆಯನ್ನು ಇಡಬೇಕು. ಈ ರೀತಿ ಶುಕ್ರವಾರ ಮಾಡಿದರೆ ಮನೆಗೆ ಶುಭವಾಗುವುದು. ಜೊತೆಗೆ ಆರ್ಥಿಕ ಸ್ಥಿತಿಯ ಸುಧಾರಣೆಯಾಗುವುದು. ಪ್ರತಿ ಶುಕ್ರವಾರದಂದು ಕೆಂಪು ಬಟ್ಟೆಯಲ್ಲಿ ಸುತ್ತಿದ ಅಡಿಕೆಯನ್ನು ಬದಲಾಯಿಸಬಹುದು. ಲಕ್ಷ್ಮಿ ದೇವಿಯು ವಿಷ್ಣು ದೇವರ ಕಾಲ ಬಳಿ ಕುಳಿತಿರುವ ಚಿತ್ರವನ್ನು ಇಡಬಹುದು. ಈ ಚಿತ್ರವನ್ನು ಶುಕ್ರವಾರ ಇಟ್ಟು ಪೂಜಿಸಿದರೆ ಆರೋಗ್ಯ ಮತ್ತು ಸಮೃದ್ಧಿಯು ಅತ್ಯುತ್ತಮವಾಗಿ ಆಗುವುದು.

ಕಮಲದ ಮೇಲೆ ಕುಳಿತ ಲಕ್ಷ್ಮಿ ದೇವಿ
ಉದ್ಯೋಗ ಹಾಗೂ ವ್ಯವಹಾರದಲ್ಲಿ ಯಶಸ್ಸು ದೊರೆಯಬೇಕು ಅಥವಾ ಉದ್ಯೋಗ ಬಿಕ್ಕಟ್ಟನ್ನು ಬಗೆಹರಿಯಬೇಕು ಎಂದಾದರೆ ಲಕ್ಷ್ಮಿ ದೇವಿಯು ಕಮಲದ ಹೂವಿನ ಮೇಲೆ ಕುಳಿತಿರುವ ಚಿತ್ರವನ್ನು ನಿಮ್ಮ ಲಾಕರ್ ಅಲ್ಲಿ ಇರಿಸಿ. ಚಿತ್ರದಲ್ಲಿ ಲಕ್ಷ್ಮಿ ದೇವಿಯು ಕೆಂಪು ರೇಷ್ಮೆ ಬಟ್ಟೆಯಲ್ಲಿ ಕುಳಿತಿರಬೇಕು. ಈ ಕ್ರಮವನ್ನು ಅನುಸರಿಸುವುದರಿಂದ ಹಣಕಾಸಿನ ಸ್ಥಿತಿಯು ತ್ವರಿತವಾಗಿ ಸುಧಾರಣೆಯಾಗುವುದು.

ಕೇಸರಿ ತಿಲಕ
ಯಾವುದೇ ಶುಕ್ರ ವಾರದಂದು ಮನೆಯಿಂದ ಹೊರಗೆ ಹೋಗುವಾಗ ಚಿಕ್ಕ ಕೇಸರಿಯ ತಿಲಕವನ್ನು ಅನ್ವಯಿಸಿಕೊಳ್ಳಬೇಕು. ಕೇಸರಿಯ ತಿಲಕವನ್ನು ಹೊಕ್ಕಳು ಅಥವಾ ಕುತ್ತಿಗೆಯ ಮೇಲೆ ಅನ್ವಯಿಸಿಕೊಳ್ಳಬಹುದು.

ತೆಂಗಿನಕಾಯಿಯ ಅರ್ಪಣೆ
ಪ್ರತಿ ಶುಕ್ರವಾರ ಲಕ್ಷ್ಮಿ ದೇವಿಯ ಪೂಜೆಗೆ ತೆಂಗಿನ ಕಾಯನ್ನು ಒಡೆದು ಅರ್ಪಣೆ ಮಾಡಬೇಕು. ಅಂತೆಯೇ ಒಂದು ತೆಂಗಿನ ಕಾಯನ್ನು ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಚಿತ್ರದ ಮುಂದೆ ಇರಿಸಿ. ಮರುದಿನ ಆ ತೆಂಗಿನ ಕಾಯನ್ನು ಒಡೆದು ಮನೆಯ ಮಂದಿಗೆ ಸಮನಾಗಿ ವಿತರಿಸಿ. ಇದರಿಂದ ಮನೆಯಲ್ಲಿ ನೆಮ್ಮದಿ ಹಾಗೂ ಸಮೃದ್ಧಿ ನೆಲೆಸುವುದು. ನಿಮ್ಮ ಬಯಕೆಗಳು ಸುಲಭವಾಗಿ ಈಡೇರುತ್ತವೆ ಎಂದು ಹೇಳಲಾಗುವುದು.

ಮೂತಿ ಶಂಖ
ವೈಜ್ಞಾನಿಕವಾಗಿ ಮೂತಿ ಶಂಖವನ್ನು ಟ್ರೋಚಸ್ ಎಂದು ಕರೆಯುವರು. ಇದು ಅತ್ಯಂತ ಪವಿತ್ರ ಹಾಗೂ ಆಧ್ಯಾತ್ಮಿಕವಾದ ವಸ್ತು ಎಂದು ಕರೆಯಲಾಗುತ್ತದೆ. ಲಕ್ಷ್ಮಿ ದೇವಿಯನ್ನು ಸ್ವಾಗತಿಸಲು ಇದು ಅತ್ಯಂತ ಅಗತ್ಯವಾದ ವಸ್ತು. ಇದನ್ನು ಮನೆಯಲ್ಲಿ ಇಡುವುದು ಶುಭಕರವಾದ ಸಂಗತಿ ಎಂದು ಪರಿಗಣಿಸಲಾಗಿದೆ. ಈ ಶಂಖವನ್ನು ದಕ್ಷಿಣ ದಿಕ್ಕಿಗೆ ಎದುರಾಗಿ ಇಟ್ಟರೆ ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಆಗಮಿಸುವಳು ಎಂದು ಹೇಳಲಾಗುತ್ತದೆ. ನಿತ್ಯವೂ ಅದರಲ್ಲಿ ನೀರನ್ನು ತುಂಬಿಡಬೇಕು. ಅಂತೆಯೇ ನಿತ್ಯವೂ ನೀರನ್ನು ಬದಲಾಯಿಸಬೇಕು.

ಹೆಜ್ಜೆ ಗುರುತುಗಳು
ಲಕ್ಷ್ಮಿ ದೇವಿಯ ಹೆಜ್ಜೆ ಗುರುತುಗಳನ್ನು ಮನೆಯಲ್ಲಿ ಇಟ್ಟರೆ ಅತ್ಯಂತ ಶುಭಕರವಾದದ್ದು. ಈ ಹೆಜ್ಜೆ ಗುರುತುಗಳನ್ನು ಮನೆಯ ಒಳಗೆ, ಲಾಕರ್‌ನ ಎಡೆಗೆ, ದೇವರ ಮನೆಯೊಳಗೆ ಇಡಬೇಕು. ಇದರಿಂದ ಮನೆಯ ಒಳಗೆ ಲಕ್ಷ್ಮಿ ದೇವಿಯ ಆಗಮನ ಆಗುವುದು. ಹೆಜ್ಜೆಯ ಗುರುತು ಒಂದು ಜೋಡಿ ಕುಂಕುಮ ಮತ್ತು ಒಂದು ಜೋಡಿ ಅರಿಶಿನದಿಂದ ಇರುವಂತೆ ನೋಡಿಕೊಳ್ಳಿ. ಅದು ಮನೆಯಲ್ಲಿ ಸಮೃದ್ಧಿ ಹಾಗೂ ಸಂತೋಷವನ್ನು ತರುವುದು.

ಒಂದು ಕಣ್ಣಿನ ತೆಂಗಿನಕಾಯಿ
ಒಂದು ಕಣ್ಣಿನ ತೆಂಗಿನಕಾಯಿ ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ಇದನ್ನು ಮಾಟ ಮಂತ್ರಗಳಂತಹ ಕೆಲಸಗಳಿಗೂ ಬಳಸುತ್ತಾರೆ. ಈ ರೀತಿಯ ಕಾಯನ್ನು ಸದಾ ಕಾಲ ಮನೆಯಲ್ಲಿ ಇಟ್ಟುಕೊಂಡರೆ ಶುಭವಾಗುವುದು. ಜೊತೆಗೆ ಲಕ್ಷ್ಮಿ ದೇವಿಯ ಆಗಮನ ಆಗುವುದು. ಮನೆಯಲ್ಲಿ ಸಮೃದ್ಧಿ ಹಾಗೂ ಸಂತಸವು ನೆಲೆಗೊಳ್ಳುವುದು. ಮನೆಯಲ್ಲಿ ಇಡುವ ಈ ಒಂದು ಕಣ್ಣಿನ ಕಾಯಿಯು ಒಡೆಯದಂತೆ ನೋಡಿಕೊಳ್ಳಬೇಕು. ಅಗತ್ಯ ವಿದ್ದಾಗ ಅದನ್ನು ಬದಲಾಯಿಸಿ ಇಡಬಹುದು.

ವಿಷ್ಣು ದೇವರ ಪತ್ನಿಯಾದ ಲಕ್ಷ್ಮಿ ದೇವಿಯು ಒಮ್ಮೆ ಒಲಿದರೆ ಜೀವನದಲ್ಲಿ ಸಾಕಷ್ಟು ಸುಖ-ಸಂತೋಷಗಳು ಲಭಿಸುವುದು. ಲಕ್ಷ್ಮಿ ದೇವಿಯ ಕೃಪೆ ಮತ್ತು ಆಶೀರ್ವಾದಕ್ಕಾಗಿ ಮನುಷ್ಯನು ಸಾಕಷ್ಟು ಕ್ರಮವನ್ನು ಕೈಗೊಳ್ಳುವನು. ಲಕ್ಷ್ಮಿ ದೇವಿಗೆ ಮೀಸಲಾದ ಶುಕ್ರವಾರದಂದು ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು. ಸುಮಂಗಲೆಯಾದ ಲಕ್ಷ್ಮಿ ದೇವಿಯ ಆರಾಧನೆಯಲ್ಲಿ ಕಮಲ, ಸುವಾಸನೆ ಭರಿತ ಹೂವುಗಳು ಹಾಗೂ ಅರಿಶಿನ-ಕುಂಕುಮವನ್ನು ಅರ್ಪಿಸುವುದರ ಮೂಲಕ ಪೂಜೆಯನ್ನು ಕೈಗೊಳ್ಳಲಾಗುವುದು.

ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ ಕೇಂದ್ರ.

ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು

ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.

ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

2 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

3 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

3 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

3 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

3 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

3 days ago