ನವದೆಹಲಿ:ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಜನ ನೀಡಿದ ಬಹುಮತದ ತೀರ್ಪನ್ನು ಹಾಗೂ ಇವಿಎಂಗಳನ್ನು ಪ್ರಶ್ನಿಸಿದ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿ ತರಾಟೆಗೆ ತೆಗೆದುಕೊಂಡ ಪ್ರಸಂಗ ಬುಧವಾರ ಲೋಕಸಭೆಯಲ್ಲಿ ನಡೆಯಿತು.
ಇಂದು ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಸದನದಲ್ಲಿ ಸಲ್ಲಿಸಲಾದ ವಂದನಾರ್ಪಣೆ ಭಾಷಣದ ಮೇಲೆ ಮಾತನಾಡುತ್ತ, ಲೋಕಸಭಾ ಚುನಾವಣೆಯಲ್ಲಿ ಚುನಾವಣೆಯಲ್ಲಿ ಪರಾಜಯಗೊಂಡಿರುವುದನ್ನು ಕಾಂಗ್ರೆಸ್ ಒಪ್ಪಿಕೊಳ್ಳುವಲ್ಲಿ ವಿಫಲವಾಗಿದೆ ಎಂದರು.
“ಕೆಲವು ಜನರು ಹೇಳುತ್ತಾರೆ, ನೀವು(ಬಿಜೆಪಿ) ಚುನಾವಣೆಯಲ್ಲಿ ಗೆದ್ದಿದ್ದೀರಿ. ಆದರೆ ದೇಶದ ಜನರಿಗೆ ಮತ್ತು ಪ್ರಜಾಪ್ರಭುತ್ವಕ್ಕಾದ ನಷ್ಟ ಎಂದು ಹೇಳಿದರುಇದು ದೇಶದ ಜನರು ನೀಡಿದ ಬಹುಮತದ ತೀರ್ಪನ್ನು ಅಗೌರವಿಸಿದಂತೆ ಎಂದು ಮೋದಿ ತಿರುಗೇಟು ನೀಡಿದರು.
ದೇಶಕ್ಕೆ ಯಾವಾಗ ನಷ್ಟವಾಗುತ್ತದೆ..ಹೀಗಾಗಿ ನಾನು ನಿಮಗೆ ಕೇಳುತ್ತೇನೆ. ವಯನಾಡ್ ಅನ್ನು ಕಳೆದುಕೊಂಡರೆ ಹಿಂದೂಸ್ತಾನಕ್ಕೆ ನಷ್ಟವಾಗುತ್ತದೆಯೇ? ರಾಯ್ ಬರೇಲಿ, ಬೆಹ್ರಾಮ್ ಪುರ್, ತಿರುವನಂತಪುರಂ ಅನ್ನು ಕಳೆದುಕೊಂಡರೆ ಹಿಂದೂಸ್ತಾನಕ್ಕೆ ನಷ್ಟಗಾಗುತ್ತದೆಯೇ? ಅಮೇಠಿಯಿಂದ ಹಿಂದೂಸ್ತಾನಕ್ಕೆ ಏನಾದರು ನಷ್ಟವಾಗುತ್ತದೆಯೇ? ಇದು ಯಾವ ಸೀಮೆಯ ವಾದ. ಒಂದು ವೇಳೆ ಕಾಂಗ್ರೆಸ್ ಗೆ ನಷ್ಟವಾದರೆ ಅದು ದೇಶಕ್ಕಾಗುವ ನಷ್ಟ ಎಂದು ಮೋದಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷದ ನನ್ನ ಮಿತ್ರರು ಹೇಗೆ ಆಲೋಚಿಸುತ್ತಿದೆ ಎಂದರೆ ಒಂದು ವೇಳೆ ಕಾಂಗ್ರೆಸ್ ಗೆಲುವು ಸಾಧಿಸದಿದ್ದರೆ, ಭಾರತ ಪರಾಜಯಗೊಂಡಂತೆಯೇ? ಭಾರತ ಮತ್ತು ಕಾಂಗ್ರೆಸ್ ಪಕ್ಷ ಒಂದೇ ಎಂದು ಭಾವಿಸಿದ್ದೀರಾ? ಇಲ್ಲ..ನೀವು (ಕಾಂಗ್ರೆಸ್) ನಮ್ಮ ಚುನಾವಣಾ ಪ್ರಕ್ರಿಯೆ ಹಾಗೂ ಪ್ರಜಾಪ್ರಭುತ್ವವನ್ನು ಗೌರವಿಸುವುದನ್ನು ಮುಖ್ಯ ಎಂದರು.
ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…
ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು :…
ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…
ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…
ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್ಪೋರ್ಟ್…
ದೆಹಲಿ-ಪುಣೆ ಸ್ಪೈಸ್ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್ಜೆಟ್ (Spice Jet) ವಿಮಾನದಲ್ಲಿ…