ರಾಜ್ಯ ನ್ಯೂಸ್

ನಿಪಾಹ್ ವೈರಸ್ ಸೋಂಕಿಗೆ ಬಾವಲಿಗಳು ಕಾರಣವಲ್ಲ,.. ಈ ಮಾರಣಾಂತಿಕ ವೈರಸ್ ನಿಗೂಢ, ಪ್ರಯೋಗಾಲಯ ವರದಿ

ಕೇರಳದಲ್ಲಿ ಈಗಾಗಲೇ 12 ಮಂದಿಯನ್ನು ಬಲಿ ಪಡೆದಿರುವ ಹಾಗೂ ದೇಶಾದ್ಯಂತ ಆತಂಕಕ್ಕೆ ಕಾರಣವಾಗಿರವ ನಿಪಾಹ್ ವೈರಸ್ ಬಾವಲಿಗಳ ಮೂಲಕ ಹರಡುತ್ತಿದೆ ಎಂದು ವ್ಯಾಪಕವಾಗಿ ನಂಬಲಾಗಿತ್ತಾದರೂ ಭೋಪಾಲದ ನ್ಯಾಷನಲ್ ಇನಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸಸ್ ಇಲ್ಲಿ ಪರೀಕ್ಷಿಸಲ್ಪಟ್ಟ 21 ಬಾವಲಿಗಳ ರಕ್ತ ಹಾಗೂ ಸೀರಂ ಮಾದರಿಗಳಲ್ಲಿ ನಿಪಾಹ್ ವೈರಸ್ ಇಲ್ಲ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ನಿಪಾಹ್ ಹೇಗೆ ಹರಡುತ್ತದೆ ಎಂಬ ವಿಚಾರ ಇನ್ನಷ್ಟು ನಿಗೂಢವಾಗಿ ಬಿಟ್ಟಿದೆ.

ಪ್ರಯೋಗಾಲಯ ವರದಿಗಳ ಹಿನ್ನೆಲೆಯಲ್ಲಿ ಆರೋಗ್ಯಾಧಿಕಾರಿಗಳು ನಿಪಾಹ್ ವೈರಸ್ ಸೋಂಕಿಗೆ ಮೊದಲು ಬಲಿಯಾದ ಕೇರಳದ ಮೊಹಮ್ಮದ್ ಸಾಬಿತ್ (26) ಎಂಬ ಯುವಕ ಎಲ್ಲೆಲ್ಲಿಗೆ ಪಯಣಿಸಿದ್ದ ಎಂಬ ಬಗ್ಗೆ ಮಾಹಿತಿ ಪಡೆಯಲು ನಿರ್ಧರಿಸಿದ್ದಾರೆ.

ಸೌದಿ ಅರೇಬಿಯಾದಲ್ಲಿ ಹೆಲ್ಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಾಬಿತ್ ಕೆಲ ಸಮಯದ ಹಿಂದೆ ಮನೆಗೆ ಹಿಂದಿರುಗಿದ್ದಾಗ `ಹೊಟ್ಟೆಯ ಸಮಸ್ಯೆ’ ಎದುರಿಸುತ್ತಿದ್ದ ಎಂದು ಆತನ ತಾಯಿ ಹೇಳಿದ್ದರು. ಆತನ ಕುಟುಂಬದ ನಾಲ್ಕು ಮಂದಿಯೂ ಈ ವೈರಸ್ ಸೋಂಕಿಗೆ ಬಲಿಯಾಗಿದ್ದರಿಂದ ಆರೋಗ್ಯಾಧಿಕಾರಿಗಳು ಈ ವೈರಾಣುವಿನ ಮೂಲ ಹುಡುಕಲಾರಂಭಿಸಿದ್ದು ಚಂಗರೊತ್ ಗ್ರಾಮದಲ್ಲಿರುವ ಕುಟುಂಬದ ಮನೆಯ ಬಾವಿಯಲ್ಲಿ ಬಾವಲಿಗಳು ಸತ್ತು ಬಿದ್ದಿರುವುದನ್ನು ಪತ್ತೆ ಹಚ್ಚಿದ್ದರು. ಸಾಮಾನ್ಯವಾಗಿ ಪಾರಾಮೈಕ್ಸೊವಿರಿಡಾಯಿ ಕುಟುಂಬದ ಹೆನಿಪವೈರಸ್ ಜಾತಿಗೆ ಸೇರಿರುವ ಬಾವಲಿಗಳಲ್ಲಿ ಈ ಎನ್‍ಐವಿ ವೈರಸ್ ಕಂಡು ಬರುವುದರಿಂದ ಈ ಬಾವಲಿಗಳ ರಕ್ತ ಹಾಗೂ ಸೀರಂ ಮಾದರಿಗಳ ಜತೆಗೆ ಸಾಕು ಪ್ರಾಣಿಗಳಾದ ದನ, ಆಡು, ಮೊಲ, ನಾಯಿ ಹಾಗೂ ಬೆಕ್ಕುಗಳ ರಕ್ತ ಮಾದರಿಗಳನ್ನೂ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ಈಗ ಯಾವುದರಲ್ಲೂ ನಿಪಾಹ್ ವೈರಸ್ ಪತ್ತೆಯಾಗಿಲ್ಲ ಎಂಬುದು ಗೊಂದಲಕ್ಕೆ ಕಾರಣವಾಗಿದೆ.

“ಇವು ಆರಂಭಿಕ ಫಲಿತಾಂಶವಷ್ಟೇ ಆಗಿರಬಹುದು, ಈ ನಿಟ್ಟಿನಲ್ಲಿ ಇನ್ನಷ್ಟು ಪರೀಕ್ಷೆಗಳು ನಡೆಯಬೇಕಿದೆ. ಹಿಂದೆ ಕೂಡ ಈ ರೋಗ ಕಾಣಿಸಿಕೊಂಡಾಗ ಅವುಗಳ ಮೂಲ ಬಾವಲಿಗಳೇ ಆಗಿದ್ದವು. ಪ್ರಾಯಶಃ ಪರೀಕ್ಷಿಸಲ್ಪಟ್ಟ ಮಾದರಿಗಳಲ್ಲಿ ಈ ವೈರಸ್ ಇಲ್ಲದೇ ಇದ್ದಿರಬಹುದು” ಎಂದು ಕೆಲ ಅಧಿಕಾರಿಗಳು ಹೇಳಿದ್ದಾರೆ.

ಅತ್ತ ಕೇರಳದ ಕೊಝಿಕ್ಕೋಡ್ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ನಿಪಾಹ್ ಬಗ್ಗೆ ಭೀತರಾಗಿ ಹಲವು ಕುಟುಂಬಗಳು ತಮ್ಮ ಮನೆಗಳು ಹಾಗೂ ಸಾಕು ಪ್ರಾಣಿಗಳನ್ನು ತೊರೆದು ಇತರೆಡೆ ವಲಸೆ ಹೋಗುತ್ತಿವೆ. ಜನರಲ್ಲಿ ಆತ್ಮವಿಶ್ವಾಸ ಮೂಡಿಸಲು ಎಲ್ಲಾ ಪಕ್ಷಗಳ ನಾಯಕರೂ ಕೊಝಿಕ್ಕೋಡಿನಲ್ಲಿ ಪಾದಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದು ರಾಜ್ಯ ಆರೋಗ್ಯ ಸಚಿವೆ ಕೆ ಕೆ ಶೈಲಜಾ ಹಾಗೂ ಅಬಕಾರಿ ಸಚಿವ ಟಿ ಪಿ ರಾಮಕೃಷ್ಣನ್ ಕೂಡ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.

ನಿಪಾಹ್ ವೈರಸ್ ಸೋಂಕಿನಿಂದ ಮೃತಪಟ್ಟವರ ಕಳೇಬರಗಳನ್ನು ವಿದ್ಯುತ್ ಚಿತಾಗಾರದಲ್ಲಿ ಸುಡಲು ನಿರಾಕರಿಸಿದ ಉದ್ಯೋಗಿಗಳನ್ನೂ ಸೇವೆಯಿಂದ ವಜಾಗೊಳಿಸಲು ಕೇರಳ ಸರಕಾರ ನಿರ್ಧರಿಸಿದೆ.

“ಪರಿಸ್ಥಿತಿ ನಿಯಂತ್ರಣದಲ್ಲಿದೆ, ಯಾವುದೇ ಭಯದ ಅಗತ್ಯವಿಲ್ಲ, ಸರಕಾರ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದೆ” ಎಂದು ಸಚಿವೆ ಶೈಲಜಾ ಹೇಳಿದ್ದಾರೆ.

Vishwa News 24

Recent Posts

ಉಡುಪಿ ಕೃಷ್ಣ ಮಠದಲ್ಲಿ ತಪ್ತಮುದ್ರಾಧಾರಣೆ – vishwanews24

ಉಡುಪಿ ಕೃಷ್ಣ ಮಠದಲ್ಲಿ ತಪ್ತಮುದ್ರಾಧಾರಣೆ ಉಡುಪಿ: ಆಷಾಢ ಶುಕ್ಲ ಪ್ರಥಮ ಏಕಾದಶಿ ಅಂಗವಾಗಿ ಉಡುಪಿ ಜಿಲ್ಲೆಯ ಪ್ರಮುಖ ಮಠಗಳಲ್ಲಿ ತಪ್ತ…

16 hours ago

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ; ಆರೋಪಿಗಾಗಿ ಶೋಧ- vishwanews24

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದ ಘಟನೆ ನಗರದ ಲಾಲ್ ಬಾಗ್ ಸಿಗ್ನಲ್ ಬಳಿ…

17 hours ago

ಆರು ದಿನಗಳ ನಂತರ ಅಮರನಾಥ ಯಾತ್ರೆ ಪುನರಾರಂಭ -vishwanews24

ಹವಾಮಾನ ವೈಪರೀತ್ಯದಿಂದಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನರಾರಂಭ ಅಮರನಾಥ :ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಆರು ದಿನಗಳಿಂದ ನಿರಂತರ ಮಳೆ,…

18 hours ago

BREAKING NEWS : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ – vishwanews24

 ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನವದೆಹಲಿ: ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳ ಆಕ್ರೋಶ ಭುಗಿಲೆದ್ದ…

18 hours ago

ಕಾಮನ್‌ವೆಲ್ತ್ ಗೇಮ್ಸ್ 2026 : ಪ್ಯಾರಾ ಪವರ್‌ ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದ ಝಂದು ಕುಮಾರ್ – vishwanews24

ಕಾಮನ್‌ವೆಲ್ತ್ ಗೇಮ್ಸ್ 2026 : ಭಾರತದ ಪದಕದ ಖಾತೆ ತೆರೆದ ಝಂದು ಕುಮಾರ್‌: ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಕಂಚಿನ ಸಾಧನೆ ಗ್ಲಾಸ್ಕೊ…

19 hours ago

ಅಯೋಧ್ಯೆ ಶ್ರೀರಾಮ ಮಂದಿರ ಧಾರ್ಮಿಕ ಸಮಿತಿಯಲ್ಲಿ ಪೇಜಾವರ ಶ್ರೀಗಳಿಗೆ ಸ್ಥಾನ – vishwanews24

ಅಯೋಧ್ಯೆ ಶ್ರೀರಾಮ ಮಂದಿರ ಧಾರ್ಮಿಕ ಸಮಿತಿಯಲ್ಲಿ ಪೇಜಾವರ ಶ್ರೀಗಳಿಗೆ ಸ್ಥಾನ ಅಯೋಧ್ಯೆ: ಶ್ರೀ ರಾಮಮಂದಿರದ ಪೂಜಾ ವಿಧಿವಿಧಾನಗಳು ಹಾಗೂ ಧಾರ್ಮಿಕ…

19 hours ago